ಆ್ಯಪ್ನಗರ

Vijay: 'ಮಾಸ್ಟರ್' ಸಿನಿಮಾದ ಬಗ್ಗೆ ಹಬ್ಬಿದ್ದ ವದಂತಿಗೆ ಬ್ರೇಕ್ ಹಾಕಿದ ನಿರ್ಮಾಪಕರು!

'ದಳಪತಿ' ವಿಜಯ್ ಮತ್ತು 'ಮಕ್ಕಳ್‌ ಸೆಲ್ವನ್' ವಿಜಯ್ ಸೇತುಪತಿ ಒಟ್ಟಿಗೆ ನಟಿಸಿರುವ 'ಮಾಸ್ಟರ್' ಸಿನಿಮಾ ಕುರಿತು ಈಚೆಗೆ ಒಂದು ಗಾಸಿಪ್ ಹಬ್ಬಿತ್ತು. ಅದಕ್ಕೆ ತಕ್ಷಣವೇ ನಿರ್ಮಾಪಕರ ಕಡೆಯಿಂದ ಒಂದು ಸ್ಪಷ್ಟನೆ ಸಿಕ್ಕಿದೆ.

Vijaya Karnataka Web 28 Nov 2020, 11:17 pm
'ದಳಪತಿ' ವಿಜಯ್‌ ಅವರಿಗೆ ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ಅಭಿಮಾನಿ ವರ್ಗ ಇದೆ. ಅವರ ಸಿನಿಮಾಗಳು ತೆರೆಕಂಡ ಕೆಲವೇ ದಿನಗಳಲ್ಲಿ ನೂರಾರು ಕೋಟಿ ಕಮಾಯಿ ಮಾಡುತ್ತವೆ. ಅಂಥದ್ದೊಂದು ಕ್ರೇಜ್‌ ಅನ್ನು ಸೃಷ್ಟಿ ಮಾಡಿದ್ದಾರೆ ವಿಜಯ್. ಸದ್ಯ ಅವರ ಫ್ಯಾನ್ಸ್ ಗಮನವೆಲ್ಲ 'ಮಾಸ್ಟರ್' ಚಿತ್ರದ ಮೇಲಿದೆ. ಸಿನಿಮಾ ಸಿದ್ಧವಾಗಿ 8 ತಿಂಗಳಾದರೂ, ಇನ್ನೂ ತೆರೆಕಂಡಿಲ್ಲ. ಅದಕ್ಕೆ ಕಾರಣ, ಕೊರೊನಾ! ಈ ಮಧ್ಯೆ 'ಮಾಸ್ಟರ್' ಬಗ್ಗೆ ಒಂದು ಗಾಸಿಪ್ ಹಬ್ಬಿತ್ತು. ಅದಕ್ಕೆ ಚಿತ್ರತಂಡದಿಂದ ಖಡಕ್‌ ಸ್ಪಷ್ಟನೆ ಸಿಕ್ಕಿದೆ! ಈ ಸ್ಪಷ್ಟನೆಯಿಂದ 'ದಳಪತಿ' ವಿಜಯ್ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
Vijaya Karnataka Web Thalapathy Vijay


ಏನದು ಗಾಸಿಪ್?
ವಿಜಯ್ ಸಿನಿಮಾಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವುದು ಗೊತ್ತಿರುವ ವಿಚಾರ. 'ಮಾಸ್ಟರ್' ಸಿನಿಮಾದಲ್ಲಿ ಅವರೊಂದಿಗೆ ವಿಜಯ್ ಸೇತುಪತಿ ಕೂಡ ಇರುವುದರಿಂದ ನಿರೀಕ್ಷೆ ದುಪ್ಪಟ್ಟಾಗಿದೆ. ಸದ್ಯ ಚಿತ್ರಮಂದಿರಕ್ಕೆ ಈ ಸಿನಿಮಾ ಯಾವಾಗ ಬರಲಿದೆಯೋ ಗೊತ್ತಿಲ್ಲ. ಹಾಗಾಗಿ, ಖ್ಯಾತ ಓಟಿಟಿ ಸಂಸ್ಥೆಯೊಂದಕ್ಕೆ ದೊಡ್ಡ ಮೊತ್ತಕ್ಕೆ ಈ ಸಿನಿಮಾವನ್ನು ಸೇಲ್‌ ಮಾಡಲಾಗಿದೆ ಅನ್ನೋ ಸುದ್ದಿ ವೈರಲ್ ಆಗಿತ್ತು. ನೆಚ್ಚಿನ ಸ್ಟಾರ್ ನಟನ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿ ಎಂಜಾಯ್ ಮಾಡಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ ಇದರಿಂದ ಸಹಜವಾಗಿಯೇ ಬೇಸರವಾಗಿತ್ತು. ಇದೀಗ ಆ ಬಗ್ಗೆ ನಿರ್ಮಾಪಕರಿಂದಲೇ ಸ್ಪಷ್ಟನೆ ಸಿಕ್ಕಿದೆ.

ಓಟಿಟಿ ರಿಲೀಸ್ ಇಲ್ಲ, ನೇರವಾಗಿ ಚಿತ್ರಮಂದಿರಕ್ಕೆ 'ಮಾಸ್ಟರ್'!
ನಿರ್ಮಾಪಕರ ಕಡೆಯಿಂದ ಅಧಿಕೃತ ಪತ್ರಿಕಾ ಹೇಳಿಕೆಯನ್ನು ರಿಲೀಸ್ ಮಾಡಲಾಗಿದೆ. 'ಈ ಕೊರೊನಾ ವಿರುದ್ಧ ನಾವಿನ್ನೂ ಹೋರಾಡುತ್ತಲೇ ಇದ್ದೇವೆ. ನೀವೆಲ್ಲ ಕ್ಷೇಮದಿಂದ, ಸುರಕ್ಷಿತವಾಗಿ ಇದ್ದೀರಿ ಎಂದುಕೊಂಡಿದ್ದೇವೆ. 'ಮಾಸ್ಟರ್‌' ಸಿನಿಮಾವನ್ನು ಚಿತ್ರಮಂದಿರದಲ್ಲಿ ಸೆಲೆಬ್ರೇಟ್ ಮಾಡಬೇಕೆಂಬ ನಿಮ್ಮ ಎಕ್ಸೈಟ್‌ಮೆಂಟ್‌ ಏನೆಂಬುದು ನಮಗೆ ಗೊತ್ತಿದೆ. ಆ ಒಂದು ದೊಡ್ಡ ದಿನಕ್ಕಾಗಿ ನಾವು ಕೂಡ ಕಾದಿದ್ದೇವೆ. ಈ ಮಧ್ಯೆ ನಮ್ಮ ಸಿನಿಮಾದ ಬಗ್ಗೆ ಒಂದು ವದಂತಿ ಹರಿದಾಡಿತ್ತು. ಅದಕ್ಕೆ ಸ್ಪಷ್ಟನೆ ನೀಡುತ್ತಿದ್ದೇವೆ. ನಮಗೆ ಒಂದು ದೊಡ್ಡ ಓಟಿಟಿ ಸಂಸ್ಥೆಯಿಂದ ಆಫರ್ ಬಂದಿದ್ದು ನಿಜ. ಆದರೆ, ನಾವು ಸಿನಿಮಾವನ್ನು ಚಿತ್ರಮಂದಿರದಲ್ಲೇ ರಿಲೀಸ್ ಮಾಡಲು ನಿರ್ಧಾರ ಮಾಡಿದ್ದೇವೆ' ಎಂದು 'ಮಾಸ್ಟರ್' ತಂಡ ಹೇಳಿಕೊಂಡಿದೆ.

ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ನೀಡಿದ 'ದಳಪತಿ' ವಿಜಯ್!

ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್ ಆಗಬೇಕಿದೆ!
'ಇಂಥದ್ದೊಂದು ಕಠಿಣ ಸಂದರ್ಭದಲ್ಲಿ ಚಿತ್ರಮಂದಿರದಲ್ಲಿ ಸಿನಿಮಾವನ್ನು ರಿಲೀಸ್ ಮಾಡುವುದು ಅವಶ್ಯಕವಾಗಿದೆ. ತಮಿಳು ಚಿತ್ರರಂಗವನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲು ನಮ್ಮ ಜೊತೆ ನಿಲ್ಲುವಂತೆ ಈಗಾಗಲೇ ನಾವು ಥಿಯೇಟರ್ ಮಾಲೀಕರಿಗೆ ಮನವಿ ಮಾಡಿಕೊಂಡಿದ್ದೇವೆ. ಶೀಘ್ರದಲ್ಲೇ ಇದೆಲ್ಲ ಸರಿ ಆಗಬಹುದೆಂಬ ಭರವಸೆ ಇದೆ. ಬಹಳಬೇಗನೇ ನಿಮಗೆಲ್ಲ ಒಂದು ಗುಡ್ ನ್ಯೂಸ್ ನೀಡುತ್ತೇವೆ' ಎಂದು ತಂಡ ಹೇಳಿದೆ. ಉತ್ತಮ ಮೊತ್ತಕ್ಕೆ ಆಫರ್ ಬಂದರೂ, ಚಿತ್ರಮಂದಿರದಲ್ಲೇ ರಿಲೀಸ್ ಮಾಡುತ್ತೇವೆ ಎಂಬ ನಿರ್ಮಾಪಕರ ನಿರ್ಧಾರಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

Thalapathy Vijay: 'ಮಾಸ್ಟರ್‌' ಸಿನಿಮಾದ ಒಂದೇ ಒಂದು ಟೀಸರ್ ಸೃಷ್ಟಿಸಿದೆ ಅದ್ವಿತೀಯ ದಾಖಲೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌