ಆ್ಯಪ್ನಗರ

ಚುನಾವಣೆಗಳು ನಮ್ಮ ಭರವಸೆಯನ್ನು ಮಾರುತ್ತಿವೆ: ಆಪರೇಶನ್ ಅಲಮೇಲಮ್ಮ ಸಿನಿಮಾ ನಟ ರಿಷಿ!

ಕಳೆದ ಎರಡು ದಿನದ ಹಿಂದೆ ಬೆಂಗಳೂರಿನ ಆರ್‌ಆರ್‌ನಗರದ ಬೈ ಎಲೆಕ್ಷನ್ ನಡೆದಿದ್ದು, ಯಾರು ಗೆಲ್ಲಲಿದ್ದಾರೆ ಎಂಬ ಬಗ್ಗೆ ಲೆಕ್ಕಾಚಾರ ನಡೆಯುತ್ತಿದೆ. ಹೀಗಿರುವಾಗ 'ಆಪರೇಶನ್ ಅಲಮೇಲಮ್ಮ', 'ಕವಲುದಾರಿ' ಸಿನಿಮಾಗಳ ನಟ ರಿಷಿ ಅವರು ಚುನಾವಣೆ ಕುರಿತು ಮಾತನಾಡಿದ್ದಾರೆ.

Vijaya Karnataka Web 5 Nov 2020, 3:16 pm
ಎರಡು ದಿನದ ಹಿಂದೆ ಬೆಂಗಳೂರಿನ ಆರ್‌ಆರ್‌ ನಗರದ ಉಪಚುನಾವಣೆ ನಡೆದಿದೆ. ಕೊರೊನಾ ವೈರಸ್ ಸೋಂಕಿನ ಭಯದ ನಡುವೆಯೂ ಪ್ರಚಾರದ ಅಬ್ಬರಕ್ಕೇನೂ ಕೊರತೆಯಿರಲಿಲ್ಲ. ಸ್ಟಾರ್ ನಟ ದರ್ಶನ್, ನಟಿ ಅಮೂಲ್ಯ ಅವರು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಮತಯಾಚನೆ ಮಾಡಿದ್ದರು. ಇನ್ನು ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತಪ್ಪ ಹಾಗೂ ಮುನಿರತ್ನ ಅವರಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಬಗ್ಗೆಯೇ ಸಾಕಷ್ಟು ಕುತೂಹಲ ಮೂಡಿದೆ. ಹೀಗಿರುವಾಗ ಚುನಾವಣೆಯ ಅರ್ಥ, ವ್ಯಾಖ್ಯಾನದ ಕುರಿತಾಗಿ ನಟ ರಿಷಿ ಹಾಕಿರುವ ಸೋಶಿಯಲ್ ಮೀಡಿಯಾ ಪೋಸ್ಟ್‌ ಬೇರೆಯದಾದ ಚಿಂತನೆಗೆ ಎಡೆಮಾಡಿಕೊಡುತ್ತಿದೆ.
Vijaya Karnataka Web operation alamelamma movie actor rishi speaks about elections
ಚುನಾವಣೆಗಳು ನಮ್ಮ ಭರವಸೆಯನ್ನು ಮಾರುತ್ತಿವೆ: ಆಪರೇಶನ್ ಅಲಮೇಲಮ್ಮ ಸಿನಿಮಾ ನಟ ರಿಷಿ!


ಚುನಾವಣೆ ಕುರಿತು ರಿಷಿ ಹೇಳುವುದೇನು?
'ಪ್ರತಿಯೊಂದು ಚುನಾವಣೆಯು ನಮ್ಮಲ್ಲಿರುವ ಎಲ್ಲ ಸಮಸ್ಯೆಗಳಿಗೆ ಉತ್ತರ ಎಂದು ನಾವು ನಂಬುತ್ತೇವೆ. ಒಬ್ಬರು ಗೆದ್ದರೆ ಎಲ್ಲವೂ ಸರಿಯಾಗುತ್ತದೆ ಮತ್ತು ಒಬ್ಬರು ಕಳೆದುಕೊಂಡರೆ ಎಲ್ಲವೂ ತಪ್ಪಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಪ್ರತಿ ಚುನಾವಣಾ ಫಲಿತಾಂಶದೊಂದಿಗೆ ನಾವು ಭರವಸೆಯಿಡಲು ಕಾಯುತ್ತೇವೆ. ಚುನಾವಣೆಗಳು ಈಗ ಅನೇಕ ವರ್ಷಗಳಿಂದ ನಮಗೆ ಭರವಸೆಯನ್ನು ಮಾರುತ್ತಿವೆ ಎಂದು ಭಾವಿಸುತ್ತೇನೆ. ಚುನಾವಣೆಯು ಈ ಭರವಸೆಗೆ ಉತ್ತರವಾಗಿರಬಾರದು. ನಮ್ಮಲ್ಲಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ನಾವೇ ಎಂದು ನೆನಪಿಸಿಕೊಳ್ಳೋಣ. ಏಕೆಂದರೆ ನಾವು ಗುರುತಿಸದಿದ್ದರೆ, ನಾವೇ ಸಮಸ್ಯೆ ಆಗಬಹುದು. ಬಹುಶಃ ನಾವು ಮಾತನಾಡುವುದನ್ನು ನಿಲ್ಲಿಸಿದರೆ ಅದು ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಬಹುದು' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರವಾಸಿ ತಾಣದ ಸಂಸ್ಕೃತಿ, ಇತಿಹಾಸ ತಿಳಿದುಕೊಳ್ಳೋದು ರಿಷಿಗೆ ಇಷ್ಟ!

ಸಿನಿಮಾಗಳಲ್ಲಿ ನಟಿಸುವ ರಿಷಿ ಇದೇ ಮೊದಲ ಬಾರಿಗೆ ಸಿನಿಮೇತರ ವಿಷಯದ ಬಗ್ಗೆ ಮಾತನಾಡುತ್ತಿಲ್ಲ. ಈ ಹಿಂದೆ ನೀರಿನ ಬಳಕೆಯ ಬಗ್ಗೆಯೂ ಅವರ ಅಭಿಪ್ರಾಯ ಮಂಡಿಸಿದ್ದರು. ಕೆಲದಿನಗಳ ಹಿಂದಷ್ಟೇ ಕುಟುಂಬ ಸಮೇತವಾಗಿ ಗೋವಾಗೆ ಟ್ರಿಪ್ ಹೋಗಿದ್ದ ರಿಷಿ, ಗೋವಾವನ್ನು ಕೇವಲ ಪ್ರವಾಸೀಯ ತಾಣವಾಗಿ ನೋಡದೆ ಅದರ ಇತಿಹಾಸ, ಸಂಸ್ಕೃತಿಯನ್ನು ತಿಳಿದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರು. ಅದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅವರು ಆಗಾಗ ಮಾನವ ಆಸಕ್ತಿಗೆ ಸಂಬಂಧಪಟ್ಟಂತೆ ಕೆಲ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Also Read-ಕುಟುಂಬದ ಜೊತೆ ಗೋವಾ ಟ್ರಿಪ್ ಹೋಗಿಬಂದ 'ಆಪರೇಶನ್ ಅಲಮೇಲಮ್ಮ' ಖ್ಯಾತಿಯ ನಟ ರಿಷಿ!

ಸುಮ್ಮನೆ ಕುಳಿತುಕೊಳ್ಳುವ ಕಲೆ ಎಂದರೇನು?
ಇತ್ತೀಚೆಗಷ್ಟೇ ಅವರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿ, 'ಕೆಲವೊಮ್ಮೆ ನಾವು ಸುತ್ತಲೂ ನೋಡಿದಾಗ, ಎಲ್ಲೆಡೆ ಎಲ್ಲರೂ ತಮ್ಮ ಫೋನ್ ಅನ್ನು ನೋಡುತ್ತಿರುತಾರೆ. ಜಪಾನಿನ ಸಂಪ್ರದಾಯದಲ್ಲಿ ಶಿಕಾಂತಜಾ ಎಂದು ಕರೆಯಲ್ಪಡುವ ಒಂದು ಅಭ್ಯಾಸವಿದೆ. ಸುಮ್ಮನೆ ಕುಳಿತುಕೊಳ್ಳುವ ಕಲೆ. ಏನನ್ನೂ ಮಾಡಲು ಪ್ರಯತ್ನಿಸುವುದಿಲ್ಲ. ಎಲ್ಲಿಯೂ ಹೋಗಲು ಪ್ರಯತ್ನಿಸುವುದಿಲ್ಲ. ಮುಂದಿನ ವಿಷಯ ಅಥವಾ ಮುಂದಿನ ಹಂತಕ್ಕೆ ಹೋಗಲು ಪ್ರಯತ್ನಿಸುವುದಿಲ್ಲ. ಸುಮ್ಮನೆ ಕುಳಿತುಕೊಳ್ಳಿ. ನೋಡಿ. ಉಸಿರಾಡಿ. ಸುಮ್ಮನೆ ಅನುಭವಿಸಿ. ಜೀವಂತವಾಗಿರುವುದನ್ನು ಆನಂದಿಸಿ. ಅದರಲ್ಲಿ ಒಂದು ರೀತಿಯ ಸಂಪೂರ್ಣತೆ ಇದೆ ಎಂದು ಭಾವಿಸಿ ಇದನ್ನು ವರ್ಷಗಳಿಂದ ಅಭ್ಯಾಸ ಮಾಡುವ ಸನ್ಯಾಸಿಗಳಿದ್ದಾರೆ' ಎಂದು ಕ್ಯಾಪ್ಶನ್ ನೀಡಿದ್ದರು.
'ಅನುರೂಪ' ಧಾರಾವಾಹಿ, 'ಕವಲುದಾರಿ', 'ಆಪರೇಶನ್ ಅಲಮೇಲಮ್ಮ' ಸಿನಿಮಾಗಳ ಮೂಲಕ ರಿಷಿ ಗಮನಸೆಳೆದಿದ್ದರು.

Also Read-ಮನಸಾರೆ ಧಾರಾವಾಹಿ: ಅಪ್ಪ-ಮಗಳ ಸಂಬಂಧ ಸರಿಮಾಡಲಿರುವ 'ಆಪರೇಶನ್ ಅಲಮೇನಮ್ಮ' ನಟ ರಿಷಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌