ಆ್ಯಪ್ನಗರ

ಎರಡು ಹೊಸ ಸಿನಿಮಾಗಳನ್ನು ಘೋಷಣೆ ಮಾಡಿದ 'ಪೈಲ್ವಾನ್' ಕೃಷ್ಣ! ಹೀರೋ ಯಾರು?

'ಕಿಚ್ಚ' ಸುದೀಪ್‌ ನಾಯಕರಾಗಿ ಕಾಣಿಸಿಕೊಂಡಿದ್ದ 'ಪೈಲ್ವಾನ್‌'ಗೆ ಕೃಷ್ಣ ನಿರ್ದೇಶನ ಮಾಡಿದ್ದರು. ಆ ಸಿನಿಮಾ ನಂತರ ಅವರೀಗ ಮತ್ತೆರಡು ಹೊಸ ಸಿನಿಮಾಗಳಿಗೆ ಚಾಲನೆ ನೀಡಿದ್ದಾರೆ. ಈಚೆಗಷ್ಟೇ ಸ್ಕ್ರಿಪ್ಟ್ ಪೂಜೆ ಮಾಡಿದ್ದಾರೆ.

Vijaya Karnataka Web 23 Sep 2020, 5:28 pm
ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಹಕರಾಗಿ ಜನಮೆಚ್ಚುಗೆ ಪಡೆದುಕೊಂಡವರು ಕೃಷ್ಣ. ಆನಂತರ ಅವರು ಯಶ್‌ ಜೊತೆ 'ಗಜಕೇಸರಿ' ಸಿನಿಮಾ ಮಾಡಿ, ನಿರ್ದೇಶಕರಾದರು. ಸುದೀಪ್ ಜೊತೆಗೆ 'ಹೆಬ್ಬುಲಿ' ಹಾಗೂ 'ಪೈಲ್ವಾನ್' ಸಿನಿಮಾಗಳನ್ನು ಮಾಡಿದ್ದಾರೆ. 'ಪೈಲ್ವಾನ್' ರಿಲೀಸ್ ಆಗಿ ವರ್ಷ ಕಳೆದರೂ, ಹೊಸ ಸಿನಿಮಾವನ್ನು ಅವರು ಘೋಷಣೆ ಮಾಡಿರಲಿಲ್ಲ. ಈಗ ಅವರು ಎರಡು ಹೊಸ ಸಿನಿಮಾಗಳೊಟ್ಟಿಗೆ ಮರಳಿದ್ದಾರೆ!
Vijaya Karnataka Web ಎರಡು ಹೊಸ ಸಿನಿಮಾಗಳನ್ನು ಘೋಷಣೆ ಮಾಡಿದ ಪೈಲ್ವಾನ್ ಕೃಷ್ಣ! ಹೀರೋ ಯಾರು?


2 ಸಿನಿಮಾಗಳ ಸ್ಕ್ರಿಪ್ಟ್ ಪೂಜೆ ಮಾಡಿದ ಕೃಷ್ಣ
ಕೃಷ್ಣ ಈಗ ಎರಡು ಸ್ಕ್ರಿಪ್ಟ್ ರೆಡಿ ಮಾಡಿಕೊಂಡಿದ್ದು, ಮಂಗಳವಾರ (ಸೆ.22) ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಸ್ಕ್ರಿಪ್ಟ್ ಪೂಜೆಯನ್ನು ಮಾಡಿಕೊಂಡು ಬಂದಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಇವೆರಡೂ ಕಥೆಗಳನ್ನು ಅವರು ಸಿದ್ಧಪಡಿಸಿಕೊಂಡಿದ್ದಾರೆ. ಈ ಹಿಂದೆ ಅವರು 'ಪೈಲ್ವಾನ್‌' ಸಿನಿಮಾವನ್ನು ತಮ್ಮದೇ ಆರ್‌ಆರ್‌ಆರ್‌ ಮೋಷನ್‌ ಪಿಕ್ಚರ್‌ ಮೂಲಕ ನಿರ್ಮಾಣ ಮಾಡಿದ್ದರು. ಈಗ ಘೋಷಣೆ ಮಾಡಿರುವ ಎರಡು ಸಿನಿಮಾಗಳನ್ನೂ ಕೂಡ ಅವರೇ ನಿರ್ಮಾಣ ಮಾಡಲಿದ್ದಾರಂತೆ.

ಹೀರೋ ಆಗಿ ಇರಲಿದ್ದಾರೆ ಸ್ಟಾರ್ ನಟರು!
ಸುದೀಪ್, ಯಶ್‌ರಂತಹ ಸ್ಟಾರ್ ನಟನರಿಗೆ ಈವರೆಗೂ ಕೃಷ್ಣ ನಿರ್ದೇಶನ ಮಾಡಿದ್ದಾರೆ. ಈಗ ಮಾಡಿಕೊಂಡಿರುವ ಸ್ಕ್ರಿಪ್ಟ್‌ಗಳಲ್ಲೂ ಸ್ಟಾರ್ ನಟರೇ ಬಣ್ಣ ಹಚ್ಚಲಿದ್ದಾರಂತೆ. ಅದಕ್ಕಾಗಿ ಅವರು ಸ್ಯಾಂಡಲ್‌ವುಡ್‌ನ ಟಾಪ್ ನಟರ ಜೊತೆ ಮಾತುಕತೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಸದ್ಯದ ಮಟ್ಟಿಗೆ ಆ ನಟರು ಯಾರು ಅನ್ನೋದು ಬಹಿರಂಗಗೊಂಡಿಲ್ಲ. ಎರಡು ಕಥೆಗಳಲ್ಲಿ ಒಂದಕ್ಕೆ ಕೃಷ್ಣ ನಿರ್ದೇಶನ ಮಾಡಿದರೆ, ಮತ್ತೊಂದಕ್ಕೆ ಬೇರೆ ನಿರ್ದೇಶಕರು ನಿರ್ದೇಶನ ಮಾಡಲಿದ್ದಾರೆ. ಅವರು ಯಾರು ಅನ್ನೋದನ್ನು ಶೀಘ್ರದಲ್ಲೇ ಕೃಷ್ಣ ತಿಳಿಸಲಿದ್ದಾರಂತೆ

ಸುದೀಪ್‌ ಅಭಿಮಾನಿಗಳಿಗೆ ಈ ಜ.12 ವಿಶೇಷ ದಿನ; ಅಂದು ಎಲ್ಲರ ಮನೆಯಲ್ಲೂ ಪೈಲ್ವಾನ್‌ ಜಪ!

ಎಲ್ಲ ಅಂದುಕೊಂಡಂತೆ, ಕೆಲವೇ ತಿಂಗಳಲ್ಲಿ ಈ ಎರಡು ಸಿನಿಮಾಗಳು ಸೆಟ್ಟೇರಲಿವೆ. ಅಂದಹಾಗೆ, ಕೃಷ್ಣ 'ಮುಂಗಾರು ಮಳೆ' ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳಿಗೆ ಅವರು ಛಾಯಾಗ್ರಹಣ ಮಾಡಿದ್ದಾರೆ. ಅವರ ವೃತ್ತಿ ಜೀವನಕ್ಕೆ 'ಮುಂಗಾರು ಮಳೆ' ದೊಡ್ಡ ಬ್ರೇಕ್ ನೀಡಿತ್ತು. 'ಗಜಕೇಸರಿ' ಮೂಲಕ ಅವರು ನಿರ್ದೇಶಕರಾದರೆ, 'ಪೈಲ್ವಾನ್‌' ಮೂಲಕ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಿದರು ಕೃಷ್ಣ. ಸುದೀಪ್, ಸುನೀಲ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದ ಆ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬಂದಿತ್ತು.

ಕನ್ನಡ ಟಿವಿ ಉದ್ಯಮಕ್ಕೆ ಆರ್ಥಿಕ ಪ್ಯಾಕೇಜ್ ಘೋಷಿಸಿ ಎಂದ 'ಪೈಲ್ವಾನ್' ಸಿನಿಮಾ ನಿರ್ದೇಶಕ ಕೃಷ್ಣ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌