ಆ್ಯಪ್ನಗರ

ಬೆನ್ನ ಹಿಂದೆ ಬೀಳುವ ಮೂವರು ಹುಡುಗರ ಹಣೆಬರಹ ಬರೀತಾರಾ ನಟಿ ಸೋನಲ್‌ ಮಂಥೆರೋ?

ಸೋನಲ್‌ ಮಂಥೆರೋ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ಅದಕ್ಕೆ 'ಶಂಭೋ ಶಿವ ಶಂಕರ' ಎಂದು ಶೀರ್ಷಿಕೆ ಇಡಲಾಗಿದೆ. ಹಾಗಂತ ಇದು ಭಕ್ತಿಪಧಾನ ಸಿನಿಮಾ ಅಲ್ಲ! ಲವ್‌ ಮತ್ತು ಸಸ್ಪೆನ್ಸ್‌ ಇರುವ ಈ ಚಿತ್ರದ ಬಗ್ಗೆ ಇಲ್ಲಿದೆ ಮಾಹಿತಿ...

Vijaya Karnataka Web 29 Sep 2020, 7:26 pm
ಕೊರೋನೋತ್ತರ ಕಷ್ಟದ ಕಾಲದಲ್ಲೂ ಕೆಲವು ಸಿನಿಮಾ ಸೆಟ್ಟೇರುತ್ತಿವೆ. ನಟಿ ಸೋನಲ್‌ ಮಂಥೆರೋ ಅವರ ಹೊಸ ಚಿತ್ರ ಕೂಡ ಬೆಂಗಳೂರಿನ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗೆ ಮುಹೂರ್ತ ಮಾಡಿಕೊಂಡಿದೆ. ಅಭಯ್‌ ಪುನೀತ್‌, ರಕ್ಷಕ್‌ ಹಾಗೂ ರೋಹಿತ್‌ ಈ ಸಿನಿಮಾದ ಹೀರೋಗಳು. ಅವರಿಗೆ ಒಬ್ಬರೇ ನಾಯಕಿ ಸೋನಲ್‌ ಮಂಥೆರೋ!
Vijaya Karnataka Web ಶಂಭೋ ಶಿವ ಶಂಕರ


ಶೀರ್ಷಿಕೆ ಸೂಚಿಸುತ್ತಿರುವಂತೆ 'ಶಂಭೋ ಶಿವ ಶಂಕರ' ಎಂದರೆ ದೇವರ ಸಿನಿಮಾ ಅಲ್ಲ. ಅಪ್ಪಟ ಕೌತುಕಭರಿತ ಲವ್‌ಸ್ಟೋರಿ. 'ಶಂಭು, ಶಿವ ಮತ್ತು ಶಂಕರ್‌ ಎಂಬ ಮೂವರು ಹುಡುಗರು ಒಂದೇ ಹುಡುಗಿಯ ಬೆನ್ನು ಬೀಳುತ್ತಾರೆ. ನಂತರ ಏನಾಗುತ್ತದೆ ಎಂಬುದು ಸಸ್ಪೆನ್ಸ್‌. ಸಾಮಾನ್ಯವಾಗಿ ದೇವರು ಹಣೆಬರಹ ಬರೆಯುತ್ತಾನೆ ಅಂತಾರೆ. ಆದರೆ ಈ ಕಥೆಯಲ್ಲಿ ಹುಡುಗಿಯೇ ಈ ಮೂವರ ಹಣೆಬರಹ ಬರೆಯುತ್ತಾಳೆ' ಎಂದಿದ್ದಾರೆ ನಿರ್ದೇಶಕ ಶಂಕರ್ ಕೋನಮಾನಹಳ್ಳಿ.

ಅಘನ್ಯ ಪಿಕ್ಚರ್ಸ್ ಸಂಸ್ಥೆ ನಿರ್ಮಿಸುತ್ತಿರುವ ಈ ಸಿನಿಮಾ ಮುಹೂರ್ತ ಸರಳವಾಗಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ಆರ್.ವಿ. ಮಮತಾ ಆರಂಭಫಲಕ ತೋರಿದರೆ, ನಿರ್ಮಾಪಕ ವರ್ತೂರು ಮಂಜು ಕ್ಯಾಮರಾ ಚಾಲನೆ ಮಾಡಿದರು. ಶಂಭುವಿನ ಪಾತ್ರದಲ್ಲಿ ಅಭಯ್ ಪುನೀತ್, ಶಿವನ ಪಾತ್ರವನ್ನು ರಕ್ಷಕ್ ಹಾಗೂ ಶಂಕರನ ಪಾತ್ರಕ್ಕೆ ರೋಹಿತ್ ಬಣ್ಣ ಹಚ್ಚುತ್ತಿದ್ದಾರೆ. 'ಜೋಡಿ ಹಕ್ಕಿ' ಸೇರಿದಂತೆ ಹಲವು ಧಾರಾವಾಹಿಗಳಿಗೆ ನಿರ್ದೇಶನ ಮಾಡಿದ ಅನುಭವ ಶಂಕರ್ ಕೋನಮಾನಹಳ್ಳಿ ಅವರಿಗೆ ಇದೆ.

also read: 'ಸೈಕೋ' ವೆಬ್‌ ಸಿರೀಸ್‌ಗೆ ನಿರ್ಮಾಪಕಿಯಾದ 'ರಾಬರ್ಟ್‌' ಸಿನಿಮಾ ನಟಿ ಸೋನಲ್‌ ಮಂಥೆರೋ!

ಈವರೆಗೂ 'ಪಂಚತಂತ್ರ', 'ಬುದ್ಧಿವಂತ 2', 'ಬನಾರಸ್‌' ಮುಂತಾದ ಸಿನಿಮಾಗಳಲ್ಲಿ ಒಬ್ಬೊಬ್ಬ ಹೀರೋ ಜೊತೆ ನಟಿಸಿದ್ದ ಸೋನಲ್‌ಗೆ ಇದೇ ಮೊದಲ ಬಾರಿಗೆ ಮೂವರು ನಾಯಕರ ಜೊತೆ ತೆರೆಹಂಚಿಕೊಳ್ಳುತ್ತಿರುವುದು ಕೊಂಚ ಸವಾಲು ಎನಿಸಿದೆಯಂತೆ. ಇದೊಂದು ಸಸ್ಪೆನ್ಸ್ ಚಿತ್ರವಾಗಿರುವುದರಿಂದ ಕಥೆಯ ಬಗ್ಗೆ ತಂಡ ಹೆಚ್ಚು ಮಾಹಿತಿ ಬಿಟ್ಟುಕೊಟ್ಟಿಲ್ಲ. ಕಥೆ ತುಂಬ ಇಷ್ಟ ಆಗಿದ್ದರಿಂದ ನಿರ್ಮಾಣಕ್ಕೆ ಮುಂದಾಗಿದ್ದಾರೆ ವರ್ತೂರು ಮಂಜು. ಹಿತನ್ ಹಾಸನ್‌ ಸಂಗೀತ ನಿರ್ದೇಶನ, ಗೌಸ್ ಫೀರ್ ಸಾಹಿತ್ಯ, ನಟರಾಜ್ ಮುದ್ದಾಲ ಛಾಯಾಗ್ರಹಣ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಮಾಡಲಿದ್ದಾರೆ. ಡಾಲಿ ಧನಂಜಯ, ವಸಿಷ್ಠ ಸಿಂಹ ಮುಂತಾದವರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

also read: ಮಂಗಳೂರು ಬ್ಯೂಟಿ ಸೋನಲ್ ಮಂಥೆರೋ ಸಿನಿ ಬದುಕಿಗೆ ಐದು ವರ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌