ಆ್ಯಪ್ನಗರ

ದೃಷ್ಟಿ ಕಳೆದುಕೊಂಡಿದ್ದ ಮಹಿಳೆಗೆ ಅಣ್ಣನಾಗಿ ಹೊಸ ಬೆಳಕು ಮೂಡಿಸಿದ ಕಿಚ್ಚ ಸುದೀಪ್‌!

ಲಾಕ್‌ಡೌನ್‌ ಆರಂಭದಿಂದಲೂ ಸುದೀಪ್‌ ತಮ್ಮ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಈಗ ತುರುವೇಕೆರೆ ತಾಲೂಕಿನ ಮಹಿಳೆಯೊಬ್ಬರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.

Vijaya Karnataka Web 24 Sep 2020, 10:30 am
ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ನಟ ಸುದೀಪ್‌ ರಿಯಲ್‌ ಲೈಫ್‌ನಲ್ಲಿಯೂ ಹೀರೋ ಎನಿಸಿಕೊಳ್ಳುತ್ತಾರೆ. ಈಗಾಗಲೇ ಅನೇಕರಿಗೆ ಸಹಾಯಹಸ್ತ ಚಾಚಿರುವ ಅವರು ಇತ್ತೀಚೆಗೆ ಮಹಿಳೆಯೊಬ್ಬರ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ನೆರವಾಗಿದ್ದಾರೆ. ದೃಷ್ಟಿ ಕಳೆದುಕೊಂಡಿದ್ದ ಮಹಿಳೆಯ ಬದುಕಿನಲ್ಲಿ ಹೊಸ ಬೆಳಕು ಮೂಡಿವಂತೆ ಮಾಡಿದ್ದಾರೆ.
Vijaya Karnataka Web ಸುದೀಪ್‌


ತುರುವೇಕರೆ ತಾಲೂಕಿನ ನೊಣವಿನಕೆರೆಯ ನೇತ್ರಾವತಿ ಎಂಬುವವರು ಶಿಕ್ಷಕ ವೃತ್ತಿ ಮಾಡುತ್ತಿದ್ದರು. ಕೊರೊನಾ ಕಾಲದಲ್ಲಿ ಅವರ ಕೆಲಸ ಹೋಗಿತ್ತು. ಹೀಗಾಗಿ ಕಟ್ಟಿಗೆ ಒಡೆಯುವ ಕೆಲಸಕ್ಕೆ ಸೇರಿಕೊಂಡಿದ್ದರು. ಕೆಲಸ ಮಾಡುವಾಗ ಕಟ್ಟಿಗೆ ಚೂರು ಕಣ್ಣಿಗೆ ತಾಗಿ ದೃಷ್ಟಿ ಕಳೆದುಕೊಂಡಿದ್ದರು. ಇದರಿಂದ ಅವರ ಜೀವನದಲ್ಲಿ ಕತ್ತಲು ಆವರಿಸಿತ್ತು.

ಈ ಬಗ್ಗೆ ತಿಳಿದ ಸುದೀಪ್‌ ತಾವೇ ಖುದ್ದು ವೈದ್ಯರ ಬಳಿ ಮಾತನಾಡಿ ನೇತ್ರಾವತಿಗೆ ಬೆಂಗಳೂರಿನ ಮೋದಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಜತೆಗೆ ಅಣ್ಣನಾಗಿ ಮುಂದಿನ ಜೀವನವನ್ನು ರೂಪಿಸುವುದಾಗಿ ನೇತ್ರಾವತಿಗೆ ಭರವಸೆ ನೀಡಿದ್ದಾರೆ. ಸದ್ಯಕ್ಕೆ ಚಿಕಿತ್ಸೆ ಮುಗಿದಿದ್ದು, ಮುಂದಿನ ವಾರ ಮತ್ತೊಂದು ಪರೀಕ್ಷೆಗಾಗಿ ನೇತ್ರಾವತಿ ಆಸ್ಪತ್ರೆಗೆ ಭೇಟಿ ನೀಡಬೇಕಿದೆ.

also read: ಶಿವಮೊಗ್ಗ ಜಿಲ್ಲೆಯ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದ 'ಕಿಚ್ಚ' ಸುದೀಪ್‌

ಕಿಚ್ಚ ಸುದೀಪ್‌ ಮಾಡುತ್ತಿರುವ ಸಾಮಾಜಿಕ ಕಾರ್ಯಗಳು ಒಂದೆರಡಲ್ಲ. ಇತ್ತೀಚೆಗೆ ಅವರು ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ಶಿವಮೊಗ್ಗದ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದರು. ಅದನ್ನು ಗಮನಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಸುದೀಪ್‌ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದರು. 'ಶಾಂತಿನಿವಾಸ' ಎಂಬ ಒಂದು ವೃದ್ಧಾಶ್ರಮವನ್ನೂ ಸುದೀಪ್‌ ಕಟ್ಟಿಸುತ್ತಿದ್ದಾರೆ.

also read: ಕಿಚ್ಚ ಸುದೀಪ್‌ ಕಂಡಿದ್ದ 'ಶಾಂತಿನಿವಾಸ' ಕನಸು ನನಸಾಗುವ ಕಾಲ ಬಂತು! ಇದು ರೀಲ್‌ ಅಲ್ಲ; ರಿಯಲ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌