ಇತ್ತೀಚೆಗಷ್ಟೇ ಹೊಸ ಹಾಡು ರಿಲೀಸ್ ಮಾಡಿರುವ ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಕೆಲವು ಪಬ್ಗಳ ಬಗ್ಗೆ ತಕರಾರು ತೆಗೆದಿದ್ದಾರೆ. ಬೆಂಗಳೂರಿನ ಪಬ್ಗಳಲ್ಲಿ ಕನ್ನಡ ಹಾಡನ್ನು ಹಾಕುವುದಿಲ್ಲ ಎಂದು ಅವರು ಗುಡುಗಿದ್ದಾರೆ. ತಾವು ಭೇಟಿ ನೀಡಿದ ಪಬ್ನಲ್ಲಿ ಯಾವ ರೀತಿಯ ಪರಿಸ್ಥಿತಿ ಇತ್ತು ಎಂಬುದನ್ನು ಅವರು ವಿವರಿಸಿದ್ದಾರೆ. 'ಕೊರೊನಾ ಸಮಯದಲ್ಲಿ ಎಲ್ಲರೂ ಸಂಕಷ್ಟದಲ್ಲಿ ಇರುವಾಗ ಈ ವಿಚಾರದ ಬಗ್ಗೆ ಮಾತನಾಡಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದೆ. ಆದರೆ ಈಗ ಮಾತನಾಡಲೇ ಬೇಕಾದ ಪರಿಸ್ಥಿತಿ ಬಂದಿದೆ. ಇತ್ತೀಚೆಗೆ ನಾನು ಒಂದು ಪಬ್ಗೆ ಹೋಗಿದ್ದೆ. ಅಲ್ಲಿದ್ದವರು ಒಂದೇ ಒಂದು ಕನ್ನಡ ಹಾಡು ಹಾಕಿ ಎಂದು ಮನವಿ ಮಾಡಿಕೊಂಡರು. ಅಲ್ಲಿದ್ದ ಪಬ್ ಸಿಬ್ಬಂದಿ ತಾವು ಯಾವುದೇ ಕಾರಣಕ್ಕೂ ಕನ್ನಡ ಹಾಡು ಹಾಕುವುದಿಲ್ಲ ಅಂತ ಹೇಳಿದ್ರು' ಎಂದಿದ್ದಾರೆ ಚಂದನ್.
'ನಂತರ ಪರಿಸ್ಥಿತಿ ಕೈಮೀರಿ ಹೋಗುತ್ತದೆ, ಇಲ್ಲೊಂದು ಗಲಾಟೆ ಆಗುತ್ತದೆ ಎಂಬುದನ್ನು ತಿಳಿದುಕೊಂಡ ಪಬ್ನ ಸಿಬ್ಬಂದಿ ಕಡೆಗೂ ಕನ್ನಡ ಸಾಂಗ್ ಹಾಕಿದರು. ಅದಕ್ಕೆ ಅಲ್ಲಿದ್ದ ಕನ್ನಡಿಗರು ಕುಣಿದು ಕುಪ್ಪಳಿಸಿದರು. ಆದ್ರೆ ವಿಷಯ ಇದಲ್ಲ. ಕರ್ನಾಟಕದಲ್ಲಿ ಕನ್ನಡ ಹಾಡನ್ನು ಹಾಕಬೇಕಾದರೆ ಬೇರೆ ಪರಿಸ್ಥಿತಿಯೇ ಸೃಷ್ಟಿ ಆಗುತ್ತಿದೆ ಸ್ನೇಹಿತರೇ. ಈ ಪಬ್ನ ಮಾಲಿಕರಿಗೆ ಪಬ್ ಕಟ್ಟಲು ಕರ್ನಾಟಕದ ಜಾಗ ಬೇಕು, ಇಲ್ಲಿನ ನೀರು ಬೇಕು, ಕನ್ನಡಿಗರ ಹಣ ಬೇಕು. ಆದರೆ ಕನ್ನಡ ಹಾಡು ಬೇಡ' ಎಂದು ಚಂದನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
also read: ಚಂದನ್ ಶೆಟ್ಟಿ, ನಿವೇದಿತಾ ಗೌಡ ಅವರ 'ಪಾರ್ಟಿ ಫ್ರೀಕ್' ಹಾಡಿಗೆ ಖರ್ಚು ಮಾಡಿದ ಹಣವೆಷ್ಟು?
'ನನಗೆ ಅರ್ಥ ಆಗತ್ತೆ ಸ್ವಾಮಿ. ಬೆಂಗಳೂರು ಒಂದು ಮೆಟ್ರೋಪಾಲಿಟನ್ ಸಿಟಿ. ಇಲ್ಲಿಗೆ ಬೇರೆ ಬೇರೆ ಭಾಷೆ, ರಾಜ್ಯ ಮತ್ತು ದೇಶದ ಜನರು ಬಂದಿದ್ದಾರೆ. ಎಲ್ಲ ಭಾಷೆಯ ಹಾಡುಗಳನ್ನು ಹಾಕಬೇಕು. ಕನ್ನಡವನ್ನೂ ಹಾಕಿ ಎಂದು ನಾವು ಮನವಿ ಮಾಡುತ್ತಿದ್ದೇವೆ. ಕನ್ನಡವನ್ನೇ ಹಾಕಬೇಕು ಅಂತ ನಾನೇನೂ ಹೇಳುತ್ತಿಲ್ಲವಲ್ಲ. ಕನ್ನಡ ಹಾಡು ಹಾಕಿದರೆ ನಿಮ್ಮ ವ್ಯಾಲ್ಯೂ ಕಡಿಮೆ ಆಗುತ್ತೆ ಎಂಬ ಮನಸ್ಥಿತಿಯಿಂದ ದಯವಿಟ್ಟು ಪಬ್ನ ಮ್ಯಾನೇಜ್ಮೆಂಟ್ನವರು ಹೊರಬನ್ನಿ. ನಮ್ಮಲ್ಲೂ ಮಿಲಿಯನ್ಗಟ್ಟಲೆ ಓಡಿದ ಹಾಡುಗಳಿವೆ. ಆಲ್ ಓಕೆ ಮುಂತಾದ ಒಳ್ಳೆಯ ಆರ್ಟಿಸ್ಟ್ಗಳ ಹಾಡುಗಳನ್ನು ಪ್ಲೇ ಮಾಡಿ. ಎಲ್ಲ ಕಲಾವಿದರ ಪರವಾಗಿ ನಾನು ಇದನ್ನು ಹೇಳುತ್ತಿದ್ದೇನೆ' ಎಂಬುದು ಚಂದನ್ ಶೆಟ್ಟಿ ಮಾತುಗಳು.
also read: 'ಕೋಲುಮಂಡೆ' ಹಾಡು ವಿವಾದ: ಚಾಮರಾಜನಗರದ ಜನರಿಗೆ ಕ್ಷಮೆ ಕೇಳಿದ ಚಂದನ್ ಶೆಟ್ಟಿ
'ನಂತರ ಪರಿಸ್ಥಿತಿ ಕೈಮೀರಿ ಹೋಗುತ್ತದೆ, ಇಲ್ಲೊಂದು ಗಲಾಟೆ ಆಗುತ್ತದೆ ಎಂಬುದನ್ನು ತಿಳಿದುಕೊಂಡ ಪಬ್ನ ಸಿಬ್ಬಂದಿ ಕಡೆಗೂ ಕನ್ನಡ ಸಾಂಗ್ ಹಾಕಿದರು. ಅದಕ್ಕೆ ಅಲ್ಲಿದ್ದ ಕನ್ನಡಿಗರು ಕುಣಿದು ಕುಪ್ಪಳಿಸಿದರು. ಆದ್ರೆ ವಿಷಯ ಇದಲ್ಲ. ಕರ್ನಾಟಕದಲ್ಲಿ ಕನ್ನಡ ಹಾಡನ್ನು ಹಾಕಬೇಕಾದರೆ ಬೇರೆ ಪರಿಸ್ಥಿತಿಯೇ ಸೃಷ್ಟಿ ಆಗುತ್ತಿದೆ ಸ್ನೇಹಿತರೇ. ಈ ಪಬ್ನ ಮಾಲಿಕರಿಗೆ ಪಬ್ ಕಟ್ಟಲು ಕರ್ನಾಟಕದ ಜಾಗ ಬೇಕು, ಇಲ್ಲಿನ ನೀರು ಬೇಕು, ಕನ್ನಡಿಗರ ಹಣ ಬೇಕು. ಆದರೆ ಕನ್ನಡ ಹಾಡು ಬೇಡ' ಎಂದು ಚಂದನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
also read: ಚಂದನ್ ಶೆಟ್ಟಿ, ನಿವೇದಿತಾ ಗೌಡ ಅವರ 'ಪಾರ್ಟಿ ಫ್ರೀಕ್' ಹಾಡಿಗೆ ಖರ್ಚು ಮಾಡಿದ ಹಣವೆಷ್ಟು?
'ನನಗೆ ಅರ್ಥ ಆಗತ್ತೆ ಸ್ವಾಮಿ. ಬೆಂಗಳೂರು ಒಂದು ಮೆಟ್ರೋಪಾಲಿಟನ್ ಸಿಟಿ. ಇಲ್ಲಿಗೆ ಬೇರೆ ಬೇರೆ ಭಾಷೆ, ರಾಜ್ಯ ಮತ್ತು ದೇಶದ ಜನರು ಬಂದಿದ್ದಾರೆ. ಎಲ್ಲ ಭಾಷೆಯ ಹಾಡುಗಳನ್ನು ಹಾಕಬೇಕು. ಕನ್ನಡವನ್ನೂ ಹಾಕಿ ಎಂದು ನಾವು ಮನವಿ ಮಾಡುತ್ತಿದ್ದೇವೆ. ಕನ್ನಡವನ್ನೇ ಹಾಕಬೇಕು ಅಂತ ನಾನೇನೂ ಹೇಳುತ್ತಿಲ್ಲವಲ್ಲ. ಕನ್ನಡ ಹಾಡು ಹಾಕಿದರೆ ನಿಮ್ಮ ವ್ಯಾಲ್ಯೂ ಕಡಿಮೆ ಆಗುತ್ತೆ ಎಂಬ ಮನಸ್ಥಿತಿಯಿಂದ ದಯವಿಟ್ಟು ಪಬ್ನ ಮ್ಯಾನೇಜ್ಮೆಂಟ್ನವರು ಹೊರಬನ್ನಿ. ನಮ್ಮಲ್ಲೂ ಮಿಲಿಯನ್ಗಟ್ಟಲೆ ಓಡಿದ ಹಾಡುಗಳಿವೆ. ಆಲ್ ಓಕೆ ಮುಂತಾದ ಒಳ್ಳೆಯ ಆರ್ಟಿಸ್ಟ್ಗಳ ಹಾಡುಗಳನ್ನು ಪ್ಲೇ ಮಾಡಿ. ಎಲ್ಲ ಕಲಾವಿದರ ಪರವಾಗಿ ನಾನು ಇದನ್ನು ಹೇಳುತ್ತಿದ್ದೇನೆ' ಎಂಬುದು ಚಂದನ್ ಶೆಟ್ಟಿ ಮಾತುಗಳು.
also read: 'ಕೋಲುಮಂಡೆ' ಹಾಡು ವಿವಾದ: ಚಾಮರಾಜನಗರದ ಜನರಿಗೆ ಕ್ಷಮೆ ಕೇಳಿದ ಚಂದನ್ ಶೆಟ್ಟಿ