ಆ್ಯಪ್ನಗರ

ಸಿನಿಮಾ ಹೀರೋಗಳ ಕೈಯಲ್ಲಿ ಮಚ್ಚು-ಲಾಂಗು! ಪೊಲೀಸ್ ಆಯುಕ್ತರ ಬೇಸರ

ಸಿನಿಮಾಗಳಲ್ಲಿ ಪೊಲೀಸ್‌ ಪಾತ್ರಗಳು ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು, ಉತ್ತಮ ಸಂದೇಶವನ್ನು ರವಾನಿಸಬೇಕು. ಆದರೆ, ಖಾಕಿ ಹಾಕಿಕೊಂಡು ಕೈಯಲ್ಲಿ ಮಚ್ಚು-ಲಾಂಗು ಹಿಡಿದುಕೊಂಡರೆ? ರೌಡಿಗಳಂತೆ ಹೊಡೆದಾಡಿದರೆ?

Vijaya Karnataka Web 29 Oct 2019, 11:35 am
ತೆರೆಮೇಲೆ ಹೀರೋಗಳು ಕೈಯಲ್ಲಿ ಮಚ್ಚು ಹಿಡಿದು ಎದುರಾಳಿಗಳ ರುಂಡ ಚೆಂಡಾಡುತ್ತಿದ್ದರೆ, ಪ್ರೇಕ್ಷಕ ಶಿಳ್ಳೆ-ಚಪ್ಪಾಳೆ ಹೊಡೆಯುತ್ತ ಆನಂದಿಸುತ್ತಾನೆ. ಹೀರೋ ಕೈಯಲ್ಲಿ ಲಾಂಗ್ ಇದ್ದರೇನೇ ಸಿನಿಮಾ ಗೆಲ್ಲೋದು ಅನ್ನೋ ಭ್ರಮೆ ಸಿನಿಮಾರಂಗದಲ್ಲಿ ಬಲವಾಗಿ ತಳವೂರಿದೆ. ಆದರೆ, ಈ ಬಗ್ಗೆ ನಗರ ಪೊಲೀಸ್ ಆಯುಕ್ತರು ಬೇಸರ ವ್ಯಕ್ತಪಡಿಸಿದ್ಧಾರೆ.
Vijaya Karnataka Web Bhaskar rao

ಫೋನ್‌ ಟ್ಯಾಪ್‌ ತನಿಖೆ ಚುರುಕು
ಇತ್ತೀಚಿಗೆ 'ಕುಥಸ್ಥ' ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌, 'ಪೊಲೀಸ್‌ ಪಾತ್ರ ಮಾಡುವ ನಟರ ಕೈಯಲ್ಲಿ ಲಾಂಗ್‌ ಹಿಡಿಸುವುದನ್ನು ನೋಡುವುದಕ್ಕೆ ಆಗುವುದಿಲ್ಲ. ಅದೊಂದು ರೀತಿಯಲ್ಲಿಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಆದಷ್ಟು ಲಾಂಗ್‌ ಮಚ್ಚುಗಳ ಸಿನಿಮಾವನ್ನು ಕಡಿಮೆ ಮಾಡಿ' ಎಂದು ಸ್ಯಾಂಡಲ್‌ವುಡ್‌ ನಿರ್ದೇಶಕರಿಗೆ ಕಿವಿಮಾತು ಹೇಳಿದ್ದಾರೆ.
ಅಲೋಕ್‌ ಕುಮಾರ್‌ ಎತ್ತಂಗಡಿ: ಭಾಸ್ಕರ್‌ ರಾವ್‌ ಬೆಂಗಳೂರು ಕಮೀಷನರ್‌
'ಇತ್ತೀಚಿನ ದಿನಗಳಲ್ಲಿಸ್ಟಾರ್‌ ನಟರು ಪೊಲೀಸ್‌ ಅಧಿಕಾರಿಯ ಪಾತ್ರ ಮಾಡಿರುತ್ತಾರೆ. ಅಂತಹ ಕಲಾವಿದರು ಅದೇ ಸಿನಿಮಾದಲ್ಲೇ ಲಾಂಗ್‌ ಹಿಡಿದುಕೊಂಡು ರೌಡಿಗಳ ಜತೆ ಬಡಿದಾಡುತ್ತಾರೆ. ಜತೆಗೆ ಪೊಲೀಸ್‌ರನ್ನು ವಿಚಿತ್ರವಾಗಿ ತೋರಿಸುವ ಹವ್ಯಾಸ ಸಿನಿಮಾ ರಂಗದಲ್ಲಿ ನಡೆದುಕೊಂಡು ಬಂದಿದೆ. ಪೊಲೀಸ್‌ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರು ಎಂದೂ ಲಾಂಗ್‌ ಹಿಡಿದುಕೊಂಡು ಹೊಡೆದಾಡುವುದಿಲ್ಲ. ಇಂತಹ ತಪ್ಪು ಸಂದೇಶ ರವಾನಿಸುವುದನ್ನು ನಿರ್ದೇಶಕರು ಬಿಡಬೇಕು' ಎಂದಿದ್ದಾರೆ ಭಾಸ್ಕರ್ ರಾವ್‌.
------------
ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂಥ ಸಿನಿಮಾಗಳು ಹೆಚ್ಚಾಗಿ ಬರಲಿ. ನಾವೆಲ್ಲ ಡಾ.ರಾಜ್‌ಕುಮಾರ್‌, ಗಿರೀಶ ಕಾರ್ನಾಡ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು. ಚಿತ್ರಗಳು ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು.

* ಭಾಸ್ಕರ್‌ ರಾವ್‌, ಬೆಂಗಳೂರು ನಗರ ಪೊಲೀಸ್‌ ಆಯುಕ್ತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌