ಆ್ಯಪ್ನಗರ

'ನನ್ನ ಅರ್ಥ ಮಾಡಿಕೊಳ್ಳೋ ಹುಡ್ಗ ಸಿಕ್ಕಿಲ್ಲಂದ್ರೆ ಜೀವನಪೂರ್ತಿ ಒಂಟಿಯಾಗಿರುತ್ತೇನೆ'- ನಟಿ ತ್ರಿಷಾ ಅಚ್ಚರಿಯ ಹೇಳಿಕೆ!

ನಟಿ ತ್ರಿಷಾ ಮದುವೆ ಯಾವಾಗ ಅನ್ನೋದು ಅವರ ಅಭಿಮಾನಿಗಳ ಬಹುಕಾಲದ ಪ್ರಶ್ನೆ. ಇದೀಗ ಆ ಬಗ್ಗೆ ತ್ರಿಷಾ ಮಾತನಾಡಿದ್ದಾರೆ. ಜೊತೆಗೆ ಎಂಥ ಹುಡುಗ ಬೇಕು ಎಂಬುದನ್ನು ಸಹ ಅವರು ಹೇಳಿಕೊಂಡಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

Vijaya Karnataka Web 16 Nov 2020, 11:08 pm
ನಟಿ ತ್ರಿಷಾ ಕೃಷ್ಣನ್‌ ಈಗ ಮತ್ತೊಮ್ಮೆ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಅವರ ಕೈಯಲ್ಲಿ ಸಿಕ್ಕಾಪಟ್ಟೆ ಸಿನಿಮಾಗಳಿವೆ. 2021ರಲ್ಲಿ ಅವರು ಸಂಪೂರ್ಣ ಬ್ಯುಸಿ. ಈ ಮಧ್ಯೆ ತ್ರಿಷಾ ಮದುವೆ ಕುರಿತು ಚರ್ಚೆ ಶುರುವಾಗಿದೆ. ಸದ್ಯ ತ್ರಿಷಾಗೆ 37 ವರ್ಷ ವಯಸ್ಸು. ಅವರು ಮದುವೆ ಆಗುವುದು ಯಾವಾಗ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿತ್ತು. ಅದಕ್ಕೆ ತ್ರಿಷಾ ಉತ್ತರ ನೀಡಿದ್ದಾರೆ. ಸಂದರ್ಶನವೊಂದರಲ್ಲಿ 'ನನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗ ಸಿಕ್ಕರೆ ಮದುವೆ ಆಗುತ್ತೇನೆ' ಎಂದಿದ್ದಾರೆ ಅವರು.
Vijaya Karnataka Web trisha krishnan


ನಾನು ಲವ್‌ ಮ್ಯಾರೇಜ್ ಆಗುತ್ತೇನೆ!
'ನನ್ನನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವ ಹುಡುಗ ಸಿಗಬೇಕು. ಆಗಲೇ ನಾನು ಮದುವೆ ಆಗಲಿದ್ದೇನೆ. ಅಲ್ಲಿವರೆಗೂ ನಾನು ಸಿಂಗಲ್ ಆಗಿರುವುದಕ್ಕೆ ಯಾವುದೇ ಬೇಸರವಿಲ್ಲ. ಆಕಸ್ಮಾತ್ ನಾನು ಇಷ್ಟಪಡುವಂತಹ, ನನ್ನ ಅರ್ಥ ಮಾಡಿಕೊಳ್ಳುವಂತಹ ಹುಡುಗ ಸಿಗದೇ ಹೋದರೆ, ಜೀವನ ಪೂರ್ತಿ ಒಬ್ಬಂಟಿಯಾಗಿರಲು ನನಗೇನೂ ಬೇಸರವಿಲ್ಲ' ಎಂದು ತ್ರಿಷಾ ಹೇಳಿಕೊಂಡಿದ್ದಾರೆ! ಅಂದಹಾಗೆ, ಅಂಥ ಹುಡುಗ ಸಿಕ್ಕಿ, ಅವರು ಮದುವೆಯಾದರೆ, ಅದು ಸಂಪೂರ್ಣವಾಗಿ ಲವ್ ಮ್ಯಾರೇಜ್ ಆಗಿರಲಿದೆಯಂತೆ.

5 ವರ್ಷದ ಹಿಂದೆ ಮುರಿದುಬಿದ್ದಿತ್ತು ಮದುವೆ!
ನಟಿ ತ್ರಿಷಾ ಐದು ವರ್ಷಗಳ ಹಿಂದೆ ವರುಣ್ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಅದು ಬಹಳ ದಿನ ಉಳಿಯಲಿಲ್ಲ. ಇಬ್ಬರು ಇನ್ನೇನು ಹೊಸ ದಾಂಪತ್ಯಕ್ಕೆ ಅಡಿ ಇಡಬೇಕು ಎನ್ನುವಾಗಲೇ ನಿಶ್ಚಿತಾರ್ಥ ಮುರಿದುಬಿದ್ದಿತ್ತು. ಆಗ ಪುನಃ ಸಿನಿಮಾರಂಗದಲ್ಲಿ ಬೇಡಿಕೆ ಸೃಷ್ಟಿಸಿಕೊಂಡರು ತ್ರಿಷಾ. ಕಳೆದ ಐದು ವರ್ಷಗಳಲ್ಲಿ ಅವರು 13 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ 'ಕೊಡಿ', 'ಯೆನ್ನೈ ಅರಿಂದಾಲ್', '96', 'ಪೆಟ್ಟಾ'ದಂತಹ ಹಿಟ್ ಸಿನಿಮಾಗಳಿವೆ. 2003ರಲ್ಲಿ ಸೂರ್ಯ ನಟನೆಯ 'ಮೌನಂ ಪೇಸಿಯಾಧೆ' ಸಿನಿಮಾ ಮೂಲಕ ನಾಯಕಿಯಾದ ತ್ರಿಷಾ, ಈಗಲೂ ಬೇಡಿಕೆಯ ನಟಿಯಾಗಿದ್ದಾರೆ.

ನಟಿ ತ್ರಿಷಾ ಕೃಷ್ಣನ್‌ಗೆ ಸೋಶಿಯಲ್ ಮೀಡಿಯಾದಲ್ಲಿ ವಾರ್ನಿಂಗ್ ಮಾಡಿದ ಬಿಗ್ ಬಾಸ್ ಮೀರಾ ಮಿಥುನ್!

ತ್ರಿಷಾ ಕೈಯಲ್ಲಿವೆ ಸಾಲು ಸಾಲು ಸಿನಿಮಾಗಳು!
ಕೆ. ತಿರುಜ್ಞಾನಂ ನಿರ್ದೇಶನದ 'ಪರಮಪಧಂ ವಿಲಯಟ್ಟು', ಸುಂದರ್ ಬಾಲು ನಿರ್ದೇಶನದ 'ಗರ್ಜನೈ', ಎಂ. ಸರವಣನ್ ನಿರ್ದೇಶದ 'ರಾಂಗಿ', 'ಶುಗರ್' ಸಿನಿಮಾಗಳಲ್ಲಿ ತ್ರಿಷಾ ನಾಯಕಿ ಆಗಿದ್ದಾರೆ. ಜೀತು ಜೋಸೆಫ್‌ ನಿರ್ದೇಶನದ, ಮೋಹನ್‌ಲಾಲ್‌ ನಾಯಕತ್ವದ ಮಲಯಾಳಂ ಸಿನಿಮಾ 'ರಾಮ್‌' ಚಿತ್ರಕ್ಕೂ ತ್ರಿಷಾ ನಾಯಕಿ. ಇನ್ನು, ಬಹುತಾರಾಗಣದ, ಬಹುನಿರೀಕ್ಷಿತ 'ಪೊಣ್ಣಿಯನ್‌ ಸೆಲ್ವನ್' ಚಿತ್ರದಲ್ಲಿ ತ್ರಿಷಾ ನಟಿಸುತ್ತಿದ್ದಾರೆ. ಇದಕ್ಕೆ ಮಣಿರತ್ನಂ ನಿರ್ದೇಶಕರು.

'ಆಚಾರ್ಯ' ಚಿತ್ರದಿಂದ ನಟಿ ತ್ರಿಷಾ ಹೊರನಡೆದಿದ್ದಕ್ಕೆ ಚಿರಂಜೀವಿ ನೀಡಿದ್ರು 'ಅಸಲಿ' ಕಾರಣ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌