ಆ್ಯಪ್ನಗರ

'ಬಾಹುಬಲಿ' ದಾಖಲೆ ಬರೆದು ಇಂದಿಗೆ 5 ವರ್ಷ! ವಿಶೇಷ ದಿನವನ್ನು ನೆನೆದು ಸಂಭ್ರಮಿಸಿದ ಚಿತ್ರತಂಡ

ಪ್ರಭಾಸ್‌, ತಮನ್ನಾ ಭಾಟಿಯಾ, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ ಮುಖ್ಯಭೂಮಿಕೆ ನಿಭಾಯಿಸಿದ್ದ 'ಬಾಹುಬಲಿ' ಸಿನಿಮಾ ತೆರೆಕಂಡು 5 ವರ್ಷ ಕಳೆದಿದೆ. ಈ ಖುಷಿಯ ಕ್ಷಣವನ್ನು ಇಡೀ ತಂಡ ಅಭಿಮಾನಿಗಳ ಜೊತೆ ಸಂಭ್ರಮಿಸುತ್ತಿದೆ.

Vijaya Karnataka Web 10 Jul 2020, 12:42 pm
ಇಡೀ ವಿಶ್ವವೇ ತಿರುಗಿ ನೋಡುವಂತಹ 'ಬಾಹುಬಲಿ' ಸಿನಿಮಾವನ್ನು ಮೆಚ್ಚಿಕೊಳ್ಳದವರೇ ಇಲ್ಲ ಎನ್ನಬಹುದು. ಅಂಥ ಒಂದು ದೃಶ್ಯವೈಭವವನ್ನು ಕಟ್ಟಿಕೊಟ್ಟವರು ನಿರ್ದೇಶಕ ಎಸ್‌.ಎಸ್‌. ರಾಜಮೌಳಿ. ಬಹುತಾರಾಗಣವನ್ನು ಇಟ್ಟುಕೊಂಡು, ಅಧುನಿಕ ಗ್ರಾಫಿಕ್ಸ್‌ ತಂತ್ರಜ್ಞಾನ ಬಳಸಿಕೊಂಡು ಎರಡು ಪಾರ್ಟ್‌ಗಳಲ್ಲಿ ಒಂದು ರೋಚಕವಾದ ಕಥೆಯನ್ನು ಅವರು ತೆರೆಗೆ ತಂದಿದ್ದರು. ಮೊದಲ ಪಾರ್ಟ್‌ 'ಬಾಹುಬಲಿ: ದಿ ಬಿಗಿನಿಂಗ್‌' 2015ರ ಜು.10ರಂದು ಬಿಡುಗಡೆ ಆಗಿತ್ತು.
Vijaya Karnataka Web prabhas anushka shetty rana daggubati starrer bahubali film completes 5 years
'ಬಾಹುಬಲಿ' ದಾಖಲೆ ಬರೆದು ಇಂದಿಗೆ 5 ವರ್ಷ! ವಿಶೇಷ ದಿನವನ್ನು ನೆನೆದು ಸಂಭ್ರಮಿಸಿದ ಚಿತ್ರತಂಡ


ಬಾಹುಬಲಿ ಪಾರ್ಟ್‌ 1 ತೆರೆಕಂಡು ಇಂದಿಗೆ ಐದು ವರ್ಷ ಪೂರೈಸಿದೆ. ನಿರ್ದೇಶಕ ರಾಜಮೌಳಿ, ನಾಯಕ ನಟ ಪ್ರಭಾಸ್‌, ನಟಿ ಅನುಷ್ಕಾ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡ ಆ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದೆ. ಚಿತ್ರದ ಹಲವು ರೋಚಕ ದೃಶ್ಯ ತುಣುಕುಗಳನ್ನು ಸೇರಿಸಿ ಮಾಡಿದ ಒಂದು ಸ್ಪೆಷಲ್‌ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ 'ಬಾಹುಬಲಿ' ತಂಡ ಶೇರ್‌ ಮಾಡಿಕೊಂಡಿದೆ. ಅದಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಚಿತ್ರದಲ್ಲಿ ವಿಲನ್‌ ಬಲ್ಲಾಳದೇವನ ಪಾತ್ರದಲ್ಲಿ ಅಬ್ಬರಿಸಿದ್ದ ನಟ ರಾಣಾ ದಗ್ಗುಬಾಟಿ ಕೂಡ ಈ ವಿಡಿಯೋವನ್ನು ಪೋಸ್ಟ್‌ ಮಾಡಿಕೊಂಡಿದ್ದಾರೆ. 'ಕಿಲ್ಲರ್‌ ಎಡಿಟ್‌. ತುಂಬ ಇಷ್ಟ ಆಯ್ತು' ಎಂದು ಅವರು ಕ್ಯಾಪ್ಷನ್‌ ನೀಡಿದ್ದಾರೆ. ಈ ಸಿನಿಮಾ ಬಳಿಕ ಪ್ರಭಾಸ್‌ ಮಾತ್ರವಲ್ಲದೆ ರಾಣಾ ದಗ್ಗುಬಾಟಿ ಅವರಿಗೂ ರಾಷ್ಟ್ರಮಟ್ಟದಲ್ಲಿ ಜನಪ್ರಿಯತೆ ಹೆಚ್ಚಿತು. ವಿಶ್ವಾದ್ಯಂತ ಪ್ರದರ್ಶನಗೊಂಡ 'ಬಾಹುಬಲಿ' ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಾವಿರಾರು ಕೋಟಿ ರೂ. ಸಂಗ್ರಹಿಸಿತ್ತು.

also read: ಪ್ರಭಾಸ್‌-ರಾಣಾ ದಗ್ಗುಬಾಟಿ ಮಾಸ್ಕ್‌ ಧರಿಸಿ ಹೊಡೆದಾಡಿದ್ದನ್ನು ನೋಡಿದ್ದೀರಾ? ವಿಡಿಯೋ ವೈರಲ್‌!

ಇತ್ತೀಚೆಗೆ ಈ ಸಿನಿಮಾವನ್ನು ನೆನಪಿಸಿಕೊಂಡು ನಟಿ ತಮನ್ನಾ ಭಾಟಿಯಾ ಸಂದರ್ಶನ ನೀಡಿದ್ದರು. 'ಬಾಹುಬಲಿ ಎಂದಾಗ ನಾನು ನಿಭಾಯಿಸಿದ ಆವಂತಿಕಾ ಪಾತ್ರಕ್ಕೆ ಲುಕ್‌ ಟೆಸ್ಟ್‌ ಮಾಡಿದ್ದೇ ನನಗೆ ಮೊದಲು ನೆನಪಾಗುತ್ತದೆ. ಈ ಸಿನಿಮಾ ದೊಡ್ಡಮಟ್ಟದಲ್ಲಿ ಮೂಡಿಬರಲಿದೆ ಎಂಬುದು ನನಗೆ ಆಗಲೇ ಅರಿವಾಗಿತ್ತು' ಎಂದು ಅವರು ಹೇಳಿದ್ದರು. 'ಬಾಹುಬಲಿ' ಕರ್ನಾಟಕದಲ್ಲಿಯೂ ಭರ್ಜರಿ ಪ್ರದರ್ಶನ ಕಂಡಿತ್ತು. ಕಿಚ್ಚ ಸುದೀಪ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

also read: 'ಬಾಹುಬಲಿ' ನಿರ್ದೇಶಕ ರಾಜಮೌಳಿ ಮೇಲೆ ಕೋಪಗೊಂಡಿದ್ದಕ್ಕೆ ಕಾರಣ ತಿಳಿಸಿದ ರಾಜೇಂದ್ರ ಸಿಂಗ್ ಬಾಬು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌