ಆ್ಯಪ್ನಗರ

ಪ್ರಭಾಸ್‌ ರಾಮನಾದರೆ ಕೀರ್ತಿ ಸುರೇಶ್‌ ಸೀತೆ; ಸೈಫ್‌ ಅಲಿ ಖಾನ್‌ ರಾವಣ? ಇದೊಳ್ಳೆ ರಾಮಾಯಣ!

ಪ್ರಭಾಸ್‌ ನಟಿಸಲಿರುವ ಹೊಸ ಸಿನಿಮಾ ಆದಿಪುರುಷ್‌ನಲ್ಲಿ ಬೇರೆ ಯಾವೆಲ್ಲ ಕಲಾವಿದರು ಮುಖ್ಯಪಾತ್ರ ಮಾಡಲಿದ್ದಾರೆ ಎಂಬ ಬಗ್ಗೆ ಗುಸುಗುಸು ಕೇಳಿಬಂದಿದೆ. ಕೀರ್ತಿ ಸುರೇಶ್‌ ಸೀತೆಯಾದರೆ, ಸೈಫ್‌ ಅಲಿ ಖಾನ್‌ ರಾವಣ ಎನ್ನಲಾಗುತ್ತಿದೆ!

Vijaya Karnataka Web 20 Aug 2020, 12:09 pm
ನಟ ಪ್ರಭಾಸ್‌ ಸಿನಿಮಾ ಜರ್ನಿಗೆ ಈಗ ಹೊಸ ವೇಗ ಸಿಕ್ಕಂತಾಗಿದೆ. 'ಸಾಹೋ' ಸಿನಿಮಾ ನಂತರ ಅವರು ಬೇಗ ಬೇಗ ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅವರ 'ರಾಧೆ ಶ್ಯಾಮ್‌' ಸಿನಿಮಾ ಕೆಲಸಗಳು ಜಾರಿಯಲ್ಲಿ ಇರುವಾಗಲೇ 'ಆದಿಪುರುಷ್‌' ಎಂಬ ಮತ್ತೊಂದು ಚಿತ್ರ ಮಂಗಳವಾರ (ಆ.18) ಘೋಷಣೆ ಆಯಿತು. ಆ ಚಿತ್ರದ ಪಾತ್ರವರ್ಗದ ಬಗ್ಗೆ ಇಂಟರೆಸ್ಟಿಂಗ್ ವಿಚಾರಗಳು ಹೊರಬರುತ್ತಿವೆ.
Vijaya Karnataka Web prabhas starrer adipurush likely to have keerthy suresh as sita and saif ali khan as ravan
ಪ್ರಭಾಸ್‌ ರಾಮನಾದರೆ ಕೀರ್ತಿ ಸುರೇಶ್‌ ಸೀತೆ; ಸೈಫ್‌ ಅಲಿ ಖಾನ್‌ ರಾವಣ? ಇದೊಳ್ಳೆ ರಾಮಾಯಣ!


'ಆದಿಪುರುಷ್‌' ಟೈಟಲ್‌ ಬಹಿರಂಗಪಡಿಸುವ ಸಲುವಾಗಿ ಒಂದು ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ಅದನ್ನು ಗಮನಿಸಿದರೆ ಇದು ರಾಮಾಯಣದ ಕಥಾಹಂದರ ಇರುವ ಸಿನಿಮಾ ಎಂಬುದು ಸ್ಪಷ್ಟವಾಗುತ್ತದೆ. ರಾಮನ ಪಾತ್ರದಲ್ಲಿ ಪ್ರಭಾಸ್‌ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇಲ್ಲಿನ ಪ್ರತಿ ಪಾತ್ರಗಳೂ ಪ್ರಮುಖವಾಗಿದ್ದು, ಅವುಗಳಿಗೆ ಯಾರು ಬಣ್ಣ ಹಚ್ಚುತ್ತಾರೆ ಎಂಬುದೇ ಕೌತುಕದ ಪ್ರಶ್ನೆ. ಪ್ರಭಾಸ್‌ ರಾಮನಾದರೆ ನಟಿ ಕೀರ್ತಿ ಸುರೇಶ್‌ ಸೀತೆ ಆಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

'ಮಹಾನಟಿ' ಸಿನಿಮಾ ಮೂಲಕ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿರುವ ನಟಿ ಕೀರ್ತಿ ಸುರೇಶ್‌ ಅವರು 'ಆದಿಪುರುಷ್‌' ಚಿತ್ರದಲ್ಲಿ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅವರ ಜೊತೆಗೆ ನಿರ್ದೇಶಕರು ಮಾತುಕಥೆ ಕೂಡ ಮಾಡಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡದ ಯಾರೊಬ್ಬರೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಹರಿದಾಡುತ್ತಿರುವ ಸುದ್ದಿ ನಿಜವೇ ಹೌದಾಗಿದ್ದರೆ ಪ್ರಭಾಸ್‌-ಕೀರ್ತಿ ಜೋಡಿಯನ್ನು ರಾಮ-ಸೀತೆಯಾಗಿ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

also read: 'ಆದಿಪುರುಷ'ನಾಗಿ ಕನ್ನಡಕ್ಕೆ ಕಾಲಿಟ್ಟ ನಟ ಪ್ರಭಾಸ್‌! ಶ್ರೀರಾಮನ ಅವತಾರದಲ್ಲಿ 'ಯಂಗ್ ರೆಬೆಲ್‌ ಸ್ಟಾರ್‌'!

ರಾಮಾಯಣದ ಇನ್ನೊಂದು ಅತಿಮುಖ್ಯ ಪಾತ್ರ ರಾವಣ. ಅದನ್ನು ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಮಾಡಲಿದ್ದಾರೆ ಎಂಬ ವದಂತಿ ಹಬ್ಬಿದೆ. ಅಂದಹಾಗೆ, 'ಆದಿಪುರುಷ್‌'ಗೆ ನಿರ್ದೇಶನ ಮಾಡುತ್ತಿರುವುದು ಓಂ ರಾವುತ್‌. ಈ ಹಿಂದೆ ಇದೇ ಓಂ ರಾವುತ್‌ ನಿರ್ದೇಶಿಸಿದ್ದ 'ತಾನಾಜಿ' ಚಿತ್ರದಲ್ಲಿ ಸೈಫ್‌ ವಿಲನ್‌ ಪಾತ್ರ ಮಾಡಿದ್ದರು. ಹಾಗಾಗಿ ಸೈಫ್‌ ನೆಗೆಟಿವ್‌ ಶೇಡ್‌ ಪಾತ್ರ ಮಾಡುವುದು ಹೊಸದೇನೂ ಅಲ್ಲ. ಈ ಬಗ್ಗೆ 'ಆದಿಪುರುಷ್‌' ತಂಡ ಇನ್ನಷ್ಟೇ ಅಧಿಕೃತ ಮಾಹಿತಿ ಬಿಟ್ಟುಕೊಡಬೇಕಿದೆ.

also read: 'ಉಗ್ರಂ'ದಿಂದಾಗಿ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಹಿಂದೆ ಬಿದ್ದ ಪ್ರಖ್ಯಾತ ನಟ ಪ್ರಭಾಸ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌