ಆ್ಯಪ್ನಗರ

ಕರ್ನಾಟಕದ ಬಗ್ಗೆ ತಿಳಿದುಕೊಳ್ಳೋಕೆ ಆಸಕ್ತಿ ತೋರಿಸಿದ 'ಪ್ರಿನ್ಸ್‌' ಮಹೇಶ್‌ ಬಾಬು! ಕಾರಣ ಏನು?

ಟಾಲಿವುಡ್‌ನಲ್ಲಿ ಹಲವು ವರ್ಷಗಳಿಂದ ಮಿಂಚುತ್ತಿರುವ ನಟ ಮಹೇಶ್‌ ಬಾಬು ಅವರಿಗೆ ಈಗ ಏಕಾಏಕಿ ಕರ್ನಾಟಕದ ಬಗ್ಗೆ ತಿಳಿದುಕೊಳ್ಳುವ ಮನಸ್ಸಾಗಿದೆ. ಆ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಆಸೆ ವ್ಯಕ್ತಪಡಿಸಿದ್ದಾರೆ.

Vijaya Karnataka Web 28 May 2020, 1:04 am
ನಟ ಮಹೇಶ್‌ ಬಾಬು ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೆ ಕರುನಾಡಿನಲ್ಲೂ ಅವರ ಸಿನಿಮಾಗಳು ಭಾರಿ ಸದ್ದು ಮಾಡುತ್ತವೆ. ಅವರು ನಟಿಸಿದ ಸಿನಿಮಾಗಳು ಕನ್ನಡಕ್ಕೂ ರಿಮೇಕ್‌ ಆಗಿವೆ. ಆದರೆ ಈ ಎಲ್ಲ ವಿಚಾರಗಳ ಹೊರತಾಗಿ ಒಂದು ವಿಶೇಷ ಕಾರಣದಿಂದ ಅವರಿಗೆ ಕರ್ನಾಟಕದ ಬಗ್ಗೆ ಆಸಕ್ತಿ ಮೂಡಿದೆ.
Vijaya Karnataka Web ಮಹೇಶ್‌ ಬಾಬು


ಹೌದು, ಕರ್ನಾಟಕದ ಕಾಡು ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳಲು ಮಹೇಶ್‌ ಬಾಬು ಉತ್ಸುಕರಾಗಿದ್ದಾರೆ. ಅದಕ್ಕೆ ಕಾರಣ ಆಗಿರೋದು 'ವೈಲ್ಡ್‌ ಕರ್ನಾಟಕ' ಸಾಕ್ಷ್ಯಚಿತ್ರ. ಡಿಸ್ಕವರಿ ಮತ್ತು ಅನಿಮಲ್‌ ಪ್ಲಾನೆಟ್‌ ವಾಹಿನಿಗಳಲ್ಲಿ ಈ ಸಾಕ್ಷ್ಯಚಿತ್ರ ಪ್ರಸಾರ ಆಗಲಿದೆ. ವಿಶ್ವ ಪರಿಸರ ದಿನದ ಅಂಗವಾಗಿ ಜೂ. 5ರಂದು ರಾತ್ರಿ 8 ಗಂಟಗೆ ಪ್ರೀಮಿಯರ್‌ ಪ್ರದರ್ಶನ ಆಗಲಿದೆ.

'ವೈಲ್ಡ್‌ ಕರ್ನಾಟಕ' ಹಲವು ಭಾಷೆಗಳಲ್ಲಿ ಮೂಡಿಬಂದಿದ್ದು, ಕನ್ನಡದಲ್ಲಿ ರಿಷಬ್‌ ಶೆಟ್ಟಿ, ತೆಲುಗು-ತಮಿಳಿನಲ್ಲಿ ಪ್ರಕಾಶ್‌ ರೈ, ಹಿಂದಿಯಲ್ಲಿ ರಾಜ್‌ಕುಮಾರ್‌ ರಾವ್‌, ಇಂಗ್ಲಿಷ್‌ನಲ್ಲಿ ಖ್ಯಾತ ನಟ ಸರ್‌ ಡೇವಿಡ್‌ ಅಟೆನ್‌ಬರೋ ಹಿನ್ನೆಲೆ ಧ್ವನಿ ನೀಡಿದ್ದಾರೆ. ಅದರ ಪ್ರೋಮೋವನ್ನು ಪ್ರಕಾಶ್‌ ರೈ ಇತ್ತೀಚೆಗೆ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದರು. ಅದನ್ನು ಗಮನಿಸಿದ ಮಹೇಶ್‌ ಬಾಬು ಪ್ರತಿಕ್ರಿಯೆ ನೀಡಿದ್ದಾರೆ.

also read: ಕರ್ನಾಟಕದ ಕಾಡು ಪ್ರಾಣಿಗಳ ರೋಚಕ ಕಥೆಯನ್ನು ಕನ್ನಡದಲ್ಲೇ ನೋಡಿ ಡಿಸ್ಕವರಿ ಚಾನಲ್‌ನಲ್ಲಿ!

'ನಿಮ್ಮ ಆಸಕ್ತಿಕರ ನಿರೂಪಣೆಯಲ್ಲಿ ಇದನ್ನು ನೋಡಲು ಕಾದಿದ್ದೇನೆ' ಎಂದು ಮಹೇಶ್ ಬಾಬು ಟ್ವೀಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ಈ ಸ್ಟಾರ್‌ ಕಲಾವಿದರಿಂದಾಗಿ 'ವೈಲ್ಡ್‌ ಕರ್ನಾಟಕ' ಡಾಕ್ಯುಮೆಂಟರಿಗೆ ಹೆಚ್ಚು ಪ್ರಚಾರ ಸಿಗುತ್ತಿದೆ. ಇದನ್ನು ಅಮೋಘವರ್ಷ ಜೆಎಸ್‌ ಮತ್ತು ಕಲ್ಯಾಣ್‌ ರಾಮ್‌ ನಿರ್ಮಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಪ್ರೋಮೋಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

also read: ಮಹೇಶ್ ಬಾಬು 'ಶ್ರೀರಾಮನ ಅವತಾರ' ತಾಳಿದ್ದೇಕೆ? ರಾಜಮೌಳಿ 'ರಾಮಾಯಣ' ಮಾಡೋದು ನಿಜನಾ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌