ಆ್ಯಪ್ನಗರ

ಆ ನಿರ್ಮಾಪಕ ಒಂದು ರಾತ್ರಿ ಕಮಿಂಟ್‌ಮೆಂಟ್ ಕೇಳಿದ್ದ ಎಂದ ನಟಿ ಶ್ರುತಿ

ಬಣ್ಣದ ಜಗತ್ತಿನಲ್ಲಿ ಕೆಲವು ನಿರ್ಮಾಪಕರು ನಾಯಕಿಯರಿಗೆ ಪಾತ್ರ ನೀಡಲು ಪಲ್ಲಂಗಕ್ಕೆ ಆಹ್ವಾನಿಸುತ್ತಿರುವುದು ಹೊಸ ಸಂಗತಿ ಏನಲ್ಲ. ಮೀಟೂ, ಕಾಸ್ಟಿಂಗ್ ಕೌಚ್ ಅಭಿಯಾನದ ಮೂಲಕ ಈ ಸಂಗತಿಯನ್ನು ಹಲವಾರು ತಾರೆಗಳು ಬಹಿರಂಗಪಡಿಸಿದ್ದಾರೆ. ಇದೀಗ ಮರಾಠಿ ನಟಿ ಶ್ರುತಿ ಮರಾಠೆ ಸಹ ಈ ಬಗ್ಗೆ ಮಾತನಾಡಿದ್ದಾರೆ.

Vijaya Karnataka Web 20 May 2020, 8:29 pm

ಚಿತ್ರೋದ್ಯಮದಲ್ಲಿ ಕಾಸ್ಟಿಂಗ್ ಕೌಚ್ (ಪಾತ್ರಕ್ಕಾಗಿ ಪಲ್ಲಂಗ) ಸಮಸ್ಯೆ ಸುದೀರ್ಘ ಸಮಯದಿಂದ ಕೇಳಿಬರುತ್ತಲೇ ಇದೆ. ನಿತ್ಯ ಯಾರೋ ಒಬ್ಬರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಶಾಕಿಂಗ್ ಕಾಮೆಂಟ್ಸ್ ಮಾಡುತ್ತಲೇ ಇದ್ದಾರೆ. ಇದೀಗ ಮರಾಠಿ ಹೀರೋಯಿನ್ ಶ್ರುತಿ ಮರಾಠೆ ಈ ಬಗ್ಗೆ ಓಪನ್ ಅಪ್ ಆಗಿದ್ದಾರೆ.
Vijaya Karnataka Web ಶ್ರುತಿ ಮರಾಠೆ


ಚಿತ್ರೋದ್ಯಮದಲ್ಲಿ ಲೈಂಗಿಕ ದೌರ್ಜನ್ಯ ಹೆಚ್ಚಾಗಿದ್ದು, ಅವಕಾಶಗಳ ಹೆಸರಿನಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಹಿಂಸಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಲೇ ಇವೆ. ಸದ್ದುಗದ್ದಲವಿಲ್ಲದೆ ನಡೆಯುತ್ತಿದ್ದ ಈ ವ್ಯವಹಾರ ಪ್ರಮುಖವಾಗಿ ಬೆಳಕಿಗೆ ಬಂದಿದ್ದು ಕಾಸ್ಟಿಂಗ್ ಕೌಚ್ ಹಾಗೂ ಮೀಟೂ ಅಭಿಯಾನಗಳ ಮೂಲಕ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮರಾಠಿ ಹೀರೋಯಿನ್ ಶ್ರುತಿ ಮರಾಠೆ ಸಹ ತನಗೆ ಎದುರಾದ ಕಹಿ ಅನುಭವದ ಬಗ್ಗೆ ಹೇಳಿದ್ದಾರೆ. ಆ ಸಮಯದಲ್ಲಿ ತಾನು ವ್ಯವಹರಿಸಿದ ರೀತಿಯನ್ನು ಹೇಳಿಕೊಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕಾಸ್ಟಿಂಗ್ ಕೌಚ್ ಬಗ್ಗೆ ಮೌನ ಮುರಿದ 'ಮಾಣಿಕ್ಯ' ಹೀರೋಯಿನ್ ವರಲಕ್ಷ್ಮೀ

ತನ್ನ ಸಿನಿಮಾದಲ್ಲಿ ಚಾನ್ಸ್ ಬೇಕಾದರೆ ಕಾಂಪ್ರಮೈಸ್ ಆಗಬೇಕು, ಒಂದು ರಾತ್ರಿ ಪಲ್ಲಂಗಕ್ಕೆ ಬರಬೇಕು ಎಂದು ನಿರ್ಮಾಪಕರೊಬ್ಬರು ನೇರವಾಗಿ ಕೇಳಿದ ಕಾರಣ ಅವರಿಗೆ ಮುಟ್ಟಿ ನೋಡಿಕೊಳ್ಳುವಂತಹ ಶಾಕ್ ನೀಡಿದೆ ಎಂದಿದ್ದಾರೆ ಶ್ರುತಿ ಮರಾಠೆ. "ನನ್ನ ಸಂಗತಿ ಬಿಡು... ಹೀರೋನನ್ನೂ ಕೂಡ ಇದೇ ರೀತಿ ಕೇಳಿದ್ರಾ? ಅವರೂ ನಿನ್ನೊಂದಿಗೆ ಮಲಗಬೇಕೆ? ಆ ರೀತಿ ಮಾಡಿದರೆ ಮಾತ್ರ ನಿನ್ನ ಸಿನಿಮಾದಲ್ಲಿ ಅವಕಾಶ ನೀಡುತ್ತೀರಾ?" ಎಂದು ಕೌಂಟರ್ ನೀಡಿದ್ದಕ್ಕೆ ಆ ನಿರ್ಮಾಪಕ ಸೈಲೆಂಟ್ ಆದ ಎಂದಿದ್ದಾರೆ ಶ್ರುತಿ.

ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಕಾಸ್ಟಿಂಗ್ ಕೌಚ್ ಸೌಂಡ್!

ತಾನು ನಿರ್ಮಾಪಕರ ಜೊತೆಗೆ ಆ ರೀತಿ ಮಾತನಾಡಿದ್ದಕ್ಕೆ ಆ ಸಿನಿಮಾದಿಂದಲೇ ನನ್ನನ್ನು ಕೈಬಿಡಲಾಯಿತು. ಆದರೂ ತನಗೇನು ಬೇಸರವಾಗಲಿಲ್ಲ. ಇಂತಹ ವಿಚಾರಗಳಲ್ಲಿ ಧೈರ್ಯವಾಗಿ ಇದ್ದರಷ್ಟೇ ನಮ್ಮ ಮೌಲ್ಯಗಳನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದಿದ್ದಾರೆ ಶ್ರುತಿ ಮರಾಠೆ. ಸ್ಟಾರ್ ಹೀರೋಯಿನ್ ಆಗಬೇಕು ಎಂಬ ಆಸೆಯಿಂದ ಬಹಳಷ್ಟು ಮಂದಿ ಸಿನಿಮಾ ಇಂಡಸ್ಟ್ರಿ ಕಡೆಗೆ ಎದುರು ನೋಡುತ್ತಿರುವ ಯುವತಿಯರನು ಇಂತಹ ಕೀಚಕರು ಕಣ್ಣಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌