'ಸತ್ಯ'ಕಥೆಗೆ ಮಾರುಹೋದ 'ಪವರ್ ಸ್ಟಾರ್' ಪುನೀತ್ ರಾಜ್ಕುಮಾರ್!
ಪುನೀತ್ ರಾಜ್ಕುಮಾರ್ ಇದುವರೆಗೂ ಪಕ್ಕಾ ಕಮರ್ಷಿಯಲ್ ಸಿನಿಮಾಗಳ ಮೂಲಕ ಗುರುತಿಸಿಕೊಂಡವರು. ನಿರ್ದೇಶಕ ಸತ್ಯಪ್ರಕಾಶ್ 'ರಾಮಾ ರಾಮಾ ರೇ', 'ಒಂದಲ್ಲಾ ಎರಡಲ್ಲಾ' ಥರದ ಸಿನಿಮಾಗಳಿಂದ ಖ್ಯಾತಿ ಪಡೆದವರು. ಇದೀಗ ಅವರಿಬ್ಬರು ಒಂದಾಗುತ್ತಿದ್ದಾರೆ.
Vijaya Karnataka Web 3 Jan 2020, 8:56 am
* ಹರೀಶ್ ಬಸವರಾಜ್
'ರಾಮಾ ರಾಮಾ ರೇ' ಖ್ಯಾತಿಯ ಸತ್ಯಪ್ರಕಾಶ್ ನಿರ್ದೇಶನದಲ್ಲಿ 'ಪವರ್ ಸ್ಟಾರ್' ಪುನೀತ್ ರಾಜ್ಕುಮಾರ್ ನಟಿಸುವುದು ಕನ್ಫರ್ಮ್ ಆಗಿದ್ದು, ಆ ಸಿನಿಮಾಕ್ಕಾಗಿ ನಿರ್ದೇಶಕರು ಕಳೆದ ಆರು ತಿಂಗಳಿನಿಂದ ಕೆಲಸ ಮಾಡುತ್ತಿದ್ದಾರೆ. ಸತ್ಯಪ್ರಕಾಶ್ ಹೇಳಿದ ಒನ್ಲೈನ್ ಕಥೆ ಕೇಳಿ ಪುನೀತ್ ಅವರು ತುಂಬಾ ಎಕ್ಸೈಟ್ ಆಗಿ ಸಿನಿಮಾ ಮಾಡಲು ಹೇಳಿದ್ದಾರೆ. ಈಗಾಗಲೇ ಒಂದು ಸುತ್ತು ಚಿತ್ರಕಥೆಯ ಚರ್ಚೆ ಸಹ ನಡೆದಿದೆ.
ಸತ್ಯಪ್ರಕಾಶ್ ನಿರ್ದೇಶನದ ಈ ಹಿಂದಿನ ಎರಡೂ ಚಿತ್ರಗಳು ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳು. ಪುನೀತ್ ರಾಜ್ಕುಮಾರ್ ಇದುವರೆಗೂ ಕಮರ್ಷಿಯಲ್ ಚಿತ್ರಗಳ ಮೂಲಕ ಮನರಂಜನೆ ನೀಡಿದವರು. ಈಗ ಇಬ್ಬರೂ ಒಟ್ಟಿಗೆ ಸೇರುತ್ತಿರುವುದರಿಂದ ಈ ಸಿನಿಮಾದ ಮೇಲೆ ಪುನೀತ್ ಅಭಿಮಾನಿಗಳಿಗೆ ಬೇರೆಯದ್ದೇ ನಿರೀಕ್ಷೆ ಇದೆ.
'ಲವಲವಿಕೆ'ಗೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಕಂಟೆಂಟ್ ಮತ್ತು ಕಮರ್ಷಿಯಲ್ ಎರಡೂ ಅಂಶಗಳನ್ನು ಬ್ಲೆಂಡ್ ಮಾಡಿ ಸತ್ಯ ಕಥೆ-ಚಿತ್ರಕಥೆ ಬರೆದಿದ್ದಾರೆ. ಇನ್ನೊಂದು ವಿಶೇಷ ಎಂದರೆ, ಪುನೀತ್ ಒಡೆತನದ ಪಿಆರ್ಕೆ ಪ್ರೊಡಕ್ಷನ್ಸ್ನಲ್ಲಿ 'ಕವಲುದಾರಿ' ಬಿಡುಗಡೆಯಾಗಿದ್ದು, ಇನ್ನೂ ಮೂರು ಸಿನಿಮಾಗಳು ರಿಲೀಸ್ ಆಗಬೇಕಿದೆ. ಈ ಯಾವ ಚಿತ್ರಗಳಲ್ಲೂ ಪುನೀತ್ ನಟಿಸಿಲ್ಲ. ಇದೀಗ ಮೊದಲ ಬಾರಿಗೆ ಸತ್ಯಪ್ರಕಾಶ್ ಸಿನಿಮಾ ಮೂಲಕ ತಮ್ಮ ಬ್ಯಾನರ್ನಲ್ಲೇ ಪುನೀತ್ ನಟಿಸಲಿದ್ದಾರೆ ಎನ್ನಲಾಗಿದೆ. ಹಾಗಾಗಿ ಸತ್ಯಪ್ರಕಾಶ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.
ಶೂಟಿಂಗ್ ಸ್ಥಳಕ್ಕೆ ಹೋಗಿ ಸುದೀಪ್ ಅವರನ್ನು ಭೇಟಿಯಾದ ಪುನೀತ್ ರಾಜ್ಕುಮಾರ್
ಸದ್ಯ 'ಯುವರತ್ನ' ಚಿತ್ರದ ಕೆಲಸಗಳನ್ನು ಮುಗಿಸುತ್ತಿರುವ ಪುನೀತ್, ಇದಾದ ಮೇಲೆ ಚೇತನ್ಕುಮಾರ್ ಅವರ 'ಜೇಮ್ಸ್' ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದು ಮುಗಿದ ಮೇಲೆ ಸತ್ಯಪ್ರಕಾಶ್ ಸಿನಿಮಾ ಆರಂಭವಾಗಲಿದೆ. ಅಷ್ಟರೊಳಗೆ ಸತ್ಯಪ್ರಕಾಶ್ ಕೂಡ ಚಿತ್ರಕಥೆಯನ್ನು ಕಂಪ್ಲೀಟ್ ಮಾಡಲಿದ್ದಾರೆ. 'ಪುನೀತ್ ಅವರ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಅವರು ಮತ್ತು ಅವರ ಅಭಿಮಾನಿಗಳಿಗೆ ಇಷ್ಟವಾಗುವಂಥ ಕಥೆಯನ್ನು ನಾನು ಬರೆದಿದ್ದೇನೆ. ಫೈನಲ್ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲೇ ಎಲ್ಲ ಮಾಹಿತಿಯನ್ನು ನೀಡಲಿದ್ದೇನೆ' ಎನ್ನುತ್ತಾರೆ ಸತ್ಯಪ್ರಕಾಶ್.
ದೇಶಕ್ಕಾಗಿ ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡೋಣ: ನಟ ಪುನೀತ್
'ರಾಮಾ ರಾಮಾ ರೇ' ಖ್ಯಾತಿಯ ಸತ್ಯಪ್ರಕಾಶ್ ನಿರ್ದೇಶನದಲ್ಲಿ 'ಪವರ್ ಸ್ಟಾರ್' ಪುನೀತ್ ರಾಜ್ಕುಮಾರ್ ನಟಿಸುವುದು ಕನ್ಫರ್ಮ್ ಆಗಿದ್ದು, ಆ ಸಿನಿಮಾಕ್ಕಾಗಿ ನಿರ್ದೇಶಕರು ಕಳೆದ ಆರು ತಿಂಗಳಿನಿಂದ ಕೆಲಸ ಮಾಡುತ್ತಿದ್ದಾರೆ. ಸತ್ಯಪ್ರಕಾಶ್ ಹೇಳಿದ ಒನ್ಲೈನ್ ಕಥೆ ಕೇಳಿ ಪುನೀತ್ ಅವರು ತುಂಬಾ ಎಕ್ಸೈಟ್ ಆಗಿ ಸಿನಿಮಾ ಮಾಡಲು ಹೇಳಿದ್ದಾರೆ. ಈಗಾಗಲೇ ಒಂದು ಸುತ್ತು ಚಿತ್ರಕಥೆಯ ಚರ್ಚೆ ಸಹ ನಡೆದಿದೆ.
ಸತ್ಯಪ್ರಕಾಶ್ ನಿರ್ದೇಶನದ ಈ ಹಿಂದಿನ ಎರಡೂ ಚಿತ್ರಗಳು ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳು. ಪುನೀತ್ ರಾಜ್ಕುಮಾರ್ ಇದುವರೆಗೂ ಕಮರ್ಷಿಯಲ್ ಚಿತ್ರಗಳ ಮೂಲಕ ಮನರಂಜನೆ ನೀಡಿದವರು. ಈಗ ಇಬ್ಬರೂ ಒಟ್ಟಿಗೆ ಸೇರುತ್ತಿರುವುದರಿಂದ ಈ ಸಿನಿಮಾದ ಮೇಲೆ ಪುನೀತ್ ಅಭಿಮಾನಿಗಳಿಗೆ ಬೇರೆಯದ್ದೇ ನಿರೀಕ್ಷೆ ಇದೆ.
'ಲವಲವಿಕೆ'ಗೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಕಂಟೆಂಟ್ ಮತ್ತು ಕಮರ್ಷಿಯಲ್ ಎರಡೂ ಅಂಶಗಳನ್ನು ಬ್ಲೆಂಡ್ ಮಾಡಿ ಸತ್ಯ ಕಥೆ-ಚಿತ್ರಕಥೆ ಬರೆದಿದ್ದಾರೆ. ಇನ್ನೊಂದು ವಿಶೇಷ ಎಂದರೆ, ಪುನೀತ್ ಒಡೆತನದ ಪಿಆರ್ಕೆ ಪ್ರೊಡಕ್ಷನ್ಸ್ನಲ್ಲಿ 'ಕವಲುದಾರಿ' ಬಿಡುಗಡೆಯಾಗಿದ್ದು, ಇನ್ನೂ ಮೂರು ಸಿನಿಮಾಗಳು ರಿಲೀಸ್ ಆಗಬೇಕಿದೆ. ಈ ಯಾವ ಚಿತ್ರಗಳಲ್ಲೂ ಪುನೀತ್ ನಟಿಸಿಲ್ಲ. ಇದೀಗ ಮೊದಲ ಬಾರಿಗೆ ಸತ್ಯಪ್ರಕಾಶ್ ಸಿನಿಮಾ ಮೂಲಕ ತಮ್ಮ ಬ್ಯಾನರ್ನಲ್ಲೇ ಪುನೀತ್ ನಟಿಸಲಿದ್ದಾರೆ ಎನ್ನಲಾಗಿದೆ. ಹಾಗಾಗಿ ಸತ್ಯಪ್ರಕಾಶ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.
ಶೂಟಿಂಗ್ ಸ್ಥಳಕ್ಕೆ ಹೋಗಿ ಸುದೀಪ್ ಅವರನ್ನು ಭೇಟಿಯಾದ ಪುನೀತ್ ರಾಜ್ಕುಮಾರ್
ಸದ್ಯ 'ಯುವರತ್ನ' ಚಿತ್ರದ ಕೆಲಸಗಳನ್ನು ಮುಗಿಸುತ್ತಿರುವ ಪುನೀತ್, ಇದಾದ ಮೇಲೆ ಚೇತನ್ಕುಮಾರ್ ಅವರ 'ಜೇಮ್ಸ್' ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದು ಮುಗಿದ ಮೇಲೆ ಸತ್ಯಪ್ರಕಾಶ್ ಸಿನಿಮಾ ಆರಂಭವಾಗಲಿದೆ. ಅಷ್ಟರೊಳಗೆ ಸತ್ಯಪ್ರಕಾಶ್ ಕೂಡ ಚಿತ್ರಕಥೆಯನ್ನು ಕಂಪ್ಲೀಟ್ ಮಾಡಲಿದ್ದಾರೆ. 'ಪುನೀತ್ ಅವರ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಅವರು ಮತ್ತು ಅವರ ಅಭಿಮಾನಿಗಳಿಗೆ ಇಷ್ಟವಾಗುವಂಥ ಕಥೆಯನ್ನು ನಾನು ಬರೆದಿದ್ದೇನೆ. ಫೈನಲ್ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲೇ ಎಲ್ಲ ಮಾಹಿತಿಯನ್ನು ನೀಡಲಿದ್ದೇನೆ' ಎನ್ನುತ್ತಾರೆ ಸತ್ಯಪ್ರಕಾಶ್.
ದೇಶಕ್ಕಾಗಿ ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡೋಣ: ನಟ ಪುನೀತ್