ಆ್ಯಪ್ನಗರ

'ಪುನೀತ್ ರಾಜ್‌ಕುಮಾರ್ ನನಗೆ ಕನ್ನಡ ಕಲಿಸಿದ ಗುರು'- 'ಕೆಜಿಎಫ್‌' ನಟ ಜಾನ್ ಕೊಕ್ಕೆನ್

ಜಾನ್ ಕೊಕ್ಕೆನ್‌ ಮೂಲತಃ ಮಲಯಾಳಂ ನಟರಾದರೂ, ಕನ್ನಡದಲ್ಲಿಯೂ ಅವರಿಗೆ ಭಾರಿ ಬೇಡಿಕೆ ಇದೆ. ಈಗಾಗಲೇ ಕನ್ನಡದ ಸ್ಟಾರ್‌ ನಟರ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಸದ್ಯ ಅವರು ಕನ್ನಡ ಜರ್ನಿ ಬಗ್ಗೆ ಮಾತನಾಡಿದ್ದಾರೆ.

Vijaya Karnataka Web 11 Sep 2020, 3:18 pm
ಬಹುಭಾಷೆಯಲ್ಲಿ ಖಳನಾಗಿ ಜಾನ್‌ ಕೊಕ್ಕೆನ್‌ ಫೇಮಸ್‌ ಆಗಿದ್ದಾರೆ. ಕನ್ನಡದಲ್ಲಿ ಕೊಂಚ ಹಚ್ಚೇ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಬಹುನಿರೀಕ್ಷಿತ 'ಕೆಜಿಎಫ್‌'ನಲ್ಲೂ ನಟಿಸುತ್ತಿದ್ದಾರೆ. ಮೂಲತಃ ಮಾಡೆಲ್‌ ಆಗಿದ್ದ ಅವರು, ಪುನೀತ್ ರಾಜ್‌ಕುಮಾರ್ ಅಭಿನಯದ 'ಪೃಥ್ವಿ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿದರು. ಮೊದಲ ಯತ್ನದಲ್ಲೇ ಅವರು ಖಡಕ್ ಆಗಿ ಕಾಣಿಸಿಕೊಂಡು ಎಲ್ಲರ ಗಮನಸೆಳೆದರು. ಅಂದಹಾಗೆ, ಆ ಸಿನಿಮಾದಲ್ಲಿ ನಟಿಸಿದ್ದರಿಂದಲೇ ಅವರಿಗೆ ಪುನೀತ್ ಅವರ ಒಡೆನಾಟ ದೊರೆಕಿತು. ಇದೀಗ ತಾವು ಕನ್ನಡ ಕಲಿಯಲು ಅಪ್ಪು ಕಾರಣ ಎಂಬುದುನ್ನು ಜಾನ್‌ ಹೇಳಿಕೊಂಡಿದ್ದಾರೆ.
Vijaya Karnataka Web ಜಾನ್ ಕೊಕ್ಕೆನ್


'ಟೈಮ್ಸ್ ಆಫ್‌ ಇಂಡಿಯಾ'ಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಈ ಮಾಹಿತಿ ಹಂಚಿಕೊಂಡಿರುವ ಅವರು, '2005ರಲ್ಲಿ ನಾನು ಮಾಡೆಲ್ ಆಗಿದ್ದೆ. ಆನಂತರ ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಒಮ್ಮೆ ನನ್ನ ನಟನೆ ನೋಡಿ ಜೇಕಬ್ ವರ್ಗೀಸ್ ನನಗೆ 'ಪೃಥ್ವಿ' ಸಿನಿಮಾದಲ್ಲಿ ನಟಿಸುವಂತೆ ಆಫರ್ ನೀಡಿದರು. ಆ ಪಾತ್ರದಿಂದ ನನಗೆ ಹೆಸರು ಬಂತು. ಕನ್ನಡದಲ್ಲಿನ ಇದುವರೆಗಿನ ನನ್ನ ಬೆಸ್ಟ್ ರೋಲ್‌ ಅದೆ' ಎಂದು ಹೇಳುತ್ತಾರೆ.

ಪುನೀತ್‌ ರಾಜ್‌ಕುಮಾರ್ ಹೇಗೆ ಕನ್ನಡ ಕಲಿಸಿದರು ಎಂಬ ಬಗ್ಗೆಯೂ ಜಾನ್ ಹೇಳಿಕೊಂಡಿದ್ದಾರೆ. 'ಪುನೀತ್ ರಾಜ್‌ಕುಮಾರ್ ಅವರು ನನ್ನ ಕನ್ನಡ ಗುರು. 'ಪೃಥ್ವಿ' ಸೆಟ್‌ನಲ್ಲಿ ಅವರನ್ನು ನಾನು ಮೊದಲು ಭೇಟಿಯಾದಾಗ, ಅವರು ತಮ್ಮ ತಂದೆಯ ಬಗ್ಗೆ ಕೇಳಿದ್ದರು. ಮಹಾನ್ ನಟ ಡಾ. ರಾಜ್‌ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದು ಬಿಟ್ಟರೆ ನನಗೆ ಹೆಚ್ಚು ಗೊತ್ತಿರಲಿಲ್ಲ. ಅದನ್ನು ಪುನೀತ್ ಅವರಿಗೆ ಹೇಳಿದಾಗ, ಅವರು ನನಗೆ ಡಾ. ರಾಜ್‌ಕುಮಾರ್ ಅವರು ನಟಿಸಿದ್ದ 20 ಸಿನಿಮಾಗಳ ಸಿಡಿಯನ್ನು ನೀಡಿದ್ದರು. ಅದು ನನಗೆ ಕನ್ನಡ ಸಿನಿಮಾ ಮತ್ತು ಕನ್ನಡ ಭಾಷೆಯ ಪರಿಚಯದ ಮೊದಲ ಹಂತವಾಗಿತ್ತು. ಈಗ ನಾನು ಒಬ್ಬರೊಂದಿಗೆ ಸಂವಹನ ನಡೆಸುವಷ್ಟು ಕನ್ನಡ ಕಲಿತಿದ್ದೇನೆ' ಎಂದು ಹೇಳುತ್ತಾರೆ ಜಾನ್‌.

ಅಂದು ಉಪೇಂದ್ರ 'H2O'; ಇಂದು ಪುನೀತ್‌ ರಾಜ್‌ಕುಮಾರ್‌ 'O2'! ಸಿದ್ಧವಾಗುತ್ತಿದೆ ಮೆಡಿಕಲ್‌ ಥ್ರಿಲ್ಲರ್‌ ಸಿನಿಮಾ!

ಕನ್ನಡದ 'ಪೃಥ್ವಿ', 'ಮೈಲಾರಿ', 'ಶೌರ್ಯ', 'ಅಣ್ಣಾ ಬಾಂಡ್', 'ಶಿವ', 'ಖೋ ಖೋ', 'ಲಕ್ಷ್ಮಣ' ಹಾಗೂ 'ಕೆಜಿಎಫ್‌ ಚಾಪ್ಟರ್ 1'ರಲ್ಲಿ ಜಾನ್ ನಟಿಸಿದ್ದಾರೆ. ಬಹುತೇಕ ಎಲ್ಲ ಖಳ ಪಾತ್ರಗಳಲ್ಲೇ ಅವರು ಕಾಣಿಸಿಕೊಂಡಿದ್ದಾರೆ. 'ಕೆಜಿಎಫ್‌ ಚಾಪ್ಟರ್ 2' ಚಿತ್ರದಲ್ಲೂ ಅವರ ಪಾತ್ರ ಮುಂದುವರಿಯಲಿದೆ. ನಿರ್ದೇಶಕ ಆರ್‌. ಚಂದ್ರು ಜೊತೆ ಈಗಾಗಲೇ ಮೂರು ಸಿನಿಮಾ ಮಾಡಿರುವ ಅವರು, ಈಗ ಮುಂದಿನ 'ಕಬ್ಜ'ದಲ್ಲೂ ನಟಿಸಲಿದ್ದಾರೆ. ಉಪೇಂದ್ರ ಆ ಸಿನಿಮಾದ ಹೀರೋ. ಪುನೀತ್ ನಟನೆಯ 'ಯುವರತ್ನ'ದಲ್ಲೂ ಅವರಿದ್ದಾರೆ. ಇನ್ನು, ತಮಿಳಿನಲ್ಲಿ ಆರ್ಯ ನಟಿಸಲಿರುವ 'ಸಲ್ಪೆಟ್ಟ' ಚಿತ್ರದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಅದರ ಶೇ. 60 ಭಾಗ ಚಿತ್ರೀಕರಣ ಮುಕ್ತಾಯಗೊಂಡಿದೆ.

'ಬುಟ್ಟ ಬೊಮ್ಮ...' ಹಾಡಿಗೆ ಪುಟ್ಟ ಕಂದನ ಜೊತೆ ಡ್ಯಾನ್ಸ್‌ ಮಾಡಿದ ಪುನೀತ್‌! ವಿಡಿಯೋ ವೈರಲ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌