'ನೇತ್ರದಾನದ ಮೂಲಕ ಪುನೀತ್ ರಾಜ್ಕುಮಾರ್ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ..'- ಸಿಎಂ ಬೊಮ್ಮಾಯಿ
'ವ್ಯಕ್ತಿಯೊಬ್ಬ ಸಾಧನೆ ಮಾಡಲು ಬಹಳ ವರ್ಷ ಕಾಯಬೇಕಿಲ್ಲ. ಆತ್ಮಶುದ್ದಿ ಇದ್ದಲ್ಲಿ ಸಣ್ಣ ವಯಸ್ಸಿನಲ್ಲಿಯೇ, ತಾನು ಇರುವಲ್ಲಿಯೇ ದೊಡ್ಡ ಸಾಧನೆ ಮಾಡಲು ಸಾಧ್ಯ ಎಂದು ಪುನೀತ್ ರಾಜ್ಕುಮಾರ್ ನಿರೂಪಿಸಿದ್ದಾರೆ' ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಹೈಲೈಟ್ಸ್:
- 'ನಮ್ಮ ದೃಷ್ಟಿ ನಮ್ಮ ಕರ್ನಾಟಕ' ಅರಿವು ಅಭಿಯಾನಕ್ಕೆ ಚಾಲನೆ
- ಪುನೀತ್ ಹೆಸರಿನಲ್ಲಿ ಅಂಗಾಂಗ ದಾನದ ಹೊಸ ಘಟಕ- ಸಿಎಂ
- ಕಾರ್ಯಕ್ರಮದಲ್ಲಿ ಭಾಗಿಯಾದ ಅಶ್ವಿನಿ ಪುನೀತ್ ರಾಜ್ಕುಮಾರ್
'ನಟ ಪುನೀತ್ ರಾಜ್ ಕುಮಾರ್ ಅವರು ನೇತ್ರದಾನ ಮಾಡುವ ಮೂಲಕ ಸಾವಿರಾರು ಜನರಿಗೆ ಪ್ರೇರಣೆಯಾಗಿದ್ದಾರೆ. ಅವರನ್ನು 'ನಮ್ಮ ದೃಷಿ ನಮ್ಮ ಕರ್ನಾಟಕ' ಅರಿವು ಅಭಿಯಾನದ ರಾಯಭಾರಿಯಾಗಿಸಿರುವುದು ಅತ್ಯಂತ ಸೂಕ್ತವಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಡಾ. ರಾಜ್ಕುಮಾರ್ ಟ್ರಸ್ಟ್ ಮತ್ತು ಎಸ್ಸಿಲಾರ್ ವಿಷನ್ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ 'ನಮ್ಮ ದೃಷ್ಟಿ ನಮ್ಮ ಕರ್ನಾಟಕ' ಅರಿವು ಅಭಿಯಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದರು. ಸಾಧನೆ ಮಾಡಲು ಬಹಳ ವರ್ಷ ಕಾಯಬೇಕಿಲ್ಲ- ಸಿಎಂ
'ನಾನು ಪ್ರತಿ ಬಾರಿ ಪುನೀತ್ ರಾಜ್ಕುಮಾರ್ ಅವರ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗಲೂ ಹೊಸ ಸ್ಪೂರ್ತಿ ದೊರೆಯುತ್ತದೆ. ವ್ಯಕ್ತಿಯೊಬ್ಬ ಸಾಧನೆ ಮಾಡಲು ಬಹಳ ವರ್ಷ ಕಾಯಬೇಕಿಲ್ಲ. ಆತ್ಮಶುದ್ದಿ ಇದ್ದಲ್ಲಿ ಸಣ್ಣ ವಯಸ್ಸಿನಲ್ಲಿಯೇ, ತಾನು ಇರುವಲ್ಲಿಯೇ ದೊಡ್ಡ ಸಾಧನೆ ಮಾಡಲು ಸಾಧ್ಯ ಎಂದು ಪುನೀತ್ ರಾಜ್ಕುಮಾರ್ ನಿರೂಪಿಸಿದ್ದಾರೆ. ಹೊರ ಜಗತ್ತನ್ನು ಕಾಣಲು ದೃಷ್ಟಿ ಬೇಕು. ಅಂತೆಯೇ ಒಳಗಿನ ಜಗತ್ತನ್ನು ನೋಡಲು ಆಂತರಿಕ ದೃಷ್ಟಿ ಬೇಕು. ಜೀವನದಲ್ಲಿ ಆಂತರಿಕ ಹಾಗೂ ಬಾಹ್ಯ ದೃಷ್ಠಿ ಎರಡನನೂ ಪುನೀತ್ ಪಡೆದುಕೊಂಡಿದ್ದರು. ಮರಣದ ನಂತರವೂ ನಮ್ಮ ನಡುವೆಯೇ ಬದುಕುತ್ತಿರುವ ಪುನೀತ್ ರಾಜ್ಕುಮಾರ್ ಅವರು, ಜನರ ಮೇಲೆ ಬೀರಿರುವ ಪ್ರಭಾವ ವಿಸ್ಮಯಕಾರಿಯಾಗಿದೆ' ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಡಾ. ರಾಜ್ ಯೋಚಿಸಿ ಮಾತಾಡುತ್ತಿದ್ದರು
'ಡಾ. ರಾಜ್ಕುಮಾರ್ ಅವರು ಮೇರು ನಟ. ಹಾಗೆಯೇ ಅತ್ಯುತ್ತಮ ವ್ಯಕ್ತಿಯೂ ಆಗಿದ್ದರು. ಅವರಲ್ಲಿದ್ದ ಉದಾತ್ತತೆ, ದಯೆ, ಅಳತೆ ಮಾಡದಷ್ಟು ದೊಡ್ಡದಾಗಿತ್ತು. ಅವರಷ್ಟು ಸೂಕ್ಷ್ಮಮತಿಗಳನ್ನು ಕಾಣುವುದು ಕಷ್ಟ. ಅವರು ಪ್ರತಿ ಮಾತು ಆಡುವಾಗಲೂ ಇನ್ನೊಬ್ಬರಿಗೆ ನೋವಾಗಬಾರದೆಂದು ಯೋಚಿಸಿ ಮಾಡಿ ಮಾತನಾಡುತ್ತಿದ್ದರು. ಡಾ. ರಾಜ್ಕುಮಾರ್ ಮುಗ್ಧತೆಗೆ ಮತ್ತೊಂದು ಹೆಸರು. ಡಾ. ರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಅವರು ದೇವರ ಕೊಡುಗೆ, ಅಂತಹ ವ್ಯಕ್ತಿ ಮತ್ತೊಮ್ಮೆ ಸಿಗುವುದಿಲ್ಲ' ಎಂದು ಸಿಎಂ ಬೊಮ್ಮಾಯಿ ಹೇಳಿದರು.
60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ನೇತ್ರ ತಪಾಸಣೆ
ನಾವು ದಯೆ, ಕರುಣೆಯನ್ನು ಸಮಾಜಕ್ಕೂ ನೀಡಬೇಕು. ಕಣ್ಣಿನ ದಾನ ಮಾಡಿ ಪುನೀತ್ ಸಾವಿರಪಟ್ಟು ಪ್ರೇರಣೆ ನೀಡಿದ್ದಾರೆ. ಸರ್ಕಾರ ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ಅಂಗಾಂಗ ದಾನಕ್ಕೆ ಹೊಸ ಘಟಕವನ್ನು ಯೂನಿಟ್ ಸ್ಥಾಪಿಸಲು ಈ ಬಾರಿಯ ಬಜೆಟ್ನಲ್ಲಿ ಅನುದಾನ ಮೀಸಲಿರಿಸಿದೆ. ರಾಜ್ಯದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ನೇತ್ರ ತಪಾಸಣೆ, ಕನ್ನಡಕ ನೀಡಲು ಅನುದಾನವನ್ನು ಮೀಸಲಿರಿಸಿದೆ. ನಮ್ಮ ದೃಷ್ಟಿ ನಮ್ಮ ಕರ್ನಾಟಕ ಹಾಗೂ ಸರ್ವರಿಗೂ ದೃಷ್ಟಿ ನೀಡುವ ಸರ್ಕಾರದ ಕಾರ್ಯಕ್ರಮಗಳಲ್ಲಿ ಸಾಮ್ಯತೆ ಇದೆ. ಎಸ್ಸಿಲಾರ್ ವಿಷನ್ ಪ್ರತಿಷ್ಠಾನ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಬೇಕು' ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ ಬಿ.ಸಿ. ನಾಗೇಶ್, ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ನಟ ರಾಘವೇಂದ್ರ ರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕಿ ಡಾ. ಅರುಂಧತಿ ಮುಂತಾದವರು ಉಪಸ್ಥಿತರಿದ್ದರು.
'ನಾನು ಪ್ರತಿ ಬಾರಿ ಪುನೀತ್ ರಾಜ್ಕುಮಾರ್ ಅವರ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗಲೂ ಹೊಸ ಸ್ಪೂರ್ತಿ ದೊರೆಯುತ್ತದೆ. ವ್ಯಕ್ತಿಯೊಬ್ಬ ಸಾಧನೆ ಮಾಡಲು ಬಹಳ ವರ್ಷ ಕಾಯಬೇಕಿಲ್ಲ. ಆತ್ಮಶುದ್ದಿ ಇದ್ದಲ್ಲಿ ಸಣ್ಣ ವಯಸ್ಸಿನಲ್ಲಿಯೇ, ತಾನು ಇರುವಲ್ಲಿಯೇ ದೊಡ್ಡ ಸಾಧನೆ ಮಾಡಲು ಸಾಧ್ಯ ಎಂದು ಪುನೀತ್ ರಾಜ್ಕುಮಾರ್ ನಿರೂಪಿಸಿದ್ದಾರೆ. ಹೊರ ಜಗತ್ತನ್ನು ಕಾಣಲು ದೃಷ್ಟಿ ಬೇಕು. ಅಂತೆಯೇ ಒಳಗಿನ ಜಗತ್ತನ್ನು ನೋಡಲು ಆಂತರಿಕ ದೃಷ್ಟಿ ಬೇಕು. ಜೀವನದಲ್ಲಿ ಆಂತರಿಕ ಹಾಗೂ ಬಾಹ್ಯ ದೃಷ್ಠಿ ಎರಡನನೂ ಪುನೀತ್ ಪಡೆದುಕೊಂಡಿದ್ದರು. ಮರಣದ ನಂತರವೂ ನಮ್ಮ ನಡುವೆಯೇ ಬದುಕುತ್ತಿರುವ ಪುನೀತ್ ರಾಜ್ಕುಮಾರ್ ಅವರು, ಜನರ ಮೇಲೆ ಬೀರಿರುವ ಪ್ರಭಾವ ವಿಸ್ಮಯಕಾರಿಯಾಗಿದೆ' ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಡಾ. ರಾಜ್ ಯೋಚಿಸಿ ಮಾತಾಡುತ್ತಿದ್ದರು
'ಡಾ. ರಾಜ್ಕುಮಾರ್ ಅವರು ಮೇರು ನಟ. ಹಾಗೆಯೇ ಅತ್ಯುತ್ತಮ ವ್ಯಕ್ತಿಯೂ ಆಗಿದ್ದರು. ಅವರಲ್ಲಿದ್ದ ಉದಾತ್ತತೆ, ದಯೆ, ಅಳತೆ ಮಾಡದಷ್ಟು ದೊಡ್ಡದಾಗಿತ್ತು. ಅವರಷ್ಟು ಸೂಕ್ಷ್ಮಮತಿಗಳನ್ನು ಕಾಣುವುದು ಕಷ್ಟ. ಅವರು ಪ್ರತಿ ಮಾತು ಆಡುವಾಗಲೂ ಇನ್ನೊಬ್ಬರಿಗೆ ನೋವಾಗಬಾರದೆಂದು ಯೋಚಿಸಿ ಮಾಡಿ ಮಾತನಾಡುತ್ತಿದ್ದರು. ಡಾ. ರಾಜ್ಕುಮಾರ್ ಮುಗ್ಧತೆಗೆ ಮತ್ತೊಂದು ಹೆಸರು. ಡಾ. ರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಅವರು ದೇವರ ಕೊಡುಗೆ, ಅಂತಹ ವ್ಯಕ್ತಿ ಮತ್ತೊಮ್ಮೆ ಸಿಗುವುದಿಲ್ಲ' ಎಂದು ಸಿಎಂ ಬೊಮ್ಮಾಯಿ ಹೇಳಿದರು.
60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ನೇತ್ರ ತಪಾಸಣೆ
ನಾವು ದಯೆ, ಕರುಣೆಯನ್ನು ಸಮಾಜಕ್ಕೂ ನೀಡಬೇಕು. ಕಣ್ಣಿನ ದಾನ ಮಾಡಿ ಪುನೀತ್ ಸಾವಿರಪಟ್ಟು ಪ್ರೇರಣೆ ನೀಡಿದ್ದಾರೆ. ಸರ್ಕಾರ ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ಅಂಗಾಂಗ ದಾನಕ್ಕೆ ಹೊಸ ಘಟಕವನ್ನು ಯೂನಿಟ್ ಸ್ಥಾಪಿಸಲು ಈ ಬಾರಿಯ ಬಜೆಟ್ನಲ್ಲಿ ಅನುದಾನ ಮೀಸಲಿರಿಸಿದೆ. ರಾಜ್ಯದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ನೇತ್ರ ತಪಾಸಣೆ, ಕನ್ನಡಕ ನೀಡಲು ಅನುದಾನವನ್ನು ಮೀಸಲಿರಿಸಿದೆ. ನಮ್ಮ ದೃಷ್ಟಿ ನಮ್ಮ ಕರ್ನಾಟಕ ಹಾಗೂ ಸರ್ವರಿಗೂ ದೃಷ್ಟಿ ನೀಡುವ ಸರ್ಕಾರದ ಕಾರ್ಯಕ್ರಮಗಳಲ್ಲಿ ಸಾಮ್ಯತೆ ಇದೆ. ಎಸ್ಸಿಲಾರ್ ವಿಷನ್ ಪ್ರತಿಷ್ಠಾನ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಬೇಕು' ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ ಬಿ.ಸಿ. ನಾಗೇಶ್, ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ನಟ ರಾಘವೇಂದ್ರ ರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕಿ ಡಾ. ಅರುಂಧತಿ ಮುಂತಾದವರು ಉಪಸ್ಥಿತರಿದ್ದರು.