ಆ್ಯಪ್ನಗರ

'ಯುವರತ್ನ' ಟೀಸರ್‌ ನೋಡಿ ಪುನೀತ್ ರಾಜ್‌ಕುಮಾರ್ ಭಯ ಪಟ್ಟಿದ್ಯಾಕೆ?

ಈ ಬಾರಿಯ ದಸರಾ ಪವರ್‌ ಸ್ಟಾರ್ ಅಭಿಮಾನಿಗಳ ಪಾಲಿಗೆ ಮರೆಯಲಾಗದ್ದು. ಯಾಕಂದ್ರೆ ಕನ್ನಡದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ಯುವರತ್ನ' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ನೆನ್ನೆ ಸಂಜೆ 5.30ಕ್ಕೆ ಬಿಡುಗಡೆಯಾದ 'ಯುವರತ್ನ'ದ ಟೀಸರ್, ಲಕ್ಷಾಂತರ ಲೈಕ್‌ಗಳನ್ನು ಪಡೆದುಕೊಳ್ಳುತ್ತಿದೆ. ಆದ್ರೆ ಇದೇ ಟೀಸರ್ ನೋಡಿ ಪುನೀತ್ ಭಯ ಪಟ್ಟಿದ್ರಂತೆ. ಇದಕ್ಕೆ ಕಾರಣವೇನು ಅನ್ನೋ ಉತ್ತರ ಇಲ್ಲಿದೆ.

Vijaya Karnataka Web 8 Oct 2019, 12:11 pm
'ನಟ ಸಾರ್ವಭೌಮ' ಸಿನಿಮಾದ ನಂತರ ಅಪ್ಪು ಯಾವಾಗ ತೆರೆ ಮೇಲೆ ಮೋಡಿ ಮಾಡ್ತಾರೋ ಅನ್ನೋ ಪ್ರಶ್ನೆ ಎಲ್ಲಾ ಅಭಿಮಾನಿಗಳನ್ನು ಕಾಡ್ತಿತ್ತು. ಅದ್ರಲ್ಲೂ 'ಯುವರತ್ನ'ನನ್ನು ಯಾವಾಗ ಕಣ್ತುಂಬಿಕೊಳ್ತೀವಿ ಅಂತಾ ಎಲ್ಲರೂ ಕಾಯ್ತಿದ್ರು. ಈ ಬಗ್ಗೆ ಒಂದಷ್ಟು ಅಭಿಮಾನಿಗಳಂತೂ ತಾವೇ ಖುದ್ದಾಗಿ ಚಿತ್ರದ ರಿಲೀಸ್ ದಿನಾಂಕವನ್ನೂ ಘೋಷಿಸಿಬಿಟ್ಟಿದ್ರು. ಆದ್ರೆ ಅಂತಿಮವಾಗಿ ಬಿಡುಗಡೆಯ ದಿನಾಂಕ ಇನ್ನೂ ಫಿಕ್ಸ್ ಆಗಿಲ್ಲ. ನಾವೇ ಚರ್ಚಿಸಿ ಈ ಬಗ್ಗೆ ತಿಳಿಸುತ್ತೇವೆ ಅಂತಾ ಚಿತ್ರತಂಡ ವಿವರಿಸಿತ್ತು.
Vijaya Karnataka Web punith and santhosh

'ಯುವರತ್ನ'ನನ್ನು ಮೆಚ್ಚಿದ ಅಧೀರ

ಇಷ್ಟೆಲ್ಲಾ ಕ್ರೇಝ್ ಸೃಷ್ಟಿಸಿರುವ 'ಯುವರತ್ನ' ಚಿತ್ರದ ಟೀಸರ್ ಬಿಡುಗಡೆಯಾಗಿ ಕೆಲವು ಗಂಟೆಗಳು ಕಳೆದಿವೆಯಷ್ಟೇ. ಈಗಾಗ್ಲೇ ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದೆ. ಟೀಸರ್‌ನಲ್ಲಿ ಪುನೀತ್ ಹೇಳಿರೋ ಪವರ್‌ಫುಲ್ ಡೈಲಾಗ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜೊತೆಗೆ ವಯಸ್ಸು 44 ಆದ್ರೂ, ಪುನೀತ್ ಯಂಗ್ ಲುಕ್‌ನಲ್ಲಿ ಮಿಂಚುತ್ತಿರೋದು ಅಭಿಮಾನಿಗಳಿಗೆ ಹಬ್ಬದೂಟವನ್ನು ಬಡಿಸಿದೆ. ಆದ್ರೆ ಇದೇ ಟೀಸರನ್ನು ನೋಡಿದ ಪುನೀತ್ ರಾಜ್‌ಕುಮಾರ್ ಅವ್ರಿಗೆ ಭಯವಾಗಿತ್ತಂತೆ.

ಹೌದು. ಈ ಬಗ್ಗೆ ಮಾತನಾಡಿರುವ ಪುನೀತ್, "ನಾವೆಲ್ಲಾ ನಮ್ಮ ಪಾಡಿಗೆ ಕೆಲಸ ಮಾಡ್ತಿರ್ತೀವಿ. ಆದ್ರೆ ಟೀಸರ್ ರಿಲೀಸ್ ಆದಾಗ ಹಾಗೂ ಸಿನಿಮಾ ರಿಲೀಸ್ ಡೇಟ್ ಹತ್ತಿರ ಬಂದಾಗ ಭಯ ಶುರುವಾಗುತ್ತೆ. ಯಾಕಂದ್ರೆ ಲಕ್ಷಾಂತರ ಅಭಿಮಾನಿಗಳು ಟೀಸರ್ ಅಥವಾ ಸಿನಿಮಾವನ್ನು ಪ್ರೀತಿಯಿಂದ ನೋಡ್ತಾರೆ. ಇದನ್ನೆಲ್ಲಾ ನೋಡಿದಾಗ ನಾನು ಮಾಡೋ ಕೆಲಸದಲ್ಲಿ ಏನಾದ್ರೂ ಕಡಿಮೆಯಾಗಿದೆಯಾ ಅಂತಾ ಅನ್ನಿಸುತ್ತೆ. ನಾನು ಇನ್ನೂ ಏನಾದ್ರೂ ಮಾಡಬಹುದಿತ್ತು ಅನ್ನೋ ಭಯ ಕಾಡುತ್ತೆ" ಅಂತಾ ತಿಳಿಸಿದ್ದಾರೆ.
'ಯುವರತ್ನ' ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ನಟಿ ಸೋನು ಗೌಡ

ಹೀಗೆ ಸಿನಿಮಾ ಬಗ್ಗೆ ಅತೀವ ಪ್ರೀತಿ ಮತ್ತು ಅಭಿಮಾನವನ್ನು ಇಟ್ಟುಕೊಂಡಿರುವ ಪುನೀತ್, ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಬಾರದು ಅಂತಾ ತಯಾರಾಗಿದ್ದಾರೆ. 'ಯುವರತ್ನ' ನೋಡಿದಾಗ ಪ್ರೇಕ್ಷಕರು ಖಂಡಿತ ಖುಷಿ ಪಡ್ತಾರೆ ಅನ್ನೋ ನಂಬಿಕೆಯಲ್ಲಿ ಪವರ್‌ಸ್ಟಾರ್ ಕಾಯುತ್ತಿದ್ದಾರೆ.

ಅಂದ್ಹಾಗೇ ಸಂತೋಷ್ ಆನಂದ್‌ ರಾಮ್ ನಿರ್ದೇಶನದ ಈ ಚಿತ್ರಕ್ಕೆ, ವಿಜಯ್ ಕಿರಗಂದೂರು ನಿರ್ಮಾಣ, ಎಸ್ ತಮನ್ ಸಂಗೀತ, ವೆಂಕಟೇಶ್ ಅಂಗುರಾಜ್ ಸಿನಿಮಾಟೋಗ್ರಫಿಯಿದೆ. 'ಯುವರತ್ನ'ದಲ್ಲಿ ಪುನೀತ್ ಜೊತೆಗೆ ಸಾಯೇಷಾ ಸೈಗಲ್, ಸೋನು ಗೌಡ, ಡಾಲಿ ಧನಂಜಯ, ವಸಿಷ್ಠ ಸಿಂಹ, ಸಾಯಿ ಕುಮಾರ್, ಪ್ರಕಾಶ್ ರಾಜ್, ಬೊಮನ್ ಇರಾನಿ, ರಾಧಿಕಾ ಶರತ್‌ಕುಮಾರ್, ಅಚ್ಯುತ್ ಕುಮಾರ್, ದಿಗಂತ್, ಸುಧಾರಾಣಿ, ಅವಿನಾಶ್, ರಂಗಾಯಣ ರಘು, ಪ್ರಕಾಶ್ ಬೆಳವಾಡಿ ಸೇರಿದಂತೆ ಬಹುತಾರಾಗಣವಿದೆ.

ಇನ್ನು ಈಗಷ್ಟೇ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾ ರಿಲೀಸ್ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲಾ. ಹೀಗಾಗಿ ಪುನೀತ್ ಅಭಿಮಾನಿಗಳು 'ಯುವರತ್ನ'ನನ್ನು ಬೆಳ್ಳಿಪರದೆ ಮೇಲೆ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.
ಯುವರತ್ನಕ್ಕೆ ಬಂದ ಡೈಲಾಗ್ ಕಿಂಗ್ ಸಾಯಿಕುಮಾರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌