'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಎಲ್ಲರ ಗಮನಸೆಳೆದ ನಟ ಚಂದನ್ ಆಚಾರ್, ಆನಂತರ 'ಬಿಗ್ ಬಾಸ್'ಗೆ ಹೋಗಿ ಇನ್ನಷ್ಟು ಜನಪ್ರಿಯತೆ ಪಡೆದುಕೊಂಡರು. ಇದೀಗ ಅವರು ಹೀರೋ ಆಗಿರುವ ಹೊಸ ಸಿನಿಮಾವೊಂದು ತೆರೆಗೆ ಸಿದ್ಧವಾಗಿದೆ. ಚಿತ್ರದ ಶೀರ್ಷಿಕೆ 'ಮಂಗಳವಾರ ರಜಾದಿನ'. ವಿಭಿನ್ನ ಟೈಟಲ್ ಇರುವ ಈ ಸಿನಿಮಾ ಫೆ.5ರಂದು ತೆರೆಗೆ ಬರಲಿದೆ. ಈ ಮಧ್ಯೆ ಚಿತ್ರತಂಡದಿಂದ ಒಂದು ಗುಡ್ ನ್ಯೂಸ್ ಹೊರಬಿದ್ದಿದೆ. ಅದೇನೆಂದರೆ, ಈ ಚಿತ್ರದ ಒಂದು ಎಮೋಷನಲ್ ಸಾಂಗ್ಗೆ 'ಪವರ್ ಸ್ಟಾರ್' ಪುನೀತ್ ರಾಜ್ಕುಮಾರ್ ಧ್ವನಿ ನೀಡಿದ್ದಾರೆ. ಅಪ್ಪನ ಕುರಿತ ಸಾಂಗ್ಗೆ ಅಪ್ಪು ಗಾಯನ
ಈ ಚಿತ್ರದಲ್ಲಿ ಅಪ್ಪ-ಮಗನ ಸೆಂಟಿಮೆಂಟ್ಗೆ ಜಾಸ್ತಿ ಸ್ಕೋಪ್ ಇದೆ. ಅಲ್ಲದೆ, ಅಪ್ಪನ ಕುರಿತು ಒಂದು ಹಾಡೂ ಕೂಡ ಇದೆ. 'ಮುಕ್ಕೋಟಿ ದೇವರು ಒಟ್ಟಾಗಿ ಬಂದರು.. ಸಮವಲ್ಲ ಅಪ್ಪನ ಎದುರು.... ನಾ ಎಷ್ಟೇ ಬೆಳೆದರೂ, ನಾ ಹೇಗೆ ಮೆರೆದರೂ ಬೆನ್ನೆಲುಬು ಅಪ್ಪನ ಬೆವರು..' ಎಂದು ಶುರುವಾಗುವ ಈ ಹಾಡನ್ನು ಪುನೀತ್ ಹಾಡಿದ್ದಾರೆ. ಈ ಹಿಂದೆ 'ಸಂಕಷ್ಟಕರ ಗಣಪತಿ', 'ಖಾಕಿ' ಮುಂತಾದ ಸಿನಿಮಾಗಳಿಗೆ ಸಂಗೀತ ನೀಡಿರುವ ಋತ್ವಿಕ್ ಮುರಳಿಧರ್ ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದರೆ, ಹಾಡಿಗೆ ಗೌಸ್ ಫಿರ್ ಸಾಹಿತ್ಯ ಬರೆದಿದ್ದಾರೆ.
ಜ.26ರಂದು ಹಾಡು ರಿಲೀಸ್
ಅಪ್ಪನ ಕುರಿತ ಈ ಎಮೋಷನಲ್ ಹಾಡಿನ ಲಿರಿಕಲ್ ವಿಡಿಯೋ ಗಣರಾಜ್ಯೋತ್ಸವ ದಿನಾಚರಣೆಯಂದು (ಜ.26) ರಿಲೀಸ್ ಆಗಲಿದೆ. ಇನ್ನು, ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದ್ದು, ಇದೇ ಫೆ.5ರಂದು ಚಿತ್ರ ತೆರೆಗೆ ಬರಲಿದೆ. ಕ್ಷೌರಿಕನೊಬ್ಬನಿಗೆ ನಟ ಸುದೀಪ್ ಅವರಿಗೆ ಕೇಶವಿನ್ಯಾಸ ಮಾಡಬೇಕೆಂದು ಆಸೆ ಇರುತ್ತದೆ. ಈ ಆಸೆ ಏನಾಗುತ್ತದೆ? ಎನ್ನುವುದೇ ಚಿತ್ರದ ಕಥಾ ಸಾರಾಂಶವಾಗಿದೆ. 'ಪಾಪ್ಕಾರ್ನ್ ಮಂಕಿ ಟೈಗರ್', 'ಬ್ಯಾಡ್ ಮ್ಯಾನರ್ಸ್' ಸಿನಿಮಾಗಳ ನಿರ್ಮಾಪಕ ಸ್ಟುಡಿಯೋ 18 ನ ಸುಧೀರ್ ಕೆ.ಎಂ. ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರುತ್ತಿದ್ದಾರೆ.
'ಫ್ಯಾಮಿಲಿ ಪ್ಯಾಕ್' ನೋಡಲು ಬಂದ 'ಪವರ್ ಸ್ಟಾರ್' ಪುನೀತ್ ರಾಜಕುಮಾರ್ ದಂಪತಿ!
ತ್ರಿವರ್ಗ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಯವಿನ್ ನಿರ್ದೇಶಿಸಿದ್ದಾರೆ. ಚಂದನ್ ಆಚಾರ್ಗೆ ಈ ಚಿತ್ರದಲ್ಲಿ ಕ್ಷೌರಿಕನ ಪಾತ್ರ. ಲಾಸ್ಯಾ ನಾಗರಾಜ್ ಈ ಚಿತ್ರದ ನಾಯಕಿ. ಜಹಾಂಗೀರ್, ರಜನಿಕಾಂತ್, ಗೋಪಾಲ್ ದೇಶಪಾಂಡೆ, ನಂದನ್ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ರಜೋತ್ ಡೇಸಾ ಸಂಗೀತ ನೀಡಿದ್ದಾರೆ. ಋತ್ವಿಕ್ ಮುರಳೀಧರ್ ಅಪ್ಪನ ಕುರಿತ ಒಂದು ಹಾಡು ಮತ್ತು ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ ಹಾಗೂ ಮಧು ತುಂಬಕೆರೆ ಸಂಕಲನ ಈ ಚಿತ್ರಕ್ಕಿದೆ.
ಪುನೀತ್ ರಾಜ್ಕುಮಾರ್ ಎಷ್ಟೇ ಎತ್ತರಕ್ಕೆ ಏರಿದರೂ ಕಾಲು ನೆಲದ ಮೇಲೇ ಇರುತ್ತದೆ; ಹರಿಹರದ ಶ್ವಾಸ ಗುರು!
ಈ ಚಿತ್ರದಲ್ಲಿ ಅಪ್ಪ-ಮಗನ ಸೆಂಟಿಮೆಂಟ್ಗೆ ಜಾಸ್ತಿ ಸ್ಕೋಪ್ ಇದೆ. ಅಲ್ಲದೆ, ಅಪ್ಪನ ಕುರಿತು ಒಂದು ಹಾಡೂ ಕೂಡ ಇದೆ. 'ಮುಕ್ಕೋಟಿ ದೇವರು ಒಟ್ಟಾಗಿ ಬಂದರು.. ಸಮವಲ್ಲ ಅಪ್ಪನ ಎದುರು.... ನಾ ಎಷ್ಟೇ ಬೆಳೆದರೂ, ನಾ ಹೇಗೆ ಮೆರೆದರೂ ಬೆನ್ನೆಲುಬು ಅಪ್ಪನ ಬೆವರು..' ಎಂದು ಶುರುವಾಗುವ ಈ ಹಾಡನ್ನು ಪುನೀತ್ ಹಾಡಿದ್ದಾರೆ. ಈ ಹಿಂದೆ 'ಸಂಕಷ್ಟಕರ ಗಣಪತಿ', 'ಖಾಕಿ' ಮುಂತಾದ ಸಿನಿಮಾಗಳಿಗೆ ಸಂಗೀತ ನೀಡಿರುವ ಋತ್ವಿಕ್ ಮುರಳಿಧರ್ ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದರೆ, ಹಾಡಿಗೆ ಗೌಸ್ ಫಿರ್ ಸಾಹಿತ್ಯ ಬರೆದಿದ್ದಾರೆ.
ಜ.26ರಂದು ಹಾಡು ರಿಲೀಸ್
ಅಪ್ಪನ ಕುರಿತ ಈ ಎಮೋಷನಲ್ ಹಾಡಿನ ಲಿರಿಕಲ್ ವಿಡಿಯೋ ಗಣರಾಜ್ಯೋತ್ಸವ ದಿನಾಚರಣೆಯಂದು (ಜ.26) ರಿಲೀಸ್ ಆಗಲಿದೆ. ಇನ್ನು, ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದ್ದು, ಇದೇ ಫೆ.5ರಂದು ಚಿತ್ರ ತೆರೆಗೆ ಬರಲಿದೆ. ಕ್ಷೌರಿಕನೊಬ್ಬನಿಗೆ ನಟ ಸುದೀಪ್ ಅವರಿಗೆ ಕೇಶವಿನ್ಯಾಸ ಮಾಡಬೇಕೆಂದು ಆಸೆ ಇರುತ್ತದೆ. ಈ ಆಸೆ ಏನಾಗುತ್ತದೆ? ಎನ್ನುವುದೇ ಚಿತ್ರದ ಕಥಾ ಸಾರಾಂಶವಾಗಿದೆ. 'ಪಾಪ್ಕಾರ್ನ್ ಮಂಕಿ ಟೈಗರ್', 'ಬ್ಯಾಡ್ ಮ್ಯಾನರ್ಸ್' ಸಿನಿಮಾಗಳ ನಿರ್ಮಾಪಕ ಸ್ಟುಡಿಯೋ 18 ನ ಸುಧೀರ್ ಕೆ.ಎಂ. ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರುತ್ತಿದ್ದಾರೆ.
'ಫ್ಯಾಮಿಲಿ ಪ್ಯಾಕ್' ನೋಡಲು ಬಂದ 'ಪವರ್ ಸ್ಟಾರ್' ಪುನೀತ್ ರಾಜಕುಮಾರ್ ದಂಪತಿ!
ತ್ರಿವರ್ಗ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಯವಿನ್ ನಿರ್ದೇಶಿಸಿದ್ದಾರೆ. ಚಂದನ್ ಆಚಾರ್ಗೆ ಈ ಚಿತ್ರದಲ್ಲಿ ಕ್ಷೌರಿಕನ ಪಾತ್ರ. ಲಾಸ್ಯಾ ನಾಗರಾಜ್ ಈ ಚಿತ್ರದ ನಾಯಕಿ. ಜಹಾಂಗೀರ್, ರಜನಿಕಾಂತ್, ಗೋಪಾಲ್ ದೇಶಪಾಂಡೆ, ನಂದನ್ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ರಜೋತ್ ಡೇಸಾ ಸಂಗೀತ ನೀಡಿದ್ದಾರೆ. ಋತ್ವಿಕ್ ಮುರಳೀಧರ್ ಅಪ್ಪನ ಕುರಿತ ಒಂದು ಹಾಡು ಮತ್ತು ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ ಹಾಗೂ ಮಧು ತುಂಬಕೆರೆ ಸಂಕಲನ ಈ ಚಿತ್ರಕ್ಕಿದೆ.
ಪುನೀತ್ ರಾಜ್ಕುಮಾರ್ ಎಷ್ಟೇ ಎತ್ತರಕ್ಕೆ ಏರಿದರೂ ಕಾಲು ನೆಲದ ಮೇಲೇ ಇರುತ್ತದೆ; ಹರಿಹರದ ಶ್ವಾಸ ಗುರು!