ಹರೀಶ್ ಬಸವರಾಜ್
ತೆಲುಗಿನ ಮೇರು ನಟ ಎನ್ಟಿಆರ್ ಮತ್ತು ಕನ್ನಡದ ಮೇರುನಟ ಡಾ.ರಾಜ್ಕುಮಾರ್ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದರು. ಅವರ ಪುತ್ರರು ಕೂಡ ಅದೇ ರೀತಿಯ ಸ್ನೇಹ ಸಂಬಂಧ ಕಾಪಾಡಿಕೊಂಡು ಬಂದಿದ್ದಾರೆ. ಆ ಸ್ನೇಹದಿಂದಲೇ ಎನ್ಟಿಆರ್ ಪುತ್ರ ನಂದಮೂರಿ ಬಾಲಕೃಷ್ಣ ನಟನೆಯ 'ಗೌತಮಿ ಪುತ್ರ ಶಾತಕರ್ಣಿ' ಸಿನಿಮಾದಲ್ಲಿ ಡಾ. ಶಿವರಾಜ್ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ನಟ ಪುನೀತ್ರಾಜ್ಕುಮಾರ್ ಸಹ ಬಾಲಯ್ಯ ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಬೋಯಪಟಿ ಶ್ರೀನು ನಿರ್ದೇಶನದ ಹೊಸ ಚಿತ್ರದಲ್ಲಿ ಬಾಲಯ್ಯ ನಾಯಕರಾಗಿ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಒಂದು ಖಡಕ್ ಪೊಲೀಸ್ ಅಧಿಕಾರಿಯ ಪಾತ್ರವಿದ್ದು, ಅದನ್ನು ಪುನೀತ್ ಅವರೇ ನಿರ್ವಹಿಸಬೇಕು ಎಂಬುದು ಚಿತ್ರತಂಡದ ಬೇಡಿಕೆಯಾಗಿದೆ ಎಂದು ಅನೇಕ ಕಡೆ ಸುದ್ದಿಯಾಗಿತ್ತು. ಅದು ಸಖತ್ ವೈರಲ್ ಆಗಿತ್ತು. ತೆಲುಗಿನ ಕೆಲ ವೆಬ್ ಸೈಟ್ಗಳಲ್ಲೂ ಅದು ಪ್ರಕಟಗೊಂಡಿತ್ತು.
ಹಾಗಾಗಿ, ಈ ಬಗ್ಗೆ ಪುನೀತ್ರಾಜ್ಕುಮಾರ್ ಅವರನ್ನು ವಿಜಯ ಕರ್ನಾಟಕ ಸಂಪರ್ಕಿಸಿದಾಗ, 'ನಾನು ಬಾಲಯ್ಯ ಅವರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ಸುದ್ದಿಯಾಗಿರುವ ವಿಚಾರ ನನ್ನ ಕಿವಿಗೂ ಬಿತ್ತು. ಇದು ಹೇಗೆ ಹರಡಿತೋ ನನಗೂ ಗೊತ್ತಿಲ್ಲ. ನಮ್ಮ ಕುಟುಂಬ ಮತ್ತು ಬಾಲಕೃಷ್ಣ ಅವರ ಕುಟುಂಬ ಬಹಳ ಆತ್ಮೀಯವಾಗಿದೆ. ಮೊದಲಿನಿಂದಲೂ ಬೆಂಗಳೂರಿಗೆ ಬಂದರೆ ಅವರು ನಮ್ಮನ್ನು ಭೇಟಿ ಮಾಡಿಕೊಂಡು ಹೋಗುತ್ತಾರೆ. ಅಪ್ಪಾಜಿ ಕಾಲದಿಂದಲೂ ಸ್ನೇಹ ಸಂಬಂಧ ಇದೆ. ಹಾಗಾಗಿ ಈ ರೀತಿಯ ಸುದ್ದಿಗಳು ಹಬ್ಬಿರಬಹುದು. ಆದರೆ ಚಿತ್ರತಂಡದಿಂದಾಗಲಿ, ಬೇರೆ ಯಾರಿಂದಲೂ ನನಗೆ ಕರೆ ಬಂದಿಲ್ಲ. ನನಗೆ ಯಾರೂ ಕರೆ ಮಾಡಿ ಸಿನಿಮಾದಲ್ಲಿ ನಟಿಸುವಂತೆ ಹೇಳಿಲ್ಲ. ಇದು ತಪ್ಪು ಮಾಹಿತಿ' ಎಂದು ಪುನೀತ್ ರಾಜ್ಕುಮಾರ್ ತಿಳಿಸಿದ್ದಾರೆ.
ಡಾ. ರಾಜ್ ಆಡಿ ಬೆಳೆದ ಗಾಜನೂರಿನ ಮನೆಗೆ ಪುನೀತ್ ರಾಜ್ಕುಮಾರ್ ಭೇಟಿ! ಕಾರಣ ಏನು?
ಶಿವರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಅವರ ಸಾಕಷ್ಟು ಸಿನಿಮಾಗಳ ಕಾರ್ಯಕ್ರಮಕ್ಕೆ ಬಾಲಯ್ಯ ಅತಿಥಿಯಾಗಿ ಬಂದಿದ್ದಾರೆ. ಜತೆಗೆ ಪುನೀತ್ ಸಹ ಬೆಂಗಳೂರಿನ ನಡೆದ ಬಾಲಯ್ಯ ಅವರ 'ಎನ್ಟಿಆರ್: ಕಥಾನಾಯಕುಡು' ಸಿನಿಮಾದ ಪ್ರಮೋಷನ್ಗೆ ಅತಿಥಿಯಾಗಿ ಭಾಗವಹಿಸಿದ್ದರು. ಅದೇ ಲೆಕ್ಕಾಚಾರ ಇಟ್ಟುಕೊಂಡು ಬಾಲಯ್ಯ ಅವರ ಪುನೀತ್ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಈಗ ಅದನ್ನು ಪುನೀತ್ ಮತ್ತವರ ಆಪ್ತವಲಯವೂ ನಿರಾಕರಿಸಿರುವುದರಿಂದ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಜನರ ಮುಂದಿಡುವ ಗೋಪಿ! ಈ ಪ್ರಯತ್ನಕ್ಕೆ ಪುನೀತ್ ಬೆಂಬಲ!
ತೆಲುಗಿನ ಮೇರು ನಟ ಎನ್ಟಿಆರ್ ಮತ್ತು ಕನ್ನಡದ ಮೇರುನಟ ಡಾ.ರಾಜ್ಕುಮಾರ್ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದರು. ಅವರ ಪುತ್ರರು ಕೂಡ ಅದೇ ರೀತಿಯ ಸ್ನೇಹ ಸಂಬಂಧ ಕಾಪಾಡಿಕೊಂಡು ಬಂದಿದ್ದಾರೆ. ಆ ಸ್ನೇಹದಿಂದಲೇ ಎನ್ಟಿಆರ್ ಪುತ್ರ ನಂದಮೂರಿ ಬಾಲಕೃಷ್ಣ ನಟನೆಯ 'ಗೌತಮಿ ಪುತ್ರ ಶಾತಕರ್ಣಿ' ಸಿನಿಮಾದಲ್ಲಿ ಡಾ. ಶಿವರಾಜ್ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ನಟ ಪುನೀತ್ರಾಜ್ಕುಮಾರ್ ಸಹ ಬಾಲಯ್ಯ ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಹಾಗಾಗಿ, ಈ ಬಗ್ಗೆ ಪುನೀತ್ರಾಜ್ಕುಮಾರ್ ಅವರನ್ನು ವಿಜಯ ಕರ್ನಾಟಕ ಸಂಪರ್ಕಿಸಿದಾಗ, 'ನಾನು ಬಾಲಯ್ಯ ಅವರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ಸುದ್ದಿಯಾಗಿರುವ ವಿಚಾರ ನನ್ನ ಕಿವಿಗೂ ಬಿತ್ತು. ಇದು ಹೇಗೆ ಹರಡಿತೋ ನನಗೂ ಗೊತ್ತಿಲ್ಲ. ನಮ್ಮ ಕುಟುಂಬ ಮತ್ತು ಬಾಲಕೃಷ್ಣ ಅವರ ಕುಟುಂಬ ಬಹಳ ಆತ್ಮೀಯವಾಗಿದೆ. ಮೊದಲಿನಿಂದಲೂ ಬೆಂಗಳೂರಿಗೆ ಬಂದರೆ ಅವರು ನಮ್ಮನ್ನು ಭೇಟಿ ಮಾಡಿಕೊಂಡು ಹೋಗುತ್ತಾರೆ. ಅಪ್ಪಾಜಿ ಕಾಲದಿಂದಲೂ ಸ್ನೇಹ ಸಂಬಂಧ ಇದೆ. ಹಾಗಾಗಿ ಈ ರೀತಿಯ ಸುದ್ದಿಗಳು ಹಬ್ಬಿರಬಹುದು. ಆದರೆ ಚಿತ್ರತಂಡದಿಂದಾಗಲಿ, ಬೇರೆ ಯಾರಿಂದಲೂ ನನಗೆ ಕರೆ ಬಂದಿಲ್ಲ. ನನಗೆ ಯಾರೂ ಕರೆ ಮಾಡಿ ಸಿನಿಮಾದಲ್ಲಿ ನಟಿಸುವಂತೆ ಹೇಳಿಲ್ಲ. ಇದು ತಪ್ಪು ಮಾಹಿತಿ' ಎಂದು ಪುನೀತ್ ರಾಜ್ಕುಮಾರ್ ತಿಳಿಸಿದ್ದಾರೆ.
ಡಾ. ರಾಜ್ ಆಡಿ ಬೆಳೆದ ಗಾಜನೂರಿನ ಮನೆಗೆ ಪುನೀತ್ ರಾಜ್ಕುಮಾರ್ ಭೇಟಿ! ಕಾರಣ ಏನು?
ಶಿವರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಅವರ ಸಾಕಷ್ಟು ಸಿನಿಮಾಗಳ ಕಾರ್ಯಕ್ರಮಕ್ಕೆ ಬಾಲಯ್ಯ ಅತಿಥಿಯಾಗಿ ಬಂದಿದ್ದಾರೆ. ಜತೆಗೆ ಪುನೀತ್ ಸಹ ಬೆಂಗಳೂರಿನ ನಡೆದ ಬಾಲಯ್ಯ ಅವರ 'ಎನ್ಟಿಆರ್: ಕಥಾನಾಯಕುಡು' ಸಿನಿಮಾದ ಪ್ರಮೋಷನ್ಗೆ ಅತಿಥಿಯಾಗಿ ಭಾಗವಹಿಸಿದ್ದರು. ಅದೇ ಲೆಕ್ಕಾಚಾರ ಇಟ್ಟುಕೊಂಡು ಬಾಲಯ್ಯ ಅವರ ಪುನೀತ್ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಈಗ ಅದನ್ನು ಪುನೀತ್ ಮತ್ತವರ ಆಪ್ತವಲಯವೂ ನಿರಾಕರಿಸಿರುವುದರಿಂದ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಜನರ ಮುಂದಿಡುವ ಗೋಪಿ! ಈ ಪ್ರಯತ್ನಕ್ಕೆ ಪುನೀತ್ ಬೆಂಬಲ!