ಆ್ಯಪ್ನಗರ

ಸಮಂತಾ ಹೇಳಿದ್ದಕ್ಕೆ ಕೈ ಕೆಸರು ಮಾಡಿಕೊಂಡ ರಶ್ಮಿಕಾ! ಅಭಿಮಾನಿಗಳೂ ಹಿಂಗೇ ಮಾಡಬೇಕಂತೆ!

ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಹಂಚಿಕೊಂಡಿರುವ ಒಂದು ಫೋಟೋ ಸಖತ್‌ ವೈರಲ್‌ ಆಗಿದೆ. ಅದಕ್ಕೆ ಕಾರಣ ಆಗಿರುವುದು ಟಾಲಿವುಡ್‌ ನಟಿ ಸಮಂತಾ ಅಕ್ಕಿನೇನಿ ಎಂಬುದು ವಿಶೇಷ. ಆ ಬಗ್ಗೆ ಮಾಹಿತಿ ಇಲ್ಲಿದೆ.

Vijaya Karnataka Web 16 Jul 2020, 1:42 pm
ಶೂಟಿಂಗ್‌, ಡಬ್ಬಿಂಗ್‌ ಇತ್ಯಾದಿ ಸಿನಿಮಾ ಕೆಲಸಗಳು ಇಲ್ಲದ ಕಾರಣ ಎಲ್ಲ ಸೆಲೆಬ್ರಿಟಿಗಳು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಬಿಡುವಿನ ಸಮಯದಲ್ಲಿ ಅವರು ಸೋಶಿಯಲ್‌ ಮೀಡಿಯಾ ಬಳಕೆ ಮಾಡುವುದೂ ಜಾಸ್ತಿ ಆಗಿದೆ. ಆ ಮೂಲಕ ನಟಿ ರಶ್ಮಿಕಾ ಮಂದಣ್ಣ ಕೂಡ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿ ಇದ್ದಾರೆ. ಇತ್ತೀಚೆಗೆ ಅವರೊಂದು ಫೋಟೋ ಅಪ್‌ಲೋಡ್‌ ಮಾಡಿ ಗಮನ ಸೆಳೆದಿದ್ದಾರೆ.
Vijaya Karnataka Web pushpa movie actress rashmika mandanna accepts green india challenge given by samantha akkineni
ಸಮಂತಾ ಹೇಳಿದ್ದಕ್ಕೆ ಕೈ ಕೆಸರು ಮಾಡಿಕೊಂಡ ರಶ್ಮಿಕಾ! ಅಭಿಮಾನಿಗಳೂ ಹಿಂಗೇ ಮಾಡಬೇಕಂತೆ!


ಕನ್ನಡತಿಯಾದರೂ ಟಾಲಿವುಡ್‌ನಲ್ಲಿಯೇ ರಶ್ಮಿಕಾ ಹೆಚ್ಚು ಬ್ಯುಸಿ. ಹಾಗಾಗಿ ಅವರಿಗೆ ತೆಲುಗು ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರ ಜೊತೆಗೆ ಒಡನಾಟ ಜಾಸ್ತಿ ಎನ್ನಬಹುದು. ಇತ್ತೀಚೆಗೆ ಅವರಿಗೆ ನಟಿ ಸಮಂತಾ ಅಕ್ಕಿನೇನಿ ಒಂದು ಸವಾಲು ಹಾಕಿದ್ದರು. ಅದನ್ನು ಸ್ವೀಕರಿಸಿರುವ ರಶ್ಮಿಕಾ ಕೈಯೆಲ್ಲ ಕೆಸರು ಮಾಡಿಕೊಂಡಿದ್ದಾರೆ. ತಮ್ಮ ಅಭಿಮಾನಿಗಳೂ ಹೀಗೆಯೇ ಮಾಡಬೇಕು ಎಂದು ಅವರು ಹೇಳಿದ್ದಾರೆ. ಏನಿದು ಕಥೆ?

ಸೋಶಿಯಲ್‌ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಅನೇಕ ಚಾಲೆಂಜ್‌ಗಳನ್ನು ಪರಸ್ಪರ ಹಾಕಿಕೊಳ್ಳುವುದು ನೋಡಿದ್ದೇವೆ. ಇತ್ತೀಚೆಗೆ ಗ್ರೀನ್‌ ಇಂಡಿಯಾ ಚಾಲೆಂಜ್‌ ವೈರಲ್‌ ಆಗಿದೆ. ಮೂರು ಗಿಡಗಳನ್ನು ಮನೆಯಂಗಳಲ್ಲಿ ನಡೆಬೇಕು. ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮತ್ತೆ ಮೂರು ಜನರಿಗೆ ಜಾಲೆಂಜ್‌ ಪಾಸ್‌ ಮಾಡಬೇಕು. ಮಾವ ನಾಗಾರ್ಜುನ್‌ ಜೊತೆ ಸೇರಿಕೊಂಡು ಸಸಿ ನೆಟ್ಟಿರುವ ಸಮಂತಾ ಆ ಚಾಲೆಂಜ್‌ ಅನ್ನು ರಶ್ಮಿಕಾಗೆ ದಾಟಿಸಿದ್ದರು.

also read: 'ಪುಷ್ಪ' ಚಿತ್ರಕ್ಕೆ ಮೊದಲ ಆಯ್ಕೆ ರಶ್ಮಿಕಾ ಅಲ್ಲ! ಇನ್ನೋರ್ವ ಸ್ಟಾರ್ ನಟಿ ಮೇಲೆ ಕಣ್ಣಿಟ್ಟಿತ್ತು ಚಿತ್ರತಂಡ!

ಸಮಂತಾ ನೀಡಿರುವ ಚಾಲೆಂಜ್‌ ಸ್ವೀಕರಿಸಿರುವ ರಶ್ಮಿಕಾ, ಕೊಡಗಿನಲ್ಲಿರುವ ತಮ್ಮ ಮನೆಯಲ್ಲಿ 3 ಸಸಿ ನೆಟ್ಟಿದ್ದಾರೆ. ಆ ವೇಳೆ ಕೈ ಕೆಸರಾಗಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 'ಈ ಚಾಲೆಂಜ್‌ ನೀಡಿದ್ದಕ್ಕಾಗಿ ಸಮಂತಾ ಅವರಿಗೆ ಧನ್ಯವಾದಗಳು. ರಾಶಿ ಖನ್ನಾ, ಕಲ್ಯಾಣಿ ಪ್ರಿಯದರ್ಶನ್‌ ಮತ್ತು ಆಶಿಕಾ ರಂಗನಾಥ್‌ ಅವರಿಗೆ ನಾನು ಈ ಚಾಲೆಂಜ್‌ ದಾಟಿಸುತ್ತಿದ್ದೇವೆ. ನನ್ನ ಅಭಿಮಾನಿಗಳು ಕೂಡ ಇದೇ ರೀತಿ 3 ಗಿಡಗಳನ್ನು ನೆಟ್ಟು ಈ ಚಾಲೆಂಜ್‌ ಮುಂದುವರಿಸಿ' ಎಂದು ಬರೆದುಕೊಂಡಿದ್ದಾರೆ ರಶ್ಮಿಕಾ.

also read: ರಶ್ಮಿಕಾ ಮಂದಣ್ಣ ಜೊತೆ ತೆರೆ ಹಂಚಿಕೊಳ್ಳಲಿರುವ ಆದಿ ಪಿನಿಸೆಟ್ಟಿ! ಇದ್ಯಾವ ಸಿನಿಮಾ? ಏನ್‌ ಕಥೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌