ಆ್ಯಪ್ನಗರ

ಮದುವೆ ವದಂತಿಗೆ ತೆರೆ ಎಳೆದ ರಚಿತಾ ರಾಮ್; ನಿಜಕ್ಕೂ ಮದುವೆ ವಿಚಾರದಲ್ಲಿ ಹಬ್ಬಿದ್ದ ಬಿಸಿ ಬಿಸಿ ಚರ್ಚೆಯೇನು?

ರಚಿತಾ ರಾಮ್ ಅವರ ಮದುವೆ ಬಗ್ಗೆ ಈಗಾಗಲೇ ಹಲವು ಬಾರಿ ಚರ್ಚೆ ಆಗಿದೆ. ಕಳೆದ ಬಾರಿ ರಚಿತಾ ಅವರು 'ನಾನು ಗೌಡರ ಮನೆ ಹುಡುಗಿ, ಗೌಡರ ಹುಡುಗನನ್ನೇ ಮದುವೆಯಾಗುತ್ತೇನೆ' ಎಂದು ಹೇಳಿದ್ದರು. ಈಗ ಅದೇ ವಿಚಾರ ಒಂದು ಘಟನೆಯಿಂದ ಮತ್ತೆ ಮುನ್ನಲೆಗೆ ಬಂದಿದೆ. ಈ ಹಿಂದೆ 'ಸೀತಾರಾಮ ಕಲ್ಯಾಣ' ಸಿನಿಮಾದಲ್ಲಿ ರಚಿತಾ ಮತ್ತು ನಿಖಿಲ್ ಕುಮಾರಸ್ವಾಮಿ ಒಟ್ಟಾಗಿ ನಟಿಸಿದ್ದರು. ಇವರಿಬ್ಬರ ಮಧ್ಯೆ ಒಳ್ಳೆಯ ಗೆಳೆತನವಿದೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಪರಸ್ಪರರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ಕೋರುತ್ತಾರೆ. ಈಗ ಇವರಿಬ್ಬರು ಮದುವೆಯಾಗುತ್ತಿದ್ದಾರೆ ಎಂಬ ಊಹಾಪೋಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದಕ್ಕೆ ರಚಿತಾ ಉತ್ತರ ನೀಡಿದ್ದಾರೆ.

Vijaya Karnataka Web 23 Jan 2020, 12:18 pm
ರಚಿತಾ ರಾಮ್ ಅವರ ಮದುವೆ ಬಗ್ಗೆ ಈಗಾಗಲೇ ಹಲವು ಬಾರಿ ಚರ್ಚೆ ಆಗಿದೆ. ಕಳೆದ ಬಾರಿ ರಚಿತಾ ಅವರು 'ನಾನು ಗೌಡರ ಮನೆ ಹುಡುಗಿ, ಗೌಡರ ಹುಡುಗನನ್ನೇ ಮದುವೆಯಾಗುತ್ತೇನೆ' ಎಂದು ಹೇಳಿದ್ದರು. ಈಗ ಅದೇ ವಿಚಾರ ಒಂದು ಘಟನೆಯಿಂದ ಮತ್ತೆ ಮುನ್ನಲೆಗೆ ಬಂದಿದೆ. ಈ ಹಿಂದೆ 'ಸೀತಾರಾಮ ಕಲ್ಯಾಣ' ಸಿನಿಮಾದಲ್ಲಿ ರಚಿತಾ ಮತ್ತು ನಿಖಿಲ್ ಕುಮಾರಸ್ವಾಮಿ ಒಟ್ಟಾಗಿ ನಟಿಸಿದ್ದರು. ಇವರಿಬ್ಬರ ಮಧ್ಯೆ ಒಳ್ಳೆಯ ಗೆಳೆತನವಿದೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಪರಸ್ಪರರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ಕೋರುತ್ತಾರೆ. ಈಗ ಇವರಿಬ್ಬರು ಮದುವೆಯಾಗುತ್ತಿದ್ದಾರೆ ಎಂಬ ಊಹಾಪೋಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದಕ್ಕೆ ರಚಿತಾ ಉತ್ತರ ನೀಡಿದ್ದಾರೆ.
Vijaya Karnataka Web rachita ram clarifies the doubt about marriage with nikhil kumaraswamy
ಮದುವೆ ವದಂತಿಗೆ ತೆರೆ ಎಳೆದ ರಚಿತಾ ರಾಮ್; ನಿಜಕ್ಕೂ ಮದುವೆ ವಿಚಾರದಲ್ಲಿ ಹಬ್ಬಿದ್ದ ಬಿಸಿ ಬಿಸಿ ಚರ್ಚೆಯೇನು?


ನಿತ್ಯಾರಾಮ್ ಮದುವೆಯಲ್ಲಿ ನಿಖಿಲ್ ಕುಮಾರಸ್ವಾಮಿ

ತಿಂಗಳುಗಳ ಹಿಂದೆ ನಿಖಿಲ್ ಕುಮಾರಸ್ವಾಮಿ ಅವರು ರಚಿತಾ ಅವರ ಸಹೋದರಿ ನಿತ್ಯಾ ರಾಮ್ ಮದುವೆಯಲ್ಲಿ ಪಾಲ್ಗೊಂಡಿದ್ದರು. ನಟಿ ಖುಷ್ಬೂ ಸೇರಿದಂತೆ ಕೆಲ ಕಿರುತೆರೆ ಕಲಾವಿದರು ನಿತ್ಯಾ ಕಲ್ಯಾಣದಲ್ಲಿ ಪಾಲ್ಗೊಂಡಿದ್ದರು. ಆದರೆ ಬೆಳ್ಳಿತೆರೆಯ ಕಲಾವಿದರು ಅಷ್ಟಾಗಿ ಇಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ನಿಖಿಲ್ ಕುಮಾರಸ್ವಾಮಿ ಮಾತ್ರ ಈ ಮದುವೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ನಿತ್ಯಾ ಮದುವೆಯಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಅಕ್ಕನ ನಂತರ ತಂಗಿ ರಚಿತಾ ಮದುವೆಯಲ್ಲವೇ! ಎಂಬುದು ಹಲವರ ಲೆಕ್ಕಾಚಾರ.

ಶೃಂಗೇರಿಯಲ್ಲಿ ರಚಿತಾ ಮತ್ತು ಎಚ್‌.ಡಿ.ದೇವೇಗೌಡರ ಕುಟುಂಬಸ್ಥರು

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮನೆಯವರು ದೈವಭಕ್ತರು. ಯಾವಾಗಲೂ ಪೂಜೆ-ಪುನಸ್ಕಾರ, ಹೋಮ-ಯಾಗಗಳನ್ನು ಇವರು ಮಾಡಿಸುತ್ತಲೇ ಇರುತ್ತಾರೆ. ಜೊತೆಗೆ ಶ್ರೀ ಕ್ಷೇತ್ರ ಶೃಂಗೇರಿಯಲ್ಲಿ ಕುಮಾರಸ್ವಾಮಿ ಮನೆಯವರು ನಂಬಿಕೆಯಿಟ್ಟಿದ್ದಾರೆ, ಆಗಾಗ ಅಲ್ಲಿಗೆ ಹೋಗಿ ಬರುತ್ತಾರೆ. ಅದರಂತೆಯೇ ಈ ಬಾರಿ ಕೂಡ ಅಲ್ಲಿಗೆ ತೆರಳಿ ವಿಶೇಷ ಯಾಗ ಮಾಡಿಸಿದ್ದಾರೆ. ಅದೇ ಸಮಯದಲ್ಲಿ ರಚಿತಾ ರಾಮ್ ಕೂಡ ಶೃಂಗೇರಿಗೆ ತೆರಳಿದ್ದಾರೆ. ದೇವೇಗೌಡರ ಮನೆಯ ಕಾರ್ಯಕ್ರಮದಲ್ಲಿ ರಚಿತಾ ರಾಮ್ ಭಾಗವಹಿಸುವುದರಿಂದ ಇವರಿಬ್ಬರು ಮದುವೆಯಾಗುತ್ತಾರೆ ಎಂಬ ಗಾಸಿಪ್ ಹರಡಿತ್ತು. ರಚಿತಾ ರಾಮ್ ಪ್ರತಿ ಭಾಷಣದ ಕೊನೆಯಲ್ಲಿ 'ಜೈ ಭಜರಂಗಿ' ಎನ್ನುತ್ತಾರೆ. ಅವರಿಗೆ ದೇವರ ಮೇಲೆ ಅಪಾರ ನಂಬಿಕೆಯಿದೆ. ಹೀಗಾಗಿ ಶೃಂಗೇರಿಗೆ ತೆರಳಿದ್ದಾರೆ.

ಮದುವೆ ಬಗ್ಗೆ ರಚಿತಾ ಸ್ಪಷ್ಟನೆ

ಸೋಶಿಯಲ್ ಮೀಡಿಯಾದಲ್ಲಿ ನಿಖಿಲ್ ಮತ್ತು ರಚಿತಾ ಮದುವೆ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆಯೇ ಇದರ ಬಗ್ಗೆ ಡಿಂಪಲ್ ಕ್ವೀನ್ ಉತ್ತರ ನೀಡಿದ್ದಾರೆ. ಕೆಲದಿನಗಳ ಹಿಂದೆ ಟ್ರೋಲ್‌ಗಳ ಬಗ್ಗೆ ಖಾರವಾಗಿ ಇವರು ಮಾತನಾಡಿದ್ದರು. ಯಾವುದೇ ವಿಚಾರ ಇದ್ದರೂ ಕೂಡ ರಚಿತಾ ಅದಕ್ಕೆ ಸ್ಪಷ್ಟನೆ ನೀಡುತ್ತಾರೆ. ಹೀಗಾಗಿ ಅವರು ಮದುವೆ ವಿಚಾರದಲ್ಲಿ ಇದ್ದ ಗಾಸಿಪ್‌ಗಳಿಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌