ಆ್ಯಪ್ನಗರ

ಗಣೇಶ ಚತುರ್ಥಿಗೆ 'ಆಡಿಸಿದಾತ' ಟೀಸರ್ ರಿಲೀಸ್‌; ಇದು ರಾಘಣ್ಣ ಕರಿಯರ್‌ನ ವಿಶೇಷ ಸಿನಿಮಾ

'ಅಮ್ಮನ ಮನೆ' ಸಿನಿಮಾದ ಮೂಲಕ ಕಮ್‌ಬ್ಯಾಕ್ ಮಾಡಿದ ನಟ ರಾಘವೇಂದ್ರ ರಾಜ್‌ಕುಮಾರ್, ಆ ಸಿನಿಮಾದ ನಟನೆಗಾಗಿ ರಾಜ್ಯ ಪ್ರಶಸ್ತಿ ಪಡೆದುಕೊಂಡರು. ಇದೀಗ ಅವರ ವೃತ್ತಿಜೀವನದ ಇನ್ನೊಂದು ಸ್ಪೆಷಲ್ ಸಿನಿಮಾದ ಟೀಸರ್ ರಿಲೀಸ್ ಆಗಲಿದೆ.

Vijaya Karnataka Web 14 Aug 2020, 6:12 pm
ನಟ ರಾಘವೇಂದ್ರ ರಾಜ್‌ಕುಮಾರ್ 15 ವರ್ಷದ ಬಳಿಕ 'ಅಮ್ಮನ ಮನೆ' ಸಿನಿಮಾದಲ್ಲಿ ನಟಿಸಿದ್ದರು. ಆನಂತರ ಅವರು ಸ್ಯಾಂಡಲ್‌ವುಡ್‌ನಲ್ಲಿ ಪುನಃ ಸಕ್ರಿಯರಾದರು. ಒಂದಾದ ಮೇಲೊಂದು ಸಿನಿಮಾಗಳನ್ನು ಒಪ್ಪಿಕೊಂಡರು. ಇದೀಗ ಅವರ ನಟನೆಯ ಮತ್ತೊಂದು ಸಿನಿಮಾ 'ಆಡಿಸಿದಾತ' ಕುರಿತು ಹೊಸ ಸುದ್ದಿಯೊಂದು ಹೊರಬಿದ್ದಿದೆ. ಇದರ ಮೊದಲ ಟೀಸರ್ ಅನ್ನು ಗೌರಿ-ಗಣೇಶ ಹಬ್ಬದ (ಆ.22) ಪ್ರಯುಕ್ತ ರಿಲೀಸ್ ಮಾಡೋಕೆ ನಿರ್ಮಾಪಕರು ಯೋಜಿಸಿದ್ದಾರೆ. ಅಂದಹಾಗೆ, ಇದು ರಾಘವೇಂದ್ರ ರಾಜ್‌ಕುಮಾರ್ ಅವರ ಕರಿಯರ್‌ನ ವಿಶೇಷ ಸಿನಿಮಾ.
Vijaya Karnataka Web raghavendra rajkumars 25th film aadisidaatha movie teaser will release on august 22nd
ಗಣೇಶ ಚತುರ್ಥಿಗೆ 'ಆಡಿಸಿದಾತ' ಟೀಸರ್ ರಿಲೀಸ್‌; ಇದು ರಾಘಣ್ಣ ಕರಿಯರ್‌ನ ವಿಶೇಷ ಸಿನಿಮಾ


ರಾಘಣ್ಣ ನಟನೆಯ 25ನೇ ಸಿನಿಮಾ
ರಾಘವೇಂದ್ರ ರಾಜ್‌ಕುಮಾರ್ ಅವರ ವೃತ್ತಿ ಜೀವನದ 25ನೇ ಸಿನಿಮಾ ಇದಾಗಿದೆ. ಲಕ್ಷ್ಮೀ ಗೋವಿಂದರಾಜು ಹಾಗೂ ನಾಗರಾಜ್. ವಿ ಅವರ ಸಹಕಾರದೊಂದಿಗೆ ದುರ್ಗದ ಹುಲಿ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಡಿಯಲ್ಲಿ ಹೆಚ್. ಹಾಲೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಫಣೀಶ್ ಭಾರದ್ವಾಜ್. ಈಗಾಗಲೇ ಎರಡು ಹಾಡುಗಳು ಸೇರಿದಂತೆ ಒಂದಷ್ಟು ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಹಾಡುಗಳಿಗೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಆನಂದ್ ಇಳಯರಾಜ ಛಾಯಾಗ್ರಹಣ ಮಾಡಿದ್ದು, 'ಮಫ್ತಿ' ಖ್ಯಾತಿಯ ಹರೀಶ್ ಕೊಮ್ಮೆ ಸಂಕಲನ ಮಾಡಿದ್ದಾರೆ. ನೃತ್ಯ ನಿರ್ದೇಶನವನ್ನು ಬಾಲ ಮಾಡಿದ್ದಾರೆ.

ಥ್ರಿಲ್ಲರ್ ಮಾದರಿಯ ಕಥೆ
ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವ ಇರುವ ಫಣೀಶ್‌, ಈ ಸಿನಿಮಾದಲ್ಲಿ ರಾಘಣ್ಣಗೆ ಡಿಫರೆಂಟ್ ಲುಕ್ ನೀಡಿದ್ದಾರಂತೆ. ಇದೊಂದು ಥ್ರಿಲ್ಲರ್ ಮಾದರಿಯ ಕಥೆಯನ್ನು ಹೊಂದಿದೆ. ಸಾಮಾಜಿಕ ಸಂದೇಶ ಕೂಡ ಈ ಸಿನಿಮಾದಲ್ಲಿ ಇದೆಯಂತೆ. ಇಂಟರ್ವಲ್‌ ವರೆಗೂ ರಾಘಣ್ಣ ನಿಭಾಯಿಸಿರುವ ಪಾತ್ರ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆಯಂತೆ. ಅಷ್ಟೊಂದು ಕುತೂಹಲಕಾರಿಯಾಗಿ ಕಥೆ ಸಾಗಲಿದೆಯಂತೆ. 'ಆಡಿಸಿದಾತ' ಎಂದಕೂಡಲೇ ಡಾ. ರಾಜ್‌ಕುಮಾರ್ ಅವರ 'ಕಸ್ತೂರಿ ನಿವಾಸ' ಸಿನಿಮಾದ 'ಆಡಿಸಿದಾತ ಬೇಸರ ಮೂಡಿ.. ಆಟ ಮುಗಿಸಿದ...' ಹಾಡು ನೆನಪಾಗುತ್ತಿದೆ. ಇದೀಗ ಆ ಹಾಡಿನ ಮೊದಲನೇ ಸಾಲನ್ನೇ ಶೀರ್ಷಿಕೆ ಮಾಡಿದ್ದಾರೆ.

ಒಳ್ಳೆಯದನ್ನು ಹೇಗೆ ನೋಡ್ತೀನೋ, ಕೆಟ್ಟದ್ದನ್ನೂ ಹಾಗೇ ನೋಡುತ್ತೇನೆ; ವಿನಯ್ ರಾಜ್‌ಕುಮಾರ್

ಉಳಿದಂತೆ, ಈ ಸಿನಿಮಾದ ತಾರಾಬಳಗದಲ್ಲಿ ಖ್ಯಾತ ನಿರ್ದೇಶಕ ದೊರೆ ಭಗವಾನ್, ಗುರುದತ್, ಬಾಲರಾಜ್, ಸುಶ್ಮಿತಾ ದಾಮೋದರ್ ಮುಂತಾದವರು ನಟಿಸಿದ್ದಾರೆ. ಧ್ರುವ ಸರ್ಜಾ ನಟನೆಯ 'ಪೊಗರು' ಚಿತ್ರದಲ್ಲೂ ರಾಘಣ್ಣ ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಅದರ ಜೊತೆಗೆ ಶೀಘ್ರದಲ್ಲೇ ಅವರ ಇನ್ನೊಂದು ಸಿನಿಮಾ ಸೆಟ್ಟೇರಲಿದ್ದು, ಅದಕ್ಕೆ 'ರಾಜತಂತ್ರ' ಎಂದು ಹೆಸರಿಡಲಾಗಿದೆಯಂತೆ.

'ಅಣ್ಣಾವ್ರ' ಜನ್ಮದಿನಕ್ಕೆ ರಾಘವೇಂದ್ರ ರಾಜ್‌ಕುಮಾರ್‌ ಪುತ್ರನ ಕಡೆಯಿಂದ ಭರ್ಜರಿ ಗಿಫ್ಟ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌