ಆ್ಯಪ್ನಗರ

ಕೊಲ್ಲೂರಿನಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ರಾಜಹಂಸ' ನಟ ಗೌರಿಶಂಕರ್‌

ಲಾಕ್‌ಡೌನ್‌ ಅವಧಿಯಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಸಪ್ತಪದಿ ತುಳಿದರು. ಇದೀಗ ಸ್ಯಾಂಡಲ್‌ವುಡ್‌ನ ಮತ್ತೋರ್ವ ನಟ ಗೌರಿಶಂಕರ್ ಕೂಡ ಸರಳವಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆ ಕುರಿತು ಇಲ್ಲಿದೆ ಮಾಹಿತಿ.

Vijaya Karnataka Web 29 Oct 2020, 5:24 pm
'ಜೋಕಾಲಿ', 'ರಾಜಹಂಸ' ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿದ್ದ ನಟ/ನಿರ್ಮಾಪಕ ಗೌರಿಶಂಕರ್ ಗುರುವಾರ (ಅ.29) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವೃತ್ತಿಯಲ್ಲಿ ವಸ್ತ್ರ ವಿನ್ಯಾಸಕಿ ಆಗಿರುವ ಅರುಣಾ ಅವರೊಂದಿಗೆ ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಈ ಸರಳ ಮದುವೆಯಲ್ಲಿ ಕುಟುಂಬದ 20 ಜನರು ಮಾತ್ರ ಭಾಗವಹಿಸಿದ್ದರು.
Vijaya Karnataka Web gowrishankar


ಮದುವೆ ಬಗ್ಗೆ ಮಾತನಾಡಿರುವ ಗೌರಿಶಂಕರ್, 'ಶಿವಮೊಗ್ಗ ಮೂಲದ ಅರುಣಾ ಅವರ ಜೊತೆ ಕೊಲ್ಲೂರಿನಲ್ಲಿ ತುಂಬ ಸರಳವಾಗಿ ಮದುವೆ ಆಗಿದ್ದೇನೆ. ಕೊರೊನಾ ಇರುವುದರಿಂದ ಕೇವಲ ಕುಟುಂಬದ 20 ಜನರ ಸಮ್ಮುಖದಲ್ಲಿ ವಿವಾಹವಾಗಿದ್ದೇನೆ. ಯಾರನ್ನೂ ಕರೆಯಲು ಸಾಧ್ಯವಾಗಿಲ್ಲ. ಎಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ' ಎಂದು ಹೇಳಿಕೊಂಡಿದ್ದಾರೆ.

2010ರಲ್ಲಿ ತೆರೆಕಂಡಿದ್ದ 'ಜೋಕಾಲಿ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಗೌರಿಶಂಕರ್‌ ಎಂಟ್ರಿ ನೀಡಿದ್ದರು. ಅಣಜಿ ನಾಗರಾಜ್ ನಿರ್ಮಾಣದ ಆ ಸಿನಿಮಾದ 'ಚುಚ್ಚಿ ಚುಚ್ಚಿ ಕೊಂದೆಯಲ್ಲೇ ನನ್ನ ಹೃದಯನ..' ಹಾಡು ದೊಡ್ಡ ಹಿಟ್ ಎನಿಸಿಕೊಂಡಿತ್ತು. ಆನಂತರ ಸಿನಿಮಾರಂಗದಿಂದ ಅವರು ಸಣ್ಣ ಗ್ಯಾಪ್ ಮಾಡಿದರು. ನಂತರ 2017ರಲ್ಲಿ ತೆರೆಕಂಡ 'ರಾಜಹಂಸ' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದರು. ಉತ್ತಮ ವಿಮರ್ಶೆ ಪಡೆದುಕೊಂಡ, ಈ ಸಿನಿಮಾದಲ್ಲಿ ಗೌರಿಶಂಕರ್‌ಗೆ ನಾಯಕಿಯಾಗಿ 'ಕನ್ನಡತಿ' ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ನಟಿಸಿದ್ದರು.

ಮೆಹಂದಿ ಸಂಭ್ರಮದಲ್ಲಿ ನಟಿ ಕಾಜಲ್ ಅಗರ್ವಾಲ್‌! ಫೋಟೋ ಹಂಚಿಕೊಂಡ 'ಮಗಧೀರ' ಚೆಲುವೆ

ಈಚೆಗೆ ಪ್ರಜ್ವಲ್ ದೇವರಾಜ್‌ಗೆ 'ಜಂಟಲ್‌ಮನ್' ಸಿನಿಮಾ ಮಾಡಿದ್ದ ಜಡೇಶ್‌ಕುಮಾರ್ ಹಂಪಿ ಅವರ ಮೊದಲ ನಿರ್ದೇಶನದ ಸಿನಿಮಾ 'ರಾಜಹಂಸ' ಆಗಿತ್ತು. ಹಿರಿಯ ನಟ ಶ್ರೀಧರ್, ಬುಲೆಟ್ ಪ್ರಕಾಶ್‌, ಬಿ.ಸಿ. ಪಾಟೀಲ್, ತಬಲಾ ನಾಣಿ, ರಾಜು ತಾಳಿಕೋಟೆ, ಯಮುನಾ, ವಿಜಯ್ ಚೆಂಡೂರ್ ಹೀಗೆ ಬಹುತಾರಾಗಣದಲ್ಲಿ 'ರಾಜಹಂಸ' ಸಿನಿಮಾ ಸಿದ್ಧಗೊಂಡಿತ್ತು.

ಹೌದು ನಾನು ಮದುವೆ ಆಗುತ್ತಿದ್ದೇನೆ: ಕಡೆಗೂ ಸತ್ಯ ಒಪ್ಪಿಕೊಂಡ ನಟಿ ಕಾಜಲ್‌ ಅಗರ್ವಾಲ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌