ಆ್ಯಪ್ನಗರ

ಅವಕಾಶ ನೀಡಿದ ನಿರ್ಮಾಪಕನ ಕಷ್ಟಕ್ಕೆ ಮರುಗಿದ ರಜನಿಕಾಂತ್!! 'ತಲೈವಾ' ಈಗ ಅಕ್ಷರಶಃ ದಾನ ಶೂರ ಕರ್ಣ!!

ಸದ್ಯ ರಜನಿಕಾಂತ್ ಮಾಡಿರುವ ಒಂದು ಕೆಲಸ ಎಲ್ಲ ಕಡೆ ವೈರಲ್ ಆಗಿದೆ. 'ಭೈರವಿ' ಚಿತ್ರದ ಮೂಲಕ ತಮ್ಮನ್ನು ಹೀರೋ ಮಾಡಿದ್ದ ನಿರ್ಮಾಪಕನ ಈಗಿನ ಸ್ಥಿತಿ ಕಂಡು, ರಜನಿ ದೊಡ್ಡ ಮಟ್ಟದಲ್ಲೇ ಸಹಾಯ ಮಾಡಿದ್ದಾರೆ.

Vijaya Karnataka Web 9 Oct 2019, 5:16 pm
ರಜನಿಕಾಂತ್ ಅವರು ಹೀರೋ ಎನಿಸಿಕೊಂಡಿದ್ದು 1978ರಲ್ಲಿ. ಆದರೆ, ಅವರು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದು 1975ರಲ್ಲಿ. ಹೀರೋ ಆಗುವುದಕ್ಕೂ ಮೊದಲು ಮೂರು ವರ್ಷಗಳ ಕಾಲ 30ಕ್ಕೂ ಅಧಿಕ ಸಿನಿಮಾಗಳಲ್ಲಿ ಪೋಷಕ ಕಲಾವಿದರಾಗಿ ಗುರಿತಿಸಿಕೊಂಡಿದ್ದರು. ಹೀಗೆ ಖಳ, ಪೋಷಕ ಪಾತ್ರಗಳನ್ನು ಮಾಡಿಕೊಂಡಿದ್ದ ರಜನಿಗೆ ಹೀರೋ ಪಟ್ಟ ದಕ್ಕಿದ್ದು 'ಭೈರವಿ' ಚಿತ್ರದ ಮೂಲಕ. ಕಲೈಜ್ಞಾನಂ ನಿರ್ಮಾಣ ಮಾಡಿದ್ದ ಆ ಸಿನಿಮಾ ರಜನಿಗ ಬ್ರೇಕ್ ನೀಡಿತ್ತು. ಇದೀಗ ಆ ನಿರ್ಮಾಪಕರನ್ನು ರಜನಿಕಾಂತ್ ನೆನಪು ಮಾಡಿಕೊಂಡಿದ್ದಾರೆ.
Vijaya Karnataka Web 67285137

ಸಿನಿಮಾ ಸೆಟ್‌ನಲ್ಲಿ ರಜನಿಕಾಂತ್ ಪತ್ನಿಯ 'ದರ್ಬಾರ್'! ವೈರಲ್ ಆಗ್ತಿದೆ 'ತಲೈವಾ' ದಂಪತಿಯ ಫೋಟೋ

ಅಂದಿನ ಕಾಲಕ್ಕೆ ದೊಡ್ಡ ನಿರ್ಮಾಪಕರಾಗಿ ಹೆಸರು ಮಾಡಿದ್ದ ಕಲೈಜ್ಞಾನಂ, ಈಗ ಅಕ್ಷರಶಃ ಕಷ್ಟದ ಬದುಕು ನಡೆಸುತ್ತಿದ್ದಾರೆ. ಇರಲು ಸ್ವಂತಃ ಮನೆ ಅವರ ಬಳಿ ಇಲ್ಲ ಎನ್ನುವುದು ವಿಪರ್ಯಾಸ. ಕೆಲ ತಿಂಗಳ ಹಿಂದಷ್ಟೇ ಕಲೈಜ್ಞಾನಂ ಬಾಡಿಗೆ ಮನೆಯಲ್ಲಿ ಬದುಕು ನಡೆಸಿರುತ್ತಿರುವುದು ರಜನಿಕಾಂತ್ ಗಮನಕ್ಕೆ ಬಂದಿತ್ತು. ಆಗಲೇ ಅವರು ಮನೆಯನ್ನು ನೀಡುವ ಬಗ್ಗೆ ಹೇಳಿಕೆ ನೀಡಿದ್ದರು. ಇದೀಗ ಅವರು ನುಡಿದಂತೆ ನಡೆದುಕೊಂಡಿದ್ದಾರೆ.
ಮನೆಗೆ ಬಂದ ನಟಿ ರಮಪ್ರಭಾಗೆ ಸೂಪರ್ ಸ್ಟಾರ್ ರಜನಿಕಾಂತ್ ಮಾಡಿದ್ದೇನು?


ಅವಕಾಶ ನೀಡಿದ ನಿರ್ಮಾಪಕರಿಗೆ ಒಂದು ಕೋಟಿ ಮನೆಹೌದು, ಕಲೈಜ್ಞಾನಂ ಅವರಿಗೆ ರಜನಿಕಾಂತ್ ನೀಡಿರುವ ಮನೆಯ ಬೆಲೆ ಸುಮಾರು ಒಂದು ಕೋಟಿ ರೂ.ಗಳಂತೆ! ಚೆನ್ನೈನ ವಿರುಗಾಂಬಾಕ್ಕಂನಲ್ಲಿರುವ ಮೂರು ಬೆಡ್‌ಗಳುಳ್ಳ ಈ ಮನೆಯನ್ನು ರಜನಿ, ಉಡುಗೊರೆಯಾಗಿ ನೀಡಿದ್ದು, 1320 ಚದರ ಅಡಿ ವಿಸ್ತೀರ್ಣವುಳ್ಳದ್ದಾಗಿದೆ. ಈ ಮೂಲಕ ತಮನ್ನು ಹೀರೋ ಮಾಡಿದ ನಿರ್ಮಾಪಕರ ಕಷ್ಟಕ್ಕೆ ನೆರವಾಗಿದ್ದಾರೆ 'ಸೂಪರ್ ಸ್ಟಾರ್‌'.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌