ಆ್ಯಪ್ನಗರ

ಹಿಮಾಲಯದ ಬಾಬಾ ಗುಹೆಗೆ ಹೊರಟ ಸ್ಟೈಲ್ ಕಿಂಗ್ ರಜನಿಕಾಂತ್

ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಆಗಾಗ ಹಿಮಾಲಕ್ಕೆ ಹೋಗುವುದು ಗೊತ್ತೇ ಇರುತ್ತದೆ. ಇದೀಗ ದರ್ಬಾರ್ ಸಿನಿಮಾ ಬಿಡುಗಡೆಗೂ ಮುಂಚಿತವಾಗಿ ಹಿಮಾಲಯದ ಕಡೆ ಮುಖ ಮಾಡಿದ್ದಾರೆ. ಭಾನುವಾರ ಅವರು ವಿಮಾನ ಹತ್ತಿ ಹೊರಟರು.

Vijaya Karnataka Web 14 Oct 2019, 4:39 pm
ನಟ ರಜನಿಕಾಂತ್‌ ಅವರು ಆಗಾಗ ಆಧ್ಯಾತ್ಮಿಕದ ಕಡೆಗೆ ಹೊರಳುವುದನ್ನು ನೋಡಿಯೇ ಇರುತ್ತೀರ. ಭಕ್ತಿ, ದೇವರ ವಿಚಾರದಲ್ಲಿ ಅವರು ಮನಸ್ಸು ಸದಾ ಜಾಗೃತವಾಗಿರುತ್ತದೆ. ಈಗಾಗಲೆ ಹಲವಾರು ಸಲ ಹಿಮಾಲಕ್ಕೆ ಹೋಗಿ ಬಂದಿದ್ದಾರೆ.
Vijaya Karnataka Web rajinikanth


ಇದೀಗ ಮತ್ತೆ ಹಿಮಾಲಯದ ಕಡೆ ಮುಖ ಮಾಡಿದ್ದಾರೆ. ನವೆಂಬರ್ ತಿಂಗಳಲ್ಲಿ ಹಿಮಾಲಯಕ್ಕೆ ಹೋಗಲು ನಿರ್ಧರಿಸಿದ್ದರಂತೆ. ಆದರೆ ಶೂಟಿಂಗ್ ಕಾರಣ ಮುಂಚಿತವಾಗಿಯೇ ಹೊರಟ್ಟಿದ್ದಾರೆ. ಐದು ದಿನಗಳ ಬಳಿಕ ಚೆನ್ನೈಗೆ ವಾಪಸ್ ಆಗಲಿದ್ದಾರೆ ರಜನಿಕಾಂತ್.

ಇತ್ತೀಚೆಗೆ ರಾಜಕೀಯ ಪ್ರವೇಶದ ಬಗ್ಗೆ ರಜನಿಕಾಂತ್ ಮಾತನಾಡಿದ್ದರು. ಇನ್ನು ಮುಂದೆ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದ್ದರು. ಆದರೆ ಸಾಲುಸಾಲು ಸಿನಿಮಾಗಳಲ್ಲಿ ಬ್ಯುಸಿಯಾದರು. ಅವಕಾಶ ನೀಡಿದ ನಿರ್ಮಾಪಕನ ಕಷ್ಟಕ್ಕೆ ಮರುಗಿದ ರಜನಿಕಾಂತ್!!

ಎ ಆರ್ ಮುರುಗದಾಸ್ ನಿರ್ದೇಶನದಲ್ಲಿ ನಟಿಸುತ್ತಿರುವ ದರ್ಬಾರ್ ಶೂಟಿಂಗ್ ಪೂರ್ಣಗೊಂಡಿದೆ. ಸದ್ಯಕ್ಕೆ ನಿರ್ಮಾಣ ನಂತರದ ಕೆಲಸಗಳು ನಡೆಯುತ್ತಿವೆ. ಮುಂದಿನ ವರ್ಷ ಸಂಕ್ರಾಂತಿಗೆ ಈ ಸಿನಿಮಾ ಬಿಡುಗಡೆಯಾಗಲಿದೆ. ಅಮಿತ್ ಶಾ 'ಹಿಂದಿ' ಹೇಳಿಕೆ ವಿರುದ್ಧ ತಿರುಗಿಬಿದ್ದ ಸೂಪರ್ ಸ್ಟಾರ್

ಇನ್ನೊಂದು ಕಡೆ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸನ್ ಪಿಕ್ಚರ್ಸ್ ನಿರ್ಮಾಣದ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಹಠಾತ್ ಆಗಿ ಹಿಮಾಲಯಕ್ಕೆ ಹೊರಟರು. ರಜನಿಕಾಂತ್ ಎಂದು ಭ್ರಮಿಸಿ ಟ್ರೋಲ್ ಆದ ಖುಷ್ಬೂ ಸುಂದರ್

ಚೆನ್ನೈನಿಂದ ವಿಮಾನದಲ್ಲಿ ಹೊರಟ ರಜನಿಕಾಂತ್ ಡೆಹ್ರಾಡೂನ್ ತಲುಪಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ರಿಷಿಕೇಷ್‌ನಲ್ಲಿನ ಬಾಬಾ ಗುಹೆಗೆ ಹೋಗಲಿದ್ದಾರೆ ಎಂದಿವೆ ಮೂಲಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌