ಆ್ಯಪ್ನಗರ

ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ಹೇಳಿರುವ 'ರಜನಿಕಾಂತ್' ಕಡೆಯಿಂದ ಮತ್ತೊಂದು ಗುಡ್ ನ್ಯೂಸ್‌!

'ತಲೈವಾ' ರಜನಿಕಾಂತ್‌ ತಮಿಳುನಾಡು ರಾಜಕೀಯ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ. ಈ ವಿಷಯ ಹೊರಬಿದ್ದಾಗಿನಿಂದ ರಜನಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಇದೀಗ ಅವರಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟಿದ್ದಾರೆ 'ತಲೈವಾ'.

Vijaya Karnataka Web 5 Dec 2020, 5:38 pm
'ಸೂಪರ್ ಸ್ಟಾರ್' ರಜನಿಕಾಂತ್ ಈಚೆಗಷ್ಟೇ ತಮಿಳುನಾಡು ರಾಜಕೀಯ ಅಖಾಡಕ್ಕೆ ಎಂಟ್ರಿ ನೀಡುವುದಾಗಿ ಹೇಳಿದ್ದರು. ಡಿ.31ರಂದು ಮೂಹೂರ್ತ ಕೂಡ ನಿಗದಿ ಮಾಡಿದ್ದಾರೆ. ಅಂದು ಅವರ ಹೊಸ ಪಕ್ಷದ ಬಗ್ಗೆ ಸಂಪೂರ್ಣ ಮಾಹಿತಿ ಹೊರಬೀಳಲಿದೆ. ಸದ್ಯ ರಜನಿ ನಡೆಯಿಂದಾಗಿ ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗಳು ಆರಂಭಗೊಂಡಿದೆ. ಇದೀಗ ರಜನಿಕಾಂತ್ ಕಡೆಯಿಂದ ಅಭಿಮಾನಿಗಳಿಗೆ ಮತ್ತೊಂದು ಶುಭ ಸುದ್ದಿ ಸಿಕ್ಕಿದೆ! ಏನದು ನ್ಯೂಸ್? ಇಲ್ಲಿದೆ ಮಾಹಿತಿ!
Vijaya Karnataka Web rajinikanth


ಮತ್ತೆ ಸಿನಿಮಾದಲ್ಲಿ ತಲೈವಾ ಸಕ್ರಿಯ
ರಜನಿಕಾಂತ್ ಪ್ರಸ್ತುತ 'ಅಣ್ಣಾಥೆ' ಸಿನಿಮಾ ಒಪ್ಪಿಕೊಂಡಿದ್ದಾರೆ. 'ವೀರಂ', 'ವಿಶ್ವಾಸಂ', 'ವಿವೇಗಂ' ಖ್ಯಾತಿಯ ಶಿವ ಇದರ ನಿರ್ದೇಶಕರು. ಬಹುತಾರಾಗಣದ ಈ ಸಿನಿಮಾಕ್ಕೆ ಲಾಕ್‌ಡೌನ್‌ಗೂ ಮೊದಲು ಒಂದಷ್ಟು ದಿನಗಳ ಕಾಲ ಶೂಟಿಂಗ್ ಮಾಡಲಾಗಿತ್ತು. ಆನಂತರ ಕೊರೊನಾ ಕಾರಣದಿಂದಾಗಿ ಶೂಟಿಂಗ್ ನಿಂತು ಹೋಗಿತ್ತು. ರಜನಿಕಾಂತ್ ಕೂಡ ವ್ಯಾಕ್ಸಿನ್ ಬಂದಮೇಲೆ ಶೂಟಿಂಗ್ ಮಾಡೋಣ ಎಂದಿದ್ದರು. ಆದರೀಗ ಮನಸ್ಸು ಬದಲಾಯಿಸಿದ್ದಾರೆ. ಡಿ.15ರಂದು ಮತ್ತೆ 'ಅಣ್ಣಾಥೆ' ಶೂಟಿಂಗ್ ಆರಂಭಿಸುವ ನಿರ್ಧಾರ ಮಾಡಿದ್ದಾರೆ ತಲೈವಾ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ.

'ಅಣ್ಣಾಥೆ' ನಂತರ ನಟನೆಯಿಂದ ಬ್ರೇಕ್?
ರಜನಿಕಾಂತ್ 'ಅಣ್ಣಾಥೆ' ನಂತರ ಸಿನಿಮಾಗಳಿಂದ ಬ್ರೇಕ್ ಪಡೆದುಕೊಳ್ಳಲಿದ್ದಾರಾ? ಸದ್ಯ ಹೀಗೊಂದು ಚರ್ಚೆ ಕಾಲಿವುಡ್‌ ಅಂಗಳದಲ್ಲಿ ಕೇಳಿಬಂದಿದೆ. ಯಾಕೆಂದರೆ, ಅವರೀಗ ರಾಜಕೀಯ ಪಕ್ಷ ಘೋಷಣೆ ಮಾಡುವವರಿದ್ದಾರೆ. ಅಲ್ಲದೆ, 2021ರ ತಮಿಳುನಾಡು ವಿಧಾನ ಸಭಾ ಚುನಾವಣೆಗೆ ಅವರ ಪಕ್ಷ ಸ್ಪರ್ಧೆ ಮಾಡಲಿದೆ. ಹೀಗಿರುವಾಗ ಸಿನಿಮಾದಲ್ಲಿ ಸಕ್ರಿಯವಾಗಿದ್ದರೆ, ಪೂರ್ಣಪ್ರಮಾಣದಲ್ಲಿ ರಾಜಕೀಯ ಮಾಡುವುದು ಕಷ್ಟವಾಗಬಹುದು. ಆದ್ದರಿಂದ ಸಿನಿಮಾದಿಂದ ಬ್ರೇಕ್ ಪಡೆದುಕೊಳ್ಳಲಿದ್ದಾರೆ. ಅದಕ್ಕಾಗಿಯೇ 'ಅಣ್ಣಾಥೆ'ಗೆ ಬೇಗ ಶೂಟಿಂಗ್ ಮುಗಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

'ತಲೈವಾ' ರಜನಿಕಾಂತ್‌ ರಾಜಕೀಯ ಎಂಟ್ರಿ ಕುರಿತು 'ರಿಯಲ್ ಸ್ಟಾರ್' ಉಪೇಂದ್ರ ಹೇಳಿದ್ದೇನು?

ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿರುವ ಈ ಬಹುಕೋಟಿ ವೆಚ್ಚದ ಸಿನಿಮಾಕ್ಕೆ ಇನ್ನೂ 40% ಶೂಟಿಂಗ್‌ ಬಾಕಿ ಇದೆ. ರಜನಿಕಾಂತ್ ಜೊತೆಗೆ ಕೀರ್ತಿ ಸುರೇಶ್, ನಯನತಾರಾ, ಮೀನಾ, ಖುಷ್ಬೂ, ಪ್ರಕಾಶ್ ರೈ, ಸತೀಶ್, ಸೂರಿ ಮುಂತಾದವರು ನಟಿಸುತ್ತಿದ್ದಾರೆ. ಡಿ. ಇಮ್ಮಾನ್ ಇದರ ಸಂಗೀತ ನಿರ್ದೇಶಕರು.

ರಜನಿಕಾಂತ್‌ ರಾಜಕೀಯ: ಮಹತ್ವದ ಸಭೆ ನಂತರ ಮಾಹಿತಿ ಹಂಚಿಕೊಂಡ 'ಸೂಪರ್‌ ಸ್ಟಾರ್‌'!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌