Exclusive: 'ಕಿರಿಕ್ ಪಾರ್ಟಿ' ಕಿರಿಕ್ ವಿರುದ್ಧ ಹೋರಾಡುವೆ ಎಂದ ನಟ ರಕ್ಷಿತ್ ಶೆಟ್ಟಿ
ಕನ್ನಡ ಸಿನಿಮಾಗಾಗಿ ನಾವು ಕೆಲಸ ಮಾಡುತ್ತಿದ್ದೇವೆ. ನಮಗೇ ಹೀಗಾದರೆ ಹೇಗೆ? ಪರಭಾಷಾ ಚಿತ್ರರಂಗದವರು ಕನ್ನಡ ಚಿತ್ರದ ಆಡಿಯೋ ಅನ್ನು ಕೋಟಿ ಕೊಟ್ಟು ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಇಲ್ಲಿ ಕನ್ನಡ ಸಿನಿಮಾದಿಂದ ದುಡ್ಡು ಮಾಡಿದವರು ನಮಗೆ ತೊಂದರೆ ಕೊಡುತ್ತಿದ್ದಾರೆ. ನಾವು ಏನೂ ತಪ್ಪು ಮಾಡಿಲ್ಲ. ಇದರ ಬಗ್ಗೆ ನನಗೆ ವಿಶ್ವಾಸ ಇದೆ. ನಾನು ನ್ಯಾಯಾಲಯದಲ್ಲಿ ಹೋರಾಡುತ್ತೇನೆ ಎಂದಿದ್ದಾರೆ ನಟ ರಕ್ಷಿತ್ ಶೆಟ್ಟಿ.
Vijaya Karnataka 29 Feb 2020, 8:50 am
ಹೈಲೈಟ್ಸ್:
- ರಕ್ಷಿತ್ ಶೆಟ್ಟಿ ಈಗಾಗಲೇ ತಾವು ಕೇಸ್ ಗೆದ್ದಿರುವುದಾಗಿ ಹೇಳುತ್ತಿದ್ದಾರೆ
- ನಮಗೆ ಗೊತ್ತಾಗದ ಹಾಗೆ ನೋಟಿಸ್ ಕಳಿಸಿದ್ದಾರೆ
- ನಾವು ಕೋರ್ಟ್ಗೆ ಹಾಜರಾಗದಿದ್ದರೆ ನಾನ್ ಬೇಲಬಲ್ ವಾರೆಂಟ್ ಇಶ್ಯೂ ಮಾಡಿಸೋಕೆ ಪ್ಲಾನ್ ಮಾಡಿದ್ದಾರೆ
* ಪದ್ಮಾ ಶಿವಮೊಗ್ಗ ಕಿರಿಕ್ ಪಾರ್ಟಿ ಚಿತ್ರದಲ್ಲಿ ಲಹರಿ ಸಂಸ್ಥೆಯ ಆಡಿಯೋ ಬಳಸಿಕೊಳ್ಳಲಾಗಿದ್ದು, ಇದರ ವಿರುದ್ಧ ಲಹರಿ ಸಂಸ್ಥೆ 2016ರಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿತ್ತು. ಲಹರಿ ಸಂಸ್ಥೆ 2019ರಲ್ಲಿ ಮತ್ತೆ ಹೊಸ ಕೇಸ್ ದಾಖಲಿಸಿದ್ದು, ಇದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುವುದಾಗಿ ನಟ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಸೂಪರ್ ಹಿಟ್ ಚಿತ್ರ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಅನುಮತಿ ಇಲ್ಲದೆ ಹಳೆಯ ಚಿತ್ರಗೀತೆ ಬಳಸಿದ ವಿವಾದ ಇನ್ನೂ ಮುಕ್ತಿ ಕಂಡಿಲ್ಲ. ಈಗ ಚಿತ್ರ ನಿರ್ಮಾಣ ಸಂಸ್ಥೆ ಪರಂವಾ ಸ್ಟುಡಿಯೋ, ನಟ ರಕ್ಷಿತ್ ಶೆಟ್ಟಿ ಮತ್ತು ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾಗಿದೆ. ರಕ್ಷಿತ್ ಶೆಟ್ಟಿ ಈಗಾಗಲೇ ತಾವು ಕೇಸ್ ಗೆದ್ದಿರುವುದಾಗಿ ಹೇಳುತ್ತಿದ್ದಾರೆ. ಆದರೆ, ಲಹರಿ ಕಂಪನಿ ಪರ ವಾದಿಸುತ್ತಿರುವ ವಕೀಲೆ ಯೋವಿನಿ ರಾಜೇಶ್ ಪ್ರಕಾರ ಇದು ಇನ್ನೂ ಇತ್ಯರ್ಥವಾಗಿಲ್ಲ. ಸದ್ಯಕ್ಕೆ ರಕ್ಷಿತ್ ಶೆಟ್ಟಿ ವಾರಂಟ್ ಪ್ರಕರಣ ಸಂಬಂಧ ತಮ್ಮ ಲಾಯರ್ ಮೂಲಕ ಕಾರ್ಯಪ್ರವೃತ್ತರಾಗಿದ್ದಾರೆ.
ರಕ್ಷಿತ್ ಶೆಟ್ಟಿ ಹೇಳುವುದು ಹೀಗೆ:
'ಕಿರಿಕ್ ಪಾರ್ಟಿ ಚಿತ್ರದಲ್ಲಿ ಹಾಡು ಬಳಸಿಕೊಂಡಿದ್ದೇವೆ ಎಂದು ಅವರು ಸ್ಟೇ ಆರ್ಡರ್ ತಂದಿದ್ದರು. ನಾವು ರಿಲೀಸ್ಗೆ ಅನುಮತಿಯನ್ನು ಕೋರ್ಟ್ನಿಂದ ಪಡೆದುಕೊಂಡೆವು. ನಂತರ ಇದಕ್ಕಾಗಿ ನಾವು ಕಟ್ಟಿದ್ದ 10 ಲಕ್ಷ ರೂ. ಹಣವೂ ನಮಗೆ ವಾಪಸ್ ಸಿಕ್ಕಿತ್ತು. ಇದಾದ ನಂತರ ಅವರು ಮತ್ತೆ 2019ರಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಇದು ಹೊಸ ಕೇಸ್. ಕೋರ್ಟ್ಗೆ ಹಾಜರಾಗುವಂತೆ ನೋಟಿಸ್ ಕಳಿಸಿದ್ದಾರೆ. ಇದು ನಮಗೆ ತಲುಪಿಲ್ಲ. ಲಹರಿ ಸಂಸ್ಥೆ ಚೀಪ್ ಗಿಮಿಕ್ ಮಾಡುತ್ತಿದೆ. ನಾವು ಕಿರಿಕ್ ಪಾರ್ಟಿಯ ಈ ಹಾಡನ್ನು ರಿಲೀಸ್ ಮಾಡಿದ್ದು 2016 ಅಕ್ಟೋಬರ್ನಲ್ಲಿ. ಆದರೆ, ಲಹರಿ ಸಂಸ್ಥೆ ಡಿಸೆಂಬರ್ನಲ್ಲಿ ಚಿತ್ರ ರಿಲೀಸ್ಗೆ ಹಿಂದಿನ ರಾತ್ರಿ ಸ್ಟೇ ಆರ್ಡರ್ ತಂದಿತು. ಇದು ಕುತಂತ್ರ ಅಲ್ಲವೇ? ಅಲ್ಲಿಯವರೆಗೆ ಅವರು ಏನು ಮಾಡುತ್ತಿದ್ದರು. ನಮಗೆ ಕೋರ್ಟ್ನಿಂದ ಅನುಮತಿ ಪಡೆಯಲು ಸಮಯ ಇರಲಿಲ್ಲ. ಕೇಸ್ ಹಾಕಿದರೆ ಸೇಫರ್ ಸೈಡ್ ಇರಲಿ ಎಂದು ಮೊದಲೇ ಹಾಡನ್ನು ಕಟ್ ಮಾಡಿ ಇಟ್ಟಿದ್ದೆ. ಒಂದು ವಾರದ ನಂತರ ಕೋರ್ಟ್ ಅನುಮತಿ ನೀಡಿದ ಮೇಲೆ ಮತ್ತೆ ಹಾಡನ್ನು ಸೇರಿಸಿ ರಿಲೀಸ್ ಮಾಡಿದೆವು.'
ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್
'ಇದಾದ ನಂತರ 2019ರಲ್ಲಿಅವರು ಮತ್ತೆ ಕೇಸ್ ಹಾಕಿದ್ದಾರೆ. ಇದು ನಮಗೆ ಗೊತ್ತಾಗಿಲ್ಲ. ನಾನು ನಾಲ್ಕು ವರ್ಷದ ಹಿಂದೆ ಇದ್ದ ಮನೆಯ ಅಡ್ರೆಸ್ಗೆ ನೋಟಿಸ್ ಹೋಗಿದೆ. ಅಲ್ಲಿನ ಸೆಕ್ಯುರಿಟಿ ಗಾರ್ಡ್ ಬಳಿ ಸಹಿ ತೆಗೆದುಕೊಂಡಿದ್ದಾರೆ. ನನಗೂ ಅವನಿಗೂ ಪರಿಚಯವೇ ಇಲ್ಲ. ಅಜನೀಶ್ದು ಹಲವು ವರ್ಷಗಳಿಂದ ಒಂದೇ ಸ್ಟುಡಿಯೋ ಇದೆ. ಆದರೆ, ಅವರದ್ದನ್ನೂ ನನ್ನ ಮನೆ ಅಡ್ರೆಸ್ಗೆ ಕಳಿಸಿದ್ದಾರೆ. ನಮಗೆ ಗೊತ್ತಾಗದ ಹಾಗೆ ನೋಟಿಸ್ ಕಳಿಸಿ, ನಾವು ಕೋರ್ಟ್ಗೆ ಹಾಜರಾಗದಿದ್ದರೆ ನಾನ್ ಬೇಲಬಲ್ ವಾರೆಂಟ್ ಇಶ್ಯೂ ಮಾಡಿಸೋಕೆ ಪ್ಲಾನ್ ಮಾಡಿದ್ದಾರೆ. ಇದು ನಮಗೆ ಗೊತ್ತಾಗಿಲ್ಲ. ಈಗ ಗೊತ್ತಾದ ನಂತರ ನಾವು ಲಾಯರ್ ಮೂಲಕ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ.'
'ಧರ್ಮ'ನಾಗಿ ಬದಲಾದ 'ಶ್ರೀಮನ್ನಾರಾಯಣ' ರಕ್ಷಿತ್ ಶೆಟ್ಟಿ!
'ಲಹರಿ ಸಂಸ್ಥೆ ಇದೇ ರೀತಿ ಹಲವು ನಿರ್ಮಾಪಕರಿಗೆ ಮಾಡಿದ್ದಾರೆ. ಕೆಲ ಸಿನಿಮಾ ನಿರ್ಮಾಪಕರು ಹೆದರಿ ಅವರ ಜತೆ ಕಾಂಪ್ರಮೈಸ್ ಮಾಡಿಕೊಂಡು ಅವರಿಗೆ 20 ಲಕ್ಷ ಕೊಟ್ಟು ಅನುಮತಿ ಪಡೆದು ಬಗೆಹರಿಸಿಕೊಂಡಿದ್ದಾರೆ. ಇವರು ಕನ್ನಡ ಸಿನಿಮಾಗಳಿಂದಲೇ ಹಣ ಮಾಡುತ್ತಿರುವುದು, ಕನ್ನಡ ಸಿನಿಮಾಗಳಿಗೆ ಹೀಗೆ ತೊಂದರೆ ಕೊಡುವುದು ಎಷ್ಟು ಸರಿ? ನಿಜವಾಗಲೂ ಬೇಸರವಾಗ್ತಿದೆ. ಕನ್ನಡ ಸಿನಿಮಾಗಾಗಿಯೇ ನಾವು ಕೆಲಸ ಮಾಡುತ್ತಿರುವುದು. ಇವತ್ತು ನಾನು ರಾಜಿ ಮಾಡಿಕೊಂಡರೆ ಮುಂದೆ ಸಣ್ಣಪುಟ್ಟ ನಿರ್ಮಾಪಕರಿಗೂ ಇದೇ ತೊಂದರೆ ಮುಂದುವರಿಯುತ್ತೆ. ಇದಕ್ಕಾಗಿಯಾದರೂ ನಾನು ಹೋರಾಡುವೆ.'
ಅವನೇ ಶ್ರೀಮನ್ನಾರಾಯಣ ಕಂಡು ಅಮೆರಿಕದಲ್ಲೂ ಪ್ರೇಕ್ಷಕರು ಫಿದಾ!
'ಮೊದಲು ಸ್ಟೇ ಆರ್ಡರ್ ತಂದಾಗ ನನಗೆ 5 ಲಕ್ಷ ಖರ್ಚಾಯಿತು. ಇದು ವೇಸ್ಟ್. ಕಿರಿಕ್ ಪಾರ್ಟಿಯಿಂದ ದುಡ್ಡು ಬಂದಿದ್ದರಿಂದ ಬಚಾವಾದೆ. ಆದರೂ ಇದು ಸಣ್ಣ ಮೊತ್ತ ಅಲ್ಲ. ಈಗ ಮತ್ತೆ ಕೋರ್ಟ್ನಲ್ಲಿ ಫೈಟ್ ಮಾಡಲು ಒಂದು 10 ಲಕ್ಷ ಖರ್ಚಾಗಬಹುದು. ಆದರೂ ಪರವಾಗಿಲ್ಲ. ನಾವು ಕೋರ್ಟ್ನಲ್ಲಿ ಹೋರಾಡುತ್ತೇವೆ. ನಾನು ಕೂಡಾ ಅವರ ಮೇಲೆ ಕೇಸ್ ಹಾಕಬಹುದು. ಆ ಹಾಡು ಕಟ್ ಮಾಡಿದ್ದರಿಂದ ನನಗೆ ಲಕ್ಷ ಲಕ್ಷ ನಷ್ಟ ಆಯ್ತು ಅಂತ. ಇದೆಲ್ಲಾ ಬೇಕಾ? ಸ್ಟೇ ಅರ್ಡರ್ ಕೇಸ್ ಗೆದ್ದಾಗಲೂ ನಾನು ಹೊರಗೆ ಹೇಳಿಕೊಳ್ಳಲಿಲ್ಲ. ಸುಮ್ಮನಿದ್ದುಬಿಟ್ಟೆ. ಇದು ನನಗೆ ಮಾತ್ರ ಆಗಿರೋದಲ್ಲ. ಕನ್ನಡ ಇಂಡಸ್ಟ್ರಿಯಲ್ಲಿ ತುಂಬಾ ಜನರ ಅನುಭವ' ಎಂದಿದ್ದಾರೆ ರಕ್ಷಿತ್ ಶೆಟ್ಟಿ.
ಲಹರಿ ಸಂಸ್ಥೆ ಹೇಳುವುದು ಹೀಗೆ:
ಲಹರಿ ಸಂಸ್ಥೆ ಪರ ಕೋರ್ಟ್ನಲ್ಲಿ ವಾದ ಮಾಡುತ್ತಿರುವ ವಕೀಲೆ ಯೋವಿನಿ ರಾಜೇಶ್ ಹೀಗೆ ಹೇಳಿದ್ದಾರೆ. 'ಕಿರಿಕ್ ಪಾರ್ಟಿ ಚಿತ್ರ ನಿರ್ಮಾಣ ಸಂಸ್ಥೆ ಪರಂವಾ ಸ್ಟುಡಿಯೋ, ನಟ ರಕ್ಷಿತ್ ಶೆಟ್ಟಿ ಮತ್ತು ಅಜನೀಶ್ ಲೋಕನಾಥ್ ವಿರುದ್ಧ ನಾವು ಕ್ರಿಮಿನಲ್ ಕೇಸ್ ಹಾಕಿದ್ದೆವು. ಇದರ ಪ್ರಕಾರ ಫೆ. 20ರಂದು ಅವರು ಕೋರ್ಟ್ಗೆ ಹಾಜರಾಗಬೇಕಿತ್ತು. ಆದರೆ, ಯಾರೂ ಬಂದಿಲ್ಲ. ಅವರ ಲಾಯರ್ ಕೂಡಾ ಹಾಜರಿರಲಿಲ್ಲ. ಹಾಗಾಗಿ ನ್ಯಾಯಾಲಯ ಅವರ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಅವರು ಕೇಸ್ ಗೆದ್ದಿದ್ದರೆ ಅದಕ್ಕೆ ದಾಖಲೆ ತೋರಿಸಲಿ. ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಇನ್ನೂ ಮುಂದುವರಿದಿದೆ. ಅವರು ಕೋರ್ಟ್ನಲ್ಲಿ ವಾದ ಮಾಡುವುದಾಗಿ ಹೇಳಿದ್ದರು. ಮಧ್ಯದಲ್ಲಿ ಚಿತ್ರ ರಿಲೀಸ್ಗೆ ಅವರು ಕೋರ್ಟ್ನಿಂದ ಅನುಮತಿ ಪಡೆದಿದ್ದರು. ಹಾಗಂತ ಕೇಸ್ ಇತ್ಯರ್ಥ ಆಯಿತು ಎಂದರ್ಥವಲ್ಲ. ಈಗಲೂ ಪ್ರಕರಣ ನ್ಯಾಯಾಲಯದಲ್ಲಿಇದೆ' ಎಂದು ವಕೀಲೆ ಹೇಳಿದ್ದಾರೆ.
ಏನಿದು ಪ್ರಕರಣ:
ರವಿಚಂದ್ರನ್ ನಟನೆಯ 'ಶಾಂತಿ ಕ್ರಾಂತಿ' ಚಿತ್ರದಲ್ಲಿ ಇದ್ದ 'ಮಧ್ಯ ರಾತ್ರೀಲಿ ಹೈವೇ ರಸ್ತೇಲಿ' ಎಂಬ ಹಾಡನ್ನು ಕಿರಿಕ್ ಪಾರ್ಟಿ ಚಿತ್ರದಲ್ಲಿ ಬಳಸಿಕೊಳ್ಳಲಾಗಿತ್ತು. ಕಿರಿಕ್ ಪಾರ್ಟಿ ಚಿತ್ರದಲ್ಲಿ'ಹೂ ಆರ್ ಯೂ' ಎಂಬ ಹಾಡಿನಲ್ಲಿ ಇದೇ ಟ್ಯೂನ್ ಬಳಸಿಕೊಳ್ಳಲಾಗಿತ್ತು. ಶಾಂತಿ ಕ್ರಾಂತಿ ಚಿತ್ರದ ಆಡಿಯೋ ಹಕ್ಕು ಲಹರಿ ಸಂಸ್ಥೆಗೆ ಸೇರಿದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಲಹರಿ ಸಂಸ್ಥೆ 2016ರಲ್ಲಿ9ನೇ ಎಸಿಎಂಎಂ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಇದು ಚಿತ್ರ ಬಿಡುಗಡೆಗೆ ಅಡ್ಡಿಯಾಗಿತ್ತು. ಈ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ 10 ಲಕ್ಷ ಬಾಂಡ್ ನೀಡಿ ನ್ಯಾಯಾಲಯದಿಂದ ಚಿತ್ರ ಬಿಡುಗಡೆಗೆ ಅನುಮತಿ ಪಡೆದುಕೊಂಡಿದ್ದರು. ಇದೀಗ ನಾಲ್ಕು ವರ್ಷಗಳ ನಂತರ ಈ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ.
ಸೂಪರ್ ಹಿಟ್ ಚಿತ್ರ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಅನುಮತಿ ಇಲ್ಲದೆ ಹಳೆಯ ಚಿತ್ರಗೀತೆ ಬಳಸಿದ ವಿವಾದ ಇನ್ನೂ ಮುಕ್ತಿ ಕಂಡಿಲ್ಲ. ಈಗ ಚಿತ್ರ ನಿರ್ಮಾಣ ಸಂಸ್ಥೆ ಪರಂವಾ ಸ್ಟುಡಿಯೋ, ನಟ ರಕ್ಷಿತ್ ಶೆಟ್ಟಿ ಮತ್ತು ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾಗಿದೆ. ರಕ್ಷಿತ್ ಶೆಟ್ಟಿ ಈಗಾಗಲೇ ತಾವು ಕೇಸ್ ಗೆದ್ದಿರುವುದಾಗಿ ಹೇಳುತ್ತಿದ್ದಾರೆ. ಆದರೆ, ಲಹರಿ ಕಂಪನಿ ಪರ ವಾದಿಸುತ್ತಿರುವ ವಕೀಲೆ ಯೋವಿನಿ ರಾಜೇಶ್ ಪ್ರಕಾರ ಇದು ಇನ್ನೂ ಇತ್ಯರ್ಥವಾಗಿಲ್ಲ. ಸದ್ಯಕ್ಕೆ ರಕ್ಷಿತ್ ಶೆಟ್ಟಿ ವಾರಂಟ್ ಪ್ರಕರಣ ಸಂಬಂಧ ತಮ್ಮ ಲಾಯರ್ ಮೂಲಕ ಕಾರ್ಯಪ್ರವೃತ್ತರಾಗಿದ್ದಾರೆ.
ರಕ್ಷಿತ್ ಶೆಟ್ಟಿ ಹೇಳುವುದು ಹೀಗೆ:
'ಕಿರಿಕ್ ಪಾರ್ಟಿ ಚಿತ್ರದಲ್ಲಿ ಹಾಡು ಬಳಸಿಕೊಂಡಿದ್ದೇವೆ ಎಂದು ಅವರು ಸ್ಟೇ ಆರ್ಡರ್ ತಂದಿದ್ದರು. ನಾವು ರಿಲೀಸ್ಗೆ ಅನುಮತಿಯನ್ನು ಕೋರ್ಟ್ನಿಂದ ಪಡೆದುಕೊಂಡೆವು. ನಂತರ ಇದಕ್ಕಾಗಿ ನಾವು ಕಟ್ಟಿದ್ದ 10 ಲಕ್ಷ ರೂ. ಹಣವೂ ನಮಗೆ ವಾಪಸ್ ಸಿಕ್ಕಿತ್ತು. ಇದಾದ ನಂತರ ಅವರು ಮತ್ತೆ 2019ರಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಇದು ಹೊಸ ಕೇಸ್. ಕೋರ್ಟ್ಗೆ ಹಾಜರಾಗುವಂತೆ ನೋಟಿಸ್ ಕಳಿಸಿದ್ದಾರೆ. ಇದು ನಮಗೆ ತಲುಪಿಲ್ಲ. ಲಹರಿ ಸಂಸ್ಥೆ ಚೀಪ್ ಗಿಮಿಕ್ ಮಾಡುತ್ತಿದೆ. ನಾವು ಕಿರಿಕ್ ಪಾರ್ಟಿಯ ಈ ಹಾಡನ್ನು ರಿಲೀಸ್ ಮಾಡಿದ್ದು 2016 ಅಕ್ಟೋಬರ್ನಲ್ಲಿ. ಆದರೆ, ಲಹರಿ ಸಂಸ್ಥೆ ಡಿಸೆಂಬರ್ನಲ್ಲಿ ಚಿತ್ರ ರಿಲೀಸ್ಗೆ ಹಿಂದಿನ ರಾತ್ರಿ ಸ್ಟೇ ಆರ್ಡರ್ ತಂದಿತು. ಇದು ಕುತಂತ್ರ ಅಲ್ಲವೇ? ಅಲ್ಲಿಯವರೆಗೆ ಅವರು ಏನು ಮಾಡುತ್ತಿದ್ದರು. ನಮಗೆ ಕೋರ್ಟ್ನಿಂದ ಅನುಮತಿ ಪಡೆಯಲು ಸಮಯ ಇರಲಿಲ್ಲ. ಕೇಸ್ ಹಾಕಿದರೆ ಸೇಫರ್ ಸೈಡ್ ಇರಲಿ ಎಂದು ಮೊದಲೇ ಹಾಡನ್ನು ಕಟ್ ಮಾಡಿ ಇಟ್ಟಿದ್ದೆ. ಒಂದು ವಾರದ ನಂತರ ಕೋರ್ಟ್ ಅನುಮತಿ ನೀಡಿದ ಮೇಲೆ ಮತ್ತೆ ಹಾಡನ್ನು ಸೇರಿಸಿ ರಿಲೀಸ್ ಮಾಡಿದೆವು.'
ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್
'ಇದಾದ ನಂತರ 2019ರಲ್ಲಿಅವರು ಮತ್ತೆ ಕೇಸ್ ಹಾಕಿದ್ದಾರೆ. ಇದು ನಮಗೆ ಗೊತ್ತಾಗಿಲ್ಲ. ನಾನು ನಾಲ್ಕು ವರ್ಷದ ಹಿಂದೆ ಇದ್ದ ಮನೆಯ ಅಡ್ರೆಸ್ಗೆ ನೋಟಿಸ್ ಹೋಗಿದೆ. ಅಲ್ಲಿನ ಸೆಕ್ಯುರಿಟಿ ಗಾರ್ಡ್ ಬಳಿ ಸಹಿ ತೆಗೆದುಕೊಂಡಿದ್ದಾರೆ. ನನಗೂ ಅವನಿಗೂ ಪರಿಚಯವೇ ಇಲ್ಲ. ಅಜನೀಶ್ದು ಹಲವು ವರ್ಷಗಳಿಂದ ಒಂದೇ ಸ್ಟುಡಿಯೋ ಇದೆ. ಆದರೆ, ಅವರದ್ದನ್ನೂ ನನ್ನ ಮನೆ ಅಡ್ರೆಸ್ಗೆ ಕಳಿಸಿದ್ದಾರೆ. ನಮಗೆ ಗೊತ್ತಾಗದ ಹಾಗೆ ನೋಟಿಸ್ ಕಳಿಸಿ, ನಾವು ಕೋರ್ಟ್ಗೆ ಹಾಜರಾಗದಿದ್ದರೆ ನಾನ್ ಬೇಲಬಲ್ ವಾರೆಂಟ್ ಇಶ್ಯೂ ಮಾಡಿಸೋಕೆ ಪ್ಲಾನ್ ಮಾಡಿದ್ದಾರೆ. ಇದು ನಮಗೆ ಗೊತ್ತಾಗಿಲ್ಲ. ಈಗ ಗೊತ್ತಾದ ನಂತರ ನಾವು ಲಾಯರ್ ಮೂಲಕ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ.'
'ಧರ್ಮ'ನಾಗಿ ಬದಲಾದ 'ಶ್ರೀಮನ್ನಾರಾಯಣ' ರಕ್ಷಿತ್ ಶೆಟ್ಟಿ!
'ಲಹರಿ ಸಂಸ್ಥೆ ಇದೇ ರೀತಿ ಹಲವು ನಿರ್ಮಾಪಕರಿಗೆ ಮಾಡಿದ್ದಾರೆ. ಕೆಲ ಸಿನಿಮಾ ನಿರ್ಮಾಪಕರು ಹೆದರಿ ಅವರ ಜತೆ ಕಾಂಪ್ರಮೈಸ್ ಮಾಡಿಕೊಂಡು ಅವರಿಗೆ 20 ಲಕ್ಷ ಕೊಟ್ಟು ಅನುಮತಿ ಪಡೆದು ಬಗೆಹರಿಸಿಕೊಂಡಿದ್ದಾರೆ. ಇವರು ಕನ್ನಡ ಸಿನಿಮಾಗಳಿಂದಲೇ ಹಣ ಮಾಡುತ್ತಿರುವುದು, ಕನ್ನಡ ಸಿನಿಮಾಗಳಿಗೆ ಹೀಗೆ ತೊಂದರೆ ಕೊಡುವುದು ಎಷ್ಟು ಸರಿ? ನಿಜವಾಗಲೂ ಬೇಸರವಾಗ್ತಿದೆ. ಕನ್ನಡ ಸಿನಿಮಾಗಾಗಿಯೇ ನಾವು ಕೆಲಸ ಮಾಡುತ್ತಿರುವುದು. ಇವತ್ತು ನಾನು ರಾಜಿ ಮಾಡಿಕೊಂಡರೆ ಮುಂದೆ ಸಣ್ಣಪುಟ್ಟ ನಿರ್ಮಾಪಕರಿಗೂ ಇದೇ ತೊಂದರೆ ಮುಂದುವರಿಯುತ್ತೆ. ಇದಕ್ಕಾಗಿಯಾದರೂ ನಾನು ಹೋರಾಡುವೆ.'
ಅವನೇ ಶ್ರೀಮನ್ನಾರಾಯಣ ಕಂಡು ಅಮೆರಿಕದಲ್ಲೂ ಪ್ರೇಕ್ಷಕರು ಫಿದಾ!
'ಮೊದಲು ಸ್ಟೇ ಆರ್ಡರ್ ತಂದಾಗ ನನಗೆ 5 ಲಕ್ಷ ಖರ್ಚಾಯಿತು. ಇದು ವೇಸ್ಟ್. ಕಿರಿಕ್ ಪಾರ್ಟಿಯಿಂದ ದುಡ್ಡು ಬಂದಿದ್ದರಿಂದ ಬಚಾವಾದೆ. ಆದರೂ ಇದು ಸಣ್ಣ ಮೊತ್ತ ಅಲ್ಲ. ಈಗ ಮತ್ತೆ ಕೋರ್ಟ್ನಲ್ಲಿ ಫೈಟ್ ಮಾಡಲು ಒಂದು 10 ಲಕ್ಷ ಖರ್ಚಾಗಬಹುದು. ಆದರೂ ಪರವಾಗಿಲ್ಲ. ನಾವು ಕೋರ್ಟ್ನಲ್ಲಿ ಹೋರಾಡುತ್ತೇವೆ. ನಾನು ಕೂಡಾ ಅವರ ಮೇಲೆ ಕೇಸ್ ಹಾಕಬಹುದು. ಆ ಹಾಡು ಕಟ್ ಮಾಡಿದ್ದರಿಂದ ನನಗೆ ಲಕ್ಷ ಲಕ್ಷ ನಷ್ಟ ಆಯ್ತು ಅಂತ. ಇದೆಲ್ಲಾ ಬೇಕಾ? ಸ್ಟೇ ಅರ್ಡರ್ ಕೇಸ್ ಗೆದ್ದಾಗಲೂ ನಾನು ಹೊರಗೆ ಹೇಳಿಕೊಳ್ಳಲಿಲ್ಲ. ಸುಮ್ಮನಿದ್ದುಬಿಟ್ಟೆ. ಇದು ನನಗೆ ಮಾತ್ರ ಆಗಿರೋದಲ್ಲ. ಕನ್ನಡ ಇಂಡಸ್ಟ್ರಿಯಲ್ಲಿ ತುಂಬಾ ಜನರ ಅನುಭವ' ಎಂದಿದ್ದಾರೆ ರಕ್ಷಿತ್ ಶೆಟ್ಟಿ.
ಲಹರಿ ಸಂಸ್ಥೆ ಹೇಳುವುದು ಹೀಗೆ:
ಲಹರಿ ಸಂಸ್ಥೆ ಪರ ಕೋರ್ಟ್ನಲ್ಲಿ ವಾದ ಮಾಡುತ್ತಿರುವ ವಕೀಲೆ ಯೋವಿನಿ ರಾಜೇಶ್ ಹೀಗೆ ಹೇಳಿದ್ದಾರೆ. 'ಕಿರಿಕ್ ಪಾರ್ಟಿ ಚಿತ್ರ ನಿರ್ಮಾಣ ಸಂಸ್ಥೆ ಪರಂವಾ ಸ್ಟುಡಿಯೋ, ನಟ ರಕ್ಷಿತ್ ಶೆಟ್ಟಿ ಮತ್ತು ಅಜನೀಶ್ ಲೋಕನಾಥ್ ವಿರುದ್ಧ ನಾವು ಕ್ರಿಮಿನಲ್ ಕೇಸ್ ಹಾಕಿದ್ದೆವು. ಇದರ ಪ್ರಕಾರ ಫೆ. 20ರಂದು ಅವರು ಕೋರ್ಟ್ಗೆ ಹಾಜರಾಗಬೇಕಿತ್ತು. ಆದರೆ, ಯಾರೂ ಬಂದಿಲ್ಲ. ಅವರ ಲಾಯರ್ ಕೂಡಾ ಹಾಜರಿರಲಿಲ್ಲ. ಹಾಗಾಗಿ ನ್ಯಾಯಾಲಯ ಅವರ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಅವರು ಕೇಸ್ ಗೆದ್ದಿದ್ದರೆ ಅದಕ್ಕೆ ದಾಖಲೆ ತೋರಿಸಲಿ. ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಇನ್ನೂ ಮುಂದುವರಿದಿದೆ. ಅವರು ಕೋರ್ಟ್ನಲ್ಲಿ ವಾದ ಮಾಡುವುದಾಗಿ ಹೇಳಿದ್ದರು. ಮಧ್ಯದಲ್ಲಿ ಚಿತ್ರ ರಿಲೀಸ್ಗೆ ಅವರು ಕೋರ್ಟ್ನಿಂದ ಅನುಮತಿ ಪಡೆದಿದ್ದರು. ಹಾಗಂತ ಕೇಸ್ ಇತ್ಯರ್ಥ ಆಯಿತು ಎಂದರ್ಥವಲ್ಲ. ಈಗಲೂ ಪ್ರಕರಣ ನ್ಯಾಯಾಲಯದಲ್ಲಿಇದೆ' ಎಂದು ವಕೀಲೆ ಹೇಳಿದ್ದಾರೆ.
ಏನಿದು ಪ್ರಕರಣ:
ರವಿಚಂದ್ರನ್ ನಟನೆಯ 'ಶಾಂತಿ ಕ್ರಾಂತಿ' ಚಿತ್ರದಲ್ಲಿ ಇದ್ದ 'ಮಧ್ಯ ರಾತ್ರೀಲಿ ಹೈವೇ ರಸ್ತೇಲಿ' ಎಂಬ ಹಾಡನ್ನು ಕಿರಿಕ್ ಪಾರ್ಟಿ ಚಿತ್ರದಲ್ಲಿ ಬಳಸಿಕೊಳ್ಳಲಾಗಿತ್ತು. ಕಿರಿಕ್ ಪಾರ್ಟಿ ಚಿತ್ರದಲ್ಲಿ'ಹೂ ಆರ್ ಯೂ' ಎಂಬ ಹಾಡಿನಲ್ಲಿ ಇದೇ ಟ್ಯೂನ್ ಬಳಸಿಕೊಳ್ಳಲಾಗಿತ್ತು. ಶಾಂತಿ ಕ್ರಾಂತಿ ಚಿತ್ರದ ಆಡಿಯೋ ಹಕ್ಕು ಲಹರಿ ಸಂಸ್ಥೆಗೆ ಸೇರಿದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಲಹರಿ ಸಂಸ್ಥೆ 2016ರಲ್ಲಿ9ನೇ ಎಸಿಎಂಎಂ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಇದು ಚಿತ್ರ ಬಿಡುಗಡೆಗೆ ಅಡ್ಡಿಯಾಗಿತ್ತು. ಈ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ 10 ಲಕ್ಷ ಬಾಂಡ್ ನೀಡಿ ನ್ಯಾಯಾಲಯದಿಂದ ಚಿತ್ರ ಬಿಡುಗಡೆಗೆ ಅನುಮತಿ ಪಡೆದುಕೊಂಡಿದ್ದರು. ಇದೀಗ ನಾಲ್ಕು ವರ್ಷಗಳ ನಂತರ ಈ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ.