ಆ್ಯಪ್ನಗರ

'ಕಿರಿಕ್ ಪಾರ್ಟಿ'ಗೆ 4 ವರ್ಷ: ಸ್ಯಾಂಡಲ್‌ವುಡ್‌ನಲ್ಲಿ ಈ ಸಿನಿಮಾದಿಂದ ಉಂಟಾದ ಬದಲಾವಣೆಗಳೇನು?

ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದ 'ಕಿರಿಕ್ ಪಾರ್ಟಿ' ಸಿನಿಮಾ ತೆರೆಕಂಡು 4 ವರ್ಷ ತುಂಬಿದೆ.

Vijaya Karnataka Web 30 Dec 2020, 8:08 pm
2016, ಡಿಸೆಂಬರ್ 30! ಇದು ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆಯೊಂದನ್ನು ಬರೆದ 'ಕಿರಿಕ್ ಪಾರ್ಟಿ' ಸಿನಿಮಾ ತೆರೆಕಂಡ ದಿನಾಂಕ. ಆ ಸಿನಿಮಾ ತೆರೆಕಂಡು ಇವತ್ತಿಗೆ (ಡಿ.30) ಸರಿಯಾಗಿ 4 ವರ್ಷ ಕಂಪ್ಲೀಟ್ ಆಯ್ತು. ಚಿತ್ರತಂಡ ಅದನ್ನು ಒಂದು ವಿಡಿಯೋ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದೆ. ಅಂದಹಾಗೆ, 'ಕಿರಿಕ್ ಪಾರ್ಟಿ' ಸೃಷ್ಟಿಸಿದ ದಾಖಲೆಗಳು, ಪರಿಣಾಮಗಳು ಒಂದೆರಡಲ್ಲ. ಈ ಸಿನಿಮಾದಲ್ಲಿ ಬಹುತೇಕ ಹೊಸ ಕಲಾವಿದರೇ ಇದ್ದರು. ಸಿನಿಮಾ ತೆರೆಕಂಡ ಮೇಲೆ ಅವರಿಗೆಲ್ಲ ಉತ್ತಮ ಅವಕಾಶಗಳು ಸಿಕ್ಕವು. ತಂತ್ರಜ್ಞರು ಬ್ಯುಸಿ ಆದರು.
Vijaya Karnataka Web rakshit shettys kirik party movie completes 4 years
'ಕಿರಿಕ್ ಪಾರ್ಟಿ'ಗೆ 4 ವರ್ಷ: ಸ್ಯಾಂಡಲ್‌ವುಡ್‌ನಲ್ಲಿ ಈ ಸಿನಿಮಾದಿಂದ ಉಂಟಾದ ಬದಲಾವಣೆಗಳೇನು?


'ಗೋಲ್ಡನ್ ಸ್ಟಾರ್' ಗಣೇಶ್‌ ನಟನೆಯ, ಯೋಗರಾಜ್‌ ಭಟ್ ನಿರ್ದೇಶನದ 'ಮುಂಗಾರು ಮಳೆ' ಸಿನಿಮಾ ಕೂಡ 2006ರ ಡಿಸೆಂಬರ್‌ ಕೊನೇ ವಾರದಲ್ಲಿ ತೆರೆಕಂಡಿತ್ತು. ಅವತ್ತು ಆ ತಂಡವು ಕೂಡ ಸಂಪೂರ್ಣ ಹೊಸಬರಿಂದಲೇ ಕೂಡಿತ್ತು. ಆ ಸಿನಿಮಾ ಸ್ಯಾಂಡಲ್‌ವುಡ್‌ ಇತಿಹಾಸದಲ್ಲಿ ದೊಡ್ಡ ದಾಖಲೆ ಬರೆಯಿತು. ಸರಿಯಾಗಿ 10 ವರ್ಷಗಳ ನಂತರ ಅದೇ ಸಮಯಕ್ಕೆ ತೆರೆಕಂಡಿದ್ದು 'ಕಿರಿಕ್‌ ಪಾರ್ಟಿ'. ಈ ಸಿನಿಮಾದಿಂದ ಏನೆಲ್ಲ ದಾಖಲೆಗಳು ಸೃಷ್ಟಿಯಾದವು. ಯಾರಿಗೆಲ್ಲ ಈ ಚಿತ್ರ ಹೆಸರು ತಂದುಕೊಡ್ತು ಅನ್ನೋದರ ಕುರಿತು ಮಾಹಿತಿ ಇಲ್ಲಿದೆ.

​ರಕ್ಷಿತ್ ಶೆಟ್ಟಿಗೆ ಬಿಗ್ ಬ್ರೇಕ್

ನಟ/ನಿರ್ದೇಶಕ ರಕ್ಷಿತ್ ಶೆಟ್ಟಿಗೆ ಈ ಸಿನಿಮಾದಿಂದ ದೊಡ್ಡ ಬ್ರೇಕ್ ಸಿಕ್ಕಿತು. ಈ ಮೊದಲು ತೆರೆಕಂಡಿದ್ದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ', 'ಉಳಿದವರು ಕಂಡಂತೆ' ಮೂಲಕ ರಕ್ಷಿತ್‌ ತಾನೊಬ್ಬ ಉತ್ತಮ ನಟ/ನಿರ್ದೇಶಕ ಎಂಬುದನ್ನು ಸಾಬೀತು ಮಾಡಿದ್ದರು. ಆದರೆ, 'ಕಿರಿಕ್ ಪಾರ್ಟಿ' ಸಿನಿಮಾ ನೀಡಿದ ಕಮರ್ಷಿಯಲ್ ಸಕ್ಸಸ್ ಸಾಮಾನ್ಯದ್ದಲ್ಲ. ಆ ಗೆಲುವಿನ ಮೂಲಕ ಚಿತ್ರರಂಗದ ಸ್ಟಾರ್‌ ನಟರ ಸಾಲಿಗೆ ರಕ್ಷಿತ್ ಕೂಡ ಸೇರಿಕೊಂಡರು. ಇದು ಅವರ ನಿರ್ಮಾಣದ ಮೊದಲ ಸಿನಿಮಾವಾಗಿತ್ತು. ಅಲ್ಲಿಯೂ ಅವರಿಗೆ ದೊಡ್ಡ ಗೆಲುವು ಸಿಕ್ಕಿತ್ತು. ಅದೇ ಥರ ನಿರ್ದೇಶಕ ರಿಷಬ್‌ ಶೆಟ್ಟಿಗೂ ಕೂಡ 'ಕಿರಿಕ್‌ ಪಾರ್ಟಿ' ಬ್ರೇಕ್‌ ನೀಡಿತು.

ತನ್ನ ನೆನಪಿಸಿಕೊಂಡ ರಶ್ಮಿಕಾ ಮಂದಣ್ಣಗೆ ಉತ್ತರ ಕೊಟ್ಟ ರಕ್ಷಿತ್ ಶೆಟ್ಟಿ ಶೈಲಿಗೆ ನೆಟ್ಟಿಗರು ಫಿದಾ!

​ಬಹುಭಾಷಾ ನಟಿಯಾದ ರಶ್ಮಿಕಾ

ಇಂದು ರಶ್ಮಿಕಾ ಮಂದಣ್ಣ ಹೆಸರು ಭಾರತೀಯ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿದೆ. ಆದರೆ, ನಾಲ್ಕು ವರ್ಷಗಳ ಹಿಂದೆ ರಶ್ಮಿಕಾಗೆ ಒಂದು ಐಡೆಂಟಿಟಿ ನೀಡಿದ್ದೇ 'ಕಿರಿಕ್ ಪಾರ್ಟಿ' ಸಿನಿಮಾ. ಅದರಲ್ಲಿ ಅವರು ಅರ್ಧ ಸಿನಿಮಾ ಮಾತ್ರ ಕಾಣಿಸಿಕೊಂಡಿದ್ದರು. ಆದರೂ, ಪ್ರೇಕ್ಷಕರ ಗಮನಸೆಳೆಯುವಲ್ಲಿ ಅವರು ಮೋಡಿ ಮಾಡಿದ್ದರು. 'ಬೆಳಗೆದ್ದು..' ಹಾಡಿನಿಂದ ಫೇಮಸ್ ಆದರು. ತೆಲುಗಿಗೆ ಹೋಗಿ ಸ್ಟಾರ್ ನಟಿ ಎನಿಸಿಕೊಂಡರು. ಜೊತೆಗೆ ತಮಿಳಿಗೂ ಕಾಲಿಟ್ಟಿದ್ದಾರೆ. ಈಗ ಅವರು ಬಾಲಿವುಡ್‌ನಲ್ಲೂ ಮಿಂಚು ಹರಿಸುವುದಕ್ಕೆ ಸಜ್ಜಾಗಿದ್ದಾರೆ. ಗೂಗಲ್‌ನಲ್ಲಿ 'ನ್ಯಾಷನಲ್ ಕ್ರಷ್‌ ಆಫ್‌ ಇಂಡಿಯಾ' ಅಂತ ಹೆಸರು ಪಡೆದಿದ್ದಾರೆ. ಬರೀ ನಾಲ್ಕೇ ವರ್ಷಗಳಲ್ಲಿ ಇಷ್ಟೆಲ್ಲ ಸಾಧನೆ ಮಾಡಿದ್ದಾರೆ ರಶ್ಮಿಕಾ. ಅದೆಲ್ಲದಕ್ಕೂ ಮುನ್ನುಡಿ ಬರೆದಿದ್ದು 'ಕಿರಿಕ್ ಪಾರ್ಟಿ'.

ಅಮಿತಾಭ್‌ ಬಚ್ಚನ್‌ ಜೊತೆ ರಶ್ಮಿಕಾ ಸಿನಿಮಾ? ಖುಲಾಯಿಸಿತು 'ಕಿರಿಕ್‌ ಪಾರ್ಟಿ' ಬೆಡಗಿ ಅದೃಷ್ಟ!

​ಯುವ ಪ್ರತಿಭೆಗಳಿಗೆ ವೇದಿಕೆಯಾದ ಕಿರಿಕ್ ಪಾರ್ಟಿ

'ಕಿರಿಕ್ ಪಾರ್ಟಿ' ಗೆಲುವಿನ ಹಿಂದೆ ಅನೇಕರ ಶ್ರಮವಿದೆ. ಮುಖ್ಯವಾಗಿ ಒಳ್ಳೆಯ ಬರಹಗಾರರ ತಂಡ ಇದರ ಸ್ಕ್ರಿಪ್ಟ್ ಬರೆಯವುದಕ್ಕೆ ಸಾಥ್ ನೀಡಿತು. ಅವರೆಲ್ಲರೂ ಈಗ ಬರಹಗಾರರಾಗಿ ಬ್ಯುಸಿ ಆಗಿದ್ದಾರೆ. ಅದರಲ್ಲಿ ಒಬ್ಬರಾದ ಕಿರಣ್‌ರಾಜ್ ಕೆ. ಈಗ ರಕ್ಷಿತ್ ಶೆಟ್ಟಿ ನಾಯಕತ್ವದ '777 ಚಾರ್ಲಿ' ಸಿನಿಮಾಕ್ಕೆ ನಿರ್ದೇಶಕರಾಗಿದ್ದಾರೆ. ಮತ್ತೋರ್ವ ಬರಹಗಾರ ಚಂದ್ರಕಾಂತ್ ಬೆಳ್ಳಿಯಪ್ಪ, ರಿಷಬ್‌ ಶೆಟ್ಟಿ ಮಾಡಿದ್ದ 'ಕಥಾ ಸಂಗಮ'ದಲ್ಲಿ ಒಂದು ಕಥೆಯನ್ನು ನಿರ್ದೇಶನ ಮಾಡಿದ್ದರು. ಅದೇ ಥರ ಅಭಿಜಿತ್ ಮಹೇಶ್, ಧನಂಜಯ್ ರಂಜನ್ ಕೂಡ ಈಗ ಸ್ಯಾಂಡಲ್‌ವುಡ್‌ನಲ್ಲಿ ಗಮನಸೆಳೆಯುತ್ತಿದ್ದಾರೆ.

ರಿಷಬ್‌ ಶೆಟ್ಟಿಯ ಹೊಸ ಸಿನಿಮಾದಲ್ಲಿ ನಿರ್ದೇಶಕರೇ ಚೇಂಜ್! ಈ ಮಹತ್ತರ ಬದಲಾವಣೆಗೆ ಕಾರಣವೇನು?

​ತೆಲುಗಿಗೆ ರಿಮೇಕ್ ಆದ ಕಿರಿಕ್ ಪಾರ್ಟಿ

ಒಂದು ಕಾಲದಲ್ಲಿ ಕನ್ನಡ ಸಿನಿಮಾಗಳು ಪರಭಾಷೆಗೆ ಹೆಚ್ಚು ರಿಮೇಕ್ ಆಗುತ್ತಿದ್ದವು. ಆನಂತರ ಪರಭಾಷೆಯ ಸಿನಿಮಾಗಳು ಕನ್ನಡಕ್ಕೆ ರಿಮೇಕ್ ಆಗುವುದಕ್ಕೆ ಆರಂಭವಾಯ್ತು. ಆದರೆ, 'ಕಿರಿಕ್ ಪಾರ್ಟಿ' ತೆರೆಕಂಡ ಮೇಲೆ, ಈ ಸಿನಿಮಾದ ರಿಮೇಕ್ ಹಕ್ಕುಗಳು ತೆಲುಗು ಸೇರಿದಂತೆ ಅನೇಕ ಭಾಷೆಗಳಿಗೆ ಮಾರಾಟವಾದವು. ತೆಲುಗಿನಲ್ಲಿ ಸಿನಿಮಾ ಕೂಡ ಬಂತು. 'ಕಿರಿಕ್ ಪಾರ್ಟಿ', 'ಒಂದು ಮೊಟ್ಟೆಯ ಕಥೆ', 'ಮುಂಗಾರು ಮಳೆ', 'ಯು ಟರ್ನ್‌' ಥರದ ಸಿನಿಮಾಗಳು ಮತ್ತೆ ಪರಭಾಷೆಗೆ ಕನ್ನಡ ಸಿನಿಮಾಗಳು ರಿಮೇಕ್ ಆಗುವ ಟ್ರೆಂಡ್ ಅನ್ನು ಹುಟ್ಟುಹಾಕಿವೆ ಎಂದರೆ ತಪ್ಪಲ್ಲ.

'ಬೆಳಗೆದ್ದು...' ಸಾಂಗ್ ನೆನಪು ಮಾಡಿಕೊಂಡ ರಕ್ಷಿತ್ ಶೆಟ್ಟಿ & ರಶ್ಮಿಕಾ ಮಂದಣ್ಣ! ಕಾರಣವೇನು?

ರಕ್ಷಿತ್ ಶೆಟ್ಟಿ ಮಾಡಿರುವ ಟ್ವೀಟ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌