ಆ್ಯಪ್ನಗರ

'ಮೆಗಾ' ಫ್ಯಾಮಿಲಿಗೆ ಕೊರೊನಾತಂಕ: ರಾಮ್ ಚರಣ್‌ ನಂತರ ವರುಣ್‌ ತೇಜ್‌ಗೂ ಕೊರೊನಾ ಪಾಸಿಟಿವ್!

'ಮೆಗಾ ಸ್ಟಾರ್‌' ಚಿರಂಜೀವಿ ಕುಟುಂಬದ ಇಬ್ಬರಿಗೆ ಈಗ ಕೊರೊನಾ ವೈರಸ್ ಪಾಸಿಟಿವ್ ಆಗಿದೆ. ಮೊದಲು ರಾಮ್‌ ಚರಣ್‌ಗೆ ಕೊರೊನಾ ವೈರಸ್ ಪಾಟಿಸಿವ್ ಆಗಿತ್ತು. ಈಗ ವರುಣ್‌ ತೇಜ್‌ಗೂ ಕೂಡ ಕೊರೊನಾ ವೈರಸ್ ತಗುಲಿದೆ.

Vijaya Karnataka Web 29 Dec 2020, 11:13 pm
'ಮೆಗಾ ಸ್ಟಾರ್' ಚಿರಂಜೀವಿ ಫ್ಯಾಮಿಲಿಗೆ ಈಗ ಕೊರೊನಾ ವೈರಸ್‌ ಆತಂಕ ಶುರುವಾಗಿದೆ. ಯಾಕೆಂದರೆ, ಮಂಗಳವಾರ (ಡಿ.29) ಬೆಳಗ್ಗೆಯಷ್ಟೇ ಚಿರು ಪುತ್ರ, ನಟ ರಾಮ್ ಚರಣ್ ತೇಜಗೆ ಕೊರೊನಾ ಪಾಸಿಟಿವ್ ಆಗಿತ್ತು. ಈ ವಿಚಾರ ಕೇಳಿ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದರು. ಆದಾದ ಕೆಲವೇ ಗಂಟೆಗಳಲ್ಲಿ 'ಮೆಗಾ' ಕುಟುಂಬದ ಮತ್ತೋರ್ವ ನಟ, ಚಿರು ಸಹೋದರನ ಪುತ್ರ ವರುಣ್ ತೇಜ್‌ಗೂ ಕೊರೊನಾ ಪಾಸಿಟಿವ್ ಆಗಿದೆ. ಇದೀಗ ಒಂದೇ ಕುಟುಂಬದ ಇಬ್ಬರಿಗೆ ಕೊರೊನಾ ತಗುಲಿರುವುದು ಅಭಿಮಾನಿಗಳಲ್ಲಿ ಮತ್ತು ಕುಟುಂಬ ಸದಸ್ಯರಲ್ಲಿ ಆತಂಕ ಉಂಟಾಗಲು ಕಾರಣವಾಗಿದೆ.
Vijaya Karnataka Web Varun Tej


ವರುಣ್‌ಗೆ ಸಣ್ಣ ಪ್ರಮಾಣದ ರೋಗ ಲಕ್ಷಣಗಳು

ಚಿರು ಸಹೋದರ ನಾಗ ಬಾಬು ಅವರ ಪುತ್ರನಾಗಿರುವ ವರುಣ್‌, ಟಾಲಿವುಡ್‌ನ ಉದಯೋನ್ಮುಖ ನಟರಲ್ಲಿ ಒಬ್ಬರು. ಇದೀಗ ಅವರಿಗೆ ಕೊರೊನಾ ವೈರಸ್ ತಗುಲಿದ್ದು, 'ಇಂದು ನನಗೆ ಕೊರೊನಾ ಪರೀಕ್ಷೆಯ ವರದಿ ಪಾಸಿಟಿವ್ ಆಗಿದೆ. ಜೊತೆ ನನಗೆ ಸಣ್ಣ ಪ್ರಮಾಣದ ಲಕ್ಷಣಗಳು ಇವೆ. ಸದ್ಯ ಅಗತ್ಯ ಸುರಕ್ಷಿತ ಕ್ರಮಗಳೊಂದಿಗೆ ನಾನು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ. ಶೀಘ್ರದಲ್ಲೇ ನಾನು ಮರಳುವೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು' ಎಂದು ಸೋಶಿಯಲ್ ಮೀಡಿಯಾದಲ್ಲಿ ವರುಣ್‌ ಬರೆದುಕೊಂಡಿದ್ದಾರೆ.

ರಾಮ್ ಚರಣ್‌ಗೂ ಕೊರೊನಾ
ಮಂಗಳವಾರ (ಡಿ.29) ಬೆಳಗ್ಗೆಯೇ ತಮಗೆ ಕೊರೊನಾ ಪಾಸಿಟಿವ್ ಆಗಿರುವುದರ ಕುರಿತು ರಾಮ್ ಚರಣ್ ಮಾಹಿತಿ ನೀಡಿದ್ದರು. 'ನನಗೆ ಕೋವಿಡ್‌-19 ಪಾಸಿಟಿವ್‌ ವರದಿ ಬಂದಿದೆ. ಯಾವುದೇ ರೋಗ ಲಕ್ಷಣಗಳಿಲ್ಲ. ಮನೆಯಲ್ಲಿ ಕ್ವಾರಂಟೈನ್ ಆಗಿದ್ದೇನೆ. ಆದಷ್ಟು ಬೇಗ ಗುಣಮುಖನಾಗಿ ಮತ್ತಷ್ಟು ಸದೃಢನಾಗಿ ಬರುತ್ತೇನೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರೆಲ್ಲ ದಯವಿಟ್ಟು ಕೊರೊನಾ ವೈರಸ್‌ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ನನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ನೀಡುತ್ತೇನೆ' ಎಂದು ಅವರು ಟ್ವೀಟ್ ಮಾಡಿದ್ದರು. ಸದ್ಯ ಇಬ್ಬರಿಗೂ ಶೀಘ್ರದಲ್ಲೇ ಗುಣವಾಗಲಿ ಎಂದು ಟಾಲಿವುಡ್‌ನ ಗಣ್ಯರು, ಅಭಿಮಾನಿಗಳು ಹಾರೈಸಿದ್ದಾರೆ.

ನಿಹಾರಿಕಾ ಮದುವೆ ಬಳಿಕ ಈ ನಟನ ಮೇಲೆ ಹೆಚ್ಚಿದೆ ಒತ್ತಡ! ಚಿರು ಕುಟುಂಬದಲ್ಲಿ ಏನು ನಡೀತಿದೆ?

ಕ್ರಿಸ್‌ಮಸ್‌ ಪಾರ್ಟಿ ಮಾಡಿದ್ದ ಚಿರು ಫ್ಯಾಮಿಲಿ
ಡಿ.24ರ ಸಂಜೆ ಮೆಗಾ ಫ್ಯಾಮಿಲಿ ಕ್ರಿಸ್‌ಮಸ್ ಪಾರ್ಟಿ ಮಾಡಿತ್ತು. ಅದರಲ್ಲಿ ರಾಮ್‌ ಚರಣ್‌ ಮತ್ತು ವರುಣ್ ತೇಜ್ ಕೂಡ ಭಾಗವಹಿಸಿದ್ದರು. ಅಲ್ಲು ಅರ್ಜುನ್, ಅಲ್ಲು ಸಿರೀಶ್, ಸಾಯಿ ಧರಮ್ ತೇಜ್, ಈಚೆಗಷ್ಟೇ ಮದುವೆಯಾದ ನಿಹಾರಿಕಾ ದಂಪತಿ ಕೂಡ ಹಾಜರಿದ್ದರು. ಹಾಗಾಗಿ, ಅವರೆಲ್ಲರೂ ಕೂಡ ಈ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ. ಇದರ ಮಧ್ಯೆ ರಾಮ್‌ ಚರಣ್‌, ಚಿರು ನಟಿಸುತ್ತಿರುವ 'ಆಚಾರ್ಯ' ಸಿನಿಮಾದ ಶೂಟಿಂಗ್‌ಗೂ ಹೋಗಿಬಂದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌