RGV: ದ್ರೌಪದಿ ರಾಷ್ಟ್ರಪತಿಯಾದ್ರೆ ಪಾಂಡವರು, ಕೌರವರು ಯಾರು?: ರಾಮ್ ಗೋಪಾಲ್ ವರ್ಮರಿಂದ ಇನ್ನೊಂದು ಎಡವಟ್ಟು
ಸಿನಿಮಾ, ರಾಜಕೀಯ, ಸಾಮಾಜಿಕ ಘಟನೆ ಕುರಿತಂತೆ ಎಲ್ಲ ವಿಚಾರಕ್ಕೆ ಟ್ವೀಟ್ ಮಾಡಿ ವಿವಾದ ಸೃಷ್ಟಿ ಮಾಡಿಕೊಳ್ಳುವ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರು ಬುಡಕಟ್ಟು ಸಮುದಾಯದ ನಾಯಕಿ, ಜಾರ್ಖಂಡ್ನ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಬಗ್ಗೆ ಟ್ವೀಟ್ ಮಾಡಿ ಇನ್ನೊಂದು ಕಾಂಟ್ರವರ್ಸಿ ಜಾಸ್ತಿ ಮಾಡಿಕೊಂಡಿದ್ದಾರೆ. ದ್ರೌಪದಿ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಹೈಲೈಟ್ಸ್:
- ದ್ರೌಪದಿ ಮುರ್ಮು ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ ರಾಮ್ ಗೋಪಾಲ್ ವರ್ಮ
- ದ್ರೌಪದಿ ಮುರ್ಮು ಯಾರು? ಅವರ ಬಗ್ಗೆ ನಿಮಗೆ ತಿಳಿದಿದೆಯೇ?
- ದ್ರೌಪದಿ ಮುರ್ಮು ಬಗ್ಗೆ ರಾಮ್ ಗೋಪಾಲ್ ವರ್ಮ ಟ್ವೀಟ್ ಮಾಡಿದ್ದು ಯಾಕೆ?
ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸದ್ದು ಮಾಡುವ ನಿರ್ದೇಶಕ ರಾಮ್ ಗೋಪಾಲ್ ವರ್ಮ ( Ram Gopal Varma ) ಅವರು ಈಗ ರಾಷ್ಟ್ರಪತಿ ಸ್ಪರ್ಧಿಯ ಬಗ್ಗೆ ಮಾತನಾಡಿ ಕ್ಷಮೆ ಕೇಳಿದ್ದಾರೆ. ಬಾಯಿಗೆ ಬಂದಂತೆ ಹೇಳಿಕೆ ನೀಡುವ ಆರ್ಜಿವಿ ಅವರು ಈ ಬಾರಿ ಮಾತಾಡಿದ್ದಲ್ಲದೆ, ಮತ್ತೆ ಸ್ಪಷ್ಟನೆ ನೀಡಿರೋದು ತುಂಬ ಅಪರೂಪವಾಗಿದೆ. ದ್ರೌಪದಿ ಮುರ್ಮು ಬಗ್ಗೆ ದೇಶದಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಈಗ ಅವರ ಬಗ್ಗೆ ಮಾತನಾಡಿ ಆರ್ಜಿವಿ ಇನ್ನೊಂದು ಕಾಂಟ್ರವರ್ಸಿ ಸೃಷ್ಟಿ ಮಾಡಿಕೊಂಡಿದ್ದಾರೆ. ರಾಮ್ ಗೋಪಾಲ್ ವರ್ಮ ಟ್ವೀಟ್ ಏನು?
"ದ್ರೌಪದಿ ಅವರು ರಾಷ್ಟ್ರಪತಿಯಾದರೆ ಪಾಂಡವರು ಯಾರು? ಇನ್ನೂ ಮುಖ್ಯವಾಗಿ ಕೌರವರು ಯಾರು?" ಎಂದು ರಾಮ್ ಗೋಪಾಲ್ ವರ್ಮ ( Draupadi Murmu ) ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಬಗ್ಗೆ ಸಾಕಷ್ಟು ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಿತ್ತು. ಆಮೇಲೆ ಅವರು ಮತ್ತೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
"ಇದನ್ನು ಶ್ರದ್ಧೆಯಿಂದ ವ್ಯಂಗ್ಯ ಮಾಡಲಾಗಿದೆ ಹೊರತು ಬೇರೆ ದೃಷ್ಟಿಯಿಂದ ಅಲ್ಲ. ಮಹಾಭಾರತದಲ್ಲಿ ದ್ರೌಪದಿ ನನ್ನ ಫೇವರಿಟ್ ಪಾತ್ರ. ಈ ಹೆಸರು ಅಪರೂಪವಾಗಿರುವುದರಿಂದ ನಾನು ಅದಕ್ಕೆ ಸಂಬಂಧಿಸಿದ ಪಾತ್ರಗಳನ್ನು ನೆನಪಿಸಿಕೊಂಡಿದ್ದೇನೆ, ಅದು ನನ್ನ ಅಭಿವ್ಯಕ್ತಿಯಷ್ಟೇ. ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶವಿಲ್ಲ" ಎಂದು ರಾಮ್ ಗೋಪಾಲ್ ವರ್ಮ ಅವರು ಸ್ಪಷ್ಟನೆ ನೀಡಿದ್ದಾರೆ.
ರಾಷ್ಟ್ರಪತಿ ಚುನಾವಣೆ ಎನ್ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ದ್ರೌಪದಿ ಮುರ್ಮು!
ರಾಷ್ಟ್ರಪತಿ ಚುನಾವಣೆ ಸ್ಪರ್ಧಿ ದ್ರೌಪದಿ ಮುರ್ಮು
ಜುಲೈನಲ್ಲಿ ರಾಷ್ಟ್ರಪತಿ ಚುನಾವಣೆ ( President Of Election 2022 ) ನಡೆಯಲಿದೆ. ಬುಡಕಟ್ಟು ಸಮುದಾಯದ ನಾಯಕಿ, ಜಾರ್ಖಂಡ್ನ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಅವರನ್ನು ಎನ್ಡಿಎ ರಾಷ್ಟ್ರಪತಿ ಚುನಾವಣೆಗೆ ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಆದಿವಾಸಿ ಸಮುದಾಯದಿಂದ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. ಹೀಗಾಗಿ ದ್ರೌಪದಿ ಹೆಸರು ಭಾರೀ ಪ್ರಚಲಿತದಲ್ಲಿದೆ. ಒಂದು ವೇಳೆ ಇವರು ಗೆದ್ದರೆ ಇತಿಹಾಸ ನಿರ್ಮಾಣ ಮಾಡೋದಂತೂ ಪಕ್ಕಾ.
RGV: ಬಾಲಿವುಡ್ಗೆ ಕೊರೊನಾ ವೈರಸ್ ಸೋಂಕಿನಂತಾದ ಕನ್ನಡ, ತೆಲುಗು ಚಿತ್ರರಂಗ: ರಾಮ್ ಗೋಪಾಲ್ ವರ್ಮ
ದ್ರೌಪದಿ ಮುರ್ಮು ಸಾಧನೆ ಏನು?
ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಸಂತಲ್ ಬುಡಕಟ್ಟು ಸಮುದಾಯದಲ್ಲಿ ಜನಿಸಿದ ದ್ರೌಪದಿ ಮುರ್ಮು ಅವರಿಗೆ 64 ವರ್ಷ ಆಗಿದೆ. ಇವರು ರಾಷ್ಟ್ರಪತಿಯಾಗಿ ಆಯ್ಕೆಯಾದರೆ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಏರುವ ಮೊದಲ ಆದಿವಾಸಿ ಮಹಿಳೆ ಎಂಬ ಖ್ಯಾತಿ ಪಡೆದಿದ್ದಾರೆ. ದ್ರೌಪದಿ ಅವರು ಜಾರ್ಖಂಡ್ ರಾಜ್ಯಪಾಲೆಯಾಗಿ ದೇಶದ ಮೊದಲ ಬುಡಕಟ್ಟು ಮಹಿಳಾ ರಾಜ್ಯಪಾಲೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಮದುವೆಯಾದಾಗ ನಟ ಧನುಷ್ಗೆ 21, ಐಶ್ವರ್ಯಾಗೆ 23; ಗಡಿಬಿಡಿಯಲ್ಲಿ ರಜನಿಕಾಂತ್ ಮಗಳ ಮದುವೆ ಮಾಡಿದ್ದೇಕೆ?
ದ್ರೌಪದಿ ಮುರ್ಮು ಕುಟುಂಬ
ಶ್ಯಾಮ ಚರಣ್ ಮುರ್ಮು ಅವರನ್ನು ವಿವಾಹವಾದ ದ್ರೌಪದಿಗೆ ಇಬ್ಬರು ಗಂಡುಮಕ್ಕಳು, ಒಬ್ಬಳು ಮಗಳು ಜನಿಸಿದ್ದರು. ದುರದೃಷ್ಟವಶಾತ್ ದ್ರೌಪದಿ ಅವರು ಇಬ್ಬರೂ ಗಂಡುಮಕ್ಕಳು ಮತ್ತು ಪತಿಯನ್ನು ಕಳೆದುಕೊಂಡಿದ್ದಾರೆ. ಮಗಳು ಮದುವೆಯಾಗಿ ಭುವನೇಶ್ವರದಲ್ಲಿ ನೆಲೆಸಿದ್ದಾರೆ.
"ದ್ರೌಪದಿ ಅವರು ರಾಷ್ಟ್ರಪತಿಯಾದರೆ ಪಾಂಡವರು ಯಾರು? ಇನ್ನೂ ಮುಖ್ಯವಾಗಿ ಕೌರವರು ಯಾರು?" ಎಂದು ರಾಮ್ ಗೋಪಾಲ್ ವರ್ಮ ( Draupadi Murmu ) ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಬಗ್ಗೆ ಸಾಕಷ್ಟು ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಿತ್ತು. ಆಮೇಲೆ ಅವರು ಮತ್ತೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
"ಇದನ್ನು ಶ್ರದ್ಧೆಯಿಂದ ವ್ಯಂಗ್ಯ ಮಾಡಲಾಗಿದೆ ಹೊರತು ಬೇರೆ ದೃಷ್ಟಿಯಿಂದ ಅಲ್ಲ. ಮಹಾಭಾರತದಲ್ಲಿ ದ್ರೌಪದಿ ನನ್ನ ಫೇವರಿಟ್ ಪಾತ್ರ. ಈ ಹೆಸರು ಅಪರೂಪವಾಗಿರುವುದರಿಂದ ನಾನು ಅದಕ್ಕೆ ಸಂಬಂಧಿಸಿದ ಪಾತ್ರಗಳನ್ನು ನೆನಪಿಸಿಕೊಂಡಿದ್ದೇನೆ, ಅದು ನನ್ನ ಅಭಿವ್ಯಕ್ತಿಯಷ್ಟೇ. ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶವಿಲ್ಲ" ಎಂದು ರಾಮ್ ಗೋಪಾಲ್ ವರ್ಮ ಅವರು ಸ್ಪಷ್ಟನೆ ನೀಡಿದ್ದಾರೆ.
ರಾಷ್ಟ್ರಪತಿ ಚುನಾವಣೆ ಎನ್ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ದ್ರೌಪದಿ ಮುರ್ಮು!
ರಾಷ್ಟ್ರಪತಿ ಚುನಾವಣೆ ಸ್ಪರ್ಧಿ ದ್ರೌಪದಿ ಮುರ್ಮು
ಜುಲೈನಲ್ಲಿ ರಾಷ್ಟ್ರಪತಿ ಚುನಾವಣೆ ( President Of Election 2022 ) ನಡೆಯಲಿದೆ. ಬುಡಕಟ್ಟು ಸಮುದಾಯದ ನಾಯಕಿ, ಜಾರ್ಖಂಡ್ನ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಅವರನ್ನು ಎನ್ಡಿಎ ರಾಷ್ಟ್ರಪತಿ ಚುನಾವಣೆಗೆ ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಆದಿವಾಸಿ ಸಮುದಾಯದಿಂದ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. ಹೀಗಾಗಿ ದ್ರೌಪದಿ ಹೆಸರು ಭಾರೀ ಪ್ರಚಲಿತದಲ್ಲಿದೆ. ಒಂದು ವೇಳೆ ಇವರು ಗೆದ್ದರೆ ಇತಿಹಾಸ ನಿರ್ಮಾಣ ಮಾಡೋದಂತೂ ಪಕ್ಕಾ.
RGV: ಬಾಲಿವುಡ್ಗೆ ಕೊರೊನಾ ವೈರಸ್ ಸೋಂಕಿನಂತಾದ ಕನ್ನಡ, ತೆಲುಗು ಚಿತ್ರರಂಗ: ರಾಮ್ ಗೋಪಾಲ್ ವರ್ಮ
ದ್ರೌಪದಿ ಮುರ್ಮು ಸಾಧನೆ ಏನು?
ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಸಂತಲ್ ಬುಡಕಟ್ಟು ಸಮುದಾಯದಲ್ಲಿ ಜನಿಸಿದ ದ್ರೌಪದಿ ಮುರ್ಮು ಅವರಿಗೆ 64 ವರ್ಷ ಆಗಿದೆ. ಇವರು ರಾಷ್ಟ್ರಪತಿಯಾಗಿ ಆಯ್ಕೆಯಾದರೆ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಏರುವ ಮೊದಲ ಆದಿವಾಸಿ ಮಹಿಳೆ ಎಂಬ ಖ್ಯಾತಿ ಪಡೆದಿದ್ದಾರೆ. ದ್ರೌಪದಿ ಅವರು ಜಾರ್ಖಂಡ್ ರಾಜ್ಯಪಾಲೆಯಾಗಿ ದೇಶದ ಮೊದಲ ಬುಡಕಟ್ಟು ಮಹಿಳಾ ರಾಜ್ಯಪಾಲೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಮದುವೆಯಾದಾಗ ನಟ ಧನುಷ್ಗೆ 21, ಐಶ್ವರ್ಯಾಗೆ 23; ಗಡಿಬಿಡಿಯಲ್ಲಿ ರಜನಿಕಾಂತ್ ಮಗಳ ಮದುವೆ ಮಾಡಿದ್ದೇಕೆ?
ದ್ರೌಪದಿ ಮುರ್ಮು ಕುಟುಂಬ
ಶ್ಯಾಮ ಚರಣ್ ಮುರ್ಮು ಅವರನ್ನು ವಿವಾಹವಾದ ದ್ರೌಪದಿಗೆ ಇಬ್ಬರು ಗಂಡುಮಕ್ಕಳು, ಒಬ್ಬಳು ಮಗಳು ಜನಿಸಿದ್ದರು. ದುರದೃಷ್ಟವಶಾತ್ ದ್ರೌಪದಿ ಅವರು ಇಬ್ಬರೂ ಗಂಡುಮಕ್ಕಳು ಮತ್ತು ಪತಿಯನ್ನು ಕಳೆದುಕೊಂಡಿದ್ದಾರೆ. ಮಗಳು ಮದುವೆಯಾಗಿ ಭುವನೇಶ್ವರದಲ್ಲಿ ನೆಲೆಸಿದ್ದಾರೆ.