ಆ್ಯಪ್ನಗರ

'ಕಿರಿಕ್ ಬ್ಯೂಟಿ' ರಶ್ಮಿಕಾ ಮಂದಣ್ಣ ನೀಡಿದ ಸವಾಲನ್ನು ಸ್ವೀಕರಿಸಿದ ನಟಿ ರಾಶಿ ಖನ್ನಾ!

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಈಚೆಗೆ ಒಂದು ಸವಾಲನ್ನು ತೆಲುಗು ನಟಿ ರಾಶಿ ಖನ್ನಾಗೆ ನೀಡಿದ್ದರು. ಆ ಚಾಲೆಂಜನ್ನು ಸ್ವೀಕರಿಸಿರುವ ರಾಶಿ, ಅದನ್ನು ಪೂರ್ಣಗೊಳಿಸಿದ್ದಾರೆ. ಜೊತೆಗೆ ಅವರು ಕೂಡ ಒಂದಷ್ಟು ಮಂದಿಗೆ ಸವಾಲು ಹಾಕಿದ್ದಾರೆ.

Vijaya Karnataka Web 22 Jul 2020, 1:24 pm
ನಟಿ ರಶ್ಮಿಕಾ ಮಂದಣ್ಣ ಲಾಕ್‌ಡೌನ್‌ ಸಮಯವನ್ನು ಮನೆಯಲ್ಲಿದ್ದುಕೊಂಡೇ ಕಳೆಯುತ್ತಿದ್ದಾರೆ. ಕಳೆದ 2-3 ವರ್ಷಗಳಿಂದ ಅವರು ಸಿನಿಮಾ ಶೂಟಿಂಗ್ ಅಂತ ಸಖತ್‌ ಬ್ಯುಸಿ ಆಗಿದ್ದರು. ಆದರೆ, ಈಗ ಫ್ಯಾಮಿಲಿಯೊಂದಿಗೆ ಉತ್ತಮ ಸಮಯ ಕಳೆಯುತ್ತಿದ್ದಾರೆ. ಅದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ರಶ್ಮಿಕಾ, ಈಚೆಗೆ ಬಹುಭಾಷಾ ನಟಿ ರಾಶಿ ಖನ್ನಾಗೆ ಒಂದು ಚಾಲೆಂಜ್ ಹಾಕಿದ್ದರು! ಅದನ್ನೀಗ ರಾಶಿ ಸ್ವೀಕರಿಸಿದ್ದಾರೆ!
Vijaya Karnataka Web rashmika mandanna actress rashi khanna completes green india challenge
'ಕಿರಿಕ್ ಬ್ಯೂಟಿ' ರಶ್ಮಿಕಾ ಮಂದಣ್ಣ ನೀಡಿದ ಸವಾಲನ್ನು ಸ್ವೀಕರಿಸಿದ ನಟಿ ರಾಶಿ ಖನ್ನಾ!


ಏನಿದು ಚಾಲೆಂಜ್‌?
ಸೋಶಿಯಲ್‌ ಮೀಡಿಯಾದಲ್ಲಿ ಈಚೆಗೆ ಗ್ರೀನ್‌ ಇಂಡಿಯಾ ಚಾಲೆಂಜ್‌ ಸಖತ್ ಟ್ರೆಂಡಿಂಗ್‌ನಲ್ಲಿದೆ. ಈ ಚಾಲೆಂಜ್‌ನ ಪ್ರಕಾರ, ಮೂರು ಗಿಡಗಳನ್ನು ನೆಡಬೇಕು. ಆನಂತರ ಅದರ ಫೋಟೋಗಳನ್ನು ಅಪ್‌ಲೋಡ್‌ ಮಾಡಿ, ಮೂರು ಜನಕ್ಕೆ ಈ ಸವಾಲನ್ನು ದಾಟಿಸಬೇಕು. ಈ ಹಿಂದೆ ನಟಿ ಸಮಂತಾ ಅಕ್ಕಿನೇನಿ, ಮಾವ ನಾಗಾರ್ಜುನ ಜೊತೆ ಸೇರಿಕೊಂಡು ಮೂರು ಗಿಡಗಳನ್ನು ನೆಟ್ಟು, ರಶ್ಮಿಕಾಗೆ ಈ ಸವಾಲನ್ನು ದಾಟಿಸಿದ್ದರು. ಅದನ್ನು ಪೂರೈಸಿದ್ದ ರಶ್ಮಿಕಾ, ನಟಿ ರಾಶಿ ಖನ್ನಾಗೆ ಸವಾಲು ಹಾಕಿದ್ದರು.

ಸವಾಲು ಸ್ವೀಕಾರ ಮಾಡಿದ ರಾಶಿ
ರಶ್ಮಿಕಾ ಮಂದಣ್ಣ ನೀಡಿದ್ದ ಈ ಗಿಡ ನೆಡುವ ಚಾಲೆಂಜ್‌ ಅನ್ನು ರಾಶಿ ಪೂರೈಸಿದ್ದಾರೆ. 'ನನ್ನನ್ನು ಈ ಸವಾಲಿಗೆ ನಾಮಿನೇಟ್ ಮಾಡಿದ್ದಕ್ಕಾಗಿ ಕ್ಯೂಟಿ ರಶ್ಮಿಕಾ ಮಂದಣ್ಣಗೆ ಥ್ಯಾಂಕ್ಸ್‌. ನಾನೀಗ ಈ ಸವಾಲನ್ನು ನಟಿ ರಾಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್‌ವಾಲ್, ತಮನ್ನಾ ಭಾಟಿಯಾ ಅವರಿಗೆ ರವಾನಿಸುತ್ತಿದ್ದೇನೆ. ಅದೇ ರೀತಿ ಪೋಸ್ಟ್ ಓದುತ್ತಿರುವ ಎಲ್ಲರೂ ಕೂಡ ಗಿಡಗಳನ್ನು ನೆಡಿ. ಗಿಡಗಳನ್ನು ನೆಡುವಂತೆ ನಿಮ್ಮ ಕುಟುಂಬ ಸದಸ್ಯರಿಗೆ ಮತ್ತು ಸ್ನೇಹಿತರಿಗೆ ಟ್ಯಾಗ್ ಮಾಡಿ' ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ರಶ್ಮಿಕಾ ಖುಷಿ ವ್ಯಕ್ತಪಡಿಸಿದ್ದಾರೆ.

ರಶ್ಮಿಕಾ ಮಂದಣ್ಣ ಜೊತೆ ತೆರೆ ಹಂಚಿಕೊಳ್ಳಲಿರುವ ಆದಿ ಪಿನಿಸೆಟ್ಟಿ! ಇದ್ಯಾವ ಸಿನಿಮಾ? ಏನ್‌ ಕಥೆ?

ಅಂದಹಾಗೆ, ರಶ್ಮಿಕಾ ಈ ಸವಾಲನ್ನು ರಾಶಿ ಖನ್ನಾಗೆ ಮಾತ್ರವಲ್ಲ, ಕನ್ನಡದ ನಟಿ ಆಶಿಕಾ ರಂಗನಾಥ್ ಮತ್ತು ಕಲ್ಯಾಣಿ ಪ್ರಿಯದರ್ಶನ್ ಅವರಿಗೂ ನೀಡಿದ್ದಾರೆ. ಇನ್ನು, ರಶ್ಮಿಕಾ ನಟಿಸಿರುವ 'ಪೊಗರು' ಚಿತ್ರವು ರಿಲೀಸ್‌ಗೆ ರೆಡಿ ಇದ್ದು, ಕೊರೊನಾ ಕಾರಣದಿಂದ ತಡವಾಗುತ್ತಿದೆ. ಅತ್ತ ತೆಲುಗಿನಲ್ಲಿ ಅವರು ನಟಿಸಲಿರುವ ಬಹುನಿರೀಕ್ಷಿತ 'ಪುಷ್ಪ' ಚಿತ್ರದ ಚಿತ್ರೀಕರಣ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಅಲ್ಲು ಅರ್ಜುನ್ ಈ ಸಿನಿಮಾದ ಹೀರೋ.

ಸಮಂತಾ ಹೇಳಿದ್ದಕ್ಕೆ ಕೈ ಕೆಸರು ಮಾಡಿಕೊಂಡ ರಶ್ಮಿಕಾ! ಅಭಿಮಾನಿಗಳೂ ಹಿಂಗೇ ಮಾಡಬೇಕಂತೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌