ಆ್ಯಪ್ನಗರ

ಅಲ್ಲು ಅರ್ಜುನ್‌ಗೆ ಕ್ಷಮೆ ಕೇಳಿದ್ದೇಕೆ ರಶ್ಮಿಕಾ ಮಂದಣ್ಣ? ಅವರು ಮಾಡಿದ ತಪ್ಪೇನು?

ಅಲ್ಲು ಅರ್ಜುನ್ ನಟನೆಯ 'AA20' ಸಿನಿಮಾದಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈಗಾ ವರು ಇದೇ ವಿಚಾರವಾಗಿ ಕ್ಷಮೆ ಕೇಳಿದ್ದಾರೆ, ಕ್ಷಮೆ ಕೇಳುವಂತಹ ಯಾವ ತಪ್ಪನ್ನು ರಶ್ಮಿಕಾ ಮಾಡಿದ್ದಾರೆ?

Vijaya Karnataka Web 30 Oct 2019, 4:28 pm
ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ನಟನೆಯ 'AA20' ಸಿನಿಮಾದ ಮುಹೂರ್ತ ಕಾರ್ಯ ಹೈದರಾಬಾದ್‌ನಲ್ಲಿ ನೆರವೇರಿದೆ. ಈ ಚಿತ್ರದ ನಿರ್ದೇಶನ ಜವಾಬ್ದಾರಿ ಹೊತ್ತವರು ಸುಕುಮಾರ್. ಅಲ್ಲು ಅರ್ಜುನ್‌ಗೆ ಜೊತೆಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.
Vijaya Karnataka Web allu arjun


"ಬೇರೆ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರಿಂದ AA20 ಸಿನಿಮಾದ ಮುಹೂರ್ತ ಕಾರ್ಯದಲ್ಲಿ ಭಾಗಿಯಾಗಲಿಲ್ಲ, ಕ್ಷಮಿಸಿ, ಆದರೆ ನಾನು ಈ ಸಿನಿಮಾ ಮಾಡಲು ತುಂಬ ಉತ್ಸುಕಳಾಗಿದ್ದೇನೆ" ಎಂದು ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ.

ವಿಜಯ ಸೇತುಪತಿ ಅವರು ಈ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈ ವಿಚಾರ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ.

ಪುಟಾಣಿ ತಂಗಿ ಜತೆ ಮಿಂಚಿದ ರಶ್ಮಿಕಾ

ಇತ್ತೀಚೆಗಷ್ಟೇ ಸುಕುಮಾರ್ ಅವರು ಸಿನಿಮಾದಲ್ಲಿ ನಟಿಸುವಂತೆ ವಿಜಯ್ ಸೇತುಪತಿ ಅವರನ್ನು ಕೇಳಿದ್ದಾರಂತೆ. ನಟ ವಿಜಯ್ ಸೇತುಪತಿ ಈಗಾಗಲೇ ಲೋಕೇಶ್ ಕನಕರಾಜ್‌ ನಿರ್ದೇಶನದ 'ದಳಪತಿ 64' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಮುತ್ತಂಸೆಟ್ಟಿ ಮೀಡಿಯಾ ಸಹಕಾರದೊಂದಿಗೆ ಮೈತ್ರಿ ಮೂವಿ ಮೇಕರ್ಸ್ಅವರು AA20 ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ದೇವಿಶ್ರೀ ಪ್ರಸಾದ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ತಮಿಳಿನ ಟಾಪ್ ಹೀರೋಗೆ ನೋ ಹೇಳಿದರೇ ನಟಿ ರಶ್ಮಿಕಾ ಮಂದಣ್ಣ?

ಈ ಹಿಂದೆ 'ಆರ್ಯ, ಆರ್ಯ 2' ಸಿನಿಮಾಗಳಿಗೆ ಸುಕುಮಾರ್ ನಿರ್ದೇಶನ ಮಾಡಿದ್ದರು. ಮೂರನೇ ಬಾರಿಗೆ ಅಲ್ಲು ಅರ್ಜುನ್ ಅವರ 20ನೇ ಚಿತ್ರದ ಮೂಲಕ ಅಲ್ಲು ಮತ್ತು ಸುಕುಮಾರ್ ಒಂದಾಗಿದ್ದಾರೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಪರ್ವತಗಳಲ್ಲಿ ರಕ್ತಚಂದನ ಕಳ್ಳಸಾಗಾಣಿಕೆ ಸುತ್ತವೇ ಕಥೆ ಸಾಗಲಿದೆ.
ರಶ್ಮಿಕಾ ಮಂದಣ್ಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌