ಆ್ಯಪ್ನಗರ

ಅಬ್ಬಬ್ಬಾ..! ಇಷ್ಟೊಂದು ಆಸ್ತಿಯ ಒಡತಿ ರಶ್ಮಿಕಾ; ಕೊಡಗಿನ ಬೆಡಗಿಯ ಐಷಾರಾಮಿ ಜೀವನದ ವಿವರ ಇಲ್ಲಿದೆ

ಕೆಲವೇ ವರ್ಷಗಳ ಹಿಂದೆ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಅತಿ ಕಡಿಮೆ ಸಮಯದಲ್ಲೇ ದೊಡ್ಡ ಮಟ್ಟದ ಖ್ಯಾತಿ ಗಳಿಸಿದರು. ಹೆಸರಿನ ಜೊತೆಗೆ ಅಪಾರ ಹಣ ಕೂಡ ಅವರಿಗೆ ಒಲಿಯಿತು.

Vijaya Karnataka Web 17 Jan 2020, 1:30 pm
ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ ನಡೆದ ಹಿನ್ನೆಲೆಯಲ್ಲಿ ಭಾರಿ ಚರ್ಚೆ ಶುರುವಾಗಿದೆ. ಹಾಗಾದರೆ ಅವರ ಕುಟುಂಬದ ಆಸ್ತಿ ಎಷ್ಟಿರಬಹುದು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಗರಿಗೆದರಿದೆ. ಒಂದೊಂದೇ ವಿವರಗಳು ಈಗ ಹೊರಬರುತ್ತಿವೆ. ಕೆಲವೇ ವರ್ಷಗಳ ಹಿಂದೆ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಅತಿ ಕಡಿಮೆ ಸಮಯದಲ್ಲೇ ದೊಡ್ಡ ಮಟ್ಟದ ಖ್ಯಾತಿ ಗಳಿಸಿದರು. ಹೆಸರಿನ ಜೊತೆಗೆ ಅಪಾರ ಹಣ ಕೂಡ ಅವರಿಗೆ ಒಲಿಯಿತು. ಬಹುಭಾಷೆಯಲ್ಲಿ ಗುರುತಿಸಿಕೊಂಡಿರುವ ರಶ್ಮಿಕಾ ಭಾರಿ ಸಂಭಾವನೆ ಪಡೆಯುತ್ತಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ಅವರ ಆದಾಯವೂ ಹೆಚ್ಚುತ್ತಿದೆ.
Vijaya Karnataka Web rashmika mandanna family property details
ಅಬ್ಬಬ್ಬಾ..! ಇಷ್ಟೊಂದು ಆಸ್ತಿಯ ಒಡತಿ ರಶ್ಮಿಕಾ; ಕೊಡಗಿನ ಬೆಡಗಿಯ ಐಷಾರಾಮಿ ಜೀವನದ ವಿವರ ಇಲ್ಲಿದೆ


'ಕಿರಿಕ್‌ ಪಾರ್ಟಿ' ನಟಿಯ ಐಷಾರಾಮಿ ಕಾರುಗಳು!

ಸೆಲೆಬ್ರಿಟಿಗಳೆಂದ ಮೇಲೆ ಅದ್ದೂರಿ ಕಾರುಗಳು ಇರಲೇಬೇಕು. ವಾಹನಗಳ ಬಗ್ಗೆ ಕ್ರೇಜ್‌ ಇದ್ದೇ ಇರುತ್ತದೆ. ರಶ್ಮಿಕಾ ಮಂದಣ್ಣ ಮನೆಯಲ್ಲೂ ಐಷಾರಾಮಿ ಕಾರುಗಳಿವೆ. ಅವುಗಳ ಪೈಕಿ ಹ್ಯುಂಡೈ ಸೆಂಟಫೈ ಮತ್ತು ಆಡಿ 3 ಕ್ಯೂ ಪ್ರಮುಖವಾದವು. ಮಾರುಕಟ್ಟೆಯಲ್ಲಿ ಹ್ಯುಂಡೈ ಸೆಂಟಫೈ ಕಾರಿಗೆ 25ರಿಂದ 30 ಲಕ್ಷ ರೂ. ಬೆಲೆ ಇದೆ. ಅದೇ ರೀತಿ ಆಡಿ 3 ಕ್ಯೂ ಬೆಲೆ 40 ಲಕ್ಷ ರೂ. ಇದೆ. ಶೂಟಿಂಗ್‌ ಸಲುವಾಗಿ ಹೆಚ್ಚು ಸಮಯ ಹೈದರಾಬಾದ್‌ನಲ್ಲಿಯೇ ರಶ್ಮಿಕಾ ಇರುತ್ತಾರೆ.

ಹಲವು ಕಡೆ ಇದೆ ಆಸ್ತಿ

ಕೊಡಗಿನ ಹಲವು ಕಡೆಗಳಲ್ಲಿ ರಶ್ಮಿಕಾ ಮಂದಣ್ಣ ಕುಟುಂಬ ಆಸ್ತಿ ಹೊಂದಿದೆ. ಕುಕ್ಲೂರು ಗ್ರಾಮದಲ್ಲಿ ಎರಡು ಅಂತಸ್ತಿನ ಕೋಟಿ ರೂ. ಮೌಲ್ಯದ ಕಟ್ಟಡ ಇದೆ. ಬಿಟ್ಟಂಗಾಲ ಗ್ರಾಮದಲ್ಲಿ ಅಂದಾಜು 5 ಎಕರೆ ಜಮೀನಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಸತಿ ಶಾಲೆ ನಿರ್ಮಾಣ ಆಗುತ್ತಿದೆ. ಜೊತೆಗೆ ಒಂದು ಪೆಟ್ರೋಲ್‌ ಬಂಕ್‌ ಕಾಮಗಾರಿಯೂ ಚಾಲ್ತಿಯಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

24 ಎಕರೆ ಕಾಫಿ ತೋಟ!

ಉದ್ಯಮಿ ಆಗಿರುವ ರಶ್ಮಿಕಾ ಮಂದಣ್ಣ ತಂದೆ ಮದನ್‌ ಮಂದಣ್ಣ ಕಾಫಿ ಕೃಷಿಯಲ್ಲೂ ತೊಡಗಿಕೊಂಡಿದ್ದಾರೆ. ವಿರಾಜಪೇಟೆಯ ಹಳ್ಳಿಯೊಂದರಲ್ಲಿ ಬರೋಬ್ಬರಿ 24 ಎಕರೆ ಕಾಫಿ ತೋಟ ಕೂಡ ಹೊಂದಿದ್ದಾರೆ. ಇದರ ಜೊತೆಗೆ ವಿರಾಜಪೇಟೆಯಲ್ಲಿ ಒಂದು ಪಾರ್ಟಿ ಹಾಲ್‌ ಅವರ ಒಡೆತನದಲ್ಲಿದೆ. ಅದರಿಂದ ಲಕ್ಷಾಂತರ ರೂ. ಬಾಡಿಗೆ ಬರುತ್ತಿದೆ. ಇತ್ತೀಚೆಗಷ್ಟೇ ಒಂದು ಮನೆಯನ್ನು ಒಂದೂಕಾಲು ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಕೂಡ ಇದೆ.

ಹಲವು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಖತ್‌ ಬೇಡಿಕೆ ಸೃಷ್ಟಿಸಿಕೊಂಡಿರುವ ರಶ್ಮಿಕಾ ಎಲ್ಲ ಸ್ಟಾರ್‌ ನಟರ ಸಿನಿಮಾಗಳಲ್ಲಿ ಅಭಿನಯಿಸುವ ಚಾನ್ಸ್‌ ಗಿಟ್ಟಿಸಿಕೊಳ್ಳುತ್ತ ಮುಂದುವರಿಯುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ 'ಸರಿಲೇರು ನೀಕೆವ್ವರು' ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿ ಆಗಿದೆ. ತೆಲುಗಿನ 'ಭೀಷ್ಮ', ತಮಿಳಿನ 'ಸುಲ್ತಾನ್‌' ಹಾಗೂ ಅಲ್ಲು ಅರ್ಜನ್‌ ಜೊತೆಗಿನ ಇನ್ನೂ ಶೀರ್ಷಿಕೆ ಅಂತಿಮವಾಗದ ಸಿನಿಮಾದಲ್ಲೂ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಎಲ್ಲ ಚಿತ್ರಗಳಿಂದಲೂ ಅವರಿಗೆ ದೊಡ್ಡ ಮೊತ್ತದ ಸಂಭಾವನೆ ಸಿಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌