ಆ್ಯಪ್ನಗರ

ಸದ್ದಿಲ್ಲದೇ ಹೊಸ ತೆಲುಗು ಸಿನಿಮಾ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ! ಹಬ್ಬದ ದಿನವೇ ಮುಹೂರ್ತ

'ಕೊಡಗಿನ' ಕುವರಿ ರಶ್ಮಿಕಾ ಮಂದಣ್ಣ ಕೈಯಲ್ಲಿ ಈಗಾಗಲೇ ಸಿಕ್ಕಾಪಟ್ಟೆ ಸಿನಿಮಾಗಳಿವೆ. ಈ ಮಧ್ಯೆ ವಿಜಯ ದಶಮಿಯ ಹಬ್ಬದ ಸಮಯದಲ್ಲಿ ಮತ್ತೊಂದು ಸಿನಿಮಾಕ್ಕೆ ಚಾಲನೆ ನೀಡಿದ್ದಾರೆ. ಆ ಕುರಿತು ಪೂರ್ಣ ಮಾಹಿತಿ ಇಲ್ಲಿದೆ.

Vijaya Karnataka Web 26 Oct 2020, 1:41 pm
ನಟಿ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದರೂ, ಅವರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು ಮಾತ್ರ ತೆಲುಗಿನಲ್ಲಿ. ಆದರಲ್ಲೂ ಅವರಿಗೆ ಅಲ್ಲಿ ಮಹೇಶ್ ಬಾಬು, ನಾನಿ, ವಿಜಯ್ ದೇವರಕೊಂಡ, ಅಲ್ಲು ಅರ್ಜುನ್ ಅವರಂತಹ ಸ್ಟಾರ್ ನಟರ ಸಿನಿಮಾಗಳಲ್ಲಿ ಅವಕಾಶ ಸಿಕ್ಕಮೇಲಂತೂ ರಶ್ಮಿಕಾ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಸದ್ಯ ಅವರೊಂದು ಹೊಸ ತೆಲುಗು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ವಿಶೇಷವೆಂದರೆ, ವಿಜಯ ದಶಮಿಯ ಈ ಶುಭ ಸಂದರ್ಭದಲ್ಲಿ ಸಿನಿಮಾದ ಮುಹೂರ್ತ ಕೂಡ ನೆರವೇರಿದೆ!
Vijaya Karnataka Web rashmika


ಶರ್ವಾನಂದ ಜೊತೆಗೆ ರಶ್ಮಿಕಾ
ತೆಲುಗು ನಟ ಶರ್ವಾನಂದ್‌, ಈಚೆಗೆ ಬರೀ ಸೋಲನ್ನೆ ಕಂಡಿದ್ದಾರೆ. ಹಿಂದಿನ 'ರಣರಂಗಂ', 'ಜಾನು' ಸಿನಿಮಾಗಳು ಅಂದುಕೊಂಡ ಮಟ್ಟಕ್ಕೆ ಕಲೆಕ್ಷನ್ ಮಾಡಿಲ್ಲ. ಇದೀಗ ಅವರು 'ಆಡಲ್ಲೂ ಮೀಕು ಜೋಹಾರ್ಲು' ಹೆಸರಿನ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಇದರಲ್ಲಿ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಭಾನುವಾರ (ಅ.25) ಈ ಸಿನಿಮಾದ ಮುಹೂರ್ತ ನೆರವೇರಿದ್ದು, ಅದರ ಫೋಟೋಗಳನ್ನು ಶರ್ವಾ ಹಂಚಿಕೊಂಡಿದ್ದಾರೆ.

ಸದ್ಯ ಶರ್ವಾ ಕೈಯಲ್ಲಿ 'ಶ್ರೀಕಾರಂ', 'ಮಹಾ ಸಮುದ್ರಂ' ಹಾಗೂ ಇನ್ನೂ ಹೆಸರಿಡದ ಸಿನಿಮಾವೊಂದು ಇದೆ. ಅದರ ಜೊತೆಗೆ ಈಗ 'ಆಡಲ್ಲೂ ಮೀಕು ಜೋಹಾರ್ಲು' ಹೊಸ ಸೇರ್ಪಡೆಯಾಗಿದೆ. ಇದಕ್ಕೆ ಕಿಶೋರ್ ತಿರುಮಲ ನಿರ್ದೇಶನ ಮಾಡಲಿದ್ದಾರೆ. ಸದ್ಯ ಟಾಲಿವುಡ್‌ನಲ್ಲಿ ಲಕ್ಕಿ ಚಾರ್ಮ್‌ ಎನಿಸಿಕೊಂಡಿರುವ ನಟಿ ರಶ್ಮಿಕಾ. ಅವರು ನಟಿಸಿದ ಸಿನಿಮಾಗಳೆಲ್ಲ ಸೂಪರ್ ಹಿಟ್ ಎನಿಸಿಕೊಳ್ಳುತ್ತಿವೆ. ಹಾಗಾಗಿ, ಆ ಮೂಲಕವಾದರೂ, ಶರ್ವಾನಂದ್‌ಗೆ ಈ ಬಾರಿಗೆ ಗೆಲುವು ಸಿಗಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆ.

ಇನ್ನು, ರಶ್ಮಿಕಾ ಕೈತುಂಬ ಅವಕಾಶಗಳನ್ನು ಇಟ್ಟುಕೊಂಡಿದ್ದಾರೆ. ಕನ್ನಡದಲ್ಲಿ ನಟಿಸಿರುವ 'ಪೊಗರು' ಸಿನಿಮಾ ರಿಲೀಸ್‌ಗೆ ರೆಡಿ ಇದ್ದರೆ, ಅತ್ತ ಮೊದಲ ಬಾರಿಗೆ ತಮಿಳಿನಲ್ಲಿ ನಟ ಕಾರ್ತಿ ಜೊತೆಗೆ ಅಭಿನಯಿಸಿರುವ 'ಸುಲ್ತಾನ್‌' ಕೂಡ ಶೂಟಿಂಗ್ ಮುಗಿಸಿಕೊಂಡು, ಅ.26ರಂದು ಫಸ್ಟ್‌ಲುಕ್ ಸಹ ರಿಲೀಸ್ ಮಾಡುತ್ತಿದೆ. ಈ ಮಧ್ಯೆ ಬಹುನಿರೀಕ್ಷಿತ ಅಲ್ಲು ಅರ್ಜುನ್ ನಾಯಕತ್ವದ 'ಪುಷ್ಪ' ಸಿನಿಮಾದ ಶೂಟಿಂಗ್ ಶುರುವಾಗುವುದನ್ನೇ ರಶ್ಮಿಕಾ ಎದುರು ನೋಡುತ್ತಿದ್ದಾರೆ. ಸದ್ಯ ಹೈದರಾಬಾದ್‌ನಲ್ಲೇ ವಾಸವಾಗಿರುವ ರಶ್ಮಿಕಾ, ಟಾಲಿವುಡ್‌ನಲ್ಲೇ ಇನ್ನಷ್ಟು ಬ್ಯುಸಿ ಆಗುವ ಸೂಚನೆ ಇದೆ.

ಹೈದರಾಬಾದ್‌ ಪ್ರವಾಹಕ್ಕೆ ಮರುಗಿದ ರಶ್ಮಿಕಾ ಮಂದಣ್ಣ ಉತ್ತರ ಕರ್ನಾಟಕವನ್ನು ಮರೆತೇ ಬಿಟ್ರಾ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌