ಆ್ಯಪ್ನಗರ

ತಲ್ವಾರ್ ಪೇಟೆಯಲ್ಲಿ 'ಸೀರಿಯಲ್ ಸೆಟ್' ಹಾಕೋದ್ರಲ್ಲಿ ಬ್ಯುಸಿಯಾದ ನಟ ರವಿಶಂಕರ್!

ಕನ್ನಡ ಚಿತ್ರರಂಗದಲ್ಲಿ ವಿಲನ್ ಪಾತ್ರಗಳ ಮೂಲಕ ಫೇಮಸ್ ಆಗಿರುವ ನಟ ರವಿಶಂಕರ್ ಈಗ ಸೀರಿಯಲ್ ಸೆಟ್‌ ಚಂದ್ರಪ್ಪ ಅನ್ನೋ ಪಾತ್ರ ಮಾಡಿದ್ದಾರೆ. ಇಂದು (ನ.28) ಅವರ ಜನ್ಮದಿನ. ಆ ಹಿನ್ನೆಲೆಯಲ್ಲಿ ಅವರ ಲುಕ್ ರಿಲೀಸ್ ಮಾಡಲಾಗಿದೆ.

Vijaya Karnataka Web 28 Nov 2020, 7:20 pm
ಸ್ಯಾಂಡಲ್‌ವುಡ್‌ನ ಬೇಡಿಕೆಯ ಪೋಷಕ ನಟರಲ್ಲಿ ರವಿಶಂಕರ್‌ ಕೂಡ ಒಬ್ಬರು. ಮೊದಲು ನಿರ್ದೇಶಕರಾಗಿದ್ದ ಅವರು ಆನಂತರ ಖಳ ನಟರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ನಂತರ ಹಾಸ್ಯ ಪಾತ್ರಗಳ ಮೂಲಕವೂ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇಂಥ ಪ್ರತಿಭಾನ್ವಿತ ನಟನಿಗೆ ಇಂದು (ನವೆಂಬರ್‌ 28) ಜನ್ಮದಿನ. ವಿಶೇಷವೆಂದರೆ, ಅವರೀಗ 'ತಲ್ವಾರ್‌ಪೇಟೆ'ಯಲ್ಲಿ ಸೀರಿಯಲ್ ಸೆಟ್ ಹಾಕುವುದರಲ್ಲಿ ಬ್ಯುಸಿ ಆಗಿದ್ದಾರೆ.
Vijaya Karnataka Web ravi shankar


ರವಿಶಂಕರ್ ಸೀರಿಯಲ್ ಸೆಟ್ ಹಾಕುವುದರಲ್ಲಿ ಬ್ಯುಸಿ ಆಗಿರುವುದು ರಿಯಲ್‌ ಲೈಫ್‌ನಲ್ಲಿ ಅಲ್ಲ, ರೀಲ್ ಲೈಫ್‌ನಲ್ಲಿ! ಹೌದು, ಡಾ. ಶೈಲೇಶ್ ಕುಮಾರ್ ನಿರ್ಮಾಣ ಮಾಡುತ್ತಿರುವ 'ತಲ್ವಾರ್ ಪೇಟೆ' ಚಿತ್ರದಲ್ಲಿ ಸೀರಿಯಲ್ ಸೆಟ್ ಚಂದ್ರಪ್ಪ ಅನ್ನೋ ಪಾತ್ರವನ್ನು ರವಿಶಂಕರ್ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ವಸಿಷ್ಠ ಸಿಂಹ ಹೀರೋ ಆಗಿದ್ದು, ನಾಯಕಿಯಾಗಿ ಸೋನಲ್ ಮಂಥೇರೊ ನಟಿಸುತ್ತಿದ್ದಾರೆ. ನವೆಂಬರ್ 28 ರವಿಶಂಕರ್ ಅವರ ಹುಟ್ಟುಹಬ್ಬ ಆಗಿರುವುದರಿಂದ ಚಿತ್ರದಲ್ಲಿನ ಅವರ ಈ ಲುಕ್‌ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ಕೆ. ಲಕ್ಷ್ಮಣ್ ಶ್ರೀ ರಾಮ್ ಈ ಸಿನಿಮಾದ ನಿರ್ದೇಶಕರು.

ಚಿತ್ರದಲ್ಲಿ ಹರೀಶ್ ಉತ್ತಮನ್, ಯಶವಂತ್ ಶೆಟ್ಟಿ, ಆಶಾ ಲತಾ, ವೀಣಾ ಪೊನ್ನಪ್ಪ, ಸುರೇಶ್ ಚಂದ್ರ, ಪ್ರದೀಪ್ ಪೂಜಾರಿ, ರಜನಿಕಾಂತ್, ಮನು ಮುಂತಾದವರು ನಟಿಸುತ್ತಿದ್ದಾರೆ. 'ಮಫ್ತಿ', 'ಉಗ್ರಂ' ಚಿತ್ರಗಳಿಗೆ ಕಥೆ, ಸಂಭಾಷಣಾ ಹಾಗೂ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು ಕೆ. ರಾಮ್ ಶ್ರೀಲಕ್ಷ್ಮಣ್. 'ತಲ್ವಾರ್ ಪೇಟೆ'ಗೂ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅವರೇ ಬರೆದಿದ್ದಾರೆ. ಎಂ.ಯು. ನಂದಕುಮಾರ್ ಛಾಯಾಗ್ರಹಣ ಮಾಡುತ್ತಿದ್ದರೆ, 'ಉಗ್ರಂ', 'ಕೆಜಿಎಫ್' ಸಿನಿಮಾಗಳಿಗೆ ಸಂಕಲನ ಮಾಡಿರುವ ಶ್ರೀಕಾಂತ್, ಈ ಸಿನಿಮಾಕ್ಕೂ ಕೆಲಸ ಮಾಡುತ್ತಿದ್ದಾರೆ. ಡಿಫರೆಂಟ್ ಡ್ಯಾನಿ, ರಾಮ್-ಲಕ್ಷ್ಮಣ್ ಸಾಹಸ ನಿರ್ದೇಶನ, ಮುರಳಿ, ಮೋಹನ್, ಧನು ನೃತ್ಯ ನಿರ್ದೇಶನ, ರಘು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಹರ್ಷವರ್ಧನ್ ರಾಜ್ ಸಂಗೀತ ನೀಡಿರುವ ಹಾಡುಗಳಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.

ಪೊಲೀಸ್ ಅಧಿಕಾರಿಗಳ ಗೆಟಪ್‌ನಲ್ಲಿ ಮುಖಾಮುಖಿ ಆಗಲಿದ್ದಾರೆ ಕಿಶೋರ್-ವಸಿಷ್ಠ ಸಿಂಹ!

ಇನ್ನು, ರವಿಶಂಕರ್ ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಾದ 'ಕೋಟಿಗೊಬ್ಬ 3', 'ರಾಬರ್ಟ್' ಹಾಗೂ 'ಪೊಗರು' ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಸಿನಿಮಾಗಳು ಇನ್ನಷ್ಟೇ ತೆರೆಕಾಣಬೇಕಿದೆ. ಈಚೆಗೆ ತಮಿಳಿನಲ್ಲಿ 'ಉತ್ರಾನ್' ಅನ್ನೋ ಸಿನಿಮಾದಲ್ಲೂ ಅವರು ನಟಿಸಿದ್ದರು. ಜೊತೆಗೆ ಈಗಲೂ ಅವರು ತೆಲುಗಿನಲ್ಲಿ ಡಬ್ಬಿಂಗ್ ಕಲಾವಿದರಾಗಿ ಸಿಕ್ಕಾಪಟ್ಟೆ ಬೇಡಿಕೆ ಉಳಿಸಿಕೊಂಡಿದ್ದಾರೆ. 'ತಲ್ವಾರ್‌ ಪೇಟೆ' ಸಿನಿಮಾದ ಹೀರೋ ವಸಿಷ್ಠ ಈಚೆಗೆ ತೆಲುಗಿನಲ್ಲಿ 'ಓಡೆಲ ರೈಲ್ವೆ ಸ್ಟೇಷನ್‌' ಸಿನಿಮಾದಲ್ಲಿ ನಟಿಸಿದ್ದು, ಅದರ ಫಸ್ಟ್‌ ಲುಕ್ ಕೂಡ ರಿಲೀಸ್ ಆಗಿದೆ. ಜೊತೆಗೆ ಕನ್ನಡದಲ್ಲಿ ನಟ ಕಿಶೋರ್ ಅವರೊಂದಿಗೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ ಬಳಿಕ ಟಾಲಿವುಡ್‌ಗೆ ಕಾಲಿಟ್ಟ ಖ್ಯಾತ ನಟ ವಸಿಷ್ಠ ಸಿಂಹ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌