ಆ್ಯಪ್ನಗರ

ರತ್ನಾಕರನಿಗೆ ಜೊತೆಯಾದ 'ಮಂಗಳೂರು ಬೆಡಗಿ'; ಡಾಲಿ ಧನಂಜಯ ಸಿನಿಮಾಕ್ಕೆ ಹೀರೋಯಿನ್ ಫಿಕ್ಸ್‌

'ಡಾಲಿ' ಧನಂಜಯ ಈಗ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರು 'ರತ್ನನ್ ಪ್ರಪಂಚ' ಸಿನಿಮಾದಲ್ಲಿ ರತ್ನಾಕರ ಅನ್ನೋ ಪಾತ್ರ ಮಾಡುತ್ತಿದ್ದಾರೆ. ಈಗ ಆ ಸಿನಿಮಾಕ್ಕೆ ನಾಯಕಿ ಸೆಲೆಕ್ಟ್ ಆಗಿದ್ದಾರೆ.

Vijaya Karnataka Web 27 Aug 2020, 12:01 pm
ಕೆಲ ದಿನಗಳ ಹಿಂದಷ್ಟೇ ನಟ 'ಡಾಲಿ' ಧನಂಜಯ ನಾಯಕತ್ವದಲ್ಲಿ 'ರತ್ನನ್ ಪ್ರಪಂಚ' ಸಿನಿಮಾ ಘೋಷಣೆ ಆಗಿತ್ತು. ಮಧ್ಯಮ ವರ್ಗದ ಹುಡುಗನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಧನಂಜಯ ಅವರ ಫಸ್ಟ್‌ ಲುಕ್ ಪೋಸ್ಟರ್ ಸಹ ರಿಲೀಸ್ ಮಾಡಿತ್ತು ಚಿತ್ರತಂಡ. ಇಲ್ಲಿ ಅಮ್ಮ-ಮಗನ ಸೆಂಟಿಮೆಂಟ್ ಜಾಸ್ತಿ ಇದೆ ಅನ್ನೋದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಆದರೆ, ಇದುವರೆಗೂ ಧನಂಜಯಗೆ ಜೋಡಿಯಾಗಿ ಯಾರು ನಟಿಸಲಿದ್ದಾರೆ ಅನ್ನೋದು ಮಾತ್ರ ಬಹಿರಂಗಗೊಂಡಿರಲಿಲ್ಲ. ಇದೀಗ ಅದಕ್ಕೂ ಉತ್ತರ ಸಿಕ್ಕಿದೆ. 'ಮಂಗಳೂರು ಬೆಡಗಿ' ರೆಬಾ ಜಾನ್‌ 'ರತ್ನನ್ ಪ್ರಪಂಚ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
Vijaya Karnataka Web reba john plays female lead in dhananjay starrer rathnan prapancha movie
ರತ್ನಾಕರನಿಗೆ ಜೊತೆಯಾದ 'ಮಂಗಳೂರು ಬೆಡಗಿ'; ಡಾಲಿ ಧನಂಜಯ ಸಿನಿಮಾಕ್ಕೆ ಹೀರೋಯಿನ್ ಫಿಕ್ಸ್‌


ಯಾರು ಈ ರೆಬಾ?
ಮೂಲತಃ ಮಂಗಳೂರಿನವರಾದ ರೆಬಾ, ಓದಿದ್ದು ಬೆಂಗಳೂರಿನಲ್ಲಿ. ಮೊದಲು ಬಣ್ಣ ಹಚ್ಚಿದ್ದು ಮಲಯಾಳಂನಲ್ಲಿ. 2016ರಲ್ಲಿ ತೆರೆಕಂಡ 'ಜಾಕೋಬಿಂಟೆ ಸ್ವರ್ಗರಾಜ್ಯಂ' ಚಿತ್ರದ ಮೂಲಕ ಎಂಟ್ರಿ ಕೊಟ್ಟ ರೆಬಾ, ಅನಂತರ ಮಲಯಾಳಂ ಮತ್ತು ತಮಿಳಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ತೆರೆಕಂಡ ವಿಜಯ್ ನಟನೆಯ 'ಬಿಗಿಲ್‌' ಚಿತ್ರದಲ್ಲಿ ಅನಿತಾ ಎಂಬ ಪಾತ್ರವನ್ನು ರೆಬಾ ಮಾಡಿದ್ದರು. ಸದ್ಯ ಅವರ ಕೈಯಲ್ಲಿ ಮೂರ್ನಾಲ್ಕು ಸಿನಿಮಾಗಳಿವೆ. ಈಗ ಅವರು ಧನಂಜಯ ಸಿನಿಮಾದಲ್ಲೂ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಅಂದಹಾಗೆ, ಇದು ಅವರ ಮೊದಲ ಕನ್ನಡ ಸಿನಿಮಾವೇನಲ್ಲ. ರಿಷಿ ನಟಿಸಿರುವ 'ಸಕಲಕಲಾ ವಲ್ಲಭ' ಚಿತ್ರದಲ್ಲಿ ಈಗಾಗಲೇ ರೆಬಾ ಬಣ್ಣ ಹಚ್ಚಿದ್ದಾರೆ. 'ರತ್ನನ್ ಪ್ರಪಂಚ' ಅವರಿಗೆ ಕನ್ನಡದಲ್ಲಿ ಎರಡನೇ ಸಿನಿಮಾ.

ರೋಹಿತ್ ಪದಕಿ ಸಿನಿಮಾ
ಈ ಹಿಂದೆ 'ದಯವಿಟ್ಟು ಗಮನಿಸಿ' ಸಿನಿಮಾ ನಿರ್ದೇಶನ ಮಾಡಿದ್ದ ರೋಹಿತ್ ಪದಕಿ, ಈಗ 'ರತ್ನನ್ ಪ್ರಪಂಚ' ಶುರು ಮಾಡಿದ್ದಾರೆ. ಈ ಬಾರಿಯೂ ಒಂದು ವಿಭಿನ್ನ ಕಥೆಯೊಂದಿಗೆ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. 'ಕೆಆರ್‌ಜಿ ಸ್ಟುಡಿಯೋಸ್‌'ನ ಕಾರ್ತಿಕ್ ಗೌಡ ಹಾಗೂ 'ಬಂಗಾರ ಸನ್‌ ಆಫ್ ಬಂಗಾರದ ಮನುಷ್ಯ' ಚಿತ್ರದ ನಿರ್ದೇಶಕ ಯೋಗಿ ಜಿ. ರಾಜ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

'ಡಾಲಿ' ಧನಂಜಯ ಹೊಸ ಸಿನಿಮಾಕ್ಕೆ ಇನ್ನಷ್ಟು 'ಪವರ್' ತುಂಬಲಿದ್ದಾರೆ ನಟ ಪುನೀತ್!

ಸದ್ಯ ಧನಂಜಯ ಇರುವ ಫಸ್ಟ್‌ ಲುಕ್‌ನಿಂದ ಸಿನಿಮಾ ಕುತೂಹಲ ಹುಟ್ಟುಹಾಕಿದೆ. ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲಿವೆ. ಆದಷ್ಟು ಬೇಗ ಶೂಟಿಂಗ್ ಶುರು ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣ ಮಾಡಿದರೆ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಲಿದ್ದಾರೆ.

ಕೈಯಲ್ಲಿ ಮಲ್ಲಿಗೆ ಹೂವು-ಪೆಪ್ಪರ್ಮೆಂಟ್‌ ಹಿಡ್ಕೊಂಡು ಬಂದ 'ಡಾಲಿ' ಧನಂಜಯ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌