ಆ್ಯಪ್ನಗರ

'ರೆಬಲ್ ಸ್ಟಾರ್‌' ಹುಟ್ಟುಹಬ್ಬಕ್ಕೆ ದರ್ಶನ್‌, ಸುದೀಪ್‌, ಪುನೀತ್‌, ಸುಮಲತಾ, ಶಿವಣ್ಣ ವಿಶ್‌ ಮಾಡಿದ್ದು ಹೇಗೆ?

ಅಂಬರೀಷ್‌ ಬಗ್ಗೆ ಕನ್ನಡ ಚಿತ್ರರಂಗದ ಪ್ರತಿಯೊಬ್ಬರಿಗೂ ಅಪಾರ ಪ್ರೀತಿ, ಗೌರವ, ಅಭಿಮಾನ. ಇಂದು (ಮೇ 29) ಅವರ ಜನ್ಮದಿನ. ಆ ಪ್ರಯುಕ್ತ ದರ್ಶನ್‌, ಸುದೀಪ್‌, ಶಿವರಾಜ್‌ಕುಮಾರ್‌ ಮುಂತಾದವರು 'ರೆಬಲ್‌ ಸ್ಟಾರ್‌'ಗೆ ಮನಪೂರ್ವಕವಾಗಿ ಶುಭಕೋರಿದ್ದಾರೆ.

Vijaya Karnataka Web 29 May 2020, 2:34 pm
'ಮಂಡ್ಯದ ಗಂಡು' ನಮ್ಮೊಂದಿಗೆ ಇದ್ದಿದ್ದರೆ ಇಂದು ಅವರು 68ನೇ ಜನ್ಮದಿನ ಆಚರಿಸಿಕೊಳ್ಳಬೇಕಿತ್ತು. ಅವರು ಭೌತಿಕವಾಗಿ ಇಲ್ಲದಿದ್ದರೂ ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತವಾಗಿರುತ್ತಾರೆ. ಸಿನಿಮಾಗಳ ಮೂಲಕ ಅವರು ಎಂದೆಂದಿಗೂ ಅಮರ. ಅಂಬಿ ಜನ್ಮದಿನಕ್ಕೆ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ವಿಶ್‌ ಮಾಡಿದ್ದಾರೆ. 'ಮಿಸ್‌ ಯೂ ಮಾಮ' ಎಂದಿದ್ದಾರೆ ಕಿಚ್ಚ ಸುದೀಪ್‌.
Vijaya Karnataka Web ಅಂಬರೀಷ್‌


ಡಾ. ರಾಜ್‌ಕುಮಾರ್‌ ಕುಟುಂಬಕ್ಕೂ ಅಂಬರೀಷ್‌ ಅವರಿಗೂ ಒಡನಾಟವಿತ್ತು. ರಾಜ್‌ ಮತ್ತು ಅಂಬಿ ಜೊತೆಗಿರುವ ಕೆಲವು ಅಪರೂಪದ ಫೋಟೋಗಳನ್ನು ಹಂಚಿಕೊಂಡಿರುವ ಪುನೀತ್‌ ರಾಜ್‌ಕುಮಾರ್‌ ಅವರು, 'ಹುಟ್ಟು ಹಬ್ಬದ ಸವಿ ನೆನಪು ಅಂಬರೀಷ್‌ ಮಾಮ' ಎಂದು ಶುಭಕೋರಿದ್ದಾರೆ. 'ಅಂಬರೀಷ್ ಸ್ನೇಹಕ್ಕೆ ಇನ್ನೊಂದು ಹೆಸರು.. ಹುಟ್ಟು ಹಬ್ಬದ ಶುಭಾಶಯಗಳು ಅಂಬರೀಷ್ ಮಾಮ' ಎಂದಿದ್ದಾರೆ ನಟ ಶಿವರಾಜ್‌ಕುಮಾರ್‌.

'ರಾಬರ್ಟ್‌' ಚಿತ್ರತಂಡದ ಪರವಾಗಿ 'ಚಾಲೆಂಜಿಂಗ್ ಸ್ಟಾರ್‌' ದರ್ಶನ್‌ ಶುಭ ಹಾರೈಸಿದ್ದಾರೆ. 'ನಮ್ ಮನಸಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿರುವ ನಮ್ಮೆಲ್ಲರ ಪ್ರೀತಿಯ ಸೀನಿಯರ್ ರೆಬೆಲ್ ಸ್ಟಾರ್, ಮಂಡ್ಯದ ಗಂಡು ಅಂಬಿ ಅಪ್ಪಾಜಿ ರವರ ಜನುಮದಿನದ ಪ್ರಯುಕ್ತ 'ರಾಬರ್ಟ್' ತಂಡದಿಂದ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು' ಎಂದು ಟ್ವೀಟ್‌ ಮಾಡಿದ್ದಾರೆ ದರ್ಶನ್‌. ಅವರಿಗೆ 'ರಾಬರ್ಟ್' ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಕೂಡ ಸಾಥ್‌ ನೀಡಿದ್ದಾರೆ.

also read: 'ನಾನ್‌ ಮಂಡ್ಯಕ್ ಹೋಗ್ಬೇಕು, ಹೋಗಿಲ್ಲ ಅಂದ್ರೆ ಆ ನನ್ಮಗ ಮದ್ವೇನೆ ಆಗಲ್ವೋ..' ಅಂದಿದ್ರು ಅಂಬರೀಷ್‌!

ರೆಬೆಲ್ ಸ್ಟಾರ್ "ಅಂಬರೀಶ್" ಅಂದರೆ ಬರಿ ಹೆಸರಲ್ಲ. ಅದು ಒಂದು ಧೈರ್ಯ, ನಂಬಿಕೆ, ಓಂದು ಶಕ್ತಿ. ಆ ಶಕ್ತಿ ಎಂದೆಂದಿಗೂ ನಮ್ಮೊಂದಿಗೆ ಇದ್ದೇ ಇರತ್ತೆ. ಹುಟ್ಟು ಹಬ್ಬದ ಶುಭಾಶಯಗಳು ಅಣ್ಣಾ. "ಅಂಬಿ ಅಜರಾಮರ" ಎಂದು ಟ್ವೀಟ್‌ ಮಾಡಿದ್ದಾರೆ ನಿರ್ದೇಶಕ ತರುಣ್‌ ಸುಧೀರ್‌. ಅವರ ತಂದೆ, ಕನ್ನಡ ಚಿತ್ರರಂಗದ ಖ್ಯಾತ ನಟ ಸುಧೀರ್‌ ಮತ್ತು ಅಂಬರೀಷ್‌ ಜೊತೆಗಿರುವ ಒಂದು ಫೋಟೋವನ್ನು ತರುಣ್‌ ಹಂಚಿಕೊಂಡಿದ್ದಾರೆ.

also read: ಅಂಬರೀಷ್‌ ಹೇಳಿದ ಒಂದೇ ಒಂದು ಮಾತಿಂದ ಹರಿಪ್ರಿಯಾ ಜೀವನದ ದೊಡ್ಡ ಸಮಸ್ಯೆ ಪರಿಹಾರ ಆಗಿತ್ತು!

ಅಂಬರೀಷ್‌ ಪತ್ನಿ, ಸಂಸದೆ ಸುಮಲತಾ ಅಂಬರೀಷ್‌ ಅವರು ಬಗೆಬಗೆಯಲ್ಲಿ ನೆನಪು ಮಾಡಿಕೊಂಡಿದ್ದಾರೆ. '68ನೇ ಜನ್ಮದಿನದ ಸಂದರ್ಭದಲ್ಲಿ ನನ್ನ ಬದುಕಿಗೆ ಸಾರ್ಥಕತೆ ತಂದುಕೊಟ್ಟ ಪ್ರೀತಿಯ ಹೃದಯವಂತನ ಸ್ಮರಣೆ' ಎಂದಿದ್ದಾರೆ ಸುಮಲತಾ. 'ಪಾತ್ರಕ್ಕಷ್ಟೇ ಬಣ್ಣ ಹಚ್ಚಿದ ಹಮ್ಮೀರ, ನುಡಿದಂತೆಯೇ ಬದುಕಿದ ಸರದಾರ, ನಿಜ ಜೀವನದಲ್ಲಿ ಅದ್ಭುತ ಅಜಾತಶತ್ರು. ಮಾತು ಒರಟು ಮನಸು ಹೂವು. ನೀವಿಟ್ಟ ಒಂದೊಂದು ಹೆಜ್ಜೆಯೂ ಒಂದೊಂದು ಶಾಸನ ನಮಗೆ. ನೀವು ಹಾಕಿಕೊಟ್ಟ ಮಾರ್ಗದಲ್ಲೇ ನನ್ನ ಜನಸೇವೆಯ ಪಯಣ. ಎಲ್ಲರ ಹೃದಯದಲ್ಲಿ ನೆಲೆಸಿರುವ ನಿಮಗೆ ಸಾವೆಂಬುದು ಸುಳ್ಳು. ಈ ಜನ್ಮದಿನದ ಶುಭ ಸಂದರ್ಭದಲ್ಲಿ ನಿಮಗಿದೋ ಅಭಿಮಾನದ ಗೌರವ. ನಿಮ್ಮ ನೆನಪೇ ನಿತ್ಯ ಜ್ಯೋತಿ. ನಿಮ್ಮ ಸ್ಮರಣೆಯೇ ಅಮರ ಪ್ರೀತಿ' ಎಂದು ಬರೆದುಕೊಂಡಿದ್ದಾರೆ ಸುಮಲತಾ.

also read: 'ರೆಬೆಲ್ ಸ್ಟಾರ್' ಅಂಬರೀಷ್ ಜನ್ಮದಿನಕ್ಕೆ ಅಭಿಮಾನಿಗಳಿಗೆ ಸಿಗುತ್ತಿದೆ ಭರ್ಜರಿ ಉಡುಗೊರೆ!

ನೀನಾಸಂ ಸತೀಶ್‌ ಅವರು ಅಂಬರೀಷ್‌ ಕುರಿತ ಹೊಸ ಹಾಡಿಗೆ ಧ್ವನಿ ಆಗಿದ್ದಾರೆ. ಅದಕ್ಕೆ ಚೇತನ್‌ ಕುಮಾರ್‌ ಸಾಹಿತ್ಯ ಬರೆದಿದ್ದಾರೆ. ಧ್ರುವ ಸರ್ಜಾ, ಹರಿಪ್ರಿಯಾ, ಮಾನ್ವಿತಾ ಕಾಮತ್‌, 'ಡಾಲಿ' ಧನಂಜಯ ಮುಂತಾದವರು ಅಂಬರೀಷ್‌ ಅವರನ್ನು ಸ್ಮರಿಸಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳು ಕೂಡ ಶುಭಾಶಯದ ಮಳೆ ಸುರಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌