ಆ್ಯಪ್ನಗರ

ಶ್ರೀಮುರಳಿಯ ಈ ಫೋಟೋ ನೋಡಿದರೆ ಒಮ್ಮೆ ಕಾಡು ಸುತ್ತಬೇಕು ಅನ್ನಿಸುತ್ತದೆ!

ರೋರಿಂಗ್ ಸ್ಟಾರ್ ಶ್ರೀಮುರಳಿ ರಾಜ್ಯ ವನ್ಯಜೀವಿ ಸಂರಕ್ಷಣಾ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ ಅವರು ಕುಟುಂಬ ಸಮೇತ ಬಂಡೀಪುರ ಅರಣ್ಯಕ್ಕೆ ತೆರಳಿ ಅಲ್ಲಿನ ಸಿಬ್ಬಂದಿ, ಅಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸಿದರು.

Vijaya Karnataka 8 Nov 2019, 3:52 pm
ನಟ ಶ್ರೀಮುರಳಿ ಬಂಡೀಪುರಕ್ಕೆ ಭೇಟಿ ನೀಡಿದ್ದಾರೆ. ಇಲ್ಲಿನ ಸಿಬ್ಬಂದಿಯೊಡನೆ ಕಾಲ ಕಳೆದಿದ್ದಾರೆ. ಶ್ರೀಮುರಳಿ ನಟನೆಯ ಹೊಸ ಚಿತ್ರ ಇನ್ನೂ ಶುರುವಾಗಿಲ್ಲ. ಇದರ ನಡುವೆ ಅವರು ರಾಜ್ಯ ವನ್ಯಜೀವಿ ಸಂರಕ್ಷಣಾ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
Vijaya Karnataka Web ಶ್ರೀಮುರಳಿ


ಹಾಗಾಗಿ ಶ್ರೀಮುರಳಿ ಬಂಡೀಪುರ ಅರಣ್ಯಕ್ಕೆ ತೆರಳಿ ಅಲ್ಲಿನ ಅರಣ್ಯ ಸಿಬ್ಬಂದಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿದ್ದಾರೆ. ಸ್ವಲ್ಪ ಸಮಯ ಬಂಡೀಪುರ ಅರಣ್ಯದಲ್ಲಿ ಸುತ್ತಾಡಿ ಕಾಡಿನ ಸೌಂದರ್ಯವನ್ನು ಎಂಜಾಯ್‌ ಮಾಡಿದ್ದಾರೆ. ಬಂಡೀಪುರದ ಸುತ್ತ ನೆಲೆಸಿರುವ ಸ್ಥಳೀಯರೊಂದಿಗೆ ಕಾಲ ಕಳೆದಿದ್ದಾರೆ.

'ಉಗ್ರಂ' ಸಿನಿಮಾದ ಸೀಕ್ವೇಲ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಶ್ರೀಮುರಳಿ

ಇದು ಅವರಿಗೆಲ್ಲಾ ಖುಷಿ ನೀಡಿದೆ. ಅಲ್ಲಿನ ಮಕ್ಕಳಿಗೆ ಉಡುಗೊರೆಯನ್ನೂ ಶ್ರೀಮುರಳಿ ನೀಡಿ ಪ್ರೀತಿ ತೋರಿದ್ದಾರೆ. ಶ್ರೀಮುರಳಿ ನಟನೆಯ 'ಮದಗಜ' ಚಿತ್ರ ಸೆಟ್ಟೇರಬೇಕಾಗಿದೆ. ಈ ಚಿತ್ರವನ್ನು ಪ್ರಶಾಂತ್‌ ನೀಲ್‌ ನಿರ್ದೇಶನ ಮಾಡಲಿದ್ದಾರೆ. ಸದ್ಯ ಪ್ರಶಾಂತ್‌ ಅವರು ಯಶ್‌ ನಟನೆಯ ಚಿತ್ರದಲ್ಲಿ ಬಿಝಿಯಾಗಿರುವುದರಿಂದ ಮದಗಜ ಸೆಟ್ಟೇರುವುದು ತಡವಾಗುತ್ತಿದೆ.

ಕಿರುತೆರೆಗೆ ಬಂದ ರೋರಿಂಗ್ ಸ್ಟಾರ್ ಶ್ರೀಮುರಳಿ; ಏನು ವಿಶೇಷ?

ಮಹೇಶ್‌ ನಿರ್ದೇಶಿಸಲಿರುವ 'ಮದಗಜ'ದ ಸ್ಕ್ರಿಪ್ಟ್ ಈಗ ಪ್ರಶಾಂತ್ ನೀಲ್‌ ಕೈ ಸೇರಿದ್ದು, ಒಂದಷ್ಟು ತಿದ್ದುಪಡಿ ಮಾಡುತ್ತಿದ್ದಾರಂತೆ ಅವರು. ಈ ಬಗ್ಗೆ ಸ್ವತಃ 'ಮದಗಜ' ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮಾಹಿತಿ ನೀಡಿದ್ಧಾರೆ. 'ಪ್ರಶಾಂತ್ ನೀಲ್ ಅವರೊಂದಿಗೆ ನಮ್ಮ ಚಿತ್ರದ ನಿರ್ದೇಶಕ ಮಹೇಶ್ ಸಂಪರ್ಕದಲ್ಲಿದ್ದಾರೆ.

ಪ್ರಶಾಂತ್‌ ನೀಲ್‌ ಮುಂದಿನ ಸಿನಿಮಾದಲ್ಲಿ ರೋರಿಂಗ್ ಸ್ಟಾರ್
ನಮ್ಮ ತಂಡದೊಂದಿಗೆ ಅವರು ತೊಡಗಿಸಿಕೊಂಡಿರುವುದು ಸಂತಸ ತಂದಿದೆ. ಸ್ಕ್ರಿಪ್ಟ್ ಇನ್ನಷ್ಟು ಉತ್ತಮವಾಗಿ ರೂಪುಗೊಳ್ಳುತ್ತಿದೆ' ಎಂದು ಉಮಾಪತಿ ಮಾಹಿತಿ ನೀಡಿದ್ದಾರೆ. ಡಿಸೆಂಬರ್ ಅಥವಾ ಜನವರಿಯಲ್ಲಿ ಶೂಟಿಂಗ್ ಆರಂಭಗೊಳ್ಳಲಿದೆಯಂತೆ. ಶ್ರೀಮುರಳಿ ಈ ಸಿನಿಮಾದಲ್ಲಿ ಶ್ರೀಮಂತ ಎನ್‌ಆರ್‌ಐ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಾಯಕಿಯ ಹುಡುಕಾಟ ಮುಂದುವರಿದಿದೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ಧಾರೆ. ಈ ಸಿನಿಮಾದಲ್ಲಿ ವಿಶೇಷ ಗೆಟಪ್‌ನಲ್ಲಿ ಶ್ರೀಮುರಳಿ ಕಾಣಿಸಿಕೊಳ್ಳಲಿದ್ಧಾರೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌