ಆ್ಯಪ್ನಗರ

ಕನಸಿನ ಕಾರಿನಲ್ಲಿ 'ಡಿ ಬಾಸ್‌' ದರ್ಶನ್ ಜೊತೆ ರೌಂಡ್ಸ್‌ ಹೋಗಿಬಂದ ರಿಷಬ್‌ ಶೆಟ್ಟಿ!

ನಟ ದರ್ಶನ್ ಅವರ ಬಳಿ ಲೂನಾದಿಂದಿಡಿದು ಕೋಟಿ ಕೋಟಿ ಬೆಲೆ ಬಾಳುವ ಲ್ಯಾಂಬೋರ್ಗಿನಿ ತನಕ ಐಷಾರಾಮಿ ಕಾರುಗಳಿವೆ. ಈಚೆಗೆ ಇಂಥದ್ದೊಂದು ದುಬಾರಿ ಕಾರ್‌ನಲ್ಲಿ ದರ್ಶನ್‌ ಜೊತೆ ರಿಷಬ್ ಡ್ರೈವ್ ಹೋಗಿಬಂದಿದ್ದಾರೆ.

Vijaya Karnataka Web 4 Dec 2020, 12:04 pm
ನಟ ದರ್ಶನ್‌ ಅವರಿಗೆ ಕಾರುಗಳ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಅವರ ಬಳಿ ಅನೇಕ ಐಷಾರಾಮಿ ಕಾರುಗಳಿವೆ. ಸದ್ಯ ಅವರ ದುಬಾರಿ ಬೆಲೆಯ ಕಾರಿನಲ್ಲಿ ನಟ/ನಿರ್ದೇಶಕ ರಿಷಬ್‌ ಶೆಟ್ಟಿ ಒಂದು ರೌಂಡ್ ಹೋಗಿಬಂದಿದ್ದಾರೆ. ನೆಚ್ಚಿನ ಕಾರಿನಲ್ಲಿ, ಅದು 'ಡಿ ಬಾಸ್‌' ಜೊತೆ ಕಾರಿನಲ್ಲಿ ರೌಂಡ್ ಹಾಕಿದ್ದಾಕ್ಕಾಗಿ ರಿಷಬ್‌ ಶೆಟ್ಟಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅಂದಹಾಗೆ, ಆ ಕಾರು ಯಾವುದು? ಫೋರ್ಡ್‌ ಮಸ್ಟಾಂಗ್ ಜಿಟಿ! ಸದ್ಯ ಈ ಕಾರಿನಲ್ಲಿ ದರ್ಶನ್ ಜೊತೆ ಕುಳಿತು ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿರುವ ರಿಷಬ್‌, ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Vijaya Karnataka Web darshan rishab shetty


ಕನಸಿನ ಕಾರಿನಲ್ಲಿ ರಿಷಬ್‌ ಪಯಣ
ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ರಿಷಬ್, 'ನನ್ನ ಡ್ರೀಮ್‌ ಕಾರು ಫೋರ್ಡ್ ಮಸ್ಟಾಂಗ್! ನಿನ್ನೆ (ಡಿ.3) ಸಂಜೆ ದರ್ಶನ್‌ ಸರ್ ತಮ್ಮ ಮಸ್ಟಾಂಗ್ ಜಿಟಿ ಕಾರಿನಲ್ಲಿ ಒಂದು ಡ್ರೈವ್ ಕರೆದುಕೊಂಡು ಹೋದಾಗ ಆದ ಖುಷಿ ಅಷ್ಟಿಷ್ಟಲ್ಲ! ಧನ್ಯವಾದಗಳು ದರ್ಶನ್‌ ಸರ್. ಒಂದೊಳ್ಳೆಯ ಸಮಯ ಕಳೆದೆ' ಎಂದಿದ್ದಾರೆ ರಿಷಬ್. ಈ ಫೋಸ್ಟ್ ನೋಡುತ್ತಲೇ ಖುಷಿಯಾಗಿರುವ ದರ್ಶನ್‌ ಅವರ ಅಭಿಮಾನಿಗಳು, 'ನಮ್ಮ ದರ್ಶನ ಅಣ್ಣನ ಜೊತೆ ನಿಮ್ಮನ್ನು ನೋಡಿ ತುಂಬಾ ಖುಷಿ ಆಯ್ತು..', 'ದರ್ಶನ್‌ ಅವರೊಂದಿಗೆ ಒಂದು ಸಿನಿಮಾ ಮಾಡಿ...', 'ಯಾವುದೋ ಹೊಸ ಮೂವಿ ಬಗ್ಗೆ ಮಾತಾನಾಡಿರೋ ತರಹ ಇದೆ...?', 'ಮುಂದೆ ಅಂತಹ ಕಾರು ತಮಗೆ ಸಿಗುವಂತಾಗಲಿ....' ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.

ಸಂದೇಶ್‌ ಪ್ರೊಡಕ್ಷನ್ಸ್‌ನಲ್ಲಿ ರಿಷಬ್ ಸಿನಿಮಾ

ಸದ್ಯ ಸಂದೇಶ್ ಪ್ರೊಡಕ್ಷನ್‌ನಲ್ಲಿ ರಿಷಬ್ ಒಂದು ಸಿನಿಮಾ ಮಾಡುತ್ತಿದ್ದಾರೆ. ಅದೇ 'ಹರಿಕಥೆ ಅಲ್ಲಾ ಗಿರಿಕಥೆ'. ಈ ಸಿನಿಮಾವನ್ನು ಸಂದೇಶ್ ಪ್ರೊಡಕ್ಷನ್‌ನ ಸಂದೇಶ್ ಮತ್ತು ರಿಷಬ್ ಶೆಟ್ಟಿ ಜಂಟಿಯಾಗಿ ನಿರ್ಮಿಸುತ್ತಿದ್ದು, ಇದರಲ್ಲಿ ರಿಷಬ್ ಹೀರೋ ಆಗಿದ್ದಾರೆ. ಮೈಸೂರಿನಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ದರ್ಶನ್ ಅವರಿಗೆ ಈ ಪ್ರೊಡಕ್ಷನ್‌ ಹೌಸ್‌ ಜೊತೆ ಆತ್ಮೀಯ ಒಡನಾಟ ಇದೆ. ಹಾಗಾಗಿ, ಅಲ್ಲಿಗೆ ದರ್ಶನ್ ಭೇಟಿ ನೀಡಿದ್ದರು. ಆ ವೇಳೆ ರಿಷಬ್ ಅವರೊಂದಿಗೆ ಡ್ರೈವ್ ಹೋಗಿದ್ದರು ಎನ್ನಲಾಗಿದೆ.

ರಿಯಲ್‌ ಡಾನ್‌ ಅಮರ್‌ ಆಳ್ವಾ ಪಾತ್ರದಲ್ಲಿ ರಿಷಬ್‌ ಶೆಟ್ಟಿ? ಬೆಳ್ಳಿತೆರೆಗೆ ಮತ್ತೊಂದು ಅಂಡರ್‌ವರ್ಲ್ಡ್‌ ಕಥೆ!

'ಹರಿಕಥೆ ಅಲ್ಲಾ ಗಿರಿಕಥೆ'ಗೆ ಡೈರೆಕ್ಟರ್ ಚೇಂಜ್
'ಎದೆಗಾರಿಕೆ', 'ಲವ್ ಇನ್ ಮಂಡ್ಯ', 'ಕಿರಿಕ್ ಪಾರ್ಟಿ' ಸಿನಿಮಾಗಳಲ್ಲಿ ನಟಿಸಿದ್ದ ಗಿರಿ ಕೃಷ್ಣ, 'ಹರಿಕಥೆ ಅಲ್ಲಾ ಗಿರಿಕಥೆ' ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದರು. ಅದು ಅವರ ಮೊದಲ ಸಿನಿಮಾವಾಗಿತ್ತು. ಆದರೆ, ಈಗ ಒಂದು ದೊಡ್ಡ ಬದಲಾವಣೆ ಆಗಿದೆ. ಅನಾರೋಗ್ಯದ ಕಾರಣದಿಂದ ಗಿರಿ ಕೃಷ್ಣ ಈ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿಲ್ಲ. ಬದಲಾಗಿ, 'ಕಥಾ ಸಂಗಮ'ದಲ್ಲಿ ಕೆಲಸ ಮಾಡಿದ್ದ ಕರಣ್ ಅನಂತ್ ಮತ್ತು 'ಸ.ಹಿ.ಪ್ರಾ.ಶಾಲೆ ಕಾಸರಗೋಡು' ಸಿನಿಮಾದ ಬರಹಗಾರ ಅನಿರುದ್ಧ ಮಹೇಶ್‌ ಇದರ ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದಾರೆ.

'ಬೆಲ್‌ ಬಾಟಂ 2' ಚಿತ್ರಕ್ಕೆ ಸಿದ್ಧವಾಗುತ್ತಿದೆ ವೇದಿಕೆ! ಈ ಬಾರಿ ದಿವಾಕರನ ಕೇಸ್‌ ಇನ್ನಷ್ಟು ರೋಚಕ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌