ಆ್ಯಪ್ನಗರ

ಯಶ್‌ ನಟನೆಯ 'ಕೆಜಿಎಫ್‌ ಚಾಪ್ಟರ್ 2' ಚಿತ್ರತಂಡದಿಂದ ಹೊರಬಿತ್ತು ಬಿಗ್ ಅಪ್‌ಡೇಟ್‌!

'ರಾಕಿಂಗ್ ಸ್ಟಾರ್‌' ಯಶ್ ನಾಯಕತ್ವದ 'ಕೆಜಿಎಫ್‌: ಚಾಪ್ಟರ್ 2' ಚಿತ್ರದ ಮೇಲೆ ದೇಶಾದ್ಯಂತ ದೊಡ್ಡ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇದೀಗ ಚಿತ್ರದ ಬಗ್ಗೆ ಚಿತ್ರತಂಡ ಒಂದು ಹೊಸ್ ಅಪ್‌ಡೇಟ್ ನೀಡಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Vijaya Karnataka Web 7 Oct 2020, 4:02 pm
'ಕೆಜಿಎಫ್‌: ಚಾಪ್ಟರ್‌ 2' ಸಿನಿಮಾದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳಿವೆ. ಹಾಗಾಗಿ, ಆ ಸಿನಿಮಾದ ಬಗ್ಗೆ ಸಣ್ಣ ಅಪ್‌ಡೇಟ್ ಸಿಕ್ಕರೂ, ಫ್ಯಾನ್ಸ್ ಥ್ರಿಲ್‌ ಆಗುತ್ತಾರೆ. ಸದ್ಯ ಕೊರೊನಾದಿಂದಾಗಿ ಚಿತ್ರದ ಕೆಲಸಗಳಿಗೆ ಕೊಂಚ ತಡೆ ಆಗಿತ್ತು. ಇದೀಗ ಚಿತ್ರತಂಡ ಹೊಸ ಹುರುಪಿನೊಂದಿಗೆ ಕೆಲಸ ಆರಂಭಿಸಿದೆ. ಈಚೆಗೆ ಒಂದಷ್ಟು ಚಿತ್ರೀಕರಣವನ್ನು ಮಾಡಿಕೊಂಡಿತ್ತು. ಇದೀಗ ಕೊನೆಯ ಹಂತದ ಕೆಲಸಗಳಿಗೆ 'ಕೆಜಿಎಫ್‌' ಬಳಗ ಚಾಲನೆ ನೀಡಿದೆ. ಜೊತೆಗೆ ಒಂದು ಅಡ್‌ಡೇಟ್ ಕೂಡ ಸಿಕ್ಕಿದೆ.
Vijaya Karnataka Web KGF 2


ಏನದು ಹೊಸ ಮಾಹಿತಿ?
ಕಳೆದ ತಿಂಗಳು ಒಂದಷ್ಟು ಚಿತ್ರೀಕರಣವನ್ನು ಕೆಜಿಎಫ್‌ ಬಳಗ ಮಾಡಿತ್ತು. ಆದರೆ, ಶೂಟಿಂಗ್‌ನಲ್ಲಿ ನಟ ಯಶ್ ಭಾಗವಹಿಸಿರಲಿಲ್ಲ. ಆದರೆ, ಅಕ್ಟೋಬರ್ 8ರಿಂದ ನಡೆಯುವ ಕೊನೇ ಹಂತದ ಶೂಟಿಂಗ್‌ನಲ್ಲಿ ಯಶ್ ಇರಲಿದ್ದಾರೆ. ಈ ಬಗ್ಗೆ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ಯಶ್ ಅವರು ನಾಳೆಯಿಂದ (ಅ.8) 'ಕೆಜಿಎಫ್‌: ಚಾಪ್ಟರ್‌ 2' ಚಿತ್ರದ ಕೊನೇ ಹಂತದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ತಿಂಗಳಲ್ಲಿ ಸಂಪೂರ್ಣ ಶೂಟಿಂಗ್ ಮುಗಿಸಿ, ರಿಲೀಸ್ ಕಡೆಗೆ ಗಮನ ನೀಡಲಿದ್ದೇವೆ' ಎಂದು ಕಾರ್ತಿಕ್ ಗೌಡ ಹೇಳಿದ್ದಾರೆ.

ಸಿನಿಮಾದ ರಿಲೀಸ್ ಯಾವಾಗ?
ಚಿತ್ರತಂಡ ಈ ಹಿಂದೆ ಅಕ್ಟೋಬರ್ 23ಕ್ಕೆ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ಘೋಷಣೆ ಮಾಡಿತ್ತು. ಅದರೆ, ಚಿತ್ರಮಂದಿರಗಳೇ ಇನ್ನೂ ಸರಿಯಾಗಿ ತೆರೆದಿಲ್ಲ. ಅಲ್ಲದೆ, ಈ ತಿಂಗಳು ಪೂರ ಚಿತ್ರೀಕರಣಕ್ಕೆ ಬೇಕಿದೆ. ಕರ್ನಾಟಕದಲ್ಲಿ ನವೆಂಬರ್ ನಂತರ ಚಿತ್ರಮಂದಿರಗಳು ತೆರೆಯುವ ಸಾಧ್ಯತೆ ಇದೆ. 'ಕೆಜಿಎಫ್‌ 2'ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಸಿನಿಮಾ ತೆರೆಕಾಣುವ ಹೊತ್ತಿಗೆ ಇನ್ನಷ್ಟು ಸಮಯ ಹಿಡಿಯಲಿದೆ ಎನ್ನಲಾಗುತ್ತಿದೆ.

'ಕೆಜಿಎಫ್‌' ಗಾಯಕಿ ನೇಹಾಗೆ ಕೂಡಿಬಂತಾ ಕಂಕಣ ಭಾಗ್ಯ? ಈ ಅನುಮಾನಕ್ಕಿದೆ ಬಲವಾದ ಕಾರಣ!

ಯಶ್‌ ನಾಯಕತ್ವದ ಈ ಸಿನಿಮಾದಲ್ಲಿ ಬಾಲಿವುಡ್‌ ನಟ ಸಂಜಯ್‌ ದತ್ ಅಧೀರ ಎಂಬ ಪವರ್‌ಫುಲ್ ಪಾತ್ರವನ್ನು ಮಾಡುತ್ತಿದ್ದಾರೆ. ಜೊತೆಗೆ ರಮಿಕಾ ಸೇನ್ ಎಂಬ ಪ್ರಧಾನ ಮಂತ್ರಿ ಪಾತ್ರವನ್ನು ನಟಿ ರವೀನಾ ಟಂಡನ್ ಮಾಡಿದ್ದಾರೆ. ಉಳಿದಂತೆ ಬಹುಭಾಷಾ ನಟ ಪ್ರಕಾಶ್ ರೈ ಹೊಸ ಸೇರ್ಪಡೆಯಾಗಿದ್ದಾರೆ. ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದು, ಪಾರ್ಟ್‌ 1ಕ್ಕಿಂತ ಪಾರ್ಟ್ 2 ತುಂಬ ರಿಚ್ ಆಗಿ ಇರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾಕ್ಕೆ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದರೆ, ಭುವನ್ ಗೌಡ ಛಾಯಾಗ್ರಹಣ ಮಾಡುತ್ತಿದ್ದಾರೆ.

Upendra: 'ಬಾಹುಬಲಿ', 'ಕೆಜಿಎಫ್‌' ಹಾದಿಯಲ್ಲಿ 'ಕಬ್ಜ'! ಡಬಲ್ ಧಮಾಕಾ ನೀಡಲು ಉಪೇಂದ್ರ ಸಜ್ಜು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌