ಆ್ಯಪ್ನಗರ

ತಂದೆಯಂತೆಯೇ ನಿರ್ದೇಶನದ ಹಾದಿಯಲ್ಲಿ ಹೆಜ್ಜೆ ಇಟ್ಟ ಎಸ್‌. ನಾರಾಯಣ್ ಪುತ್ರ!

'ಕಲಾ ಸಾಮ್ರಾಟ್' ಎಸ್‌. ನಾರಾಯಣ್ ಅವರ ಇಬ್ಬರು ಪುತ್ರರಲ್ಲಿ ಪಂಕಜ್ ಈಗಾಗಲೇ ನಟನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದಾರೆ. ಈಗ ಮತ್ತೋರ್ವ ಪುತ್ರ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

Vijaya Karnataka Web 27 Oct 2020, 8:18 pm
ನಟ/ನಿರ್ದೇಶಕ/ನಿರ್ಮಾಪಕ ಎಸ್‌. ನಾರಾಯಣ್ ಅವರಿಗೆ ಇಬ್ಬರು ಪುತ್ರರು. ಎರಡನೇ ಪುತ್ರ ಪಂಕಜ್ ಅವರನ್ನು ಮೂರ್ನಾಲ್ಕು ಸಿನಿಮಾಗಳಲ್ಲಿ ಹೀರೋ ಮಾಡಿದ್ದರು ನಾರಾಯಣ್. ಈಚೆಗಷ್ಟೇ ಮೊದಲನೇ ಮಗ ಪವನ್ ನಾರಾಯಣ್ ಕೂಡ ಹೀರೋ ಆಗುವುದಕ್ಕೆ ರೆಡಿ ಆಗಿದ್ದರು. ಅವರ ನಾಯಕತ್ವದಲ್ಲಿ ಸಿನಿಮಾ ಕೂಡ ಸೆಟ್ಟೇರಿತ್ತು. ಆದರೆ, ಆ ಸಿನಿಮಾ ತೆರೆಕಾಣುವ ಮೊದಲೇ ಪವನ್, ಹೊಸ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ!
Vijaya Karnataka Web pavan narayan


ದಸರಾ ಹಬ್ಬದಂದು ಪೋಸ್ಟರ್ ಲಾಂಚ್
ಪವನ್‌ ನಿರ್ದೇಶನ ಮಾಡಲು ಹೊರಟಿರುವ ಹೊಸ ಸಿನಿಮಾಕ್ಕೆ 'ನವಮಿ 9.9.1999' ಎಂದು ಹೆಸರು ಇಡಲಾಗಿದೆ. ಚಿತ್ರದ ಫಸ್ಟ್‌ ಲುಕ್ ಹಾಗೂ ಪೋಸ್ಟರ್ ಅನ್ನು ದಸರಾ ಹಬ್ಬದಂದು ರಿಲೀಸ್ ಮಾಡಲಾಗಿದೆ. ವಿಶೇಷವೆಂದರೆ, ನಿರ್ದೇಶಕರಾದ ಎಸ್. ನಾರಾಯಣ್, ಶಶಾಂಕ್, ರವಿ ಶ್ರೀವತ್ಸ, 'ಸಿಂಪಲ್' ಸುನಿ, ಪವನ್ ಒಡೆಯರ್, ಎ.ಪಿ. ಅರ್ಜುನ್, ಚಂದ್ರಶೇಖರ್ ಬಂಡಿಯಪ್ಪ, 'ಖದರ್' ಕುಮಾರ್, ಅಭಿರಾಮ್ ಹೀಗೆ 9 ಜನ ನಿರ್ದೇಶಕರಿಂದಲೇ ಲಾಂಚ್ ಮಾಡಿಸಲಾಗಿದೆ. ಲಾಕ್‌ಡೌನ್‌ ಅವಧಿಯಲ್ಲೇ ಈ ಸಿನಿಮಾದ ಸ್ಕ್ರಿಪ್ಟ್ ಸಿದ್ಧವಾಗಿದ್ದು, ಈಗಾಗಲೇ ಒಂದು ಹಂತದ ಶೂಟಿಂಗ್ ಸಹ ಮುಗಿದಿದೆ. ಉಳಿದ ಚಿತ್ರೀಕರಣವನ್ನು ಸಕಲೇಶಪುರ, ಕನಕಪುರ ಮುಂತಾದ ಪ್ರದೇಶಗಳಲ್ಲಿ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

ಪವನ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಲಿರುವ ಈ ಸಿನಿಮಾದಲ್ಲಿ ಯಶಸ್ ಅಭಿ ಹೀರೋ ಆಗಿದ್ದಾರೆ. ಈ ಹಿಂದೆ 'ಪ್ರಸೆಂಟ್ ಪ್ರಪಂಚ ಜೀರೋ ಪರ್ಸೆಂಟ್ ಲವ್', 'ಕ್ರಿಟಿಕಲ್ ಕೀರ್ತನೆಗಳು' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ಅನುಭವ ಅವರಿಗೆ ಇದೆ. ಅಂದಹಾಗೆ, ಪವನ್ ನಾರಾಯಣ್ ಹಾಗೂ ಯಶಸ್ ಅಭಿ ರಂಗಭೂಮಿಯ ದಿನಗಳಿಂದಲೂ ಉತ್ತಮ ಸ್ನೇಹಿತರಾಗಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ನಂದಿನಿ ಗೌಡ ಕಾಣಿಸಿಕೊಂಡಿದ್ದಾರೆ. ಹೀರೋ ಯಶಸ್ ಅಭಿ ಮತ್ತು ಕೃಷ್ಣ ಗುಡೆಮಾರನಹಳ್ಳಿ ಸೇರಿಕೊಂಡು ಕಥೆ, ಚಿತ್ರಕಥೆ ಬರೆದು ಪದ್ಮಸುಂದರಿ ಕ್ರಿಯೇಷನ್ಸ್ ಬ್ಯಾನರ್‌ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಸಿನಿಮಾಕ್ಕೂ ಮೊದಲು ಧಾರಾವಾಹಿಯಲ್ಲಿ ನಟಿಸಿದ್ದ ದರ್ಶನ್; ಅವರ ಮೊದಲ ಹೀರೋಯಿನ್ ಇವರೇ!

ಚಿತ್ರದಲ್ಲಿ ಎಸ್. ನಾರಾಯಣ್, ಶಂಕರ್ ಅಶ್ವತ್ಥ್‌, ಓಂ ಪ್ರಕಾಶ್ ರಾವ್, ಹುಚ್ಚ ವೆಂಕಟ್, ಸಂದೀಪ್, ಅನುಶ್ರೀ, ಪವಿತ್ರಾ, 'ಕುರಿ ಬಾಂಡ್' ಸುನೀಲ್, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದಾರೆ. ಕೆ.ಪಿ.ಎಚ್.ಎಸ್. ಛಾಯಾಗ್ರಹಣ ಮಾಡುತ್ತಿದ್ದು, ಧರ್ಮ ಸಂಗೀತ ಸಂಯೋಜಿಸಲಿದ್ದಾರೆ. ನಾಗಾರ್ಜುನ್ ಶರ್ಮಾ ಸಾಹಿತ್ಯ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಮೋಹನ್ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ. ಪವನ್ ಈ ಹಿಂದೆ 'ಚಿ.ರಾ. ಮುತ್ತು ಚಿ.ಸೌ. ರತ್ನ' ಸಿನಿಮಾದಲ್ಲಿ ಹೀರೋ ಆಗಿದ್ದರು. ಈಗ ಅಪ್ಪನ ಮಾರ್ಗದರ್ಶನದಲ್ಲಿ ನಿರ್ದೇಶಕರಾಗುತ್ತಿದ್ದಾರೆ.

'ರಂಗೋಲಿ', 'ಬದುಕು' ಧಾರಾವಾಹಿಗಳ ಪ್ರೇಕ್ಷಕರ ಫೇವರಿಟ್ ನಟಿ ಸಿರಿ ಈಗ ಏನು ಮಾಡುತ್ತಿದ್ದಾರೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌