ಆ್ಯಪ್ನಗರ

ಹುಟ್ಟುಹಬ್ಬದ ದಿನವೇ ವಿವಾದ ಮೈಮೇಲೆಳೆದುಕೊಂಡ ದುನಿಯಾ ವಿಜಯ್; ಅದು ತಲ್ವಾರ್ ವಿಚಾರಕ್ಕೆ!!!

ದುನಿಯಾ ವಿಜಯ್ ಅವರು ಇಂದು ತಮ್ಮ 46ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ ತಡರಾತ್ರಿ ಅವರು ಕೇಕ್ ಕತ್ತರಿಸುವ ವೇಳೆ ಮಾಡಿಕೊಂಡ ಎಡವಟ್ಟು ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಹಾಗಾದರೆ ವಿಜಯ್ ಹುಟ್ಟುಹಬ್ಬದ ಖುಷಿಯಲ್ಲಿ ಮಾಡಿಕೊಂಡ ಅವಾಂತರವೇನು? ಇಲ್ಲಿದೆ ಮಾಹಿತಿ

Vijaya Karnataka Web 20 Jan 2020, 12:07 pm
ದುನಿಯಾ ವಿಜಯ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಡರಾತ್ರಿ ಹುಟ್ಟುಹಬ್ಬ ಆಚರಣೆ ಮಾಡುವ ವೇಳೆ ಅವರು ವಿವಾದಕ್ಕೆ ಗುರಿಯಾಗಿದ್ದಾರೆ. ಅದು ಕೇಕ್ ಕತ್ತರಿಸುವ ವಿಚಾರದಲ್ಲಿ ಎಂಬುದು ನಿಜಕ್ಕೂ ಆಶ್ಚರ್ಯಕರ ಸಂಗತಿ.
Vijaya Karnataka Web salaga movie fame duniya vijay birthday celebration
ಹುಟ್ಟುಹಬ್ಬದ ದಿನವೇ ವಿವಾದ ಮೈಮೇಲೆಳೆದುಕೊಂಡ ದುನಿಯಾ ವಿಜಯ್; ಅದು ತಲ್ವಾರ್ ವಿಚಾರಕ್ಕೆ!!!


ಹೊಸಕೆರೆಹಳ್ಳಿಯ ತಮ್ಮ ನಿವಾಸದಲ್ಲಿ 46ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ದುನಿಯಾ ವಿಜಯ್. ಈ ವೇಳೆ ಅವರು ಕೇಕ್ ಕತ್ತರಿಸಲು ಚಾಕು ಬಳಸದೆ, ತಲ್ವಾರ್ ಬಳಸಿದ್ದಾರೆ. ಈ ಸಮಯದಲ್ಲಿ ಅವರ ಪತ್ನಿ ಕೀರ್ತಿ ಮತ್ತು ತಾಯಿ ಜೊತೆಗಿದ್ದರು. ಯಾರೂ ಕೂಡ ಸಾರ್ವಜನಿಕವಾಗಿ ಯಾವುದೇ ಆಯುಧಗಳನ್ನು ಬಳಸುವಂತಿಲ್ಲ, ಪ್ರದರ್ಶನ ಕೂಡ ಮಾಡುವಂತಿಲ್ಲ. ಇದು ಆರ್ಮ್ಸ್ ಕಾಯಿದೆಯಡಿ ಬರುತ್ತದೆ.

5 ಇಂಚಿಗೂ ಉದ್ದದ ಕತ್ತಿಯನ್ನು ಯಾರೂ ಕೂಡ ಬಳಸುವಂತಿಲ್ಲ. ಒಂದುವೇಳೆ ಇಟ್ಟುಕೊಳ್ಳಬೇಕು ಅಂದರೆ ಲೈಸೆನ್ಸ್ ಇರಬೇಕು. ಇದರ ವಿರುದ್ಧವಾಗಿ ನಡೆದುಕೊಂಡರೆ ದೂರು ದಾಖಲಾಗುತ್ತದೆ. ಆದರೆ ದುನಿಯಾ ವಿಜಯ್ ಕೇಕ್ ಕತ್ತರಿಸಿದ ಬಗ್ಗೆ ಈಗಾಗಲೇ ಪರಿಶೀಲನೆ ನಡೆಯುತ್ತಿದೆ. ಈಗಾಗಲೇ ಅವರ ನಿರ್ದೇಶನದ 'ಸಲಗ' ಸಿನಿಮಾ ಹಲವಾರು ಕಾರಣಗಳಿಂದ ಕುತೂಹಲ ಹುಟ್ಟುಹಾಕಿದೆ.

ದುನಿಯಾ ವಿಜಯ್ ಹುಟ್ಟುಹಬ್ಬದಂದು ಸಾರ್ವಜನಿಕ ರಸ್ತೆಯಲ್ಲಿ‌ ಓಡಾಟಕ್ಕೂ ತೊಂದರೆಯಾಗಿದೆ. ಮಧ್ಯರಾತ್ರಿವರೆಗೂ ಏರಿಯಾ ಜನರಿಗೆ ಕಿರಿಕಿರಿ ಎಂದು ದೂರು ದಾಖಲಾಗಿದೆ. ರಾತ್ರಿ ‌ನಡೆದ ಘಟನೆ‌ ಕುರಿತು ದುನಿಯಾ ವಿಜಯ್ ಕ್ಷಮೆ ಕೋರಿದ್ದಾರೆ. ರಾತ್ರಿ ಕೇಕ್ ಕಟ್ ಮಾಡ್ಬೇಕಾದ್ರೆ ಯಾರೋ ಕೈಗೆ ಕತ್ತಿ ಕೊಟ್ರು. ನಾನು ಮಾಡಿದ ಕೆಲಸ ತಪ್ಪು, ಅದನ್ನು ಒಪ್ಪಿಕೊಳ್ಳುತ್ತೇನೆ, ತಪ್ಪು ಯಾರು ಮಾಡಿದ್ರು ತಪ್ಪು. ಕಾನೂನು ಎಲ್ಲರಿಗೂ ಒಂದೇ. ಯಾರೂ ಇದರಿಂದ ಪ್ರಚೋದನೆಗೆ ಒಳಗಾಗ್ಬೇಡಿ. ಪೊಲೀಸರು ಕರೆದರೆ ಸ್ಟೇಷನ್‌ಗೆ ಹೋಗಿ ಸ್ಟೇಟ್‌ಮೆಂಟ್ ಕೊಡ್ತೀನಿ. ಕತ್ತಿಯಲ್ಲಿ ಕೇಕ್ ಕಟ್ ಮಾಡಿದರ ಬಗ್ಗೆ ಕ್ಷಮೆ ಕೋರುತ್ತೇನೆ ಎಂದಿದ್ದಾರೆ ದುನಿಯಾ ವಿಜಯ್.

'ಸಲಗ'ಕ್ಕೆ ಸಾಥ್‌ ನೀಡಿದ ರಿಯಲ್‌ ಸ್ಟಾರ್‌ ಉಪೇಂದ್ರ! ದುನಿಯಾ ವಿಜಯ್‌ ಜನ್ಮದಿನಕ್ಕೊಂದು ಸ್ಪೆಷಲ್‌ ಗಿಫ್ಟ್‌

'ಸಲಗ' ಸಿನಿಮಾಕ್ಕೆ 'ಟಗರು' ಖ್ಯಾತಿಯ ನಿರ್ಮಾಪಕ ಕೆ.ಪಿ. ಶ್ರೀಕಾಂತ್‌ ಬಂಡವಾಳ ಹೂಡುತ್ತಿದ್ದಾರೆ. ಡಾಲಿ ಧನಂಜಯ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಂದು ಈ ಚಿತ್ರ ಟೀಸರ್‌ನ್ನು ನಟ ಉಪೇಂದ್ರ ಬಿಡುಗಡೆ ಮಾಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌