ಆ್ಯಪ್ನಗರ

'ನೈಂಟಿ ಹೊಡಿ ಮನೀಗ್‌ ನಡಿ' ಎನ್ನುತ್ತ 500ನೇ ಸಿನಿಮಾ ಗಡಿ ತಲುಪಿದ ಖ್ಯಾತ ನಟ ಬಿರಾದಾರ್‌!

ಇದುವರೆಗೆ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ಬಿರಾದಾರ್‌ ಈಗ 'ನೈಂಟಿ ಹೊಡಿ ಮನೀಗ್‌ ನಡಿ' ಸಿನಿಮಾದಲ್ಲಿ ಹೀರೋ ಆಗಿದ್ದಾರೆ. ಇದು ಇವರ ನಟನೆಯ 500ನೇ ಚಿತ್ರ ಎಂಬುದು ವಿಶೇಷ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ...

Vijaya Karnataka Web 13 Nov 2020, 3:10 pm
ತಮ್ಮ ಸಹಜ ಅಭಿನಯದಿಂದ ಎಲ್ಲರ ಗಮನ ಸೆಳೆಯುತ್ತಾ ಬಂದಿರುವ ನಟ ವೈಜನಾಥ್‌ ಬಿರಾದಾರ್‌ ಇದೀಗ 500ನೇ ಚಿತ್ರದ ಗಡಿ ತಲುಪಿದ್ದಾರೆ. 70ರ ಹರೆಯದಲ್ಲೂ ಚಿರಯುವಕನಂತೆ ಹೀರೋ ಆಗಿ ಹೊಸ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಈ ಚಿತ್ರದ ಹೆಸರೇ 'ನೈಂಟಿ ಹೊಡಿ ಮನೀಗ್‌ ನಡಿ'.
Vijaya Karnataka Web ವೈಜನಾಥ್‌ ಬಿರಾದಾರ್‌


ಈ ಸಿನಿಮಾವನ್ನು ಇಬ್ಬರು ನಿರ್ದೇಶಿಸುತ್ತಿದ್ದಾರೆ. ಉಮೇಶ್‌ ಬಾದರದಿನ್ನಿ, ನಾಗರಾಜ್‌ ಅರೆಹೊಳೆ ಜಂಟಿಯಾಗಿ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಇದೀಗ ಈ ಚಿತ್ರದ ಹಾಡೊಂದರ ಚಿತ್ರೀಕರಣವನ್ನು ಮಾಡಲಾಗುತ್ತಿದ್ದು, ಅದ್ಧೂರಿ ಸೆಟ್‌ನಲ್ಲಿ ಬಿರಾದಾರ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ. ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ನೀತಾ ಕೂಡ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

'ಸಿಂಗಲ್‌ ಕಣ್ಣಾ ಹಾರಿಸ್ತಿ..' ಎಂಬ ಹಾಡಿನ ಚಿತ್ರೀಕರಣದಲ್ಲಿ ಬಿರಾದಾರ್‌ ಜೂನಿಯರ್‌ ಆರ್ಟಿಸ್ಟ್‌ಗಳ ಮಧ್ಯೆ ಹೆಜ್ಜೆ ಹಾಕಿದ್ದಾರೆ. ಶರಣ್‌ ನಟನೆಯ 'ಚುಟು ಚುಟು ಅಂತೈತಿ...' ಹಾಡನ್ನು ಬರೆದು ಹೆಸರು ಮಾಡಿರುವ ಶಿವು ಭೇರಗಿ ಈ ಚಿತ್ರದ ಹಾಡನ್ನು ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ. ಶಮಿತಾ ಮಲ್ನಾಡ್‌ ಮತ್ತು ರವೀಂದ್ರ ಸೊರಗಾಂವಿ ಹಾಡಿದ್ದಾರೆ. ಭೂಷಣ್‌ ಕೊರಿಯೋಗ್ರಫಿ ಮಾಡಿದ್ದಾರೆ. ಉತ್ತರ ಕರ್ನಾಟಕ ಸೊಗಡನ್ನು ಹಾಡಿನಲ್ಲಿ ಕೇಳಬಹುದಾಗಿದೆ.

also read: 5, 10 ಪೈಸೆ ನಾಣ್ಯಗಳು ಬ್ಯಾನ್ ಆದ ಕಥಾನಕ 'ಖೊಟ್ಟಿ ಪೈಸೆ'

ಬಹುತೇಕ ಸ್ಯಾಂಡಲ್‌ವುಡ್‌ ಚಿತ್ರಗಳಲ್ಲಿ ಮದ್ಯವ್ಯಸನಿಯ ಪಾತ್ರದಲ್ಲಿ ಸಹಜವಾಗಿ ಕಾಣಿಸಿಕೊಂಡು ಎಲ್ಲರನ್ನೂ ನಗಿಸುತ್ತಾ ಬಂದಿರುವ ಬಿರಾದಾರ್‌ ತಾವು ಅತ್ಯುತ್ತಮ ನಟ ಎನ್ನುವುದಕ್ಕೆ ಸಾಕ್ಷಿಯಾಗಿ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಪ್ರಶಸ್ತಿಯನ್ನು ಗಳಿಸಿದ್ದಾರೆ. ಗಿರೀಶ್‌ ಕಾಸರವಳ್ಳಿ ನಿರ್ದೇಶನದ 'ಕನಸೆಂಬ ಕುದುರೆಯನ್ನೇರಿ' ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಅವರು ಸ್ಪೇನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌