ಆ್ಯಪ್ನಗರ

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾ: ಮಂಗಳೂರಿನಲ್ಲಿ ವಿಚಾರಣೆಗೆ ಹಾಜರಾದ ನಿರೂಪಕಿ ಅನುಶ್ರೀ

ಡ್ರಗ್ಸ್‌ ಜಾಲಕ್ಕೆ ಸಂಬಂಧಿಸಿದಂತೆ ನಿರೂಪಕಿ-ನಟಿ ಅನುಶ್ರೀ ಇಂದು (ಸೆ.26) ಸಿಸಿಬಿ ಅಧಿಕಾರಿಗಳಿಂದ ವಿಚಾರಣೆ ಎದುರಿಸಿದ್ದಾರೆ. ಬೆಂಗಳೂರಿನಿಂದ ಶುಕ್ರವಾರವೇ ಮಂಗಳೂರಿಗೆ ಬಂದಿದ್ದ ಅವರು ದೇವರ ಮೊರೆ ಹೋಗಿದ್ದರು!

Vijaya Karnataka Web 26 Sep 2020, 12:09 pm
ಮಂಗಳೂರು: ನಟಿ, ನಿರೂಪಕಿ ಅನುಶ್ರೀ ಇಂದು (ಸೆ.26) ಬೆಳಗ್ಗೆ ನಗರ ಅಪರಾಧ ಪತ್ತೆ ದಳ ಅಧಿಕಾರಿಗಳ ಎದುರು ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾದರು. ಬೆಳಗ್ಗೆ 9 ಗಂಟೆಗೆ ಮಂಗಳೂರು ಉತ್ತರ ವಿಭಾಗ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ಅನುಶ್ರೀ ಸುಮಾರು 2 ಗಂಟೆಗಳ ಕಾಲ ವಿಚಾರಣೆ ಎದುರಿಸಿದರು. ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ ವಿನಯ ಗಾಂವ್ಕರ್ ನೇತೃತ್ವದಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ವಿಚಾರಣೆ ನಡೆಸಿದರು.
Vijaya Karnataka Web ನಿರೂಪಕಿ ಅನುಶ್ರೀ


ಸಿಸಿಬಿ ನಿರಾಕರಣೆ
ಅನುಶ್ರೀ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಗುರುವಾರ (ಸೆ.24) ನೋಟಿಸ್‌ ನೀಡಿದ್ದರು. ಶುಕ್ರವಾರ ಬೆಳಗ್ಗೆ ಅನುಶ್ರೀ ಮಂಗಳೂರಿಗೆ ಆಗಮಿಸಿ ವಿಚಾರಣೆಗೆ ಹಾಜರಾಗಲು ತಯಾರಿದ್ದರೂ, ಸಿಸಿಬಿ ಅಧಿಕಾರಿಗಳು ನಿರಾಕರಿಸಿದ್ದರು. ಹಾಗಾಗಿ ಒಂದು ದಿನ ತಡವಾಗಿ, ಅಂದರೆ ಶನಿವಾರ ವಿಚಾರಣೆಗೆ ಹಾಜರಾಗಿದ್ದಾರೆ.

ದೇವಳ ರೌಂಡ್ಸ್:
ಶುಕ್ರವಾರ ಮಂಗಳೂರಿಗೆ ಆಗಮಿಸಿದ ಅನುಶ್ರೀ ಅವರು ಕುಟುಂಬದ ಜತೆ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಳ ಸೇರಿದಂತೆ ನಾನಾ ದೇವಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.

also read: ಗಂಡಸರು ಡ್ರಗ್ಸ್‌ ತೆಗೆದುಕೊಳ್ಳುವುದಿಲ್ಲ: ಸಿಟ್ಟಿನಿಂದ ಯಾಕೆ ಹೀಗೆ ಹೇಳಿದ್ರು ನಟಿ ಪಾರುಲ್‌ ಯಾದವ್‌?

ಗೌಪ್ಯವಾಗಿಟ್ಟ ಪೊಲೀಸರು
ಶುಕ್ರವಾರ ಅನುಶ್ರೀ ಸಿಸಿಬಿ ಮುಂದೆ ಹಾಜರಾಗುತ್ತಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪತ್ರಕರ್ತರು ಪಾಂಡೇಶ್ವರ ಎಸಿಪಿ ಕಚೇರಿ ಬಳಿ ಕಾದು ಕುಳಿತ್ತಿದ್ದರು. ಈ ಕಾರಣದಿಂದ ಶನಿವಾರ ವಿಚಾರಣೆ ನಡೆಸುವ ಸ್ಥಳವನ್ನು ಪೊಲೀಸರು ಗೌಪ್ಯವಾಗಿಟ್ಟು, ನಗರದಲ್ಲಿ ನಡೆಸದೆ ಹೊರಭಾಗದ ಮಂಗಳೂರು ಉತ್ತರ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆಸುತ್ತಿದ್ದಾರೆ.

also read: ದೀಪಿಕಾ ಡ್ರಗ್ಸ್‌ ಕೇಸ್‌: ತಾವೇ ಪರಿಚಯಿಸಿದ ಹುಡುಗಿ ಬಗ್ಗೆ ಇಂಥ ಸುದ್ದಿ ಕೇಳಿ ಶಾಕ್‌ ಆದ ಇಂದ್ರಜಿತ್‌!

'ನಾನು ಅಪರಾಧಿ ಅಲ್ಲ'
ವಿಚಾರಣೆ ಬಗ್ಗೆ ಅನುಶ್ರೀ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು. 'ಪ್ರಸ್ತುತ ಚರ್ಚೆ ಆಗುತ್ತಿರುವ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇಲ್ಲ. ವಿಚಾರಣೆಗೆ ಕರೆದಕೂಡಲೇ ನಾನು ಅಪರಾಧಿ ಅಲ್ಲ. ಪೊಲೀಸರಿಗೆ ನಾನು ನನಗೆ ತಿಳಿದ ಮಾಹಿತಿ ನೀಡಿ ಸಂಪೂರ್ಣ ಸಹಕಾರ ನೀಡುತ್ತೇನೆ' ಎಂದು ಅವರು ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌