ಆ್ಯಪ್ನಗರ

Sanjay Dutt: 'ಕೆಜಿಎಫ್ 2' ಶೂಟಿಂಗ್‌ಗೆ ಸಂಜಯ್‌ ದತ್‌ ಬರ್ತಾರಾ? ಇಲ್ಲಿದೆ ಸಂಜು ನೀಡಿದ ಸ್ಪಷ್ಟನೆ!

'ರಾಕಿಂಗ್‌ ಸ್ಟಾರ್‌' ಯಶ್ ನಾಯಕತ್ವದ 'ಕೆಜಿಎಫ್: ಚಾಪ್ಟರ್ 2' ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅಧೀರ ಪಾತ್ರ ಮಾಡಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಅವರು, ಮತ್ತೆ 'ಕೆಜಿಎಫ್‌' ಸೆಟ್‌ಗೆ ಬರಲಿದ್ದಾರಾ? ಆ ಬಗ್ಗೆ ಇಲ್ಲಿದೆ ಮಾಹಿತಿ.

Vijaya Karnataka Web 15 Oct 2020, 1:04 pm
ಬಾಲಿವುಡ್‌ ನಟ ಸಂಜಯ್ ದತ್‌ 'ಕೆಜಿಎಫ್: ಚಾಪ್ಟರ್ 2' ಚಿತ್ರದಲ್ಲಿ ಅಧೀರನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದಾಗ ಫ್ಯಾನ್ಸ್ ಥ್ರಿಲ್‌ ಆಗಿದ್ದರು. ಯಶ್‌ ಮತ್ತು ಸಂಜಯ್ ಮುಖಾಮುಖಿ ಸೀನ್‌ಗಳು ಹೇಗಿರಬಹುದು ಎಂದು ನೋಡಲು ಕಾದಿದ್ದರು. ಅಷ್ಟರಲ್ಲೇ ಒಂದು ಕಹಿ ಸುದ್ದಿ ಹೊರಬಿದ್ದಿತ್ತು. ಅದು ಸಂಜುಗೆ ಕ್ಯಾನ್ಸರ್ ಇದೆ ಎಂಬುದು. ಹಾಗಾದರೆ, ಸಂಜು 'ಕೆಜಿಎಫ್ 2' ಚಿತ್ರದ ಕೊನೇ ಹಂತದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವುದಿಲ್ಲವೇ ಎಂಬ ಅನುಮಾನ ಇತ್ತು. ಆದರೆ, ಈ ಬಗ್ಗೆ ಸ್ಟಷ್ಟನೆ ನೀಡಿದ್ದಾರೆ ಸಂಜು.
Vijaya Karnataka Web Sanjay Dutt


ನವೆಂಬರ್‌ನಲ್ಲಿ 'ಕೆಜಿಎಫ್‌' ಶೂಟಿಂಗ್‌ಗೆ ಸಂಜು ಎಂಟ್ರಿ
ಈಚೆಗೆ ಒಂದು ವಿಡಿಯೋ ರಿಲೀಸ್ ಮಾಡಿದ್ದಾರೆ ಸಂಜು. ಸ್ನೇಹಿತರೊಬ್ಬರ ಹೇರ್‌ ಸಲೂನ್‌ಗೆ ಹೋಗಿದ್ದ ಸಂಜು, ಅಲ್ಲಿಯೇ ತಮ್ಮ ಆರೋಗ್ಯ ಮತ್ತು ಸಿನಿಮಾಗಳ ಕುರಿತು ಮಾತನಾಡಿದ್ದಾರೆ. ಆಗ ಅವರು 'ಕೆಜಿಎಫ್‌ 2' ಶೂಟಿಂಗ್ ಬಗ್ಗೆಯೂ ಹೇಳಿಕೊಂಡಿದ್ದಾರೆ. 'ಕೆಜಿಎಫ್‌ ಚಿತ್ರದ ನನ್ನ ಅಧೀರ ಪಾತ್ರಕ್ಕಾಗಿ ಗಡ್ಡ ಬಿಟ್ಟಿದ್ದೇನೆ. ನಾನು ನವೆಂಬರ್‌ನಲ್ಲಿ ಆ ಸಿನಿಮಾದ ಶೂಟಿಂಗ್ ಮಾಡಲಿದ್ದೇನೆ. ಮತ್ತೆ ಸೆಟ್‌ಗೆ ಹೋಗುತ್ತಿರುವುದಕ್ಕೆ ನನಗೆ ತುಂಬ ಖುಷಿಯಾಗುತ್ತಿದೆ. ಸದ್ಯದರಲ್ಲೇ ನಾನು 'ಶಂಶೇರಾ' ಸಿನಿಮಾದ ಡಬ್ಬಿಂಗ್ ಕೂಡ ಮಾಡಲಿದ್ದೇನೆ' ಎಂದು ಸಂಜು ಹೇಳಿದ್ದಾರೆ.

ಇತ್ತ ಕೊನೇ ಹಂತದ ಚಿತ್ರೀಕರಣದ ಕೆಲಸಗಳಿಗೆ 'ಕೆಜಿಎಫ್‌: ಚಾಪ್ಟರ್ 2' ತಂಡ ಚಾಲನೆ ನೀಡಿತ್ತು. ಮಂಗಳೂರಿನಲ್ಲಿ ನಡೆದ ಶೂಟಿಂಗ್‌ನಲ್ಲಿ ಯಶ್ ಮತ್ತು ಶ್ರೀನಿಧಿ ಶೆಟ್ಟಿ ಭಾಗವಹಿಸಿದ್ದರು. ಅಲ್ಲಿ ಶೂಟಿಂಗ್ ಮುಗಿಸಿರುವ ತಂಡ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲೂ ಕೆಲ ದಿನ ಶೂಟಿಂಗ್ ಮಾಡಲಿದೆ. ಬಹುಶಃ ಸಂಜು ಇರುವ ದೃಶ್ಯಗಳನ್ನು ಕೊನೆಗೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಸಂಜು ಶೂಟಿಂಗ್‌ಗೆ ಬರುತ್ತಾರೋ, ಇಲ್ಲವೋ ಎಂಬ ಬಗ್ಗೆ ಇದ್ದ ಗೊಂದಲ ಈಗ ಬಗೆಹರಿದಂತೆ ಆಗಿದೆ.

'ಅಲೆಗಳನ್ನು ನಿಲ್ಲಿಸೋಕೆ ಆಗಲ್ಲ' ಎಂದಿದ್ದೇಕೆ ಯಶ್‌? ಮಂಗಳೂರು ಕಡಲ ತೀರದಲ್ಲಿ 'ರಾಕಿ ಭಾಯ್‌'!

ಕೆಲ ದಿನಗಳ ಹಿಂದೆ ಸಂಜುಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಇದರಿಂದ ಅಭಿಮಾನಿಗಳು ಕೊಂಚ ಆತಂಕಗೊಂಡಿದ್ದರು. ಕ್ಯಾನ್ಸರ್ ಮೂರನೇ ಹಂತ ತಲುಪಿರುವುದರಿಂದ ತಕ್ಷಣವೇ ಚಿಕಿತ್ಸೆ ಆರಂಭಿಸಲಾಗಿದೆ. ಇದೀಗ ಆ ಬಗ್ಗೆಯೂ ಸಂಜು ಮಾತನಾಡಿದ್ದಾರೆ. 'ಸಲೂನ್‌ಗೆ ಬಂದು ಹೇರ್ ಕಟ್ ಮಾಡಿಸಿಕೊಂಡಿದ್ದು ಖುಷಿ ನೀಡಿದೆ. ಈ ಕ್ಯಾನ್ಸರ್ ನನ್ನ ಜೀವನದ ಹೊಸ ಭಯವಾಗಿದೆ. ಆದರೆ, ನಾನಿದನ್ನು ಸೋಲಿಸಿ, ಇದರಿಂದ ಆಚೆ ಬರಲಿದ್ದೇನೆ' ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ ಸಂಜಯ್ ದತ್.

ಯಶ್‌ ನಟನೆಯ 'ಕೆಜಿಎಫ್‌ ಚಾಪ್ಟರ್ 2' ಚಿತ್ರತಂಡದಿಂದ ಹೊರಬಿತ್ತು ಬಿಗ್ ಅಪ್‌ಡೇಟ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌