ಆ್ಯಪ್ನಗರ

'ಯುವರತ್ನ'ನನ್ನು ಮೆಚ್ಚಿದ ಅಧೀರ

ನೆನ್ನೆಯಷ್ಟೇ ಪುನೀತ್‌ ರಾಜ್‌ಕುಮಾರ್ ಅಭಿನಯದ 'ಯುವರತ್ನ' ಟೀಸರ್ ಬಿಡುಗಡೆಯಾಗಿದೆ. ಯಂಗ್‌ ಲುಕ್‌ನಲ್ಲಿ ಕಂಗೊಳಿಸುತ್ತಿರುವ ಪವರ್‌ಸ್ಟಾರ್ ಕಂಡು ಸಾಕಷ್ಟು ಮಂದಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಅದ್ರಲ್ಲೂ ಬಾಲಿವುಡ್‌ ಸ್ಟಾರ್ ಸಂಜಯ್ ದತ್ ಮಾಡಿರುವ ಟ್ವೀಟ್ ಎಲ್ಲರ ಹುಬ್ಬೇರಿಸುತ್ತಿದೆ.

Vijaya Karnataka Web 8 Oct 2019, 10:17 am
'ರಾಜಕುಮಾರ' ನಂತರ ಸಂತೋಷ್ ಆನಂದ್‌ ರಾಮ್ ನಿರ್ದೇಶನದ 'ಯುವರತ್ನ' ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಅದ್ರಲ್ಲೂ ಟೀಸರ್‌ನಲ್ಲಿ ಪುನೀತ್ ಲುಕ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ರಗ್ಬಿ ಆಟವಾಡುತ್ತಾ ಪವರ್‌ಫುಲ್ ಡೈಲಾಗ್ ಹೊಡೆದಿರುವ ಪವರ್‌ಸ್ಟಾರ್, ಈಗಾಗ್ಲೇ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ಇನ್ನು ಈ ಟೀಸರ್‌ ಬಗ್ಗೆ ಎಲ್ಲೆಡೆ ಪಾಸಿಟಿವ್ ಮಾತುಗಳು ಕೇಳಿ ಬರುತ್ತಿವೆ.
Vijaya Karnataka Web punith rajkumar.

ಪುನೀತ್ 'ಯುವರತ್ನ' ಟೀಸರ್ ರಿಲೀಸ್; ಪಂಚಿಂಗ್ ಡೈಲಾಗ್‌ಗೆ

ಅದ್ರಲ್ಲೂ ಕನ್ನಡದ ಈ ಚಿತ್ರದ ಬಗ್ಗೆ ಬಾಲಿವುಡ್ ನಟ ಸಂಜಯ್ ದತ್ ಟ್ವೀಟ್ ಮಾಡಿದ್ದಾರೆ. ಹೌದು. ಸಂಜಯ್‌ದತ್ ಅಧೀರನಾಗಿ 'ಕೆಜಿಎಫ್-2'ರಲ್ಲಿ ಅಭಿನಯಿಸುತ್ತಿರೋದು ನಿಮಗೆಲ್ಲಾ ಗೊತ್ತೇ ಇದೆ. ಈಗಾಗ್ಲೇ ಶೂಟಿಂಗ್‌ನಲ್ಲೂ ಭಾಗಿಯಾಗಿರುವ ಸಂಜಯ್‌ ದತ್, ಕನ್ನಡ ಕಲಿಯಲು ಮುಂದಾಗಿದ್ದಾರೆ ಅನ್ನೋ ಮಾತುಗಳೂ ಕೇಳಿ ಬರುತ್ತಿವೆ. ಈ ನಡುವೆ 'ಯುವರತ್ನ' ಟೀಸರ್ ನೋಡಿರುವ ಸಂಜು, ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.


"ಯುವರತ್ನ ಟೀಸರ್‌ ನೋಡಲು ಬ್ರಿಲಿಯಂಟ್ ಆಗಿದೆ. ಆಲ್‌ ದಿ ಬೆಸ್ಟ್ ವಿಜಯ್ ಕಿರಗಂದೂರು, ಕಾರ್ತಿಕ್ ಮತ್ತು ಹೊಂಬಾಳೆ ಟೀಮ್" ಅಂತಾ ಟ್ವೀಟ್ ಮಾಡಿರುವ ಸಂಜಯ್ ದತ್, ಕನ್ನಡ ಸಿನಿಮಾಗೆ ಶುಭ ಕೋರಿದ್ದಾರೆ. ಅಂದ್ಹಾಗೇ ವಿಜಯ್ ಕಿರಗಂದೂರು 'ಕೆಜಿಎಫ್-2' ಚಿತ್ರದ ನಿರ್ಮಾಪಕರು ಕೂಡ. ಹೀಗಾಗಿ ಸಂಜಯ್ ಮತ್ತು ವಿಜಯ್ ನಡುವೆ ಉತ್ತಮ ಬಾಂಧವ್ಯವಿದೆ.
ತಮಗೆ 'ಮುಠ್ಠಾಳ' ಎಂದವನನ್ನು ನೆನಪಿಸಿಕೊಂಡ 'ಪವರ್ ಸ್ಟಾರ್'

ಇನ್ನು 'ಯುವರತ್ನ' ಚಿತ್ರದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಯಾಗಿ ಸಾಯೇಷಾ ಸೈಗಲ್ ಬಣ್ಣ ಹಚ್ಚುತ್ತಿದ್ದಾರೆ. ಇವರೊಂದಿಗೆ ಸಾಯಿ ಕುಮಾರ್, ಪ್ರಕಾಶ್ ರಾಜ್, ಡಾಲಿ ಧನಂಜಯ್, ದಿಗಂತ್, ಸೋನು ಗೌಡ, ವಸಿಷ್ಠ ಎನ್ ಸಿಂಹ, ಬೊಮನ್ ಇರಾನಿ, ರಾಧಿಕಾ ಶರತ್‌ಕುಮಾರ್, ಅವಿನಾಶ್, ಸುಧಾರಾಣಿ, ರಂಗಾಯಣ ರಘು, ಅಚ್ಯುತ್ ಕುಮಾರ್, ಪ್ರಕಾಶ್ ಬೆಳವಾಡಿ, ಕುರಿ ಪ್ರತಾಪ್ ಸೇರಿದಂತೆ ಸಾಕಷ್ಟು ಪ್ರತಿಭಾನ್ವಿತ ಕಲಾವಿದರಿದ್ದಾರೆ.

ಅಂದ್ಹಾಗೇ 'ಯುವರತ್ನ' ಚಿತ್ರಕ್ಕೆ ಸಂತೋಷ್ ಆನಂದ್‌ ರಾಮ್ ನಿರ್ದೇಶನ, ವಿಜಯ್ ಕಿರಂಗದೂರು ನಿರ್ಮಾಣ, ಎಸ್ ತಮನ್ ಸಂಗೀತ, ವೆಂಕಟೇಶ್ ಅಂಗುರಾಜ್ ಸಿನಿಮಾಟೋಗ್ರಫಿ ಇದೆ. ಸದ್ಯ ಟೀಸರ್ ಅಷ್ಟೇ ಬಿಡುಗಡೆಯಾಗಿದ್ದು, ಸಿನಿಮಾ ರಿಲೀಸ್‌ಗೆ ಇನ್ನು ಕೆಲವು ತಿಂಗಳುಗಳು ಕಾಯಲೇಬೇಕಿದೆ.
ಯುವರತ್ನಕ್ಕೆ ಬಂದ ಗ್ಲಾಮರ್‌ ಬೆಡಗಿಯರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌