ಆ್ಯಪ್ನಗರ

Satish Ninasam: 'ಮ್ಯಾಟ್ನಿ' ಶೋನಲ್ಲಿ ನಟ ಸತೀಶ್ ನೀನಾಸಂ ಜೊತೆ ಕಾಣಿಸಿಕೊಂಡ್ರು ರಚಿತಾ ರಾಮ್‌!

ನಟ ಸತೀಶ್ ನಿನಾಸಂ ಸದ್ಯ ಸ್ಯಾಂಡಲ್‌ವುಡ್‌ನ ಬೇಡಿಕೆಯ ನಟರಲ್ಲಿ ಒಬ್ಬರು. ಇದೀಗ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಜೊತೆಗೆ ರಚಿತಾ ರಾಮ್ ಕೂಡ ಇದ್ದಾರೆ. ಆ ಸಿನಿಮಾ ಯಾವುದು? ಆ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ.

Vijaya Karnataka Web 2 Oct 2020, 4:40 pm
ನಟ ಸತೀಶ್‌ 'ನೀನಾಸಂ' ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಲಾಕ್‌ಡೌನ್ ಅವಧಿಯಲ್ಲೇ ಅವರು ಮೂರ್ನಾಲ್ಕು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಅವರೀಗ ಮುಂದಿನ ಸಿನಿಮಾದ ಟೈಟಲ್ ಅನೌನ್ಸ್ ಮಾಡಿದ್ದಾರೆ. ಸಾಮಾನ್ಯವಾಗಿ ಸಿನಿಮಾಗಳು ರಿಲೀಸ್ ಆದಾಗ, 'ಫಸ್ಟ್‌ ಡೇ ಫಸ್ಟ್ ಶೋ ಹೋಗಬೇಕು.. ಮಾರ್ನಿಂಗ್ ಶೋ ನೋಡಬೇಕು..' ಎಂದು ಮಾತನಾಡುವುದನ್ನು ಕೇಳಿದ್ದೇವೆ. ಇದೀಗ ಸತೀಶ್ ಸಿನಿಮಾಕ್ಕೆ 'ಮ್ಯಾಟ್ನಿ' ಅಂತ ಹೆಸರಿಡಲಾಗಿದೆ. ವಿಶೇಷವೆಂದರೆ, ಈ ಸಿನಿಮಾಗೆ ನಾಯಕಿಯಾಗಿ ರಚಿತಾ ರಾಮ್‌ ಕಾಣಿಸಿಕೊಳ್ಳಲಿದ್ದಾರೆ.
Vijaya Karnataka Web satish ninasam rachita ram


ಸಿನಿಮಾ ಶೀರ್ಷಿಕೆಯೇ ಮ್ಯಾಟ್ನಿ!

ಚಿತ್ರಮಂದಿರಗಳಲ್ಲಿ ಬೆಳಗಿನ ಪ್ರದರ್ಶನಕ್ಕೆ ಮಾರ್ನಿಂಗ್ ಶೋ, ಮಧ್ಯಾಹ್ನದ ಪ್ರದರ್ಶನಕ್ಕೆ 'ಮ್ಯಾಟ್ನಿ' ಶೋ.. ಸಂಜೆಯ ಶೋಗೆ ಫಸ್ಟ್ ಶೋ, ಹಾಗೇ ರಾತ್ರಿಯ ಪ್ರದರ್ಶನಕ್ಕೆ ನೈಟ್ ಶೋ ಎನ್ನುತ್ತೇವೆ. ಇದೀಗ ಸತೀಶ್‌ ಚಿತ್ರಕ್ಕೆ 'ಮ್ಯಾಟ್ನಿ' ಎಂದು ಟೈಟಲ್ ಇಟ್ಟಿರುವುದರಿಂದ, ಇದು ಸಿನಿಮಾಗೆ ಸಂಬಂಧಿಸಿದ ಕಥೆಯೇ ಎಂಬ ಕುತೂಹಲ ಮೂಡಿದೆ. ರಿಲೀಸ್ ಆಗಿರುವ ಫಸ್ಟ್‌ಲುಕ್‌ ಪೋಸ್ಟರ್‌ನಲ್ಲಿ ಗನ್‌, ಗುಲಾಬಿ, ಪಾಪ್‌ಕಾರ್ನ್‌ ಇದೆ. ಇನ್ನು, ಇದೊಂದು ಥ್ರಿಲ್ಲರ್ ಸಿನಿಮಾ ಎಂದು ಹೇಳಲಾಗುತ್ತಿದೆ. ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡಲಿದ್ದಾರೆ. ಪಾರ್ವತಿ ಎಂಬುವವರು ಈ ಸಿನಿಮಾ ಮೂಲಕ ಮೊದಲ ಬಾರಿಗೆ ನಿರ್ಮಾಣಕ್ಕೆ ಇಳಿಯುತ್ತಿದ್ದಾರೆ.

ಒಂದಾದ 'ಅಯೋಗ್ಯ' ಜೋಡಿ!

2018ರಲ್ಲಿ ತೆರೆಕಂಡ 'ಅಯೋಗ್ಯ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ಆಗಿತ್ತು. ಸತೀಶ್-ರಚಿತಾ ರಾಮ್‌ ಜೋಡಿಯ ಕೆಮಸ್ಟ್ರೀ ತೆರೆಮೇಲೆ ವರ್ಕೌಟ್ ಆಗಿತ್ತು, ಪ್ರೇಕ್ಷಕರಿಗೂ ಸಖತ್ ಇಷ್ಟವಾಗಿತ್ತು. ಆ ಚಿತ್ರದ 'ಏನಮ್ಮಿ ಏನಮ್ಮಿ..' ಹಾಡು ಇಂದಿಗೂ ಕೇಳುಗರ ನೆಚ್ಚಿನ ಗೀತೆಯಾಗಿದೆ. ಇದೀಗ ಅದೇ ಜೋಡಿ ಮ್ಯಾಟ್ನಿ ಮೂಲಕ ಒಂದಾಗಿದೆ. ಸಹಜವಾಗಿ ಹಿಟ್ ಜೋಡಿಯೊಂದು ಮತ್ತೊಂದು ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗ ಹೆಚ್ಚು ನಿರೀಕ್ಷೆ ಸಹಜ. ಒಟ್ಟಾರೆಯಾಗಿ ಸತೀಶ್ ಮತ್ತು ರಚಿತಾ 'ಮ್ಯಾಟ್ನಿ' ಬಳಗ ಸೇರಿಕೊಂಡಿರುವುದರಿಂದ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

ಎಂದಿನಂತೆ ನಿಮ್ಮ ಪ್ರೀತಿ ಇರಲಿ
ಇನ್ನು, 'ಮ್ಯಾಟ್ನಿ' ಬಗ್ಗೆ ಸತೀಶ್ ಈ ಹಿಂದೆ ಹೇಳಿಕೊಂಡಿದ್ದರು. 'ನನಗಾಗಿ ಕಥೆ ಬರೆಯುವ ನಿರ್ದೇಶಕರು, ವರ್ಷದಿಂದ ವರ್ಷಕ್ಕೆ, ಹೆಚ್ಛಾಗಿದ್ದಾರೆ. ಈ ವರ್ಷ ಮನೋಹರ್ ಕಾಂಪಲ್ಲಿ ಅವರ ಕಥೆಯನ್ನು ಕೇಳಿದ ತಕ್ಷಣ ಓಕೆ ಎಂದಿದ್ದೇನೆ. ಅವರ 15 ವರ್ಷಗಳ ಅನುಭವಕ್ಕೆ ಜೊತೆಯಾಗಿ ಬಂಡವಾಳ ಹೂಡುತ್ತಿರುವ ಪಾರ್ವತಿ ಜೊತೆಗೆ ನಾನು ನಿಂತಿದ್ದೇನೆ. ನಿಮ್ಮೆಲ್ಲರ ಪ್ರೀತಿ ಎಂದಿನಂತೆ ಇರಲಿ, ಹರಸಿ' ಎಂದು ಹೇಳಿಕೊಂಡಿದ್ದರು. 'ಲೂಸಿಯಾ' ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ 'ಮ್ಯಾಟ್ನಿ'ಗೆ ಸಂಗೀತ ನೀಡಲಿದ್ದಾರೆ. ಕ್ರಾಂತಿ ವರ್ಲಾ ಛಾಯಾಗ್ರಹಣ ಮಾಡುತ್ತಿದ್ದಾರೆ.

ನಿರ್ಮಾಪಕಿಯರ ನೆಚ್ಚಿನ ನಟ ನೀನಾಸಂ ಸತೀಶ್‌! ಸಾಲು ಸಾಲು ಸಿನಿಮಾಗಳಲ್ಲಿ ಫುಲ್ ಬ್ಯುಸಿ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌