ಪ್ರತಿ ಬಾರಿ ಪ್ರಶಸ್ತಿಗಳು ಘೋಷಣೆ ಆದಾಗ ಅಸಮಾಧಾನದ ಮಾತುಗಳು ಕೇಳಿಬರುತ್ತವೆ. 2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ವಿಚಾರದಲ್ಲೂ ಅದು ಮರುಕಳಿಸಿದೆ. ಈ ಬಾರಿ ಹಿರಿಯ ನಟ ಶ್ರೀನಿವಾಸ ಪ್ರಭು ಅಸಮಾಧಾನ ತೋಡಿಕೊಂಡಿದ್ದಾರೆ. ತಾವು ನಟಿಸಿರುವ 'ಬಿಂಬ' ಚಿತ್ರವನ್ನು ಯಾಕೆ ಕಡೆಗಣಿಸಲಾಯಿತು ಎಂದು ಅವರು ಪ್ರಶ್ನೆ ಎತ್ತಿದ್ದಾರೆ.
'ಬಿಂಬ' ಚಿತ್ರದ ವಿಶೇಷಗಳೇನು ಗೊತ್ತಾ?
ಪ್ರಸಿದ್ಧ ನಾಟಕಕಾರ ಸಂಸ ಅವರ ಬದುಕನ್ನುಆಧರಿಸಿ 'ಬಿಂಬ- ಆ ತೊಂಬತ್ತು ನಿಮಿಷಗಳು' ಚಿತ್ರ ತಯಾರಾಗಿತ್ತು. ಇಡೀ ಚಿತ್ರದಲ್ಲಿ ಶ್ರೀನಿವಾಸ ಪ್ರಭು ಒಬ್ಬರೇ ನಟಿಸಿದ್ದರು. ಹಿನ್ನೆಲೆಯಲ್ಲಿ ಒಂದೇ ಸಂಗೀತ ಸಾಧನವನ್ನು ಬಳಸಲಾಗಿತ್ತು. ಒಂದೇ ಶಾಟ್ನಲ್ಲಿ ಪೂರ್ತಿ ಸಿನಿಮಾ ಸೆರೆಯಾಗಿತ್ತು. 58 ಪುಟಗಳ ಸಂಭಾಷಣೆಯನ್ನು ಶ್ರೀನಿವಾಸ ಪ್ರಭು ಹೇಳಿದ್ದರು. ಈ ವಿಶೇಷಗಳ ಮೂಲಕ 'ಬಿಂಬ' ವಿಶ್ವ ದಾಖಲೆ ಬರೆಯಿತು. ಹಲವು ಸಿನಿಮೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನೂ ಪಡೆದುಕೊಂಡು ಬಂದಿತು.
ರಾಜ್ಯ ಪ್ರಶಸ್ತಿಯಲ್ಲೇಕೆ ನಿರ್ಲಕ್ಷ್ಯ?
ಇಷ್ಟೆಲ್ಲ ವಿಶೇಷಗಳನ್ನು ಹೊಂದಿ, ಹಲವು ಚಿತ್ರೋತ್ಸವಗಳಲ್ಲಿ ಮನ್ನಣೆ ಪಡೆದುಕೊಂಡ 'ಬಿಂಬ' ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಯಾಕೆ ಸ್ಥಾನ ಸಿಕ್ಕಿಲ್ಲ ಎಂದು ಶ್ರೀನಿವಾಸ ಪ್ರಭು ಪ್ರಶ್ನೆ ಎತ್ತಿದ್ದಾರೆ. ಪ್ರಶಸ್ತಿ ಆಯ್ಕೆ ಮಂಡಳಿ ಈ ರೀತಿ ಮಾಡಿದರೆ ನಮ್ಮ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳು ಆಗುವುದು ಹೇಗೆ ಎಂಬುದು ಅವರ ಪ್ರಶ್ನೆ. ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲೂ ಆರಂಭದಲ್ಲಿ 'ಬಿಂಬ' ಆಯ್ಕೆ ಆಗಿರಲಿಲ್ಲ. ಮನವರಿಕೆ ಮಾಡಿಕೊಟ್ಟ ನಂತರ ಆಯ್ಕೆ ಆಯಿತು ಎಂಬುದಾಗಿಯೂ ಅವರು ಹೇಳಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ನಾತಿಚರಾಮಿ' ಚಿತ್ರದ್ದೂ ಇದೇ ಸ್ಥಿತಿ
ಈ ಬಾರಿ ರಾಷ್ಟ್ರ ಪ್ರಶಸ್ತಿಯ 5 ವಿಭಾಗಗಳಲ್ಲಿ ಕನ್ನಡದ 'ನಾತಿಚರಾಮಿ' ಚಿತ್ರಕ್ಕೆ ಪ್ರಶಸ್ತಿ ಘೋಷಣೆ ಆಯಿತು. ಫಿಲಂ ಫೇರ್ನಲ್ಲಿಯೂ ಎರಡು ಪ್ರಶಸ್ತಿ ಸಿಕ್ಕವು. ಆದರೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಈ ಚಿತ್ರಕ್ಕೆ ಒಂದು ವಿಭಾಗದಲ್ಲಿಯೂ ಮನ್ನಣೆ ಸಿಗದಿರುವುದು ಅಚ್ಚರಿಗೆ ಕಾರಣವಾಗಿದೆ.
'ಬಿಂಬ' ಚಿತ್ರದ ವಿಶೇಷಗಳೇನು ಗೊತ್ತಾ?
ಪ್ರಸಿದ್ಧ ನಾಟಕಕಾರ ಸಂಸ ಅವರ ಬದುಕನ್ನುಆಧರಿಸಿ 'ಬಿಂಬ- ಆ ತೊಂಬತ್ತು ನಿಮಿಷಗಳು' ಚಿತ್ರ ತಯಾರಾಗಿತ್ತು. ಇಡೀ ಚಿತ್ರದಲ್ಲಿ ಶ್ರೀನಿವಾಸ ಪ್ರಭು ಒಬ್ಬರೇ ನಟಿಸಿದ್ದರು. ಹಿನ್ನೆಲೆಯಲ್ಲಿ ಒಂದೇ ಸಂಗೀತ ಸಾಧನವನ್ನು ಬಳಸಲಾಗಿತ್ತು. ಒಂದೇ ಶಾಟ್ನಲ್ಲಿ ಪೂರ್ತಿ ಸಿನಿಮಾ ಸೆರೆಯಾಗಿತ್ತು. 58 ಪುಟಗಳ ಸಂಭಾಷಣೆಯನ್ನು ಶ್ರೀನಿವಾಸ ಪ್ರಭು ಹೇಳಿದ್ದರು. ಈ ವಿಶೇಷಗಳ ಮೂಲಕ 'ಬಿಂಬ' ವಿಶ್ವ ದಾಖಲೆ ಬರೆಯಿತು. ಹಲವು ಸಿನಿಮೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನೂ ಪಡೆದುಕೊಂಡು ಬಂದಿತು.
ರಾಜ್ಯ ಪ್ರಶಸ್ತಿಯಲ್ಲೇಕೆ ನಿರ್ಲಕ್ಷ್ಯ?
ಇಷ್ಟೆಲ್ಲ ವಿಶೇಷಗಳನ್ನು ಹೊಂದಿ, ಹಲವು ಚಿತ್ರೋತ್ಸವಗಳಲ್ಲಿ ಮನ್ನಣೆ ಪಡೆದುಕೊಂಡ 'ಬಿಂಬ' ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಯಾಕೆ ಸ್ಥಾನ ಸಿಕ್ಕಿಲ್ಲ ಎಂದು ಶ್ರೀನಿವಾಸ ಪ್ರಭು ಪ್ರಶ್ನೆ ಎತ್ತಿದ್ದಾರೆ. ಪ್ರಶಸ್ತಿ ಆಯ್ಕೆ ಮಂಡಳಿ ಈ ರೀತಿ ಮಾಡಿದರೆ ನಮ್ಮ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳು ಆಗುವುದು ಹೇಗೆ ಎಂಬುದು ಅವರ ಪ್ರಶ್ನೆ. ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲೂ ಆರಂಭದಲ್ಲಿ 'ಬಿಂಬ' ಆಯ್ಕೆ ಆಗಿರಲಿಲ್ಲ. ಮನವರಿಕೆ ಮಾಡಿಕೊಟ್ಟ ನಂತರ ಆಯ್ಕೆ ಆಯಿತು ಎಂಬುದಾಗಿಯೂ ಅವರು ಹೇಳಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ನಾತಿಚರಾಮಿ' ಚಿತ್ರದ್ದೂ ಇದೇ ಸ್ಥಿತಿ
ಈ ಬಾರಿ ರಾಷ್ಟ್ರ ಪ್ರಶಸ್ತಿಯ 5 ವಿಭಾಗಗಳಲ್ಲಿ ಕನ್ನಡದ 'ನಾತಿಚರಾಮಿ' ಚಿತ್ರಕ್ಕೆ ಪ್ರಶಸ್ತಿ ಘೋಷಣೆ ಆಯಿತು. ಫಿಲಂ ಫೇರ್ನಲ್ಲಿಯೂ ಎರಡು ಪ್ರಶಸ್ತಿ ಸಿಕ್ಕವು. ಆದರೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಈ ಚಿತ್ರಕ್ಕೆ ಒಂದು ವಿಭಾಗದಲ್ಲಿಯೂ ಮನ್ನಣೆ ಸಿಗದಿರುವುದು ಅಚ್ಚರಿಗೆ ಕಾರಣವಾಗಿದೆ.