ಆ್ಯಪ್ನಗರ

ನಟ ಶಂಕರ್‌ ಅಶ್ವತ್ಥ್‌ಗೆ 4 ವರ್ಷ ಹಿಂದೆ ಅಪಘಾತ ಆದಾಗ ಕಾಪಾಡಿದ ಆ ಶಕ್ತಿ ಯಾವುದು?

ಕನ್ನಡ ಚಿತ್ರರಂಗದ ಹಿರಿಯ ನಟ ಶಂಕರ್‌ ಅಶ್ವತ್ಥ್‌ ಅವರಿಗೆ ಕೆಲವೇ ವರ್ಷಗಳ ಹಿಂದೆ ರಸ್ತೆ ಅಪಘಾತ ಆಗಿತ್ತು. ಅಂದು ಅವರನ್ನು ದೊಡ್ಡ ಅಪಾಯದಿಂದ ಪಾರು ಮಾಡಿದ್ದು ಒಂದು ದೈವೀ ಶಕ್ತಿ. ಆ ಬಗ್ಗೆ ಅವರು ಈಗ ಬಹಿರಂಗಪಡಿಸಿದ್ದಾರೆ.

Vijaya Karnataka Web 21 Sep 2020, 5:11 pm
ಸ್ಯಾಂಡಲ್‌ವುಡ್‌ನ ಅನುಭವಿ ಕಲಾವಿದ ಶಂಕರ್‌ ಅಶ್ವತ್ಥ್‌ ಸೋಶಿಯಲ್‌ ಮೀಡಿಯಾ ಮೂಲಕ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. 4 ವರ್ಷಗಳ ಹಿಂದೆ ಅವರು ರಸ್ತೆ ಅಪಘಾತಕ್ಕೆ ಒಳಗಾಗಿದ್ದರ ಬಗ್ಗೆ ಈಗ ವಿವರವಾಗಿ ಪೋಸ್ಟ್‌ ಮಾಡಿಕೊಂಡಿದ್ದಾರೆ. ಅಂದು ಏನಾಯಿತು? ಅಪಘಾತ ಹೇಗೆ ನಡೆಯಿತು? ಅದರಿಂದ ಶಂಕರ್‌ ಅಶ್ವತ್ಥ್‌ ಪಾರಾಗಿದ್ದು ಹೇಗೆ? ಅದೆಲ್ಲವನ್ನೂ ಅವರ ಮಾತುಗಳಲ್ಲಿಯೇ ಓದಿ...
Vijaya Karnataka Web ಶಂಕರ್‌ ಅಶ್ವತ್ಥ್‌


'ನಿಮಗೆ ಕೇಳಿದರೆ ಆಶ್ಚರ್ಯವಾಗುತ್ತದೆ. ನನಗೊಬ್ಬ ಮಾರ್ಗದರ್ಶಕರು ನಾನು ಕಷ್ಟದಲ್ಲಿರುವೆನೆಂದು ತಿಳಿದು, ಅದರ ಪರಿಹಾರಕ್ಕೆ ಒಂದು ಸ್ತೋತ್ರವನ್ನು ಪಠಣ ಮಾಡಲು ತಿಳಿಸಿದರು. ನಾನು ಅದನ್ನು ನನ್ನ ಗುರುಗಳ ಮುಖೇನ ಉಪದೇಶವನ್ನು ಪಡೆದು ಅದನ್ನು ಪಠಣ ಮಾಡಲು ಪ್ರಾರಂಭಿಸಿದೆ. ಪ್ರಾರಂಭಿಸಿದ ಹದಿನೈದನೆಯ ದಿನ ಯಾವ ಶಕ್ತಿಯನ್ನು ಆರಾಧಿಸಲು ಪಠಣ ಮಾಡುತ್ತಿದ್ದೆನೋ ಆ ದೇವಿಯ ದೇವಾಲಯದಲ್ಲಿ (ಗುಜರಾತ್‌ನಲ್ಲಿದೆ) ಕುಳಿತು ಪಠಣ ಮಾಡುವ ಸೌಭಾಗ್ಯ ದೊರಕಿತು. ಮುಂದೆ ಬರುಬರುತ್ತಾ ನನ್ನಲ್ಲೇ ಕೆಲವೂ ಸಕಾರಾತ್ಮಕ ಬದಲಾವಣೆಗಳನ್ನು ಕಂಡೆ. ಒಂದು ದಿನ ಕಾರಣಾಂತರ ಶೂಟಿಂಗ್ ಇದ್ದಕ್ಕಿದ್ದಹಾಗೆ ರದ್ದಾಗಿ ಮೈಸೂರಿಗೆ ಬೈಕ್ನಲ್ಲಿ ಹೊರಟೆ'.

'ಶೂಟಿಂಗ್ ನಡೆಯುತ್ತಿದ್ದ ಸ್ಥಳ ನೆಲಮಂಗಲ ಬೈಪಾಸ್ ಹತ್ತಿರ. ಆದುದ್ದರಿಂದ ನಾಗಮಂಗಲದ ಕಡೆಯಿಂದ ಮೈಸೂರಿನ ಮಾರ್ಗವನ್ನು ಹಿಡಿದೆ. ಯಾರದೋ ಜೊತೆಯಲ್ಲಿ ಕೆಲಸ ಮಾಡುವ ಸ್ನೇಹಿತನ ಭರ್ಜರಿ ಬೈಕ್ ಕೆಟಿಮ್ 200 ಹೈವೇಲಿ ನೂರು ಕಿಮೀ ವೇಗದಲ್ಲಿ ಬೆಳ್ಳೂರು ಕ್ರಾಸ್ ತನಕ ಬಂದು. ಅಲ್ಲಿ ಕೆಲವು ನಿಮಿಷ ನಿಲ್ಲಿಸಿ ನನ್ನ ಮಡದಿಗೆ ಫೋನ್ ಮಾಡಿದಾಗ ಅವಳಿಗೆ ಮುಂಚೆನೇ ಶೂಟಿಂಗ್ ಕ್ಯಾನ್ಸಲ್ ಆದ ವಿಷಯ ಗೊತ್ತಿದ್ದರಿಂದ ಇನ್ನೂ ಹೊರಟಿಲ್ವಾ ಎಂದು ಕೇಳಿದಳು. ಆಗ ನಾನು ಅರ್ಧ ದಾರಿ ಬಂದಾಯಿತೂಂತ ಹೇಳಿದಾಗ ಯಾವುದ್ರಲ್ಲಿ ಬರುತ್ತಿದ್ದೀರಾ ಎಂದು ಕೇಳಿದಳು. ನಾನು ನಿನಗೊಂದು ಸರ್‌ಪ್ರೈಸ್ ಬಂದ ಮೇಲೆ ತಿಳಿಸ್ತೀನಿ ಎಂದು ಹೇಳಿ ಫೋನ್ ಕಟ್ ಮಾಡಿದೆ.'

also read: ವಿಷ್ಣುವರ್ಧನ್ ಅಭಿನಯದ 'ಕರ್ಣ' ಸಿನಿಮಾ ನೋಡುವಾಗ ತಂದೆಯನ್ನು ನೆನೆದ ನಟ ಶಂಕರ್ ಅಶ್ವತ್ಥ್‌

''ತಕ್ಷಣ ನನ್ನ ಅಂತರಾಳದಲ್ಲಿ ಏನೋ ಸೂಚನೆ ಕೊಡುವ ಹಾಗೆ ಆಗಿ ಏನೋ ಆಗುತ್ತೇಂತ ಮನಸ್ಸು ಹೇಳಿತು. ಏನಾಗುತ್ತೇ ಯಾಕೆ ಈ ರೀತಿಯಲ್ಲಿ ಮನಸ್ಸು ( ಸಿಕ್ಸ್ತ್ ಸೆನ್ಸ್‌) ಹೇಳುತ್ತಿದೆ. ಏನೇ ಆಗಲಿ ಇನ್ನು ಮುಂದೆ ಹುಷಾರಾಗಿ ಹೋಗಬೇಕು ಎಂದು ನಿರ್ಧಾರ ಮಾಡಿ ನಲ್ವತ್ತು ಕಿಮೀ ವೇಗದಲ್ಲಿ ಬರುತ್ತಾ ಆದಿಶಕ್ತಿಯ ಸ್ತೋತ್ರವನ್ನು ಜಪಿಸುತ್ತಿದ್ದಂತೆ ಮನಸ್ಸಿನಲ್ಲಿ ಇನ್ನೂ ಧೃಢವಾಗಿ ಏನೋ ಆಗುತ್ತೆಂಬ ಭಾವನೆ ಜಾಸ್ತಿಯಾಗಿ ಬರುತ್ತಿದ್ದ ವೇಗವನ್ನು ಇಪ್ಪತ್ತು ಮೂವತ್ತು ಕಿಮೀ ಇಳಿಸಿ ಹದ್ದಿನ ಕಣ್ಣಿನಂತೆ ನಿಗವನ್ನು,ಗಮನವನ್ನು ಹೆಚ್ಚಿಸಿಕೊಂಡು ಬರುವಾಗ ನಾಗಮಂಗಲದಲ್ಲಿ ಇದ್ದಕಿದ್ದಂತೆ ಓರ್ವ ಮಧ್ಯ ವಯಸ್ಸಿನ ವ್ಯಕ್ತಿ ರಸ್ತೆಗೆ ಅಡ್ಡಲಾಗಿ ಬಂದೇ ಬಿಟ್ಟ.'

also read: ಶಂಕರ್ ಅಶ್ವಥ್ ಮನೆಗೆ ಭೇಟಿ ನೀಡಿದ ಪುನೀತ್ ರಾಜ್‌ಕುಮಾರ್

'ಅವನನ್ನು ಬಚಾವ್ ಮಾಡಲು ನಾನು ತಕ್ಷಣವೇ ಡಿಸ್ಕ್ ಬ್ರೇಕ್ ಹಾಕಿದಾಗ ಗಾಡಿ ಒಂದು ಕ್ಷಣ ಹೇಗೆ ನಿಲ್ಲಿತ್ತೆಂದರೆ ಟಿವಿ ಜಾಹೀರಾತಿನಲ್ಲಿ ಸಾಹಸ ಮಾಡುತ್ತಾರಲ್ಲ ಆ ರೀತಿ, ಹಾಗೆ ನಿಂತಾಗ ನನಗೆ ಆಯ ತಪ್ಪಿ ಮೊದಲು ನಾನು ಕೆಳಗೆ ಬಿದ್ದೆ ನಂತರ ನನ್ನ ಮೇಲೆ ಬೈಕ್ ಬಿತ್ತು. ಅದರಲ್ಲೂ ಅದರ ಹ್ಯಾಂಡಲ್ ನನ್ನ ಬಲ ಭುಜದ ಮೇಲೆ ನೆರವಾಗಿ ಬಿದ್ದು,ಅಪರೇಷನ್ ಆಗುವ ಹಾಗೆ ಆಯಿತು. ಜೊತೆಗೆ ಕನ್ನಡಿ ಮುಖಕ್ಕೆ ತಗಲಿ ಮೂಗಿನಿಂದ ರಕ್ತ ಧಾರೆಯಾಗಿ ಹರಿಯಿತು. ನಾನ್ಯಕೆ ಬಿದ್ದೆ ಎಂದು ಅಲ್ಲಿ ಸೇರಿದ ಜನಕ್ಕೆ ಗೊತ್ತಾಗಲಿಲ್ಲ ಯಾಕೆಂದರೆ ನಾನು ನಿಧಾನವಾಗಿ ಬರುತ್ತಿದ್ದೆ ಪ್ಲಸ್ ಗಾಡಿ ಪೂರ್ತಿ ನಿಂತು ಕೆಳಗೆ ಬಿತ್ತು. ಸದ್ಯ ಅಡ್ಡ ಬಂದ ವ್ಯಕ್ತಿಗೇನೂ ಆಗಲಿಲ್ಲ. ಆತನಿಗೆ ಸ್ವಲ್ಪ ಗಾಯವಾಗಿದ್ದರೂ ನನ್ನ ಲಕ್ಷಗಟ್ಟಲೆ ಕೊಡು ಹಾಗಾಗಿದೆ ಹೀಗಾಗಿದೆ ಅಂತ ಗಲಾಟೆ ಮಾಡ್ತಾಯಿದ್ರು ಅಂತ ಜಾಗ ಅದು'

also read: ಶಂಕರ್ ಅಶ್ವತ್ಥ್ ಪೋಸ್ಟ್‌ಗೆ ಅಭಿಮಾನಿಗಳಿಂದ ಕಾಮೆಂಟ್‌ಗಳ ಸುರಿಮಳೆ

''ಏನೇ ಇರಲಿ ಅಂದು ಅನೇಕ ಜನರು ಹಿಂದು ಮುಸ್ಲಿಂ ಎಲ್ಲರೂ ಸೇರಿ ನನಗೆ ಸಹಾಯ ಮಾಡಿ ಇದೇ ಬೇಕರಿ ಮುಂದೆ ಮಲಗಿಸಿ ಆರೈಕೆ ಮಾಡಿದರು. ಅವರೆಲ್ಲರಿಗೂ ಧನ್ಯವಾದಗಳು. ಅದರಲ್ಲೂ ನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಠಮಾಡಿದ ಆಟೋ ಚಾಲಕ ಚಂದ್ರಶೇಖರಗೆ ಅನಂತ ವಂದನೆಗಳು. ಇದು ಆಗಿ ಸುಮಾರು ನಾಲ್ಕು ವರ್ಷ. ಇದೇನಪ್ಪ ಈಗ ಇವರು ಧನ್ಯವಾದಗಳು ತಿಳಿಸ್ತಾ ಇದರಲ್ಲ, ಎಲ್ಲಾ ಪ್ರಚಾರಕ್ಕೆ ಅಂತ ತಿಳಿದುಕೊಳ್ಳಬೇಡಿ. ಬಹಳ ದಿನಗಳ ನಂತರ ಇವತ್ತು ಈ ಜಾಗಕ್ಕೆ ಬಂದೆ. ಫೋಟೋ ತೆಗೆಯಬೇಕೆಂದು ಜ್ಞಾಪಕ ಬಂದು ತೆಗೆದು ಈ ಅಂಕಣವನ್ನು ಬರೆದೆ' ಎಂದಿದ್ದಾರೆ ಶಂಕರ್‌ ಅಶ್ವತ್ಥ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌