ಆ್ಯಪ್ನಗರ

Samantha: 'ಶಾಕುಂತಲಂ' ಸುದ್ದಿಗೋಷ್ಠಿ ವೇಳೆ ಕೈಯಲ್ಲಿ ಜಪಮಣಿ ಹಿಡಿದು ಬಂದಿದ್ದೇಕೆ ನಟಿ ಸಮಂತಾ

'ಶಾಕುಂತಲಂ' ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗಲು ರೆಡಿಯಿದೆ. ಈ ಚಿತ್ರದ ಟ್ರೇಲರ್ ಲಾಂಚ್‌ಗೆ 48 ಸಾವಿರ ರೂಪಾಯಿಗೂ ಅಧಿಕ ಬೆಲೆ ಬಾಳುವ ಓರ್ಗಾಂಜಾ ಸೀರೆಯುಟ್ಟು ಆಗಮಿಸಿದ್ದ ಸಮಂತಾ ಅವರು ಜಪಮಣಿ ಕೂಡ ಹಿಡಿದುಕೊಂಡಿದ್ದರು. ಇದು ಯಾಕೆ ಎಂದು ಕೆಲವರಿಗೆ ಕುತೂಹಲ ಮೂಡಿದೆ.

Authored byಪದ್ಮಶ್ರೀ ಭಟ್ | TIMESOFINDIA.COM 10 Jan 2023, 10:10 pm

ಹೈಲೈಟ್ಸ್‌:

  • 'ಶಾಕುಂತಲಂ' ಟ್ರೇಲರ್‌ ಲಾಂಚ್‌ನಲ್ಲಿ ಜಪಮಣಿ ಹಿಡಿದು ಬಂದಿದ್ದ ಸಮಂತಾ
  • 48 ಸಾವಿರ ರೂಪಾಯಿಗೂ ಅಧಿಕ ಬೆಲೆ ಬಾಳುವ ಸೀರೆಯುಟ್ಟಿದ್ದ ಸಮಂತಾ
  • ಸಮಂತಾ ಜಪಮಣಿ ಹಿಡಿದಿದ್ದು ಸಾಕಷ್ಟು ಚರ್ಚೆಯಾಗುತ್ತಿದೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web samantha
ನಟಿ ಸಮಂತಾ ಅವರು ( Samantha ) 'ಶಾಕುಂತಲಂ' ಸಿನಿಮಾ ( Shakuntalam ) ಸುದ್ದಿಗೋಷ್ಠಿಯಲ್ಲಿ ಅತ್ತರು, ಇಷ್ಟುದಿನ ಪ್ರೀತಿ ಸಹಕಾರ ಕೊಟ್ಟಿವರಿಗೆಲ್ಲ ಧನ್ಯವಾದ ತಿಳಿಸಿದರು, ಏನೇ ಆದರೂ ನನಗೆ ಸಿನಿಮಾ ಮೇಲಿನ ಪ್ರೀತಿ ಕಮ್ಮಿಯಾಗೋದಿಲ್ಲ ಎಂದರು. ಇದರ ಮಧ್ಯೆ ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಸಮಂತಾ ಕೈಯಲ್ಲಿ ಧಾರ್ಮಿಕ ಸರವೊಂದು ಎದ್ದು ಕಾಣುತ್ತಿತ್ತು. ಈ ಧಾರ್ಮಿಕ ಸರದ ಹಿಂದಿನ ಕಾರಣ ಏನು ಎಂದು ತಿಳಿದುಕೊಳ್ಳಲು ಕೆಲವರು ಕೂತುಹಲದಿಂದ ಇದ್ದಾರೆ.
'ಶಾಕುಂತಲಂ' ಸಿನಿಮಾ ಸುದ್ದಿಗೋಷ್ಠಿಗೆ 48 ಸಾವಿರ ರೂಪಾಯಿಗೂ ಅಧಿಕ ಬೆಲೆ ಬಾಳುವ ಓರ್ಗಾಂಜಾ ಸೀರೆಯುಟ್ಟು ಸಮಂತಾ ಬಂದಿದ್ದರು. ಅಷ್ಟೇ ಅಲ್ಲದೆ ಗ್ಲಾಸ್‌ವೊಂದನ್ನು ಧರಿಸಿದ್ದರು. ಸದ್ಯ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಅವರು ಧಾರ್ಮಿಕ ಜಪಮಣಿ ಹಿಡಿದುಬಂದಿದ್ದು ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ. ನಿಜಕ್ಕೂ ಸಮಂತಾ ಜಪಿಸುತ್ತಾರಾ ಅಥವಾ ಪಾಸಿಟಿವ್ ವೈಬ್‌ಗೋಸ್ಕರ ಜಪಮಣಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರಾ ಎಂಬ ಬಗ್ಗೆ ಇನ್ನೂ ಅಧಿಕೃತವಾದ ಉತ್ತರವಿಲ್ಲ.

Samantha: ‘ಶಾಕುಂತಲಂ’ ಟ್ರೈಲರ್ ಲಾಂಚ್ ವೇಳೆ ಏಕಾಏಕಿ ಬಿಕ್ಕಿ ಬಿಕ್ಕಿ ಅತ್ತಿದ್ದೇಕೆ ಸಮಂತಾ?

ಸಮಂತಾ ಮೊದಲಿನ ರೀತಿ ಕಂಗೊಳಿಸುತ್ತಿಲ್ಲ, ಕಾಂತಿಯಿಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದರು. ಟ್ರೋಲ್‌ಗಳಿಗೆ ಸದಾ ತಿರುಗೇಟು ನೀಡುವ ಸಮಂತಾ ಅವರು, "ನಾನು ತಿಂಗಳಾನುಗಟ್ಟಲೇ ಪಡೆದ ರೀತಿಯ ಚಿಕಿತ್ಸೆ, ಔ‍ಷಧಿಯನ್ನು ನೀವು ಎಂದಿಗೂ ಮಾಡದಿರುವಂತಾಗಲಿ ಎಂದು ನಾನು ಪ್ರಾರ್ಥಿಸುವೆ. ನಿಮ್ಮ ಕಾಂತಿ ಹೆಚ್ಚಲು ನನ್ನ ಕಡೆಯಿಂದ ಒಂದಷ್ಟು ಪ್ರೀತಿ ನಿಮಗೆ.." ಎಂದಿದ್ದಾರೆ.

ಪೌರಾಣಿಕ ಕಥಾಹಂದರ ಹೊಂದಿರುವ ‘ಶಾಕುಂತಲಂ’ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ದಿಲ್ ರಾಜು ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ.

Samantha: 'ಯಶೋದಾ' ನಂತರ ಸಮಂತಾ ನಟನೆಯ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಂತಾ, "ಕೆಲವರಿಗೆ ಸಿನಿಮಾ ಅಂದ್ರೆ ಜೀವನದ ಒಂದು ಭಾಗ. ಆದರೆ, ಗುಣಶೇಖರ್ ಅವರಿಗೆ ಸಿನಿಮಾ ಮಾತ್ರ ಜೀವನ. ನಿರ್ದೇಶಕ ಗುಣಶೇಖರ್ ಅವರ ಮೇಲಿನ ಗೌರವ ಹಾಗೂ ಅಭಿಮಾನಕ್ಕಾಗಿ ನಾನು ಈ ಸುದ್ದಿಗೋಷ್ಠಿಗೆ ಬಂದೆ. ಕಥೆ ಕೇಳಿದಾಗ, ಅದ್ಭುತವಾಗಿ ಮೂಡಿಬರುತ್ತದೆ ಎಂದು ಭಾವಿಸುತ್ತೇವೆ. ಆದರೆ, ಕೆಲವೊಮ್ಮೆ ನಮ್ಮ ಕಲ್ಪನೆಯನ್ನೂ ಮೀರಿದ ಮ್ಯಾಜಿಕ್ ಸಂಭವಿಸುತ್ತದೆ. ‘ಶಾಕುಂತಲಂ’ ವೀಕ್ಷಿಸಿದ ನಂತರ ಆ ಮ್ಯಾಜಿಕ್‌ ಅನುಭವ ನನಗಾಯಿತು. ನಾನು ಸಿನಿಮಾವನ್ನ ಎಷ್ಟು ಪ್ರೀತಿಸುತ್ತೇನೆ ಮತ್ತು ಸಿನಿಮಾ ನನ್ನನ್ನ ಎಷ್ಟು ಪ್ರೀತಿಸುತ್ತದೆ ಎಂಬುದು ಎಂದಿಗೂ ಬದಲಾಗೋದಿಲ್ಲ. ‘ಶಾಕುಂತಲಂ’ ಸಿನಿಮಾ ಮೂಲಕ ನನ್ನ ಮೇಲಿನ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ ಎಂದು ನಾನು ನಂಬುತ್ತೇನೆ" ಎಂದು ಹೇಳುತ್ತಾ ನಟಿ ಸಮಂತಾ ಕೂಡ ಭಾವುಕರಾಗಿದ್ದರು.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌