ಆ್ಯಪ್ನಗರ

ಕಾರಿನಲ್ಲಿ ಪ್ರಯಾಣಕ್ಕೆ ಹೊರಟ ಶೀತಲ್‌ ಶೆಟ್ಟಿ

ನಟಿ, ನಿರೂಪಕಿ ಶೀತಲ್ ಶೆಟ್ಟಿ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಹಿಂದೆ ಇವರು ಸಂಗಾತಿ ಎಂಬ ಕಿರುಚಿತ್ರ ನಿರ್ದೇಶಿಸಿದ್ದರು. ಈಗ ಮತ್ತೊಂದು ಕಿರುಚಿತ್ರ ಕೈಗೆತ್ತಿಕೊಂಡಿದ್ದು ಅದಕ್ಕೆ ಕಾರು ಎಂದು ಹೆಸರಿಟ್ಟಿದ್ದಾರೆ.

Vijaya Karnataka 12 Dec 2019, 8:03 pm
ನಿರೂಪಕಿ ಮತ್ತು ನಟಿಯಾಗಿ ಹಲವು ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಶೀತಲ್‌ ಶೆಟ್ಟಿ, ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. ಈಗಾಗಲೇ 'ಸಂಗಾತಿ' ಎಂಬ ಕಿರುಚಿತ್ರವನ್ನು ನಿರ್ದೇಶನ ಮಾಡಿರುವ ಇವರು, ಈಗ 'ಕಾರು' ಎಂಬ ಮತ್ತೊಂದು ಕಿರುಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.
Vijaya Karnataka Web ಶೀತಲ್ ಶೆಟ್ಟಿ


ಈ ಕುರಿತು ಅವರು ಹೇಳುವುದು ಹೀಗೆ, 'ಮನುಷ್ಯನಿಗೆ ಒಂದೊಂದು ರೀತಿಯ ವಿಚಾರಗಳು ಕಾಡುತ್ತಲೇ ಇರುತ್ತವೆ. ಅದರಲ್ಲೂ ಮಕ್ಕಳ ಕಲ್ಪನೆಯೇ ವಿಚಿತ್ರ. ಆ ಎಳೆ ಮನಸುಗಳಲ್ಲಿ ನಾನಾ ರೀತಿಯ ವಿಚಾರಗಳು ಗರಿಗೆದರುತ್ತಲೇ ಇರುತ್ತವೆ. ಹೀಗೆ, ಹೆಣ್ಣು ಮಗುವೊಂದಕ್ಕೆ ಕಾರೊಂದು ಬೆರಗಿನ ರೂಪದಲ್ಲಿಕಾಣುತ್ತದೆ. ಈ ವಿಚಾರವನ್ನೇ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಮಕ್ಕಳ ಮನಸ್ಸಿಗೆ ಬಣ್ಣ ತುಂಬುವಂಥ ಚಿತ್ರ ಇದಾಗಿದೆ' ಎನ್ನುತ್ತಾರೆ ಶೀತಲ್‌.

ಕಾರು ಮತ್ತು ಹೆಣ್ಣು ಮಗುವಿಗೆ ಭಾವನಾತ್ಮಕ ಸಂಬಂಧವಿದೆ. ಅದು ಕಾರನ್ನು ನೋಡುವ ಬಗೆಯೇ ಹೊಸದಾಗಿದೆ. ಅದು ಕೇವಲ ಆ ಮಗುವಿಗೆ ಮಾತ್ರವಲ್ಲ, ಎಲ್ಲ ಮಕ್ಕಳಿಗೂ ಇರುವಂಥ ಕುತೂಹಲ. ಅದನ್ನು ವಿಭಿನ್ನ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕರು.

ಕನ್ನಡ 'ರಾಗ'ಕ್ಕೆ IMDb ರೇಟಿಂಗ್ 9.3, ಬಾಹುಬಲಿಗೆಷ್ಟು?

ಈ ಹಿಂದೆ ಶೀತಲ್ ಶೆಟ್ಟಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 4ರಲ್ಲೂ ಸ್ಪರ್ಧಿಸಿದ್ದರು. ಆದರೆ ಅವರು ಹೆಚ್ಚು ದಿನ ಉಳಿಯಲಿಲ್ಲ. ಉಳಿದವರು ಕಂಡಂತೆ, ಕೆಂಡಸಂಪಿಗೆ, ಅರ್ಜುನ್, ಲಿಫ್ಟ್ ಮ್ಯಾನ್, ಚೇಜ್ ಪತಿಬೇಕು.ಕಾಮ್, ರಣಭೂಮಿ ಮುಂತಾದ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.

ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ ಕಿರಿಕ್‌ ಪಾರ್ಟಿ ನಿರ್ದೇಶಕ ರಿಷಬ್‌ ಶೆಟ್ಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌